ಕರ್ನಾಟಕ

karnataka

ಮೆಜೆಸ್ಟಿಕ್ 2 ಸಿನಿಮಾ ಬಿಡುಗಡೆಗೂ ಮುಂಚೆ ಲವ್ ಈಸ್ ಲೈಫ್ ಅಂತಿದ್ದಾರೆ ಭರತ್ ಕುಮಾರ್ - actor Bharat Kumar

By ETV Bharat Karnataka Team

Published : Sep 1, 2024, 4:32 PM IST

ಯುವ ನಟ ಭರತ್​ಕುಮಾರ್ ಅವರು ಮೆಜೆಸ್ಟಿಕ್​​ 2 ಸಿನಿಮಾ ಶೂಟಿಂಗ್ ಮುಗಿಯುವ ಮೊದಲೇ 'ಲವ್​ ಈಸ್​ ಲೈಫ್' ಸಿನಿಮಾದಲ್ಲಿ ನಟಿಸಲು ಅವಕಾಶ ಪಡೆದಿದ್ದಾರೆ. ಈಗಾಗಲೇ ಈ ಸಿನಿಮಾದ ಮೂಹೂರ್ತ ಸಮಾರಂಭ ಶ್ರೀ ಬಂಡೆ ಮಹಾಂಕಾಳಮ್ಮ ದೇವಸ್ಥಾನದಲ್ಲಿ ನೆರವೇರಿದೆ.

love is life movie
ಲವ್ ಈಸ್ ಲೈಫ್ ಸಿನಿಮಾ ತಂಡ (ETV Bharat)

ಮೆಜೆಸ್ಟಿಕ್ 2 ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದ ಯುವನಟ ಭರತ್‌ಕುಮಾರ್ ಆ ಚಿತ್ರದ ಶೂಟಿಂಗ್ ಮುಗಿಯುವ ಮೊದಲೇ ಮತ್ತೊಂದು ಸಿನಿಮಾದ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆ ಚಿತ್ರದ ಹೆಸರು ಲವ್ ಈಸ್ ಲೈಫ್. ಈ ಚಿತ್ರದ ಮುಹೂರ್ತ ಸಮಾರಂಭ ಶ್ರೀಬಂಡೆ ಮಹಾಂಕಾಳಮ್ಮ ದೇವಸ್ಥಾನದಲ್ಲಿ ನೆರವೇರಿದೆ. ಅಂಬಿಗಾ ಕ್ರಿಯೇಶನ್ಸ್ ಮೂಲಕ ಜಿ. ಡಿ ಸಂತೋಷ್‌ ಕುಮಾರ್ ಹಾಗೂ ಎನ್. ಹನುಮಂತಪ್ಪ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಜಿ. ಶಿವರಾಜ್ ಅವರ ಕಥೆ, ಚಿತ್ರಕಥೆ, ನಿರ್ದೇಶನ ಈ ಚಿತ್ರಕ್ಕಿದೆ.

ನಿರ್ದೇಶಕ ಶಿವರಾಜ್ ಮಾತನಾಡಿ, ನಾನು 14 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಸುಂದರನಾಥ ಸುವರ್ಣ, ಅಶೋಕ್ ಕಶ್ಯಪ್ ಅವರ ಜೊತೆ ಅಸಿಸ್ಟೆಂಟ್ ಕ್ಯಾಮೆರಾಮನ್ ಆಗಿದ್ದಲ್ಲದೆ, ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಮೂರು ತಿಂಗಳು ಕುಳಿತು ಈ ಚಿತ್ರದ ಸ್ಕ್ರಿಪ್ಟ್ ರೆಡಿ ಮಾಡಿಕೊಂಡಿದ್ದೇನೆ. ಇದೊಂದು ವಿಭಿನ್ನ ಪ್ರೇಮಕಥೆ. ಈ ಥರನೂ ಲವ್ ಮಾಡಬಹುದಾ? ಅಂತನಿಸೋ ಚಿತ್ರ.

ವಿದೇಶದಿಂದ ಭಾರತಕ್ಕೆ ಬರೋ ಹುಡುಗ ಇಲ್ಲಿನ ಸಮಸ್ಯೆಗಳನ್ನು ಯಾವ ರೀತಿ ಬಗೆಹರಿಸುತ್ತಾನೆ ಅನ್ನೋದನ್ನು ಪ್ರೇಮಕಥೆಯೊಂದರ ಹಿನ್ನೆಲೆ ಇಟ್ಟುಕೊಂಡು ಹೇಳುತ್ತಿದ್ದೇವೆ. ಸುತ್ತಲೂ ಬೆಟ್ಟ ಇರುವ ಒಂಟಿ ಮನೆಯನ್ನು ಚಿತ್ರೀಕರಣಕ್ಕಾಗಿ ಹುಡುಕಿದ್ದೇವೆ. ವಿಶೇಷವಾಗಿ ಆ ಮನೆಯೂ ಚಿತ್ರದ ಒಂದು ಭಾಗವಾಗಿ ಮೂಡಿಬರಲಿದೆ. ಇಲ್ಲಿ ನಾಯಕನ ಪಾತ್ರಕ್ಕೆ ಭರತ್ ಅವರೇ ಸೂಕ್ತ ಅನಿಸಿತು. ಆತನಲ್ಲಿರುವ ಪ್ರತಿಭೆಯನ್ನು ಹೊರತೆಗೆಯುವ ಪ್ರಯತ್ನ ಮಾಡುತ್ತೇನೆ. ಇದನ್ನು ಚಾಲೆಂಜ್ ಆಗಿ ತಗೊಂಡಿದ್ದು, ಪ್ರೂವ್ ಮಾಡಿ ತೋರಿಸುತ್ತೇನೆ ಎಂದು ಹೇಳಿದರು.

ನಾಯಕ ಭರತ್ ಕುಮಾರ್ ಮಾತನಾಡುತ್ತ, ಇದು ನನ್ನ 2ನೇ ಚಿತ್ರ. ನಾನು ಓದಿದ್ದೆಲ್ಲಾ ವಿದೇಶದಲ್ಲಿಯೇ ಆದರೂ ನನ್ನ ತಂದೆ, ತಾಯಿ ಇಲ್ಲಿನವರೇ. ಇಲ್ಲಿನ ಜನರಲ್ಲಿ ಪ್ರೀತಿ ಅಭಿಮಾನ ಜಾಸ್ತಿ ಇರುತ್ತೆ. ಚಿತ್ರದಲ್ಲಿ ನಾನೊಬ್ಬ ಲವರ್‌ಬಾರ್ ಆಗಿ ಕಾಣಿಸಿಕೊಂಡಿದ್ದೇನೆ. ನನ್ನ ಪರ್ಫಾರ್ಮನ್ಸ್ ತೋರಿಸಲು ಚಿತ್ರದಲ್ಲಿ ಅವಕಾಶ ಇದೆ. ಸಿನಿಮಾ ನೋಡುವಾಗ ಲವ್ ಸ್ಟೋರಿಯಲ್ಲಿ ಈ ರೀತಿನೂ ಪ್ರಯೋಗ ಮಾಡಬಹುದಾ ಅನಿಸುತ್ತೆ. ಕಥೆಯಲ್ಲಿ ಪಾತ್ರ ತುಂಬಾ ಹೈಲೈಟ್ ಆಗುತ್ತದೆ. ಅದಕ್ಕೊಂದು ಟ್ವಿಸ್ಟ್ ಇದೆ. ಇದರ ಜೊತೆಗೊಂದು ಕ್ಯೂಟ್ ಲವ್ ಸ್ಟೋರಿನೂ ಇದೆ ಎಂದಿದ್ದಾರೆ.

ನಾಯಕಿ ಮಿಷಲ್ ಮಾತನಾಡುತ್ತ, ಇದು ನನ್ನ ಮೊದಲ ಚಿತ್ರ, ನಾನು ರಿಚ್ ಫ್ಯಾಮಿಲಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ.‌ ಶ್ರೀಮಂತ ಕುಟುಂಬದ ಹುಡುಗಿಯಾದರೂ, ತುಂಬಾ ಸರಳ, ಸಾಮಾನ್ಯ ಹುಡುಗಿಯಾಗಿರುವೆ. ಶ್ರೀಮಂತಿಕೆಯ ದರ್ಪ ತೋರಲ್ಲ. ಇಂಥ ಪಾತ್ರ ಸಿಕ್ಕಿದ್ದಕ್ಕೆ ತುಂಬಾ ಖುಷಿ ಆಯ್ತು ಎಂದರು.

ನಂತರ ನಿರ್ಮಾಪಕ ಸಂತೋಷ್‌ಕುಮಾರ್ ಮಾತನಾಡುತ್ತ, 'ನನಗೆ ಮೊದಲಿಂದಲೂ ಸಿನಿಮಾ ಬಗ್ಗೆ ಆಸಕ್ತಿ ಜಾಸ್ತಿ. ನಾನೂ ಒಂದು ಸಿನಿಮಾ ನಿರ್ಮಾಣ ಮಾಡಬೇಕು ಅಂದ್ಕೊಂಡಿದ್ದೆ. ಆ ಸಮಯದಲ್ಲಿ ಈ ಡೈರೆಕ್ಟರ್ ಪರಿಚಯವಾದರು. ಈ ಥರ ಸಿನಿಮಾ ಮಾಡೋ ಐಡಿಯಾ ಇದೆ ಎಂದರು. ಅವರು ಹೇಳಿದ ಕಥೆ ತುಂಬಾ ಚೆನ್ನಾಗಿತ್ತು. ಅದನ್ನು ನಮ್ಮ ತಾಯಿಗೆ ಹೇಳಿದಾಗ ಅವರೂ ಸಹ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟರು. ಹಾಗೆ ನನಗೆ ಒಂದೊಳ್ಳೆ ಟೀಮ್ ಸಿಕ್ಕಿದೆ' ಎಂದು ಹೇಳಿದರು.

ಈ ಚಿತ್ರಕ್ಕೆ ಎ. ಟಿ ರವೀಶ್ ಸಂಗೀತ ನೀಡುತ್ತಿದ್ದು, ಚಿತ್ರದಲ್ಲಿ ಐದು ಹಾಡುಗಳಿವೆ. ಎಂ. ಬಿ ಅಳ್ಳೀಕಟ್ಟಿ ಛಾಯಾಗ್ರಾಹಕರಾಗಿ‌ ಕೆಲಸ ಮಾಡುತ್ತಿದ್ದಾರೆ. ಸೆಪ್ಟಂಬರ್ 9 ರಿಂದ ಶೃಂಗೇರಿಯಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಉಳಿದಂತೆ ನಾಗೇಂದ್ರ ಅರಸ್, ಪೂಜಾಗೌಡ, ಅಮಿತ್ ತಾರಾಗಣದಲ್ಲಿದ್ದಾರೆ.

ಇದನ್ನೂ ಓದಿ :ಕನ್ನಡ ಚಿತ್ರರಂಗದಲ್ಲಿ ಮಿಂಚಲು ರೆಡಿಯಾದ ಆರ್ಮುಗ ರವಿಶಂಕರ್ ಪುತ್ರ: ಸಿನಿಮಾದ ಪ್ರೀ ಲುಕ್ ಪೋಸ್ಟರ್ ರಿಲೀಸ್​ - Subhramanya Pre Look Poster

ABOUT THE AUTHOR

...view details