ಕರ್ನಾಟಕ

karnataka

ETV Bharat / bharat

ಅಯೋಧ್ಯೆ ರಾಮ ಮಂದಿರದ ಗರ್ಭಗುಡಿ ಪ್ರವೇಶಿಸಿದ ಕೋತಿ: ಸಾಕ್ಷಾತ್ ಹನುಮಂತನೇ ಬಂದ ಎಂದು ಭಕ್ತರ ಸಂತಸ - ತೀರ್ಥಕ್ಷೇತ್ರ ಟ್ರಸ್ಟ್

ಅಯೋಧ್ಯೆಯ ಶ್ರೀರಾಮ ಮಂದಿರದೊಳಗೆ ಕೋತಿಯೊಂದು ಬಂದು ಶ್ರೀರಾಮನ ದರ್ಶನ ಮಾಡಿ ತೆರಳಿದ್ದು ಕುತೂಹಲ ಮೂಡಿಸಿದೆ.

Monkey arrives in Ayodhya to have darshan of Lord Ram
Monkey arrives in Ayodhya to have darshan of Lord Ram

By ETV Bharat Karnataka Team

Published : Jan 24, 2024, 1:04 PM IST

Updated : Jan 24, 2024, 6:21 PM IST

ಅಯೋಧ್ಯೆ: ಮಂಗಳವಾರ ಸಂಜೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ನಡೆದ ವಿಸ್ಮಯಕಾರಿ ಘಟನೆಯೊಂದರ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಟ್ವಿಟರ್​ನಲ್ಲಿ ಹಂಚಿಕೊಂಡಿದೆ. ಮಂಗಳವಾರ ಸಂಜೆ ಕೋತಿಯೊಂದು ದೇವಸ್ಥಾನದ ಪ್ರಾಂಗಣದೊಳಗೆ ಬಂದಿದ್ದು ಹಾಗೂ ಸ್ವತಃ ಆಂಜನೇಯ ಸ್ವಾಮಿಯೇ ಶ್ರೀರಾಮನ ದರ್ಶನಕ್ಕೆ ಬಂದಂತೆ ತಮಗೆಲ್ಲ ಭಾಸವಾಗಿದ್ದಾಗಿ ಟ್ರಸ್ಟ್​ ತನ್ನ ಅನುಭವವನ್ನು ಹಂಚಿಕೊಂಡಿದೆ. ಈ ಘಟನೆಯ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಂಚಿಕೊಂಡ ಯಥಾವತ್ ಮಾಹಿತಿ ಹೀಗಿದೆ:

"ಇಂದು (ಮಂಗಳವಾರ) ಸಂಜೆ 5:50ರ ಸುಮಾರಿಗೆ ದೇವಸ್ಥಾನದ ದಕ್ಷಿಣ ದ್ವಾರದ ಮಂಟಪದ ಕಡೆಯಿಂದ ಬಂದ ಕೋತಿಯೊಂದು ಗರ್ಭಗುಡಿಯೊಳಗೆ ಹೋಗಿ ಉತ್ಸವಮೂರ್ತಿಯವರೆಗೂ ತಲುಪಿತ್ತು. ಕೋತಿಯು ಉತ್ಸವ ಮೂರ್ತಿಯ ವಿಗ್ರಹಕ್ಕೆ ಏನಾದರೂ ಮಾಡೀತು ಎಂಬ ಆತಂಕದಲ್ಲಿ ಹತ್ತಿರದಲ್ಲಿದ್ದ ಭದ್ರತಾ ಸಿಬ್ಬಂದಿ ಓಡಿ ಬಂದಿದ್ದಾರೆ. ಆಗ ಕೋತಿಯು ಶಾಂತವಾಗಿಯೇ ಉತ್ತರ ದ್ವಾರದ ಕಡೆಗೆ ಓಡಿತು. ಆದರೆ ಆ ದ್ವಾರ ಮುಚ್ಚಿದ್ದರಿಂದ ಪೂರ್ವ ದಿಕ್ಕಿಗೆ ತೆರಳಿ ಭಕ್ತಾದಿಗಳ ಮಧ್ಯದಿಂದ ಹೊರಗೆ ಹೋಯಿತು. ಸ್ವಯಂ ಹನುಮಾನ್​ಜೀ ರಾಮಲಲ್ಲಾನ ದರ್ಶನಕ್ಕೆ ಬಂದಿದ್ದರು ಎಂಬ ಭಾವ ತಮಗಾಯಿತು ಎಂದು ಈ ದೃಶ್ಯ ನೋಡಿದವರ ಅಭಿಪ್ರಾಯವಾಗಿತ್ತು."

ಬಸ್ ಸಂಚಾರ ಸ್ಥಗಿತ: ಪ್ರಾಣ ಪ್ರತಿಷ್ಠಾ ಸಮಾರಂಭದ ನಂತರ ರಾಮ ಮಂದಿರವನ್ನು ಸಾರ್ವಜನಿಕರಿಗೆ ತೆರೆದ ನಂತರ ದೇವಾಲಯ ಪಟ್ಟಣ ಅಯೋಧ್ಯೆಯಲ್ಲಿ ಭಾರಿ ಜನದಟ್ಟಣೆ ಉಂಟಾಗಿದೆ. ಅಯೋಧ್ಯೆಯಲ್ಲಿ ಮತ್ತಷ್ಟು ಜನಜಂಗುಳಿ ಉಂಟಾಗದಂತೆ ನಿಯಂತ್ರಿಸಲು ಲಕ್ನೋ ಮತ್ತು ಅಯೋಧ್ಯೆ ನಡುವಿನ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಪರಿಸ್ಥಿತಿ ಸಾಮಾನ್ಯವಾಗುವವರೆಗೆ ಈ ಮಾರ್ಗದಲ್ಲಿ ಯಾವುದೇ ಬಸ್ಸುಗಳು ಚಲಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 5 ಲಕ್ಷ ಭಕ್ತರು ತೀವ್ರ ಚಳಿಯ ಮಧ್ಯೆಯೂ ನಿನ್ನೆ ದೇವಾಲಯಕ್ಕೆ ಆಗಮಿಸಿದ್ದರು. ಅವರಲ್ಲಿ ಕೇವಲ 3 ಲಕ್ಷ ಜನರಿಗೆ ಮಾತ್ರ ಪ್ರಾರ್ಥನೆ ಸಲ್ಲಿಸಲು ಸಾಧ್ಯವಾದರೆ, ಉಳಿದವರು ತಮ್ಮ ಸರದಿಗಾಗಿ ಕಾಯುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಿಗ್ಗೆ ದೇವಾಲಯದ ಹೊರಗೆ ಹೆಚ್ಚಿನ ಸಂಖ್ಯೆಯ ಭಕ್ತರು ಜಮಾಯಿಸಿದ್ದಾರೆ. ದೇವಾಲಯಕ್ಕೆ ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಬರುವ ನಿರೀಕ್ಷೆಯಿದೆ, ಈ ಹಿನ್ನೆಲೆಯಲ್ಲಿ ನಗರದಲ್ಲಿ ಭಾರಿ ಭದ್ರತೆಯನ್ನು ನಿಯೋಜಿಸಲಾಗಿದೆ.

ಉತ್ತರ ಪ್ರದೇಶ ಪೊಲೀಸ್, ಕ್ಷಿಪ್ರ ಕ್ರಿಯಾ ಪಡೆ (ಆರ್‌ಎಎಫ್) ಮತ್ತು ಸಶಸ್ತ್ರ ಸೀಮಾ ಬಲ್ (ಎಸ್ಎಸ್‌ಬಿ)ಯ ಸುಮಾರು 8,000 ಭದ್ರತಾ ಸಿಬ್ಬಂದಿಯನ್ನು ದೇವಾಲಯದಲ್ಲಿ ನಿಯೋಜಿಸಲಾಗಿದೆ. ಎಂಟು ಮ್ಯಾಜಿಸ್ಟ್ರೇಟ್ ಗಳು ದೇವಾಲಯದ ವಿವಿಧ ಸ್ಥಳಗಳ ಉಸ್ತುವಾರಿ ವಹಿಸಿದ್ದಾರೆ. ದೇವರ ದರ್ಶನಕ್ಕೆ ಆತುರ ಪಡದಂತೆ ಮತ್ತು ಎರಡು ವಾರಗಳ ನಂತರ ಆಗಮಿಸುವಂತೆ ಅಯೋಧ್ಯೆಯ ಪೊಲೀಸ್ ಇನ್ಸ್ ಪೆಕ್ಟರ್ ಜನರಲ್ ಪ್ರವೀಣ್ ಕುಮಾರ್ ಅವರು ಜನರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: 29 ವಾರಗಳ ಭ್ರೂಣದ ಗರ್ಭಪಾತಕ್ಕೆ ನೀಡಿದ್ದ ಅನುಮತಿ ಹಿಂಪಡೆದ ಹೈಕೋರ್ಟ್

Last Updated : Jan 24, 2024, 6:21 PM IST

ABOUT THE AUTHOR

...view details