ಕರ್ನಾಟಕ

karnataka

ETV Bharat / entertainment

ಅಣ್ಣಾವ್ರ 'ಕಾಮನಬಿಲ್ಲು' ನಿರ್ದೇಶಿಸಿದ್ದ ಸ್ಯಾಂಡಲ್​ವುಡ್​ನ ಹಿರಿಯ ನಿರ್ದೇಶಕ ಚಿ.ದತ್ತರಾಜ್ ನಿಧನ!

ಕೆರಳಿದ ಸಿಂಹ, ಕಾಮನಬಿಲ್ಲು, ಅದೇ ಕಣ್ಣು, ಶೃತಿ ಸೇರಿದಾಗ ಸಿನಿಮಾಗಳ ಖ್ಯಾತಿಯ ಹಿರಿಯ ನಿರ್ದೇಶಕ ಚಿ.ದತ್ತರಾಜ್ ವಯೋಸಹಜವಾಗಿ ಮೃತಪಟ್ಟಿದ್ದಾರೆ.

By ETV Bharat Entertainment Team

Published : 4 hours ago

director Chi Dattaraj Passes away at 87
ನಿರ್ದೇಶಕ ಚಿ.ದತ್ತರಾಜ್ ನಿಧನ (Photo source: ETV Bharat)

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಚಿ. ದತ್ತರಾಜ್ ಇಂದು ಮುಂಜಾನೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ನಿರ್ದೇಶಕರಿಗೆ 87 ವರ್ಷ ವಯಸ್ಸಾಗಿತ್ತು.

ಚಿ.ದತ್ತರಾಜ್ ಅವರು ಖ್ಯಾತ ಸಾಹಿತಿ ದಿ.ಚಿ. ಉದಯಶಂಕರ್ ಅವರ ಸಹೋದರ. ನಟಸಾರ್ವಭೌಮ ಡಾ. ರಾಜ್​​ಕುಮಾರ್ ಅಭಿನಯದ ಕೆರಳಿದ ಸಿಂಹ, ಕಾಮನಬಿಲ್ಲು, ಅದೇ ಕಣ್ಣು, ಶೃತಿ ಸೇರಿದಾಗ, ಶಿವರಾಜ್​​​ಕುಮಾರ್ ಅಭಿನಯದ ಮೃತ್ಯುಂಜಯ, ಆನಂದ ಜ್ಯೋತಿ ಜೊತೆಗೆ ಹಿರಿಯ ನಟಿ ಮಂಜುಳ ನಟನೆಯ ರುದ್ರಿ ಸೇರಿದಂತೆ ಮೊದಲಾದ ಚಿತ್ರಗಳನ್ನು ಚಿ.ದತ್ತರಾಜ್ ನಿರ್ದೇಶಿಸಿದ್ದರು‌. ಮಧ್ಯಾಹ್ನ ಹರಿಶ್ಚಂದ್ರ ಘಾಟ್​ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಒಂದೆಡೆ ಸೇರಿದ್ದಾರೆ.

ಇದನ್ನೂ ಓದಿ:ಸುದೀಪ್​ ಗುಡ್​ ಬೈ ಬೆನ್ನಲ್ಲೇ ಮನೆಯಿಂದ ಹೊರನಡೆದ ಬಿಗ್​ ಬಾಸ್​​! ಸ್ಪರ್ಧಿಗಳ ಉಡಾಫೆತನದ ವಿರುದ್ಧ ರೊಚ್ಚಿಗೆದ್ದ Bigg Boss

90ರ ದಶಕದಲ್ಲಿ ಚಿ.ದತ್ತರಾಜ್ ಕನ್ನಡ ಚಿತ್ರರಂಗ ಪ್ರವೇಶಿಸಿದರು. ರಾಜ್​​ಕುಮಾರ್ ಅಭಿನಯದ ಕಾಮನ ಬಿಲ್ಲು ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದರು. ಅನಂತ್ ನಾಗ್ ಮತ್ತು ಸರಿತಾ ಈ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರದಲ್ಲಿಯೇ ರಾಜ್​​ಕುಮಾರ್ ಅವರ ಯೋಗ ಪ್ರತಿಭೆಯನ್ನು ಕೂಡಾ ಪ್ರದರ್ಶಿಸಲಾಗಿತ್ತು.

ಇದನ್ನೂ ಓದಿ:ಮಲಯಾಳಂ ನಟ ಬಾಲಾ ಬಂಧನ : ದೂರು ನೀಡಿದ್ದ ಮಾಜಿ ಪತ್ನಿ, ಮಗಳು

ABOUT THE AUTHOR

...view details