ಕರ್ನಾಟಕ

karnataka

ಯುವ ರಾಜ್​​ಕುಮಾರ್ ಮುಂದಿನ ಸಿನಿಮಾ ನೋಡಲು ದೊಡ್ಮನೆ ಅಭಿಮಾನಿಗಳು ಕಾತರ - Yuva Rajkumar

By ETV Bharat Entertainment Team

Published : Aug 2, 2024, 5:48 PM IST

ಯುವ ರಾಜ್​​ಕುಮಾರ್ ಅಭಿನಯದ ಚೊಚ್ಚಲ ಚಿತ್ರ 'ಯುವ' ಮಾರ್ಚ್​ 29ಕ್ಕೆ ಬಿಡುಗಡೆಯಾಗಿ ಬಹುತೇಕ ಮೆಚ್ಚುಗೆ ಸ್ವೀಕರಿಸಿತ್ತು. ಆದಾದ ಬಳಿಕ ಯಾವುದೇ ಚಿತ್ರಗಳು ಘೋಷಣೆ ಆಗಿಲ್ಲ.

Yuva Rajkumar
ನಟ ಯುವ ರಾಜ್​ಕುಮಾರ್ (ETV Bharat)

ಪುನೀತ್ ರಾಜ್‍ಕುಮಾರ್ ಅಗಲಿಕೆಯ ನಂತರ ರಾಘವೇಂದ್ರ ರಾಜ್​ಕುಮಾರ್ ಅವರ ಕಿರಿಯ ಮಗ ಯುವ ರಾಜ್​​ಕುಮಾರ್ ಅವರನ್ನು ಪವರ್ ಸ್ಟಾರ್ ಅವರಂತೆಯೇ ಬೆಳೆಸಬೇಕು ಎಂಬ ಉದ್ದೇಶ ಅಭಿಮಾನಿಗಳದ್ದು. ಯುವನಲ್ಲಿ ಹೆಚ್ಚಿನವರು ಅಪ್ಪುನನ್ನು ಕಾಣಲು ಶುರು ಮಾಡಿದ್ದಾರೆ. ಅದರಂತೆ ಯುವ ರಾಜ್​​ಕುಮಾರ್ ನಟನೆಯ ಚೊಚ್ಚಲ ಚಿತ್ರದ ಬಿಡುಗಡೆಯನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸಿ, ಸಿನಿಮಾ ಒಂದು ಮಟ್ಟಿಗೆ ಸಕ್ಸಸ್ ಆಗಿತ್ತು.

ಮಾರ್ಚ್​ 29ಕ್ಕೆ ತೆರೆಕಂಡ 'ಯುವ' ಸಿನಿಮಾದಲ್ಲಿ ಯುವ ರಾಜ್​ಕುಮಾರ್ ಪ್ರೀತಿಸುವ ಹುಡುಗನಾಗಿ, ಅಭಿಮಾನಿಗಳ‌ ಮಾಸ್ ನಟನಾಗಿ, ಜವಾಬ್ದಾರಿಯುತ ಮಗನ ಪಾತ್ರದಲ್ಲಿ ನಟಿಸಿ ಅಭಿಮಾನಿಗಳ ಮನಸ್ಸು ಗೆದ್ದಿದ್ದರು. ಪುನೀತ್ ರಾಜ್‌ಕುಮಾರ್ ಅವತಾರದಲ್ಲಿಯೇ ಜೂ.ಪವರ್‌ಸ್ಟಾರ್ ಬೆಳ್ಳಿ ತೆರೆ ಮೇಲೆ ಅಬ್ಬರಿಸಿದ್ದರು. ಈ ಸಿನಿಮಾ ಸಕ್ಸಸ್ ಆದ ಬೆನ್ನಲ್ಲೇ ಯುವ ರಾಜ್​​​​ಕುಮಾರ್ ಅವರ ವಿಚ್ಚೇದನಕ್ಕೆ ಸಂಬಂಧಿಸಿದ ಸುದ್ದಿ ಸೋಷಿಯಲ್​ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡಿತು.

ಯುವ ಅವರ ವೈಯಕ್ತಿಕ ಬದುಕಿನ ಏರಿಳಿತಗಳು ಅವರ ಸಿನಿಮಾ ಕೆರಿಯರ್ ಮೇಲೆ ಎಫೆಕ್ಟ್ ಆಗುತ್ತೆ ಅನ್ನೋದು ಗಾಂಧಿನಗರದ ಕೆಲ ನಿರ್ಮಾಪಕರ ಮಾತು. ಈ ಬಗ್ಗೆ ಯುವ ಆಪ್ತರೊಬ್ಬರು ಹೇಳುವ ಹಾಗೆ, 'ಯುವ' ಚಿತ್ರ ಬಿಡುಗಯಾದ ಬಳಿಕ ಯುವನ ಜೊತೆ ಮತ್ತೆ ಹೊಂಬಾಳೆ ಫಿಲ್ಮ್ ಹಾಗೂ ಹೊಸ ನಿರ್ಮಾಪಕರು ಸಿನಿಮಾ ಮಾಡುವುದಾಗಿ ಮುಂದೆ ಬಂದಿದ್ದರು‌. ಆದ್ರೀಗ ಪರ್ಸನಲ್ ವಿಚಾರ ಬಗೆಹರಿದ ಮೇಲೆ ಸಿನಿಮಾ ಮಾಡುವುದಾಗಿ ಕೆಲ ನಿರ್ಮಾಪಕರು ಹಿಂದೆ ಸರಿದಿದ್ದಾರೆ.

ಪುನೀತ್ ರಾಜ್‍ಕುಮಾರ್ ಜೊತೆ ಯುವ ರಾಜ್​ಕುಮಾರ್ (ETV Bharat)

ಇದನ್ನೂ ಓದಿ:ಕನ್ನಡದ ಹಾಡನ್ನು ಕನ್ನಡ ಚಿತ್ರಗಳಲ್ಲಿ ಬಳಸಬಾರದೇ?: ರಕ್ಷಿತ್ ಶೆಟ್ಟಿ - Rakshit Shetty

ಮತ್ತೊಂದೆಡೆ, ಯುವ ಚಿತ್ರದ ಬಳಿಕ ಯುವ ರಾಜ್​​ಕುಮಾರ್ ನಟನೆಯ ಎರಡನೇ ಸಿನಿಮಾ ಯಾವುದು? ಯಾವ ನಿರ್ದೇಶಕ ಹಾಗೂ ನಿರ್ಮಾಣ ಸಂಸ್ಥೆ? ಅನ್ನೋದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ವೈಯಕ್ತಿಕ ಸಮಸ್ಯೆಯ ಬಳಿಕ ಯುವ ರಾಜ್​​ಕುಮಾರ್ ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿಲ್ಲ.

ಇದನ್ನೂ ಓದಿ:'ಭೀಮ' ಪ್ರಮೋಶನ್​​ ಜೋರು: ದುನಿಯಾ ವಿಜಯ್​​​ ಚಿತ್ರದಲ್ಲಿದೆ ಯುವಕರಿಗೊಂದು ಸಂದೇಶ - Bheema Promotion

ಯುವ ರಾಜ್​​ಕುಮಾರ್ ಈ ಸಮಸ್ಯೆಯನ್ನು ಬಗೆಹರಿಸಿಕೊಂಡ ನಂತರ ಹೆಚ್ಚಾಗಿ ಸಿನಿಮಾಗಳ ಬಗ್ಗೆಯೇ ಆಸಕ್ತಿ ವಹಿಸಲಿದ್ದಾರೆ‌. ಕೆಆರ್​​ಜಿ ಸಂಸ್ಥೆಯವರಾದ ಕಾರ್ತಿಕ್​ ಹಾಗೂ ಯೋಗಿ ಯುವ ಅವರಿಗೆ ಸಿನಿಮಾ ಮಾಡಲು ಕಥೆ ರೆಡಿ ಮಾಡುತ್ತಿದ್ದಾರೆ. ಇದರ ಜೊತೆಗೆ, ಹೆಬ್ಬುಲಿ ಚಿತ್ರದ ನಿರ್ದೇಶಕ ಕೃಷ್ಣ ಕೂಡ ಯುವನ ಜೊತೆ ಸಿನಿಮಾ ಮಾಡಲು ಸ್ಕ್ರಿಪ್ಟ್ ಸಿದ್ಧಮಾಡಿಕೊಳ್ಳುತ್ತಿದ್ದಾರೆ ಎಂದು ಯುವ ರಾಜ್​ಕುಮಾರ್​ ಅವರ ಆಪ್ತರೊಬ್ಬರು ಗುಟ್ಟು ಬಿಟ್ಟುಕೊಟ್ಟಿದ್ದಾರೆ.

ABOUT THE AUTHOR

...view details