ಕರ್ನಾಟಕ

karnataka

ಹಾಲಿನ ದರ ಹೆಚ್ಚಿಸಿದರೆ ರೈತರಿಗೆ, ಕೇಂದ್ರ ಸರ್ಕಾರಕ್ಕೆ ಲಾಭ: ಸಚಿವ ಕೆ.ಎನ್‌.ರಾಜಣ್ಣ - k n rajanna reaction on milk price

By ETV Bharat Karnataka Team

Published : Sep 14, 2024, 10:55 PM IST

ಹಾಲಿನ ದರ ಹೆಚ್ಚಳದಿಂದ ರಾಜ್ಯ ಸರ್ಕಾರಕ್ಕೆ ಮೂರು ಪೈಸೆ ಆದಾಯ ಬರಲ್ಲ. ಲಾಭ ರೈತರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಸಿಗುತ್ತೆ ಎಂದು ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.

ಸಚಿವ ಕೆ.ಎನ್‌.ರಾಜಣ್ಣ
ಸಚಿವ ಕೆ.ಎನ್‌.ರಾಜಣ್ಣ (ETV Bharat)

ತುಮಕೂರು:ಹಾಲಿನ ದರ ಹೆಚ್ಚಳದಿಂದ ರಾಜ್ಯ ಸರ್ಕಾರಕ್ಕೆ ಮೂರು ಪೈಸೆ ಆದಾಯ ಬರಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಲಿನ ದರ ಹೆಚ್ಚಳದಿಂದ ರಾಜ್ಯ ಸರ್ಕಾರಕ್ಕೆ ಲಾಭ ಬರಲ್ಲ. ಲಾಭ ರೈತರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಸಿಗುತ್ತೆ. ಒಂದು ಬಾಟಲ್​ ನೀರಿಗೆ ಕೊಡುವ ದರವನ್ನು ಹಾಲಿಗೆ ಕೊಡಿ ಎಂದರೆ ವಿರೋಧ ಬರ್ತಿದೆ, ಇದು ಬಹಳ‌ ವಿಪರ್ಯಾಸ. ಹಾಲಿನ ದರ ಹೆಚ್ಚಳದ ಲಾಭ ರೈತರ ಖಾತೆಗೆ ಹೋಗುತ್ತದೆ. ಸಂಸ್ಥೆ, ಸರ್ಕಾರಕ್ಕೆ ಲಾಭವಿಲ್ಲ. ರೈತರಿಗೆ ಹಣ ಕೊಡ್ತೀವಿ ಇದನ್ನು ಎಲ್ಲರೂ ಬೆಂಬಲಿಸಬೇಕು ಎಂದರು.

ಇಡೀ ದೇಶದಲ್ಲಿ ನಮ್ಮಷ್ಟು ಕಡಿಮೆ ದರದಲ್ಲಿ ರೈತರಿಂದ ಹಾಲು ಸಂಗ್ರಹ ಮಾಡುವ ರಾಜ್ಯ ಬೇರೆ ಯಾವುದು ಇಲ್ಲ. ಹಾಗೇ ಕಡಿಮೆ‌ ದರದಲ್ಲಿ ಗ್ರಾಹಕರಿಗೆ ಹಾಲು ಕೊಡುತ್ತಿರುವ ರಾಜ್ಯ ಬೇರೆಯಿಲ್ಲ. ಇಡೀ ದೇಶದಲ್ಲಿ ಇಷ್ಟು ಕಡಿಮೆ ಪ್ರಮಾಣದಲ್ಲಿ ಹಾಲು ಮಾರಾಟ ಮಾಡುವ ವ್ಯವಸ್ಥೆ ಎಲ್ಲೂ ಇಲ್ಲ. ಕೆಲವು ರಾಜ್ಯಗಳಲ್ಲಿ ಹಾಲು ಲೀಟರ್​ಗೆ 58 ರಿಂದ 60 ರೂಪಾಯಿಯಂತೆ ಮಾರಾಟವಾಗುತ್ತಿದೆ. ಎಲ್ಲಾ ಅಂಕಿ - ಅಂಶಗಳನ್ನ ಮುಖ್ಯಮಂತ್ರಿಗೆ ಕೊಟ್ಟಿದ್ದೇನೆ. ನಮ್ಮ ರಾಜ್ಯದಲ್ಲೂ ಖರೀದಿ ಮಾಡುವುದು ಮಾರಾಟ ಮಾಡುವುದು ಎಲ್ಲವೂ ಒಂದೇ ದರ ಮಾಡೋಣ ಅಂತ ಹೇಳಿದ್ದೇನೆ ಎಂದು ತಿಳಿಸಿದರು.

ಹಾಲಿನ ದರ 5 ರೂ ಅಥವಾ 10 ರೂ ಹೆಚ್ಚಳ ಮಾಡಿದರೂ ಅದನ್ನು ರೈತರಿಗೆ ಕೊಡಬೇಕು. ಮುಖ್ಯಮಂತ್ರಿಗಳು ಸಭೆ ಕರೆದು ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ. ಹಳ್ಳಿಯ ಹಣಕಾಸು ವಹಿವಾಟು ಹೆಚ್ಚಿದಾಗ ಮಾತ್ರ ರಾಷ್ಟ್ರದ ಜಿಡಿಪಿ ಹೆಚ್ಚಲು ಸಾಧ್ಯ. ಸಾಫ್ಟ್​ವೇರ್​ ಸೆಕ್ಟರ್​ನಿಂದ‌ ಹಳ್ಳಿಗಾಡಿನ ಅಭಿವೃದ್ಧಿ ಆಗಲ್ಲ ಎಂದರು.

ಇದನ್ನೂ ಓದಿ:ಬರದ ನಾಡಲ್ಲಿ ಡ್ರ್ಯಾಗನ್‌ಫ್ರೂಟ್​ ಬೆಳೆದ ಫಾರ್ಮಾಸಿಸ್ಟ್‌; ಕೈತುಂಬಾ ಆದಾಯ ನೀಡುತ್ತಿರುವ ಹಣ್ಣಿನ ಬೆಳೆ - DRAGON FRUIT

ABOUT THE AUTHOR

...view details