ಕರ್ನಾಟಕ

karnataka

ETV Bharat / international

ಸಿಂಗಾಪುರ್​ ಏರ್​ ಇಂಡಿಯಾಗೆ ಬಾಂಬ್​​ ಬೆದರಿಕೆ; ಬೆಂಗಾವಲಾಗಿ ಎರಡು ಯುದ್ದ ವಿಮಾನಗಳ ನಿಯೋಜನೆ

ಸಿಂಗಾಪುರಕ್ಕೆ ಹೊರಟಿದ್ದ ಎಎಕ್ಸ್​ಬಿ684 ವಿಮಾನದಲ್ಲಿ ಬಾಂಬ್ ಇದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಇಮೇಲ್ ಬಂದಿತ್ತು. ಹೀಗಾಗಿ ವಿಮಾನಕ್ಕೆ ಬೆಂಗಾವಲು ನೀಡಲಾಗಿತ್ತು.

By ANI

Published : 6 hours ago

singapore-scrambles-two-fighter-jets-after-bomb-threat-on-air-india-express-flight
ಸಿಂಗಾಪುರ್​ ಏರ್​ ಇಂಡಿಯಾ (ಸಾಂದರ್ಭಿಕ ಚಿತ್ರ)

ಸಿಂಗಾಪುರ್​​: ಸಿಂಗಾಪುರದ ಏರ್​ ಇಂಡಿಯಾ ಎಕ್ಸ್​ಪ್ರೆಸ್​ ವಿಮಾನಕ್ಕೆ ಬೆದರಿಕೆ ಬಂದ ಬಳಿಕ ಮಂಗಳವಾರ ರಾತ್ರಿ ಮುಂಜಾಗ್ರತಾ ಕ್ರಮವಾಗಿ ವಿಮಾನಕ್ಕೆ ಬೆಂಗಾವಲಾಗಿ ಸಿಂಗಾಪುರ ವಾಯುಪಡೆ ಎಫ್​- 15ಎಸ್​ಜಿ ಜೆಟ್​ ನಿಯೋಜಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದ ಅಲ್ಲಿನ ರಕ್ಷಣಾ ಸಚಿವ ಎನ್​ಜಿ ಇಂಗ್​ ಹೆನ್​, ಸಿಂಗಾಪುರಕ್ಕೆ ಹೊರಟಿದ್ದ ಎಎಕ್ಸ್​ಬಿ 684 ವಿಮಾನದಲ್ಲಿ ಬಾಂಬ್ ಇದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಇಮೇಲ್ ಬಂದಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಆರ್​ಎಸ್​ಎಎಫ್​ನ ಎರಡು ಯುದ್ಧ ವಿಮಾನಗಳನ್ನು ಅದರ ಬೆಂಗಾವಲಾಗಿ ನಿಯೋಜಿಸಲಾಗಿದೆ. ಅಂತಿಮವಾಗಿ ಇಂದು ರಾತ್ರಿ ಸುಮಾರು 10:04 ಗಂಟೆಗೆ ಸಿಂಗಪುರ್ ಚಾಂಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಸುರಕ್ಷಿತವಾಗಿ ಇಳಿದಿದೆ ಎಂದು ತಿಳಿಸಿದ್ದಾರೆ.

ಈ ವೇಳೆ, ನಮ್ಮ ಭೂ ಆಧಾರಿತ ವಾಯು ರಕ್ಷಣಾ ವ್ಯವಸ್ಥೆ ಮತ್ತು ಎಕ್ಸ್​​ಪ್ಲೊಸಿವ್​​ ಒರ್ಡನ್ಸ್​​ ಡಿಸ್ಪೋಸಲ್​ ಕೂಡ ಸಕ್ರಿಯಗೊಳಿಸಲಾಗಿದೆ. ವಿಮಾನ ಭೂ ಸ್ಪರ್ಶ ಮಾಡುತ್ತಿದ್ದಂತೆ ವಿಮಾನವನ್ನು ಏರ್​​ಪೋರ್ಟ್​​ ಪೊಲೀಸರ ಸುಪರ್ದಿಗೆ ಒಪ್ಪಿಸಲಾಗುವುದು. ಸದ್ಯ ತನಿಖೆ ಮುಂದುವರೆದಿದೆ ಎಂದು ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ವಿಮಾನದ ಸುರಕ್ಷಿತ ಲ್ಯಾಂಡಿಂಗ್​ನಲ್ಲಿ ಭಾಗಿಯಾದ ಸಿಂಗಾಪುರ್​ ಸೇನಾ ಬಲ ಮತ್ತು ಗೃಹ ತಂಡದ ಸಮರ್ಪಣಾ ಕಾರ್ಯಕ್ಕೆ ಅವರು ಶ್ಲಾಘನೆ ವ್ಯಕ್ತಡಿಸಿದ್ದಾರೆ. ಸಿಂಗಾಪೂರ್​ ಸೇನಾ ಬಲ ಮತ್ತು ಗೃಹ ತಂಡದ ವೃತ್ತಿಪರತೆ ಮತ್ತು ಸಮರ್ಪಣೆಗೆ ಧನ್ಯವಾದಗಳು. ಬೆದರಿಕೆ ನಡುವೆ ಸುರಕ್ಷಿತವಾಗಿ ವಿಮಾನವನ್ನು ನಮ್ಮ ನೆಲಕ್ಕೆ ಕರೆ ತಂದಿದ್ದಕ್ಕೆ ಕೃತಜ್ಞತೆಗಳು ಎಂದಿದ್ದಾರೆ.

ಮಂಗಳವಾರ ರಾತ್ರಿ 8.25 (ಸ್ಥಳೀಯ ಸಮಯ) ಸುಮಾರಿಗೆ ಬಾಂಬ್​ ಬೆದರಿಕೆ ಕುರಿತು ಎಚ್ಚರಿಕೆ ನೀಡಲಾಯಿತು. ರಾತ್ರಿ 10.04ರ ಸುಮಾರಿಗೆ ವಿಮಾನ ಸುರಕ್ಷಿತವಾಗಿ ಚಾಂಗಿ ವಿಮಾನ ನಿಲ್ದಾದಲ್ಲಿ ಇಳಿದಿದೆ. ಈ ವೇಳೆ, ವಿಮಾನ ಹಾರಾಟದ ಮಾರ್ಗದಲ್ಲಿ ಆರ್​ಎಸ್​ಎಎಫ್​​ ಯುದ್ದ ವಿಮಾನಗಳು ಬೆಂಗಾವಲಾಗಿ ನಿಯೋಜಿಸಲಾಗಿತ್ತು ಎಂದು ಸಿಂಗಾಪುರ್​ ಪೊಲೀಸ್​ ದಳ ಸಿಎನ್​ಎಗೆ ತಿಳಿಸಿದೆ.

ವಿಮಾನ ಲ್ಯಾಂಡ್​ ಆದ ಬಳಿಕ ಸಂಪೂರ್ಣ ತಪಾಸಣೆ ನಡೆಸಲಾಗಿದ್ದು, ಯಾವುದೇ ಬೆದರಿಕೆ ಕಂಡು ಬಂದಿಲ್ಲ. ಈ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಈ ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಹೆಜ್ಬುಲ್ಲಾದ ಹಿರಿಯ ಯುಎವಿ ಕಮಾಂಡರ್ ಸಾವು: ಖಚಿತಪಡಿಸಿದ ಇಸ್ರೇಲಿ ರಕ್ಷಣಾ ಪಡೆ

ABOUT THE AUTHOR

...view details