ಕರ್ನಾಟಕ

karnataka

ETV Bharat / business

8 ತಿಂಗಳಲ್ಲಿ ಭಾರತಕ್ಕೆ 62 ಲಕ್ಷ ವಿದೇಶಿ ಪ್ರವಾಸಿಗರ ಭೇಟಿ: ಕೇಂದ್ರ ಸರ್ಕಾರದ ಮಾಹಿತಿ - FOREIGN TOURISTS IN INDIA

ಜನವರಿಯಿಂದ ಆಗಸ್ಟ್ ಅವಧಿಯಲ್ಲಿ ಸುಮಾರು 61.91 ಲಕ್ಷ ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದಾರೆ.

8 ತಿಂಗಳಲ್ಲಿ ಭಾರತಕ್ಕೆ 62 ಲಕ್ಷ ವಿದೇಶಿ ಪ್ರವಾಸಿಗರ ಭೇಟಿ: ಕೇಂದ್ರ ಸರ್ಕಾರದ ಮಾಹಿತಿ
8 ತಿಂಗಳಲ್ಲಿ ಭಾರತಕ್ಕೆ 62 ಲಕ್ಷ ವಿದೇಶಿ ಪ್ರವಾಸಿಗರ ಭೇಟಿ: ಕೇಂದ್ರ ಸರ್ಕಾರದ ಮಾಹಿತಿ (IANS)

By ETV Bharat Karnataka Team

Published : Nov 25, 2024, 7:56 PM IST

ನವದೆಹಲಿ: ಈ ವರ್ಷದ ಜನವರಿಯಿಂದ ಆಗಸ್ಟ್ ಅವಧಿಯಲ್ಲಿ ಸುಮಾರು 61.91 ಲಕ್ಷ ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದಾರೆ ಎಂದು ಸರ್ಕಾರ ಸೋಮವಾರ ತಿಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 59.71 ಲಕ್ಷ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದರು.

ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನದಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಕಳೆದ ವರ್ಷ ಒಟ್ಟು ವಿದೇಶಿ ಪ್ರವಾಸಿಗರ ಆಗಮನ (ಎಫ್ ಟಿಎ) 9.52 ಮಿಲಿಯನ್ (90.52 ಲಕ್ಷ) ಆಗಿತ್ತು ಎಂದು ಹೇಳಿದರು.

ಪ್ರವಾಸೋದ್ಯಮ ಕ್ಷೇತ್ರವು 2022-23ರಲ್ಲಿ ದೇಶದ ಜಿಡಿಪಿಗೆ ಶೇಕಡಾ 5 ರಷ್ಟು ಕೊಡುಗೆ ನೀಡಿದೆ. ಇದು 2021 - 22 ರಲ್ಲಿ ಇದ್ದುದಕ್ಕಿಂತ ಶೇಕಡಾ 1.75 ರಷ್ಟು ಗಮನಾರ್ಹ ಹೆಚ್ಚಳವಾಗಿದೆ. "ಬೃಹತ್ ಸಂಖ್ಯೆಯಲ್ಲಿರುವ ಭಾರತೀಯ ವಲಸಿಗರನ್ನು ಇನ್ ಕ್ರೆಡಿಬಲ್ ಇಂಡಿಯಾ ಅಭಿಯಾನದ ರಾಯಭಾರಿಗಳಾಗುವಂತೆ ಪ್ರೋತ್ಸಾಹಿಸಲು ಮತ್ತು ಅವರ ಐದು ಭಾರತೀಯೇತರ ಸ್ನೇಹಿತರು ಪ್ರತಿವರ್ಷ ಭಾರತಕ್ಕೆ ಭೇಟಿ ನೀಡುವಂತೆ ಪ್ರೋತ್ಸಾಹಿಸಲು ಸಚಿವಾಲಯವು ಚಲೋ ಇಂಡಿಯಾ ಉಪಕ್ರಮವನ್ನು ಪ್ರಾರಂಭಿಸಿದೆ" ಎಂದು ಸಚಿವರು ಮಾಹಿತಿ ನೀಡಿದರು.

ಭಾರತೀಯ ವಲಸಿಗರ ನೋಂದಣಿಗಾಗಿ ಚಲೋ ಇಂಡಿಯಾ ಪೋರ್ಟಲ್ ಅನ್ನು ಸಹ ಅಭಿವೃದ್ಧಿಪಡಿಸಲಾಗಿದೆ. ಸುಮಾರು ಐದು ಮಿಲಿಯನ್ ಒಸಿಐ ಕಾರ್ಡ್​ದಾರರಿರುವುದು ಗಮನಾರ್ಹ. ಒಸಿಐ ಹೊಂದಿರುವ ಪ್ರತಿಯೊಬ್ಬರು ಐದು ಜನರನ್ನು ನಾಮ ನಿರ್ದೇಶನ ಮಾಡಬಹುದಾದರೂ, ಈ ಉಪಕ್ರಮದ ಅಡಿ ನೀಡಬೇಕಾದ ಒಟ್ಟು ಉಚಿತ ಇ - ವೀಸಾಗಳ ಸಂಖ್ಯೆ ಒಂದು ಲಕ್ಷದಷ್ಟಿದೆ.

ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರ ಏಜೆನ್ಸಿಗಳು ಮತ್ತು ಖಾಸಗಿ ಮಧ್ಯಸ್ಥಗಾರರ ಸಹಯೋಗದೊಂದಿಗೆ 'ಸ್ವದೇಶ ದರ್ಶನ', 'ಪ್ರಸಾದ್' ಮತ್ತು 'ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ಸಂಸ್ಥೆಗಳಿಗೆ ನೆರವು' ಮುಂತಾದ ಯೋಜನೆಗಳ ಅಡಿ ದೇಶಾದ್ಯಂತ ವಿವಿಧ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಮತ್ತು ಸೌಲಭ್ಯಗಳ ಗುಣಮಟ್ಟವನ್ನು ಸುಧಾರಿಸಲು ಸಚಿವಾಲಯವು ಹಲವಾರು ಕ್ರಮಗಳನ್ನು ಕೈಗೊಂಡಿದೆ.

ಈ ಗುರಿಯನ್ನು ಸಾಧಿಸಲು ಪ್ರವಾಸೋದ್ಯಮ ಸಚಿವಾಲಯವು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ನಾಗರಿಕ ವಿಮಾನಯಾನ ಸಚಿವಾಲಯ, ರೈಲ್ವೆ ಸಚಿವಾಲಯ ಮತ್ತು ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.

'ಯಾತ್ರಾ ಪುನರುಜ್ಜೀವನ ಮತ್ತು ಆಧ್ಯಾತ್ಮಿಕ ಪರಂಪರೆ ವರ್ಧನೆ ಡ್ರೈವ್' (ಪ್ರಸಾದ್) ಯೋಜನೆಯು ಮೊದಲೇ ಗುರುತಿಸಲಾದ ಯಾತ್ರಾ ಸ್ಥಳಗಳು ಮತ್ತು ಪಾರಂಪರಿಕ ನಗರಗಳಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಕ್ಕೆ ಆರ್ಥಿಕ ನೆರವು ನೀಡುತ್ತದೆ.

ಇದನ್ನೂ ಓದಿ : ಮುಂದಿನ ವರ್ಷ 200 ಕೋಟಿ ವೆಚ್ಚದಲ್ಲಿ 100 ಹೊಸ ಸ್ಕ್ರೀನ್ ಸೇರ್ಪಡೆ: ಪಿವಿಆರ್ ಐನಾಕ್ಸ್​

ABOUT THE AUTHOR

...view details