ಕರ್ನಾಟಕ

karnataka

'ಕಂಟೆಂಟ್ ಸಿನಿಮಾಗಳಿಂದ ಯಾರಿಗೂ ನಷ್ಟವಾಗಲ್ಲ': 'ಕಪಟಿ' ನಿರ್ಮಾಪಕ ದಯಾಳ್ ಪದ್ಮನಾಭನ್ - Kapati

By ETV Bharat Entertainment Team

Published : Aug 2, 2024, 2:26 PM IST

ಸುಕೃತಾ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ 'ಕಪಟಿ' ಚಿತ್ರದ ಟ್ರೇಲರ್​ ಅನ್ನು ನಟ ಡಾರ್ಲಿಂಗ್ ಕೃಷ್ಣ ಅನಾವರಣಗೊಳಿಸಿದ್ದಾರೆ. ಆಗಸ್ಟ್ 23ರಂದು ಬಿಡುಗಡೆ ಆಗಲಿರುವ ಸಿನಿಮಾ ಬಗ್ಗೆ ಚಿತ್ರತಂಡ ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದೆ.

Kapati trailer release event
'ಕಪಟಿ' ಟ್ರೇಲರ್ ರಿಲೀಸ್​ ಈವೆಂಟ್​ (ETV Bharat)

'ಕಪಟಿ' ಕನ್ನಡದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಸುಕೃತಾ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ 'ಕಪಟಿ' ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕಳೆದ ದಿನ ಅನಾವರಣಗೊಂಡಿರುವ ಟೀಸರ್ ಸಿನಿಮಾ ವೀಕ್ಷಿಸುವ ಕುತೂಹಲವನ್ನು ಹೆಚ್ಚಿಸಿದೆ.

ದಯಾಳ್ ಪದ್ಮನಾಭನ್ ನಿರ್ಮಾಣದ ಈ ಚಿತ್ರಕ್ಕೆ ರವಿಕಿರಣ್ ಹಾಗೂ ಚೇತನ್ ಎಸ್​ಪಿ ಅವರ ಜಂಟಿ ನಿರ್ದೇಶನವಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಟೀಸರ್ ಬಿಡುಗಡೆ ಸಮಾರಂಭಕ್ಕೆ ಕನ್ನಡದ ಜನಪ್ರಿಯ ನಟ ಡಾರ್ಲಿಂಗ್ ಕೃಷ್ಣ ಸಾಕ್ಷಿಯಾದರು. 'ಕಪಟಿ' ಟೀಸರ್ ಅನಾವರಣಗೊಳಿಸಿದ ಲವ್​ ಮಾಕ್ಟೇಲ್​​ ನಟ ಇಡೀ ಚಿತ್ರತಂಡಕ್ಕೆ ಶುಭ ಕೋರಿದರು.

'ಕಪಟಿ' ಚಿತ್ರತಂಡ (ETV Bharat)

ನಿರ್ಮಾಪಕ ದಯಾಳ್ ಪದ್ಮನಾಭನ್ ಮಾತನಾಡಿ, ಇದು ನಮ್ಮ ಡಿ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣ ಆಗಿರುವ 12ನೇ ಚಿತ್ರ. ಹನ್ನೆರಡು ಚಿತ್ರಗಳಲ್ಲಿ 10 ಕನ್ನಡ ಹಾಗೂ 2 ತಮಿಳು ಸಿನಿಮಾಗಳು. 11 ಚಿತ್ರಗಳನ್ನು ನಾನೇ ನಿರ್ಮಿಸಿ , ನಿರ್ದೇಶನವನ್ನೂ ಮಾಡಿದ್ದೇನೆ. ಆದರೆ, ಈ ಚಿತ್ರವನ್ನು ನಾನು ನಿರ್ಮಾಣ ಮಾತ್ರ ಮಾಡಿದ್ದೇನೆ. ರವಿಕಿರಣ್ ಹಾಗೂ ಚೇತನ್ ಆ್ಯಕ್ಷನ್​​​ ಕಟ್​ ಹೇಳಿದ್ದಾರೆ. ಇವರು ಬಂದು ಚಿತ್ರದ ಕಥೆ ಹೇಳಿದಾಗ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ಡಾರ್ಕ್ ನೆಟ್ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಕನ್ನಡದಲ್ಲಿ ಗುಲ್ಟು ಚಿತ್ರದ ನಂತರ ಈ ಜಾನರ್​​ನ ಚಿತ್ರ ಬಂದಿರಲಿಲ್ಲ. ಇನ್ನೂ, ಕಂಟೆಂಟ್ ಓರಿಯಂಟೆಡ್ ಚಿತ್ರಗಳಿಂದ ಯಾವತ್ತೂ, ಯಾರಿಗೂ ನಷ್ಟವಾಗಲ್ಲ ಎಂದು ನಂಬಿರುವವನು ನಾನು. ಆದರೆ, ಸ್ವಲ್ಪ ತಾಳ್ಮೆ ಇರಬೇಕು ಅಷ್ಟೇ. ಅದಕ್ಕೆ ಉದಾಹರಣೆ ನನ್ನ ಚಿತ್ರಗಳು. 'ಕಪಟಿ'ಯನ್ನು ಇತ್ತೀಚೆಗೆ ಸ್ನೇಹಿತರ ಜೊತೆ ವೀಕ್ಷಿಸಿದೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ‌ ಎಂದು ಮಾಹಿತಿ ಹಂಚಿಕೊಂಡರು.

'ಕಪಟಿ' ಟ್ರೇಲರ್ ರಿಲೀಸ್​ ಈವೆಂಟ್​ (ETV Bharat)

ನಟಿ ಸುಕೃತಾ ವಾಗ್ಲೆ ಮಾತನಾಡಿ, ನಾನು ಚಿತ್ರರಂಗವನ್ನು ಬಿಟ್ಟು ಉಡುಪಿಯಲ್ಲಿ ನೆಲೆಸಿದ್ದೆ. ನಿರ್ದೇಶಕರು ಹೇಳಿದ ಈ ಚಿತ್ರದ ಕಥೆ ಕೇಳಿ ಮೆಚ್ಚಿಕೊಂಡು ಬಹುದಿನಗಳ ನಂತರ ಮತ್ತೆ ನಟಿಸಿದ್ದೇನೆ. ಈ ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ. ಈ ಪಾತ್ರ ಎಲ್ಲರಿಗೂ ಇಷ್ಟ ಆಗಲಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದರು.

'ಕಪಟಿ' ಟ್ರೇಲರ್​ ಅನಾವರಣಗೊಳಿಸಿದ ಡಾರ್ಲಿಂಗ್ ಕೃಷ್ಣ (ETV Bharat)

ಇದನ್ನೂ ಓದಿ:'ಕಪಟಿ' ಚಿತ್ರದಲ್ಲಿ ನಟಿ ಸುಕೃತಾ ವಾಗ್ಲೆ: ಟೀಸರ್​ ನೋಡಿ - Kapati Teaser

ನಿರ್ದೇಶಕರಾದ ರವಿಕಿರಣ್ ಹಾಗೂ ಚೇತನ್ ಮಾತನಾಡಿ, ಸುಮಾರು 7 ವರ್ಷಗಳ (ಕೋಮ ಚಿತ್ರದ) ನಂತರ ನಾವಿಬ್ಬರು ಮತ್ತೆ ನಿರ್ದೇಶಿಸಿರುವ ಚಿತ್ರವಿದು. ಕನ್ನಡದಲ್ಲಿ ತೀರಾ ವಿರಳ ಎನ್ನಬಹುದಾದ ಕಥಾಹಂದರ ಹೊಂದಿರುವ ಸಿನಿಮಾ. ಈ ಕಥೆಯನ್ನು ದಯಾಳ್ ಅವರ ಬಳಿ ಹೇಳಿದ ತಕ್ಷಣ ಒಪ್ಪಿ ನಿರ್ಮಾಣಕ್ಕೆ ಮುಂದಾದರು. ಇಡೀ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ನಮ್ಮ ಕಪಟಿ ಸಿನಿಮಾಗೆ ನಿಮ್ಮ ಬೆಂಬಲವಿರಲಿ ಎಂದು ತಿಳಿಸಿದರು‌.

ಸಾತ್ವಿಕ್ ಕೃಷ್ಣನ್, ಸುಕೃತಾ ವಾಗ್ಲೆ, ದೇವ್ ದೇವಯ್ಯ. (ETV Bharat)

ಇದನ್ನೂ ಓದಿ:'ಭೀಮ' ಪ್ರಮೋಶನ್​​ ಜೋರು: ದುನಿಯಾ ವಿಜಯ್​​​ ಚಿತ್ರದಲ್ಲಿದೆ ಯುವಕರಿಗೊಂದು ಸಂದೇಶ - Bheema Promotion

ಚಿತ್ರಕ್ಕೆ ಜೋಹನ್ ಸಂಗೀತ ನೀಡಿದ್ದು, ಸತೀಶ್ ರಾಜೇಂದ್ರನ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಸುನೀಲ್ ಅವರ ಕಲಾ ನಿರ್ದೇಶನವಿದ್ದು, ರವಿ ಸಾಹಸ ನಿರ್ದೇಶನ ಮಾಡಿದ್ದಾರೆ. ಡಿ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣ ಆಗಿರುವ 'ಕಪಟಿ' ಆಗಸ್ಟ್ 23ರಂದು ಬಿಡುಗಡೆ ಆಗಲಿದೆ.

ABOUT THE AUTHOR

...view details