ಕರ್ನಾಟಕ

karnataka

ಗಣೇಶೋತ್ಸವದಲ್ಲಿ ಭಾಗಿಯಾಗಲು ವಿದ್ಯಾರ್ಥಿಗಳನ್ನು ನಿರ್ಬಂಧಿಸಿದ್ದ ಕುಲಸಚಿವ, ಇನ್‍ಸ್ಪೆಕ್ಟರ್​ನ್ನು ವಜಾ ಮಾಡಿ: ಡಾ.ಅಶ್ವತ್ಥನಾರಾಯಣ - CN Ashwath Narayan

By ETV Bharat Karnataka Team

Published : 4 hours ago

ಗಣೇಶೋತ್ಸವದಲ್ಲಿ ವಿದ್ಯಾರ್ಥಿಗಳು ಭಾಗವಹಿಸದಂತೆ ಸುತ್ತೋಲೆ ಹೊರಡಿಸಿದ್ದ ತುಮಕೂರು ವಿಶ್ವವಿದ್ಯಾಲಯದ ಕುಲಸಚಿವ ಮತ್ತು ಇನ್‍ಸ್ಪೆಕ್ಟರ್​ನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಡಾ. ಸಿ.ಎನ್​. ಅಶ್ವತ್ಥನಾರಾಯಣ ಅವರು ಆಗ್ರಹಿಸಿದ್ದಾರೆ.

ಮಲ್ಲೇಶ್ವರಂನಲ್ಲಿನ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಮಾಧ್ಯಮಗೋಷ್ಟಿ
ಮಲ್ಲೇಶ್ವರಂನಲ್ಲಿನ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಮಾಧ್ಯಮಗೋಷ್ಟಿ (ETV Bharat)

ಬೆಂಗಳೂರು:ಗಣೇಶೋತ್ಸವದಲ್ಲಿ ವಿದ್ಯಾರ್ಥಿಗಳು ಭಾಗವಹಿಸದಂತೆ ಸುತ್ತೋಲೆ ಹೊರಡಿಸಿ ವ್ಯಕ್ತಿ, ಸಮಾಜದ ಹಕ್ಕಿಗೆ ದಕ್ಕೆ ತಂದ ತುಮಕೂರು ವಿಶ್ವವಿದ್ಯಾಲಯದ ಕುಲಸಚಿವ ಮತ್ತು ಈ ಕುರಿತು ಕುಲಸಚಿವರಿಗೆ ಪತ್ರ ಬರೆದ ಇನ್‍ಸ್ಪೆಕ್ಟರ್​ನ್ನು ವಜಾ ಮಾಡಿ ಎಂದು ಮಾಜಿ ಡಿಸಿಎಂ ಡಾ. ಸಿ.ಎನ್​. ಅಶ್ವತ್ಥನಾರಾಯಣ ಅವರು ಒತ್ತಾಯಿಸಿದರು.

ಮಲ್ಲೇಶ್ವರಂನಲ್ಲಿನ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, "ಇವರಿಬ್ಬರನ್ನೂ ಸೇವೆಯಿಂದ ವಜಾ ಮಾಡಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ಎಚ್ಚರಿಸಿದರು. ಯುನಿವರ್ಸಿಟಿ ಇವರ ಕೈಗೊಂಬೆಯಾಗಿದೆ. ಕಾನೂನಿನ ಮನವರಿಕೆ, ತಿಳುವಳಿಕೆ ಮಾಡಲಾಗದ ಇವರು ಇಂಥ ಜವಾಬ್ದಾರಿಯುತ ಸ್ಥಾನದಲ್ಲಿ ಮುಂದುವರೆಯಲು ಯೋಗ್ಯರಲ್ಲ. ಇಡೀ ಸಮಾಜದ ಭಾವನೆಗೆ ಇವರು ಧಕ್ಕೆ ತಂದಿದ್ದಾರೆ. ಸರಕಾರಕ್ಕೆ ನೈತಿಕತೆ ಇದ್ದಲ್ಲಿ ತಕ್ಷಣ ಈ ವ್ಯಕ್ತಿಗಳನ್ನು ವಜಾ ಮಾಡಬೇಕು. ಹಿಂದೂ ಸಮಾಜ, ಭಾರತದ ಜನರ ಭಾವನೆಗೆ, ಇಡೀ ಭಾರತಕ್ಕೆ ಹಾಗೂ ಇಡೀ ಕರ್ನಾಟಕದ ಭಾವನೆಗೆ ಧಕ್ಕೆ ಉಂಟಾಗಿದೆ. ಇಂಥಹ ಕಾಂಗ್ರೆಸ್​ ಸರಕಾರದ ಕ್ರಮವನ್ನು ಸಂಪೂರ್ಣವಾಗಿ ಖಂಡಿಸುತ್ತೇವೆ" ಎಂದು ಆಕ್ಷೇಪಿಸಿದರು.

"ಸಾರ್ವಜನಿಕವಾಗಿ ವಿನಾಯಕ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ವಿನಾಯಕನ ಚತುರ್ಥಿ ಮೂಲಕ ಸಮಾಜವನ್ನು ಸಂಘಟನೆ ಮಾಡಿದ್ದು, ಸ್ವಾತಂತ್ರ್ಯ ಚಳವಳಿಗೂ ಅದು ಸ್ಫೂರ್ತಿ ಕೊಟ್ಟಿದೆ. ಸ್ವಾತಂತ್ರ್ಯ ಪೂರ್ವ ಕಾಲದಿಂದ ಇದು ಮುಂದುವರೆಯುತ್ತಿದೆ. ಇಂಥ ಸಂಸ್ಕೃತಿ, ಹಿನ್ನೆಲೆ, ಇತಿಹಾಸವುಳ್ಳ ವಿನಾಯಕ ಚತುರ್ಥಿಯ ಆಚರಣೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಗೃಹ ಇಲಾಖೆಯು ವಿನಾಯಕ ಚತುರ್ಥಿ ಕಾರ್ಯಕ್ರಮವೇ ಇಲ್ಲದಂತೆ ನೋಡಿಕೊಳ್ಳುತ್ತಿದೆ. ಪ್ರತಿಭಟನೆಯಲ್ಲಿ ಗಣೇಶನ ಮೂರ್ತಿ ಇಟ್ಟುಕೊಂಡರೆ ಅದನ್ನು ಪೊಲೀಸ್ ಜೀಪಿನಲ್ಲಿ ಇಟ್ಟುಕೊಳ್ಳುತ್ತಾರೆ" ಎಂದು ಗರಂಗೊಂಡರು.

ಮುಂದುವರೆದು "ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಕಂಟಕ ಆಗಬಹುದು, ಸಮಸ್ಯೆ ನಿರ್ಮಾಣ ಆಗಬಹುದು. ಸಮಾಜ ವಿರೋಧಿಗಳು, ಪ್ರಚೋದಕರ ಜೊತೆ ಕೈಜೋಡಿಸಿ ಸಮಸ್ಯೆ ನಿರ್ಮಾಣ ಆಗಬಹುದು ಎಂದು ಪೊಲೀಸ್​ ಇನ್‍ಸ್ಪೆಕ್ಟರ್​ ತುಮಕೂರು ವಿವಿ ಮೌಲ್ಯಮಾಪನ ಕುಲಸಚಿವರಿಗೆ ಬರೆದ ಪತ್ರಕ್ಕೆ ಸ್ವಾಯತ್ತತೆ ಇರುವ ವಿಶ್ವವಿದ್ಯಾಲಯದ ಕುಲಸಚಿವರು ಸುತ್ತೋಲೆ ಹೇಗೆ ಹೊರಡಿಸಿದರು. ಇನ್‍ಸ್ಪೆಕ್ಟರ್​ ಹೇಳಿದರೆ ಬರೆದು ಬಿಡ್ತಾರಾ? ಇನ್‍ಸ್ಪೆಕ್ಟರ್​ ಎಂದರೆ ಜಿಲ್ಲಾಡಳಿತವೇ? ಅವರ ವ್ಯಾಪ್ತಿ ಏನು?" ಎಂದು ಪ್ರಶ್ನಿಸಿದರಲ್ಲದೆ, ಇಂಥ ಕುಲಸಚಿವರು, ಉಪ ಕುಲಪತಿಗಳನ್ನು ಎಲ್ಲಿಂದ ಹುಡುಕಿ ತಂದಿದ್ದಾರೋ ಗೊತ್ತಿಲ್ಲ" ಎಂದು ಟೀಕಿಸಿದರು.

ಕೊನೆದಾಗಿ, "ಕಾನೂನುಬಾಹಿರ ಶಕ್ತಿಗಳು ಮೆರವಣಿಗೆಯಲ್ಲಿ ಬರುವುದಾದರೆ ಮುಂಜಾಗ್ರತಾ ಕ್ರಮವಾಗಿ ಬಂಧಿಸಬೇಕಿತ್ತು" ಎಂದು ಅಶ್ವತ್ಥನಾರಾಯಣ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ:ಕೃಷಿಮೇಳದ ವೇದಿಕೆಯಲ್ಲಿ ಕೃಷಿ ವಿವಿ ಕುಲಪತಿಗೆ ಕ್ಲಾಸ್ ತೆಗೆದುಕೊಂಡ ಸಚಿವ ಸಂತೋಷ್ ಲಾಡ್ - santosh lad

ABOUT THE AUTHOR

...view details