ಕರ್ನಾಟಕ

karnataka

ETV Bharat / entertainment

'ಈವರೆಗೆ 500 ಕಥೆಗಳನ್ನು ಕೇಳಿದ್ದೇನೆ, ಇದು ನನ್ನ 50ನೇ ಸಿನಿಮಾ': ವಿಜಯ್​ ಸೇತುಪತಿ ವಿಶೇಷ ಸಂದರ್ಶನ - VIJAY SETHUPATI Interview - VIJAY SETHUPATI INTERVIEW

ನಿಥಿಲನ್ ಸ್ವಾಮಿನಾಥನ್ ನಿರ್ದೇಶನದ 'ಮಹಾರಾಜ' ನಾಳೆ ಚಿತ್ರಮಂದಿರ ಪ್ರವೇಶಿಸಲಿದ್ದು, ನಾಯಕ ನಟ ವಿಜಯ್​ ಸೇತುಪತಿ ಈಟಿವಿ ಭಾರತ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

Vijay Sethupati
ನಟ ವಿಜಯ್​ ಸೇತುಪತಿ (ETV Bharat)

By ETV Bharat Karnataka Team

Published : Jun 13, 2024, 12:38 PM IST

ವಿಜಯ್ ಸೇತುಪತಿ, ದಕ್ಷಿಣ ಚಿತ್ರರಂಗದ ಜನಪ್ರಿಯ ನಟರಲ್ಲೊಬ್ಬರು. ಉತ್ತರದಲ್ಲೂ ಹೆಸರು ಮಾಡಿದ್ದಾರೆ. ಕೊಟ್ಟ ಪಾತ್ರಕ್ಕೆ ಹೇಗೆ ಜೀವ ತುಂಬಬೇಕು ಎಂಬುದು ಈ ನಟನಿಗೆ ಬಹಳ ಚೆನ್ನಾಗಿಯೇ ತಿಳಿದಿದೆ. ತೆರೆ ಮೇಲೆ ಅವರಿಗಿನ್ನ ಅವರ ಪಾತ್ರಗಳೇ ಸದ್ದು ಮಾಡುತ್ತದೆ. ಅಷ್ಟರ ಮಟ್ಟಿಗೆ ಅಭಿನಯವನ್ನು ಕರಗತ ಮಾಡಿಕೊಂಡಿದ್ದಾರೆ ಅಂತಾರೆ ಅಭಿಮಾನಿಗಳು.

ಒಂದೆಡೆ ನಾಯಕನಾಗಿ ನಟಿಸುತ್ತಿದ್ದರೆ, ಮತ್ತೊಂದೆಡೆ ಸೂಪರ್ ಸ್ಟಾರ್​ಗಳ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನೂ ನಿರ್ವಹಿಸುತ್ತಿದ್ದಾರೆ. ತೆಲುಗು, ತಮಿಳು, ಹಿಂದಿ ಹೀಗೇ ಯಾವುದೇ ಭಾಷೆಯಾದರೂ ತಮ್ಮ ಅಮೋಘ ಅಭಿನಯದಿಂದ ಗೆದ್ದು ಬರುತ್ತಾರೆ. ಸದ್ಯ ನಾಯಕನಾಗಿ ನಟಿಸಿರುವ 'ಮಹಾರಾಜ' ಸಿನಿಮಾ ಸಲುವಾಗಿ ಸಖತ್ ಸದ್ದು ಮಾಡುತ್ತಿದೆ. ನಿಥಿಲನ್ ಸ್ವಾಮಿನಾಥನ್ ನಿರ್ದೇಶನದ ಈ ಚಿತ್ರ ನಾಳೆ ಸಿನಿಪ್ರಿಯರಿಗೆ ದರ್ಶನ ಕೊಡಲಿದೆ. ಈ ಸಂದರ್ಭ ವಿಜಯ್ ಸೇತುಪತಿ ಈಟಿವಿ ಭಾರತ ಜೊತೆ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

50ನೇ ಚಿತ್ರಕ್ಕೆ ನಿರ್ದಿಷ್ಟ ಕಥೆ? 'ಮಹಾರಾಜ' ನನ್ನ 50ನೇ ಚಿತ್ರ. ಹಾಗಾಗಿ ವಿಶೇಷವಾಗಿ ಗಮನ ಹರಿಸಿ ಆಯ್ಕೆ ಮಾಡಿದ ಕಥೆಯಾಗಿದೆ. ಸ್ಟೋರಿ ಕೇಳಿದಾಗ ಬಹಳ ಆಸಕ್ತಿಕರ ಎನಿಸಿತು. ಕಥೆಗಿಂತ ನಿರೂಪಣೆ ನನ್ನ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಇದು ನನಗೆ ಪಿಜ್ಜಾ ಸಿನಿಮಾ ನೆನಪಿಸುತ್ತದೆ. ಅದರಲ್ಲೂ ಹಲವು ಸ್ವಾರಸ್ಯಕರ ತಿರುವುಗಳಿವೆ. ನಿರ್ದೇಶಕರು ಕಥೆ ಹೇಳಿದ ತಕ್ಷಣ ಇದು, ನನ್ನ 50ನೇ ಚಿತ್ರ ಎಂದು ಘೋಷಿಸಿದೆವು ಎಂದು ತಿಳಿಸಿದರು.

ಈ ಪಯಣವನ್ನು ಹಿಂತಿರುಗಿ ನೋಡಿದಾಗ ಹೇಗನಿಸುತ್ತದೆ? ನನ್ನ ಚಿತ್ರಗಳ ಸಂಖ್ಯೆ ಕೇವಲ 50 ಆಗಿರಬಹುದು. ಆದರೆ, ನಾನು 500ಕ್ಕೂ ಹೆಚ್ಚು ಕಥೆಗಳನ್ನು ಕೇಳಿದ್ದೇನೆ. ಅನೇಕ ಜನರನ್ನು ಭೇಟಿಯಾದೆ. ಸೋಲು - ಗೆಲುವುಗಳನ್ನು ಕಂಡಿದ್ದೇನೆ. ಸಿನಿಮಾದ ರಿಸಲ್ಟ್​​ ನಂತರ ಏನಾಯಿತು ಎಂಬುದರ ಕುರಿತು ನಾವು ಯೋಚಿಸುತ್ತೇವೆ. ಸಾಕಷ್ಟು ಅನುಭವಗಳಾಗಿದೆ. ಅದೊಂದು ದೊಡ್ಡ ಪ್ರಯಾಣ ಎಂದು ವರ್ಣಿಸಿದರು.

ಮುಂದಿನ ವೃತ್ತಿಜೀವನಕ್ಕೆ ವಿಶೇಷ ಸ್ಟ್ರ್ಯಾಟಜಿ, ಪ್ಲ್ಯಾನ್​ಗಳನ್ನು ಹೊಂದಿದ್ದೀರಾ? ನನಗೆ ಪಾಸ್ಟ್​​ನೊಂದಿಗೆ ಪ್ರಯಾಣ ಮಾಡುವುದು ಇಷ್ಟವಿಲ್ಲ. ಆದರೆ, ನನ್ನ ವೃತ್ತಿ ಈಗ ಇರುವಂತೆಯೇ ಮುಂದುವರಿಯುತ್ತದೆ. ಕನಸುಗಳು ಮತ್ತು ನಿರೀಕ್ಷೆಗಳು ಯಾವಾಗಲೂ ಹೊರೆಯಾಗಿರುತ್ತವೆ. ಹಾಗಾಗಿಯೇ ನಾನು ಪ್ರತಿದಿನ ಕ್ಯಾಮರಾ ಎದುರು ಹೋಗುತ್ತೇನೆ. ಸಿನಿಮಾದ ವಿಷಯದಲ್ಲೂ ಅದೇ ರೀತಿಯ ಥ್ರಿಲ್ ಇರುತ್ತದೆ. ಅದೇ ಜವಾಬ್ದಾರಿಯೊಂದಿಗೆ ಕೆಲಸ ಮುಂದುವರಿಸುವುದು ನನ್ನ ಸ್ಟ್ರ್ಯಾಟಜಿ ಎಂದು ತಿಳಿಸಿದರು.

ನಿಮ್ಮ ಹಿಂದಿನ ಚಿತ್ರಗಳಿಗೂ 'ಮಹಾರಾಜ' ಚಿತ್ರಕ್ಕೂ ಏನು ವ್ಯತ್ಯಾಸ? ಇದು ಸಾಮಾನ್ಯ ಕಮರ್ಷಿಯಲ್ ಸಿನಿಮಾಗಳಂತಲ್ಲ. ಕಲಾತ್ಮಕ ಚಿತ್ರವೂ ಅಲ್ಲ. ವ್ಯಕ್ತಿಯೊಬ್ಬ ತನ್ನ ಕುಟುಂಬವನ್ನು ರಕ್ಷಿಸಲು ಏನು ಮಾಡಿದ? ಎಷ್ಟು ದೂರ ಸಾಗಿದ? ಎಂಬುದು ಈ ಸಿನಿಮಾದ ಕುತೂಹಲಕಾರಿ ಅಂಶ. ನಿರ್ದೇಶಕ ನಿಥಿಲನ್ ಪ್ರತೀ ಪಾತ್ರವನ್ನೂ ಬಹಳ ಅದ್ಭುತವಾಗಿ ಚಿತ್ರಿಸಿದ್ದಾರೆ. ನಿರ್ಮಾಪಕ ಸುಧನ್ ಅವರೊಂದಿಗೆ ಇದು ನನ್ನ ಮೂರನೇ ಚಿತ್ರ. ಅಜನೀಶ್ ಅವರ ಸಂಗೀತವೇ ಚಿತ್ರದ ಪ್ರಮುಖ ಶಕ್ತಿ ಎಂದು ತಿಳಿಸಿದರು.

ಇದನ್ನೂ ಓದಿ:'ಕಲಾವಿದರ ಸಂಘದ ಜತೆ ಚರ್ಚಿಸಿದ ನಂತರ ದರ್ಶನ್​​ ವಿರುದ್ಧ ಕ್ರಮ': ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ - KFCC President on Darshan Case

ಯಾವಾಗ ನಿರ್ದೇಶನಕ್ಕೆ? ಒಳ್ಳೆಯ ಕಥೆ ಸಿಕ್ಕರೆ ನಿರ್ದೇಶನ ಮಾಡುತ್ತೇನೆ. ಮೂರು ಸಿನಿಮಾಗಳಿಗೆ ಕಥೆ, ಚಿತ್ರಕಥೆ ಬರೆದಿದ್ದೇನೆ. ಇನ್ನೂ ಕೆಲ ಕಥೆಗಳನ್ನು ಬರೆದಿದ್ದೇನೆ. ಸದ್ಯ ತಮಿಳಿನಲ್ಲಿ ಮೂರು ಚಿತ್ರಗಳಲ್ಲಿ ನಾಯಕನಾಗಿ ನಟಿಸುತ್ತಿದ್ದೇನೆ. ಹಿಂದಿಯಲ್ಲೂ ಸಿನಿಮಾ ಮಾಡುತ್ತಿದ್ದೇನೆ ಎಂದು ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ:ಜೂ.23ಕ್ಕೆ ಸೋನಾಕ್ಷಿ ಸಿನ್ಹಾ-ಜಹೀರ್ ಇಕ್ಬಾಲ್ ರಿಜಿಸ್ಟರ್ ಮ್ಯಾರೇಜ್ - Sonakshi Zaheer Registered Marriage

ABOUT THE AUTHOR

...view details