ಕರ್ನಾಟಕ

karnataka

ವರ್ಷಕ್ಕೆ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಬಂಧನಿ ಕಲೆ ಬಗ್ಗೆ ನಿಮಗೆಷ್ಟು ಗೊತ್ತು!? - Bandhani Art

By ETV Bharat Karnataka Team

Published : Jul 30, 2024, 7:04 PM IST

ಕಳೆದ 9 ವರ್ಷಗಳಿಂದ ಬಂಧನಿ ಕಲೆಯಲ್ಲಿ ತೊಡಗಿಸಿಕೊಂಡಿರುವ ಕಚ್​ನ 25 ವರ್ಷದ ಯುವ ಉದ್ಯಮಿ ಅಬ್ದುಲ್ ವಹಾಬ್ ಖತ್ರಿ ಅವರಿಗೆ ಸಾಮಾಜಿಕ ಸ್ಟಾರ್ಟ್‌ಅಪ್ ಕರಿಗಾರ ಕ್ಲಿನಿಕ್‌ನಿಂದ ಅತ್ಯುತ್ತಮ ಕುಶಲಕರ್ಮಿ ಉದ್ಯಮಿ ಎಂಬ ಹೆಗ್ಗಳಿಕೆಯೊಂದಿಗೆ ಚಿನ್ನದ ಪ್ರಶಸ್ತಿ ಗೌರವ ಕೂಡಾ ಲಭಿಸಿದೆ. ಬಂಧನಿ ಕಲೆ ಅಂದ್ರೆ ಏನು ಎಂಬುದನ್ನು ನೋಡುವುದಾದರೆ,

BANDHANI MAKER  ONLINE OFFLINE BUSINESS  BANDHANI ART CLOTH HANDMADE  CRORE BUSINESS
ವರ್ಷಕ್ಕೆ ಕೋಟ್ಯಾಂತರ ರೂಪಾಯಿ ವಹಿವಾಟು (ETV Bharat)

ಕಚ್ (ಗುಜರಾತ್​):ಇಂದು ಕಚ್‌ ಬಗ್ಗೆ ಪರಿಚಯಿಸುವ ಅಥವಾ ಅದರ ಬಗ್ಗೆ ಹೇಳುವ ಅಗತ್ಯವಿಲ್ಲ. ಏಕೆಂದ್ರೆ ಗುಜರಾತ್‌ನ ರಾನ್ ಪ್ರದೇಶದಲ್ಲಿ ನೆಲೆಗೊಂಡಿರುವ ಈ ನಗರವು ತನ್ನ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವುದು ಗೊತ್ತಿರುವ ಸಂಗತಿ. ಅಷ್ಟೇ ಅಲ್ಲ ಇದರ ಜೊತೆಗೆ ವಿವಿಧ ರೀತಿಯ ಕಲೆ ಮತ್ತು ಕೆಲಸಗಾರಿಕೆಗೂ ಈ ನಗರಿ ಹೆಸರುವಾಸಿಯಾಗಿದೆ. ಕಚ್‌ನ ಹಲವಾರು ಕುಶಲಕರ್ಮಿಗಳು ದೇಶ ಮತ್ತು ವಿದೇಶಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಕಚ್​ ಕಲೆಗೆ ವಿಶಿಷ್ಟವಾದ ಗುರುತು ನೀಡಲಾಗಿದೆ ಮತ್ತು ಅನೇಕ ಕುಶಲಕರ್ಮಿಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಬಂಧನಿ ಕಲೆಯಲ್ಲಿ ಸಾಕಷ್ಟು ಹೆಸರು ಮತ್ತು ಖ್ಯಾತಿಯನ್ನು ಗಳಿಸಿದ ಅಂತಹ ಯುವ ಕಲಾವಿದರಿದ್ದಾರೆ.

ಬಂಧನಿ ಕಲೆಯಲ್ಲಿ ಮೂಡಿ ಬಂದ ಬಟ್ಟೆಗಳು (ETV Bharat)

ಕಚ್‌ನ ಬಂಧನಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಈ ವಿಶಿಷ್ಟ ಕಲೆ ಸುಮಾರು 200 ವರ್ಷಗಳಿಂದ ಪ್ರಚಲಿತದಲ್ಲಿದೆ. ಇಲ್ಲಿನ ಬಂಧನಿ ಕುಶಲಕರ್ಮಿಗಳು ಗುಜರಾತಿನಲ್ಲಿ ಮಾತ್ರವಲ್ಲದೇ ದೇಶ - ವಿದೇಶಗಳಲ್ಲಿಯೂ ಇದ್ದು, ಈ ಕಲೆಯನ್ನು ಜನಪ್ರಿಯಗೊಳಿಸಿದ್ದಾರೆ. ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಬಂಧನಿ ಕಲೆಯಲ್ಲಿ ಸಾಕಷ್ಟು ಹೆಸರು ಮತ್ತು ಖ್ಯಾತಿ ಕೂಡಾ ಗಳಿಸಿದ ಅಂತಹ ಒಬ್ಬ ಯುವ ಕಲಾವಿದನ ಬಗ್ಗೆ ನಾವು ಇಂದು ನಿಮಗೆ ಹೇಳಲಿದ್ದೇವೆ.

ಬಂಧನಿ ಕಲೆಯಲ್ಲಿ ಮೂಡಿ ಬಂದ ಬಟ್ಟೆಗಳು (ETV Bharat)

ಈ ಯುವ ಕುಶಲಕರ್ಮಿ ಮತ್ತು ಉದ್ಯಮಿಯ ಹೆಸರು ಅಬ್ದುಲ್ ವಹಾಬ್ ಖತ್ರಿ. 25 ವರ್ಷದ ಅಬ್ದುಲ್ ವಹಾಬ್ ಖತ್ರಿ ತನ್ನ ಏಳು ಮತ್ತು ಎಂಟನೇ ತರಗತಿಯಿಂದಲೇ ಬಂಧನಿ ಕಲೆಯನ್ನು ಇಷ್ಟಪಡುತ್ತಿದ್ದರು. ಅವರ ಹೆತ್ತವರು ಸಹ ಬಂಧನಿ ಕುಶಲಕರ್ಮಿಗಳು ಆಗಿದ್ದರು. 2017 ರಲ್ಲಿ, ಅಬ್ದುಲ್​ ಒಂದು ವರ್ಷದ ಕಾಲೇಜು ವ್ಯಾಸಂಗ ಮುಗಿಸಿ ಅರ್ಧಕ್ಕೆ ಮೊಟಕುಗೊಳಿಸಿದರು. ಬಳಿಕ ಅವರು ಆದಿಪುರ ನಗರದ ಸೋಮಯ್ಯ ಕಲಾ ಶಾಲೆಯಲ್ಲಿ ಫ್ಯಾಷನ್ ಡಿಸೈನರ್ ಆಗಿ ತರಬೇತಿ ಪಡೆದರು.

ಬಂಧನಿ ಕಲೆಯಲ್ಲಿ ಮೂಡಿ ಬಂದ ಬಟ್ಟೆಗಳು (ETV Bharat)

ಬಂಧನಿ ಕಲೆ ಎಂದರೇನು?:ಬಂಧನಿಯು ಕಚ್‌ನಲ್ಲಿ ಟೈ ಮತ್ತು ಡೈ ಕ್ರಾಫ್ಟ್‌ ಆಗಿಯೂ ಪ್ರಸಿದ್ಧವಾಗಿದೆ. ನಾವು ಬಂಧನಿಯ ಇತಿಹಾಸದ ಬಗ್ಗೆ ಮಾತನಾಡಿದರೆ, ಇದು 12 ನೇ ಶತಮಾನಕ್ಕೆ ಸಂಬಂಧಿಸಿದೆ. ಖತ್ರಿ ಸಮುದಾಯದ ಸದಸ್ಯರು ಸಿಂಧ್‌ನಿಂದ ವಲಸೆ ಬಂದು ಕಚ್‌ನಲ್ಲಿ ನೆಲೆಸಿದರು. 18 ನೇ ಶತಮಾನದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಜವಳಿ ರಫ್ತು ಸ್ಥಳೀಯ ಆದಾಯದ ಮುಖ್ಯ ಮೂಲವಾಯಿತು. ಸ್ಥಳೀಯ ಬ್ಲಾಕ್ ಪ್ರಿಂಟರ್‌ಗಳಂತೆ ಬಂಧನಿ ಕುಶಲಕರ್ಮಿಗಳು ತಮ್ಮ ಬಟ್ಟೆಗಳನ್ನು ಗಾಢ ಬಣ್ಣಗಳಲ್ಲಿ ಬಣ್ಣ ಮಾಡಲು ಸ್ಥಳೀಯ ಹಣ್ಣುಗಳು ಮತ್ತು ತರಕಾರಿ ಬಣ್ಣಗಳನ್ನು ಬಳಸಿದರು. ಬಟ್ಟೆಯ ಗಂಟುಗಳಿಗೆ ದಾರವನ್ನು ಬಿಗಿಯಾಗಿ ಕಟ್ಟಿ ಅದಕ್ಕೆ ಬಣ್ಣ ಹಚ್ಚುವ ತಂತ್ರ ಇಂದಿಗೂ ಬಳಕೆಯಲ್ಲಿದೆ. ಇದನ್ನೇ ಬಂಧನಿ ಕಲೆ ಎನ್ನುತ್ತಾರೆ.

ಬಂಧನಿ ಕಲೆಯ ಮೂಲಕ ಪಡೆದ ಪ್ರಶಸ್ತಿ (ETV Bharat)

ಬಂಧನಿ ಮಾಡುವ ಪ್ರಕ್ರಿಯೆ:ಬಂಧನಿ ಕಲೆಗೆ ಸಾಕಷ್ಟು ಕೌಶಲ್ಯ ಬೇಕಾಗುತ್ತದೆ. ಮೊದಲನೆಯದಾಗಿ, ಒಂದು ತುಂಡು ಬಟ್ಟೆಯ ಮೇಲೆ ವಿನ್ಯಾಸವನ್ನು ತಯಾರಿಸಲಾಗುತ್ತದೆ. ಆ ವಿನ್ಯಾಸದ ಅಚ್ಚುವನ್ನು ಬಟ್ಟೆ ಮೇಲೆ ಬಿಡಿಸಲಾಗುತ್ತದೆ. ವಿನ್ಯಾಸದ ಬಳಿಕ ಅರ್ಧ ಭಾಗದ ಬಟ್ಟೆಯನ್ನು ದಾರದಿಂದ ಬಿಗಿಯಾಗಿ ಕಟ್ಟಲಾಗುತ್ತದೆ ಮತ್ತು ಬಣ್ಣದಲ್ಲಿ ಮುಳುಗಿಸಲಾಗುತ್ತದೆ. ಬಂಧನಿಯಲ್ಲಿ ವಿಶೇಷವಾಗಿ ಚಂದ್ರಕಲಾ, ಬವನ್ ಬಾಗ್, ಶಿಕಾರಿ ಮೊದಲಾದ ವಿನ್ಯಾಸಗಳು ಪ್ರಮುಖವಾಗಿವೆ. ದಾರದಿಂದ ಬಟ್ಟೆಯನ್ನು ಕಟ್ಟುವ ಕೆಲಸವನ್ನು ಸ್ಥಿರ ವಿನ್ಯಾಸದ ಪ್ರಕಾರ ಮಾಡಲಾಗುತ್ತದೆ. ಮುಖ್ಯವಾಗಿ ಹಳದಿ, ಕೆಂಪು, ನೀಲಿ, ಹಸಿರು ಮತ್ತು ಕಪ್ಪು ಬಣ್ಣಗಳನ್ನು ವಿವಿಧ ಬಂಧನಿ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತದೆ.

ಬಂಧನಿ ಕಲೆಯಲ್ಲಿ ಮೂಡಿ ಬಂದ ಬಟ್ಟೆಗಳು (ETV Bharat)

ಸೀರೆ ತಯಾರಿಸಲು ಸಮಯ ಎಷ್ಟು ಬೇಕು?:ಬಂಧನಿ ಸೀರೆ ತಯಾರಿಸಲು 15 ದಿನಗಳಿಂದ 1 ವರ್ಷ ಸಮಯ ತೆಗೆದುಕೊಳ್ಳುತ್ತದೆ. ಬಂಧನಿಯ ಉದ್ದವು 6 ಮೀಟರ್, 5.5 ಮೀಟರ್, 5 ಮೀಟರ್, 4.5 ಮೀಟರ್ ಮತ್ತು 4 ಮೀಟರ್ ಇರುತ್ತದೆ. ಬಂಧನಿ ಉತ್ಪನ್ನಗಳ ಬೆಲೆ ಅದರ ಬಟ್ಟೆಯ ವೈವಿಧ್ಯತೆ ಮತ್ತು ಅದರ ವಿನ್ಯಾಸವನ್ನು ಅವಲಂಬಿಸಿರುತ್ತದೆ. ದೀಪಾವಳಿ, ನವರಾತ್ರಿಯ ದಿನಗಳು ಮತ್ತು ಮದುವೆಯ ಸಂದರ್ಭದಲ್ಲಿ ಬಂಧನಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ.

ವಾರ್ಷಿಕ ವಹಿವಾಟು 1 ಕೋಟಿ: ಅಬ್ದುಲ್ ವಹಾಬ್ ಖತ್ರಿ 2000 ರೂ.ನಿಂದ 80,000 ರೂ.ವರೆಗೆ ಬೆಲೆಯ ಉತ್ಪನ್ನಗಳನ್ನು ತಯಾರಿಸುತ್ತಾರೆ. ಭಾರತದ ಪ್ರಸಿದ್ಧ ಮೆಟ್ರೋ ನಗರಗಳ ಜನರು ಇದನ್ನು ಖರೀದಿಸುತ್ತಾರೆ. ಅಂಬಾದಲ್, ರಾಸ್ಮಂಡಲ್, ಶಿಕಾರಿ, ಚಂದ್ರಖಾನಿ ಬಂಧನಿಗಳ ಅತ್ಯುತ್ತಮ ವಿಧಗಳಲ್ಲಿ ಹೆಚ್ಚು ಪ್ರಶಂಸಿಸಲ್ಪಟ್ಟಿದೆ. ಅಬ್ದುಲ್‌ ವಾಹಬ್ ಖತ್ರಿ ಅವರು ವಿದೇಶದಲ್ಲಿ ಕೇವಲ 2 ಕ್ಲೈಂಟ್‌ಗಳೊಂದಿಗೆ ಮಾತ್ರ ಸಂಬಂಧ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ನಾನು ವಿದೇಶಿ ಗ್ರಾಹಕರನ್ನು ಸೆಳೆಯಲು ಮತ್ತು ನಮ್ಮ ಬಂಧನಿ ಬ್ರ್ಯಾಂಡ್ ಪ್ರಪಂಚದಾದ್ಯಂತ ಹರಡಲು ಶ್ರಮಿಸುತ್ತೇನೆ ಎಂದು ಹೇಳುತ್ತಾರೆ ಯುವ ಉದ್ಯಮಿ ಖತ್ರಿ. ಪ್ರಸ್ತುತ ಈ ಕಚ್​ ಬಂಧನಿ ಕಲಾವಿದರು ತಮ್ಮ ಬಂಧನಿ ಉತ್ಪನ್ನಗಳನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಮಾರಾಟ ಮಾಡುವ ಮೂಲಕ ವರ್ಷಕ್ಕೆ 1 ಕೋಟಿ ರೂಪಾಯಿ ವ್ಯವಹಾರ ಮಾಡುತ್ತಿದ್ದಾರೆ.

ಬಂಧನಿ ಕಲೆಗೆ ಕೀರ್ತಿ: ಅಬ್ದುಲ್ ವಹಾಬ್ ಖತ್ರಿ ಅವರಿಗೆ ಇತ್ತೀಚೆಗೆ ಸಾಮಾಜಿಕ ಸ್ಟಾರ್ಟಪ್ ಕರಿಗಾರ ಕ್ಲಿನಿಕ್ ನೀಡುವ ಅತ್ಯುತ್ತಮ ಕುಶಲಕರ್ಮಿ ಉದ್ಯಮಿ ಎಂಬ ಚಿನ್ನದ ಪ್ರಶಸ್ತಿಯನ್ನು ನೀಡಲಾಗಿದೆ.

ಆನ್‌ಲೈನ್ ಮಾರ್ಕೆಟಿಂಗ್:ಅಬ್ದುಲ್‌ ವಾಹಬ್ ಖತ್ರಿ ಅವರ ಸಹೋದರ ಮೊಹಮ್ಮದ್ ಉಮರ್, ಅವರು 2 ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. Instagram, Facebook ಮತ್ತು WhatsApp ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಮಾರ್ಕೆಟಿಂಗ್ ಮತ್ತು ಮಾರಾಟವನ್ನು ನಿರ್ವಹಿಸುತ್ತಿದ್ದಾರೆ. ಆನ್‌ಲೈನ್ ಗ್ರಾಹಕರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಕಚ್​ ಬಂಧನಿಯ ಗ್ರಾಹಕರು ಹೆಚ್ಚಾಗಲು ಅವರು ಸರ್ಕಾರಿ ವಸ್ತುಪ್ರದರ್ಶನಗಳಲ್ಲಿ ಭಾಗವಹಿಸಿ ತಮ್ಮ ಕಲೆ ಬಗ್ಗೆ ಪ್ರಚಾರವನ್ನು ಸಹ ಮಾಡುತ್ತಾರೆ.

ಓದಿ:ನೀವು ಕೊಳ್ಳುವ ರೇಷ್ಮೆ ಸೀರೆ ನಕಲಿಯೋ, ಅಸಲಿಯೋ: ಪರೀಕ್ಷಿಸುವುದು ಹೇಗೆ?; ಇಲ್ಲಿದೆ ಸಣ್ಣದೊಂದು ಟ್ರಿಕ್ಸ್​! - TIPS FOR FINDING PURE SILK SAREE

ABOUT THE AUTHOR

...view details