ಕರ್ನಾಟಕ

karnataka

ETV Bharat / bharat

ಅಫ್ಜಲ್​ಗಂಜ್​-ಬೀದರ್​ ಗುಂಡಿನ ದಾಳಿ ಪ್ರಕರಣ; ವಿವಿಧ ರಾಜ್ಯಗಳಲ್ಲಿ ಆರೋಪಿಗಳ ಪತ್ತೆಗೆ ಪೊಲೀಸರ ತಲಾಶ್​ - AFZALGANJ AND BIDAR SHOOTING

ಹೈದರಾಬಾದ್​ ಮತ್ತು ಬೀದರ್​ ಪೊಲೀಸರು ನಡುವೆ ಜಂಟಿ ತನಿಖೆ ಆರಂಭವಾಗಿದ್ದು, ಆರೋಪಿಗಳ ನಾಪತ್ತೆಯಾದ ಮಾರ್ಗದ ಮೂಲಕ ಅವರ ಹುಡುಕಾಟ ನಡೆಸಿದ್ದಾರೆ.

progress-in-afzalganj-and-bidar-shooting-case-police-track-down-suspects-across-states
ಬೀದರ್​ ದರೋಡೆ ಘಟನೆ (ಐಎಎನ್​ಎಸ್​​)

By ETV Bharat Karnataka Team

Published : Jan 22, 2025, 12:51 PM IST

ಹೈದರಾಬಾದ್​: ಅಫ್ಜಲ್​ಗಂಜ್​ ಮತ್ತು ಬೀದರ್​ ದರೋಡೆ ಮತ್ತು ಗುಂಡಿನ ದಾಳಿ ಪ್ರಕರಣದ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದು, ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡಿದೆ. ಹೈದರಾಬಾದ್​ ಮತ್ತು ಬೀದರ್​ ಪೊಲೀಸರ ಜಂಟಿ ತನಿಖೆ ಆರಂಭವಾಗಿದ್ದು, ಆರೋಪಿಗಳು ನಾಪತ್ತೆಯಾದ ಮಾರ್ಗದ ಮೂಲಕ ಅವರ ಹುಡುಕಾಟ ನಡೆಸಿದ್ದಾರೆ.

ನಾಪತ್ತೆ ಮಾರ್ಗ: ಪ್ರಕರಣದ ಶಂಕಿತ ಆರೋಪಿಗಳಾದ ಅಮಿತ್​ ಮತ್ತು ಮನೀಶ್​ ದರೋಡೆ ಮತ್ತು ಗುಂಡಿನ ದಾಳಿ ಬಳಿಕ ಓಡಿ ಹೋದ ಮಾರ್ಗಗಳ ಪತ್ತೆಗೆ ಪೊಲೀಸರು ಮುಂದಾಗಿದ್ದು, ತನಿಖೆಯಲ್ಲಿ ಈ ಎಸ್ಕೇಪ್​​ ಮಾರ್ಗವನ್ನು ಬಹಿರಂಗಪಡಿಸಿದ್ದಾರೆ.

  • ತಿರುಮಲಗಿರಿಯಿಂದ ಸಮೀರ್​ಪೇಟ್ ​​: ಆರೋಪಿಗಳು ಆರಂಭದಲ್ಲಿ ತಿರುಮಲಗಿರಿಯಿಂದ ಆಟೋದಲ್ಲಿ ಸಮೀರ್​ಪೇಟ್​​ಗೆ ಪ್ರಯಾಣಿಸಿದ್ದಾರೆ.
  • ಸಮಿರ್​ಪೇಟ್​​ನಿಂದ ಗಜ್ವಾಲ್​​: ಶೇರ್​​ ಆಟೋ ಮೂಲಕ ಅವರು ಸಮೀರ್​ಪೇಟ್​ನಿಂದ ಗಜ್ವಾಲ್​ಗೆ ಸಾಗಿದ್ದಾರೆ
  • ಗಜ್ವಾಲ್​ನಿಂದ ಅದಿಲಾಬಾದ್​: ಬಳಿಕ ಆರೋಪಿಗಳು ಲಾರಿ ಮೂಲಕ ಗಜ್ವಾಲ್​ನಿಂದ ಆದಿಲಾಬಾದ್​ಗೆ ಸಾಗಿದ್ದಾರೆ.
  • ಆದಿಲಾಬಾದ್​ನಿಂದ ಬಿಹಾರ್​ ಮಾರ್ಗವಾಗಿ ಮಧ್ಯಪ್ರದೇಶ: ಆದಿಲ್​ಬಾದ್​ನಿಂದ ಮಧ್ಯಪ್ರದೇಶಕ್ಕೆ ಸಾಗುವ ಯೋಜನೆ ರೂಪಿಸಿದ್ದ ಅವರು ಬೀದರ್​ಗೆ ತಲುಪಿದ್ದಾರೆ.

ಶಂಕಿತರ ಪತ್ತೆ : ಅಮಿತ್​ ಮತ್ತು ಮನೀಶ್​ ಪ್ರಕರಣದ ಪ್ರಮುಖ ಆರೋಪಿಗಳು ಎಂಬುದನ್ನು ಪತ್ತೆ ಮಾಡಲಾಗಿದೆ. ಇವರು ಸದ್ಯ ಎಲ್ಲಿದ್ದಾರೆ ಎಂಬ ಕುರಿತು ಬೀದರ್​ ಮತ್ತು ಹೈದರಾಬಾದ್​ ಪೊಲೀಸರು ಜಂಟಿಯಾಗಿ ಪತ್ತೆಗೆ ಮುಂದಾಗಿದ್ದಾರೆ.

ಬೀದರ್​ ಮತ್ತು ಹೈದರಾಬಾದ್​ ಪೊಲೀಸರ ಜಂಟಿ ಕಾರ್ಯಾಚಾರಣೆ:ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯ ಒದಗಿಸಲು ಮುಂದಾಗಿರುವ ಬೀದರ್​ ಮತ್ತು ಹೈದರಾಬಾದ್​ ಪೊಲೀಸರು ಇದಕ್ಕಾಗಿ ಜಂಟಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಈಗಾಗಲೇ ಎರಡು ರಾಜ್ಯದ ಪೊಲೀಸರ ತಂಡ ಬಿಹಾರ್​, ಜಾರ್ಖಂಡ್​ ಸೇರಿದಂತೆ ಹಲವು ಸ್ಥಳಗಳಲ್ಲಿ ಹುಡುಕಾಟ ನಡೆಸಿದೆ.

ನಿರಂತರವಾಗಿ ಸಾಗಿದ ಯತ್ನ: ಅಮಿತ್​ ಮತ್ತು ಮನೀಶ್ ಪತ್ತೆಗೆ ಪೊಲೀಸರು ಮುಂದಾಗಿದ್ದು, ಈ ಸಂಬಂಧ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಕೊಡಿಸುವ ಜವಾಬ್ದಾರಿ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಬದ್ಧವಾಗಿರಲು ಅವರು ಜಂಟಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ವಿವಿಧ ರಾಜ್ಯದಲ್ಲಿ ಆರೋಪಿಗಳ ಚಲನವಲನದ ಮೇಲೆ ಕಣ್ಣಿಡಲು ಮುಂದಾಗಿದ್ದು, ಇದಕ್ಕಾಗಿ ತೀವ್ರ ಶೋಧ ನಡೆದಿದೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಎನ್​ಕೌಂಟರ್​; ವಾಂಟೆಡ್​ ಕ್ರಿಮಿನಲ್ ಸೇರಿ ನಾಲ್ವರು​ ಗುಂಡಿಗೆ ಬಲಿ

ಇದನ್ನೂ ಓದಿ:ತಿರುಪತಿ ಅನ್ನಪ್ರಸಾದದಲ್ಲಿ ಮಸಾಲೆ ವಡೆ ಸೇರ್ಪಡೆ: ಮೊದಲ ದಿನ 5 ಸಾವಿರ ಭಕ್ತರಿಗೆ ಸಂತರ್ಪಣೆ

ABOUT THE AUTHOR

...view details