ಆನೇಕಲ್ (ಬೆಂಗಳೂರು):ಆನೇಕಲ್ ತಾಲೂಕಿನ ಜಿಗಣಿ - ಹಾರೋಹಳ್ಳಿ ಮುಖ್ಯರಸ್ತೆಯ ಉರಗನದೊಡ್ಡಿ ಬಳಿ ರಸ್ತೆ ದಾಟುತ್ತಿದ್ದ ಆನೆ ಮರಿಗೆ ಬೃಹತ್ ಅಪರಿಚಿತ ವಾಹನ ಡಿಕ್ಕಿಯಾಗಿದ್ದು, ಪರಿಣಾಮ ಆನೆ ಸ್ಥಳದಲ್ಲಿಯೇ ಸಾವನ್ನಪ್ಪಿದೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಸೇರಿದ ಕಾಡಿನ ನಡುವಿನ ರಸ್ತೆಯಲ್ಲಿ 'ವನ್ಯ ಜೀವಿಗಳಿವೆ ನಿಧಾನವಾಗಿ ಚಲಿಸಿ' ಎಂದು ಸೂಚನಾಫಲಕ ಹಾಕಿದ್ದರೂ ವೇಗವಾಗಿ ಚಲಿಸುವ ವಾಹನಗಳ ಭರಾಟೆಗೆ ವನ್ಯಜೀವಿಯೊಂದು ಸಾವನ್ನಪ್ಪಿದೆ.