ಚೆನ್ನೈ: ಗುಜರಾತ್ ಕೇಡರ್ನ ಐಎಎಸ್ ಅಧಿಕಾರಿಯ ಪತ್ನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ತಮಿಳುನಾಡು ಸಿಎಂಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ತಮ್ಮ ವಿರುದ್ಧ ಮಾಡಲಾದ ಸುಳ್ಳು ಆರೋಪಗಳಿಂದ ತೀವ್ರ ಸಂಕಟ ಅನುಭವಿಸಿದ್ದಾಗಿ ವಿವರಿಸಿದ್ದಾರೆ ಎಂದು ಗಾಂಧಿನಗರ ಜಿಲ್ಲಾ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.
ಸುರ್ಯಾ(45) ಸಾವನ್ನಪ್ಪಿದ ಮಹಿಳೆ. ಶನಿವಾರ ತಮ್ಮ ಪತಿ ಐಎಎಸ್ ಅಧಿಕಾರಿ ರಂಜೀತ್ ಕುಮಾರ್ ಜೆ ಅವರ ಸರ್ಕಾರಿ ನಿವಾಸದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಂಜೀತ್ ಕುಮಾರ್ ಗುಜರಾತ್ನ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.