ಕರ್ನಾಟಕ

karnataka

ETV Bharat / bharat

ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ 62ಕೋಟಿ ಮಂದಿ: ಪ್ರಯಾಗರಾಜ್​​​ ಗಾಳಿ ಈಗಲೂ ಶುದ್ಧ, ಸಮಾರೋಪಕ್ಕೆ ಕ್ಷಣಗಣನೆ - GREEN ZONE UP KUMBH AQI

ಪ್ರಯಾಗರಾಜ್​​ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಇದುವರೆಗೂ 62ಕೋಟಿಗೂ ಹೆಚ್ಚು ಮಂದಿ ಪುಣ್ಯಸ್ನಾನ ಮಾಡಿದ್ದಾರೆ. ಅಂದಹಾಗೆ ಇಷ್ಟೆಲ್ಲ ಜನ ಬಂದು ಹೋಗಿದ್ದರೂ ತ್ರಿವೇಣಿ ಸಂಗಮದ ಗಾಳಿ ಸಖತ್​​​​ ಆಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

maha-kumbh-area-remained-in-green-zone-for-42-days
ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ 62ಕೋಟಿ ಮಂದಿ: ಪ್ರಯಾಗರಾಜ್​​​ ಗಾಳಿ ಈಗಲೂ ಶುದ್ಧ, ಸಮಾರೋಪಕ್ಕೆ ಕ್ಷಣಗಣನೆ (ETV Bharat)

By ETV Bharat Karnataka Team

Published : Feb 25, 2025, 7:51 AM IST

ಮಹಾಕುಂಭ ನಗರ (ಉತ್ತರಪ್ರದೇಶ ):ಪ್ರಯಾಗರಾಜ್​ ನ ತ್ರಿವೇಣಿ ಸಂಗಮದ ಮಹಾಕುಂಭ ನಗರದಲ್ಲಿ 620 ದಶಲಕ್ಷ ಎಂದರೆ 62 ಕೋಟಿಗೂ ಹೆಚ್ಚು ಯಾತ್ರಾರ್ಥಿಗಳು ಮತ್ತು ಲಕ್ಷಾಂತರ ವಾಹನಗಳ ಸಂಚಾರದ ಹೊರತಾಗಿಯೂ, ಗಾಳಿಯ ಗುಣಮಟ್ಟವು ಹದಗೆಟ್ಟಿಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಬಿಡುಗಡೆ ಮಾಡಿದ ಅಂಕಿ- ಅಂಶಗಳು ತೋರಿಸುತ್ತಿವೆ ಎಂದು ಉತ್ತರ ಪ್ರದೇಶ ಸರ್ಕಾರ ಸೋಮವಾರ ನೀಡಿದ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ದೇಶದ ಜನಸಂಖ್ಯೆಯ ಶೇಕಡಾ 60 ಕ್ಕಿಂತ ಹೆಚ್ಚು ಜನರು ಮಹಾ ಕುಂಭ ನಡೆಯುತ್ತಿರುವ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಮಿಂದೆದ್ದಿದ್ದಾರೆ. ಇದೇ ವೇಳೆ ಲಕ್ಷಾಂತರ ವಾಹನಗಳು ಪ್ರಯಾಗರಾಜ್​ ಗೆ ಬಂದಿವೆ. ಆದಾಗ್ಯೂ ಕುಂಭ ಪ್ರದೇಶದ ಗಾಳಿಯ ಗುಣಮಟ್ಟದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಉಸಿರಾಡಲು ಶುದ್ಧವಾಗಿಯೇ ಇರುವುದು CPCB ಯ ವರದಿಗಳಿಂದ ಗೊತ್ತಾಗಿದೆ. ಪ್ರಯಾಗರಾಜ್​ ನ ಮಹಾಕುಂಭ ನಗರದ ಗಾಳಿಯ ಗುಣಮಟ್ಟ ಹಿತಕರವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ದೃಢಪಡಿಸಿದೆ. ಮಹಾಕುಂಭದಾದ್ಯಂತ ಗಾಳಿಯ ಗುಣಮಟ್ಟ ಹಸಿರು ವಲಯದಲ್ಲಿ ಉಳಿದಿದೆ ಎಂದು CPCB ಯ ಪರಿಸರ ಸಲಹೆಗಾರ ಎಂಜಿನಿಯರ್ ಶೇಖ್ ಶಿರಾಜ್ ಹೇಳಿದ್ದಾರೆ.

ಮಹತ್ವದ ದಿನಾಂಕಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಹೀಗಿತ್ತು: ಜನವರಿ 13 ರಂದು 67 AQI (ಪೌಷ್ ಪೂರ್ಣಿಮೆ), ಜನವರಿ 14 (ಮಕರ ಸಂಕ್ರಾಂತಿ)67AQI, ಜನವರಿ 29 (ಮೌನಿ ಅಮಾವಾಸ್ಯೆ) 106 AQI, ಫೆಬ್ರವರಿ 3 (ಬಸಂತ್ ಪಂಚಮಿ) 65 AQI ಮತ್ತು ಫೆಬ್ರವರಿ 12 ರಂದು (ಮಘಿ ಪೌರ್ಣಿಮೆ ದಿನ) 52AQI ದಾಖಲಾಗಿತ್ತು ಎಂದು CPCB ಅಂಕಿ - ಅಂಶಗಳು ಹೇಳುತ್ತಿವೆ.

"100" ಕ್ಕಿಂತ ಕೆಳಗಿನ AQI ಅನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಆದರೆ "100 ರಿಂದ 150" ಅನ್ನು ಮಧ್ಯಮ ಎಂದು ವರ್ಗೀಕರಿಸಲಾಗಿದೆ. ಮೌನಿ ಅಮಾವಾಸ್ಯೆ ಹೊರತುಪಡಿಸಿ (AQI ಸ್ವಲ್ಪಮಟ್ಟಿಗೆ ಮಧ್ಯಮವಾಗಿದೆ ), ಉಳಿದ ಎಲ್ಲಾ ದಿನಗಳಲ್ಲಿ ಗಾಳಿಯ ಗುಣಮಟ್ಟವನ್ನು ಉತ್ತಮವೆಂದು ವರ್ಗೀಕರಿಸಲಾಗಿದೆ. ಒಟ್ಟಾರೆಯಾಗಿ, ಮಹಾಕುಂಭ ಪ್ರದೇಶವು 42 ದಿನಗಳ ಕಾಲ ಹಸಿರು ವಲಯದಲ್ಲೇ ಉಳಿದುಕೊಂಡಿದ್ದು, ಭಕ್ತ ಸಾಗರ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ ಎಂದು ಹೇಳಿಕೆ ತಿಳಿಸಿದೆ.

42 ದಿನಗಳ ಕಾಲವೂ ಹಸಿರು ಒಲಯದಲ್ಲಿ ಗಾಳಿಯ ಗುಣಮಟ್ಟ:ಭಕ್ತರ ನಿರಂತರ ಒಳಹರಿವು ಮತ್ತು ಭಾರಿ ಸಂಖ್ಯೆಯಲ್ಲಿ ವಾಹನಗಳ ಉಪಸ್ಥಿತಿಯ ಹೊರತಾಗಿಯೂ ನಗರದ ಗಾಳಿಯ ಗುಣಮಟ್ಟವು ಸತತ 42 ದಿನಗಳವರೆಗೆ ಹಸಿರು ವಲಯದಲ್ಲಿ ಗುರುತಿಸಿಕೊಂಡಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. CPCB ಯ ಅಧಿಕೃತ ಅಪ್ಲಿಕೇಶನ್ 'ಸಮೀರ್' ನಲ್ಲಿ ಜನವರಿ ಮತ್ತು ಫೆಬ್ರವರಿಯಿಂದ ಗಾಳಿಯ ಗುಣಮಟ್ಟದ ಡೇಟಾದ ತುಲನಾತ್ಮಕ ವಿಶ್ಲೇಷಣೆಯು ಮಹಾಕುಂಭದ ಗಾಳಿಯ ಗುಣಮಟ್ಟವು ಚಂಡೀಗಢಕ್ಕಿಂತ ಉತ್ತಮವಾಗಿದೆ ಎಂದು ತೋರಿಸುತ್ತಿದೆ.

ಮಹಾ ಕುಂಭದ ನಿಮಿತ್ತ ಪ್ರಯಾಗರಾಜ್ ಮುನ್ಸಿಪಲ್ ಕಾರ್ಪೊರೇಶನ್‌ ಪರಿಣಾಮಕಾರಿ ವಾಯು ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದ್ದು, ನಿಯಮಿತ ಮೇಲ್ವಿಚಾರಣೆ ಮತ್ತು ಬಹು ಉಪಕ್ರಮಗಳನ್ನು ಕೈಗೊಂಡ ಪರಿಣಾಮ ಈ ಫಲಿತಾಂಶ ಬಂದಿದೆ ಎಂದು ಮಂಡಳಿ ತಿಳಿಸಿದೆ.

ನಗರದ ನೈರ್ಮಲ್ಯ ಕಾಪಾಡಲು ನಿರಂತರ ಶ್ರಮ:ನೈರ್ಮಲ್ಯ ಮತ್ತು ಮಾಲಿನ್ಯ ನಿಯಂತ್ರಣಕ್ಕಾಗಿ 9,600 ಸಿಬ್ಬಂದಿಯನ್ನು ಮುನ್ಸಿಪಲ್ ಕಾರ್ಪೊರೇಶನ್‌ ನಿಯೋಜಿಸಿದೆ, 800 ಹೆಚ್ಚುವರಿ ನೈರ್ಮಲ್ಯ ಕಾರ್ಯಕರ್ತರು ಮಹಾಕುಂಭ ನಗರಿಯ ಉದ್ದಕ್ಕೂ ಸಕ್ರಿಯರಾಗಿದ್ದಾರೆ. ವಾಯುಮಾಲಿನ್ಯ ಪೀಡಿತ ಪ್ರದೇಶಗಳಲ್ಲಿ ನಿರಂತರ ನೀರು ಚಿಮುಕಿಸುವಿಕೆ ಕಾರ್ಯವನ್ನು ಮಾಡಲಾಗಿದೆ. ಧೂಳನ್ನು ಕಡಿಮೆ ಮಾಡಲು ರಾತ್ರಿಯಲ್ಲಿ ರಸ್ತೆಯನ್ನು ನೀರಿನಿಂದ ತೊಳೆಯುವ ಕೆಲಸ ಮಾಡಲಾಗಿದೆ ಎಂದು ಪ್ರಯಾಗರಾಜ್ ಮುನ್ಸಿಪಲ್ ಕಾರ್ಪೊರೇಷನ್ ಜೂನಿಯರ್ ಇಂಜಿನಿಯರ್ ರಾಮ್ ಸಕ್ಸೇನಾ ಮಾಹಿತಿ ನೀಡಿದ್ದಾರೆ.

ಎಂಎನ್‌ಎನ್‌ಐಟಿ ಕ್ರಾಸಿಂಗ್, ತೆಲಿಯಾರ್‌ಗಂಜ್, ಜುನ್ಸಿ ಆವಾಸ್ ವಿಕಾಸ್ ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಕಚೇರಿಯಲ್ಲಿ ಮೂರು ಪ್ರಮುಖ ಸ್ಥಳಗಳಲ್ಲಿ ಮಾಲಿನ್ಯ-ವಿರೋಧಿ ಸಂವೇದಕಗಳನ್ನು ಸ್ಥಾಪಿಸಲಾಗಿದೆ. ಅಲ್ಲಿ ಪ್ರತಿದಿನ ನೀರು ಚಿಮುಕಿಸಲಾಗುತ್ತದೆ ಎಂದು ಸರ್ಕಾರ ನೀಡಿರುವ ಹೇಳಿಕೆಯಲ್ಲಿ ಸೇರಿಸಲಾಗಿದೆ.

ಇವುಗಳನ್ನು ಓದಿ:ಕಾಶಿ ವಿಶ್ವನಾಥ ದೇವಾಲಯಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರ ಭೇಟಿ: 3 ದಿನ VIP ದರ್ಶನ ಸ್ಥಗಿತ

1500 ಕಿ.ಮೀ ದೂರದ ಪ್ರಯಾಗ್​ರಾಜ್​​ಗೆ ನಯಾಪೈಸೆ ಖರ್ಚಿಲ್ಲದೆ ತಲುಪಿದ ಕಂಟೆಂಟ್​ ಕ್ರಿಯೇಟರ್​!

ತಡರಾತ್ರಿವರೆಗೂ ರಾಮನ ದರ್ಶನಕ್ಕೆ ಅವಕಾಶ: ಅಯೋಧ್ಯೆಗೆ ಸಾಗರೋಪಾದಿಯಲ್ಲಿ ಭಕ್ತರ ದಂಡು, ಬಿಗಿ ಭದ್ರತೆ

ಮಹಾ ಕುಂಭಮೇಳದಿಂದ 3 ಲಕ್ಷ ಕೋಟಿ ರೂ. ಭರಪೂರ ಆದಾಯ: 10 ಕೋಟಿ ಮಂದಿಗೆ ಉದ್ಯೋಗ

ABOUT THE AUTHOR

...view details