ಕರ್ನಾಟಕ

karnataka

ಶಿರೂರು ಗುಡ್ಡ ಕುಸಿತ ಕಾರ್ಯಾಚರಣೆಗೆ ಬಂತು ಅತ್ಯಾಧುನಿಕ ಬೂಮ್ ಯಂತ್ರ - Shiruru Hill Collapse

By ETV Bharat Karnataka Team

Published : Jul 24, 2024, 1:46 PM IST

Updated : Jul 24, 2024, 3:01 PM IST

ಅಂಕೋಲಾದ ಶಿರೂರು ಗುಡ್ಡ ಕುಸಿತ ಕಾರ್ಯಾಚರಣೆಗೆ ಅತ್ಯಾಧುನಿಕ ಬೂಮ್ ಯಂತ್ರವನ್ನು ತರಿಸಲಾಗಿದೆ.

shiruru hill collapse
ಶಿರೂರು ಗುಡ್ಡ ಕುಸಿತ ಕಾರ್ಯಾಚರಣೆ (ETV Bharat)

ಅತ್ಯಾಧುನಿಕ ಬೂಮ್ ಯಂತ್ರ (ETV Bharat)

ಕಾರವಾರ (ಉತ್ತರ ಕನ್ನಡ): ಅಂಕೋಲಾ ತಾಲೂಕಿನ ಶಿರೂರು ಹೆದ್ದಾರಿ ಮೇಲೆ ಗುಡ್ಡ ಕುಸಿತದಿಂದ ನಾಪತ್ತೆಯಾದವರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಬುಧವಾರ ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆಗೆ ಸುಮಾರು 60 ಅಡಿ ಉದ್ದ ಹಾಗೂ 30 ಅಡಿ ಆಳದ ಮಣ್ಣು ತೆರವು ಮಾಡುವ ಅತ್ಯಾಧುನಿಕ ಬೂಮ್ ಯಂತ್ರವನ್ನು ತರಿಸಲಾಗಿದೆ.

ಕಳೆದ 9 ದಿನಗಳಿಂದ ಗುಡ್ಡ ಕುಸಿತ ಪ್ರದೇಶದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಈವರೆಗೆ 8 ಮಂದಿಯ ಮೃತದೇಹಗಳು ಪತ್ತೆಯಾಗಿವೆ. ಇನ್ನೂ ಮೂವರು ಪತ್ತೆಯಾಗಬೇಕಿರುವ ಹಿನ್ನೆಲೆಯಲ್ಲಿ ಸೇನಾಪಡೆಗಳು, ನೌಕಾನೆಲೆ ಮುಳುಗು ತಜ್ಞರು, ಎನ್​ಡಿಆರ್​ಎಫ್, ಎಸ್​ಡಿಆರ್​​ಎಫ್ ತಂಡಗಳಿಂದ ನಿರಂತರ ಶೋಧ ಕಾರ್ಯ ಪ್ರಗತಿಯಲ್ಲಿದೆ.

ಅತ್ಯಾಧುನಿಕ ಬೂಮ್ ಯಂತ್ರ (ETV Bharat)

ಇದನ್ನೂ ಓದಿ:ಶಿರೂರು ಗುಡ್ಡ ಕುಸಿತ: 8 ದಿನಗಳ ಬಳಿಕ ಮಹಿಳೆಯ ಮೃತದೇಹ ಪತ್ತೆ, ಉಳಿದವರಿಗಾಗಿ ನದಿಯಲ್ಲಿ ತೀವ್ರ ಹುಡುಕಾಟ - Shiruru Hill Collapse Case

ಆದರೆ, ಈವರೆಗೆ ನಾಪತ್ತೆಯಾದ ಮೂವರ ಬಗ್ಗೆ ಯಾವುದೇ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ ಅಂಕೋಲಾ ಶಾಸಕ ಸತೀಶ್ ಸೈಲ್ ತಮ್ಮ ಸ್ವಂತ ಖರ್ಚಿನಲ್ಲಿ 60 ಅಡಿ ಉದ್ದ ಹಾಗೂ 30 ಅಡಿ ಆಳದ ಮಣ್ಣನ್ನು ತೆರವು ಮಾಡಬಹುದಾದ ಅತ್ಯಾಧುನಿಕ ಬೂಮ್ ಹಿಟಾಚಿ ಯಂತ್ರವನ್ನು ತರಿಸಿದ್ದಾರೆ. ಗೋಕಾಕ್​ನಿಂದ ತರಲಾದ ಈ ಯಂತ್ರದ ಮೂಲಕ ಗಂಗಾವಳಿ ನದಿಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಬುಧವಾರ ದಿನವಿಡೀ ಯಂತ್ರದ ಮೂಲಕ ನಿರಂತರ ಕಾರ್ಯಾಚರಣೆ ನಡೆಯಲಿದೆ.

ನಾಪತ್ತೆಯಾದ ಲಾರಿ, ಚಾಲಕ ಗಂಗಾವಳಿ ನದಿಯಲ್ಲಿ ಮಣ್ಣಿನಡಿ ಸಿಲುಕಿರುವ ಶಂಕೆ ಹಿನ್ನೆಲೆಯಲ್ಲಿ ಬೃಹತ್​ ಯಂತ್ರವನ್ನು ತರಲಾಗಿದೆ. ಕೇರಳ ಮೂಲದ ಲಾರಿ ಚಾಲಕ ಅರ್ಜುನ್​ ಸೇರಿದಂತೆ ಮೂವರ ಪತ್ತೆಗಾಗಿ ವಿವಿಧ ರಕ್ಷಣಾ ಪಡೆಗಳು ಕಾರ್ಯಾಚರಣೆಯಲ್ಲಿ ತೊಡಗಿವೆ.

ಇದನ್ನೂ ಓದಿ:ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ 7 ಮೃತದೇಹ ಪತ್ತೆ: ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಮಾಹಿತಿ - Shiruru Hill Collapse Case

Last Updated : Jul 24, 2024, 3:01 PM IST

ABOUT THE AUTHOR

...view details