ಕರ್ನಾಟಕ

karnataka

ETV Bharat / bharat

ಅಮರಾವತಿ ನಿರ್ಮಾಣಕ್ಕೆ ಮತ್ತೆ ಬಂತು ಜಿಂಕೆ ವೇಗ; ಶೀಘ್ರದಲ್ಲೇ ಬಿಡ್​​ ಪ್ರಾರಂಭ; ಹೇಗಿರಲಿದೆ ಗೊತ್ತಾ ಕನಸಿನ ನಗರಿ?

2018ರಲ್ಲಿಯೇ ಲಂಡನ್​ ಮೂಲದ ನಾರ್ಮನ್​ ಫೋಸ್ಟರ್​​ ಮತ್ತು ಪಾರ್ಟನರ್​​ ನಗರ ವಿನ್ಯಾಸ ಮಾಡಿದ್ದು, ಇದೀಗ ಈ ರಾಜಧಾನಿ ನಿರ್ಮಾಣಕ್ಕೆ ವೇಗ ನೀಡಲು ಸರ್ಕಾರ ನಿರ್ಧರಿಸಿದೆ.

By ETV Bharat Karnataka Team

Published : 5 hours ago

government-has-decided-layout-of-office-buildings-in-amaravati
aಮರಾವತಿ ನಗರ ನಿರ್ಮಾಣ (ಸಂಗ್ರಹ ಚಿತ್ರ)

ಹೈದರಾಬಾದ್​: ಆಂಧ್ರಪ್ರದೇಶ ರಾಜಧಾನಿ ಅಮರಾವತಿಯಲ್ಲಿ ವಿಧಾನಸಭ, ಹೈಕೋರ್ಟ್​, ಸೆಕ್ರಟಿರಿಯೇಟ್​ ಮತ್ತು ಪ್ರಮುಖ ಇಲಾಖೆಗಳ ಕಚೇರಿಗಳನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ನಗರದಲ್ಲಿ ಆಡಳಿತಾತ್ಮಕ ಯೋಜನೆ ಜೊತೆಗೆ ಕೆಲವು ವಿಶೇಷ ಕಟ್ಟಡ ನಿರ್ಮಾಣವೂ ಒಳಗೊಳ್ಳಲಿದೆ. 2018ರಲ್ಲಿಯೇ ಲಂಡನ್​ ಮೂಲದ ನಾರ್ಮನ್​ ಫೋಸ್ಟರ್​​ ಮತ್ತು ಪಾರ್ಟನರ್​​ ನಗರ ವಿನ್ಯಾಸ ಸಿದ್ದಪಡಿಸಿದ್ದು, ಇದೀಗ ಈ ರಾಜಧಾನಿ ನಿರ್ಮಾಣಕ್ಕೆ ವೇಗ ನೀಡಲು ಸರ್ಕಾರ ನಿರ್ಧರಿಸಿದೆ. ರಾಜಧಾನಿಯಲ್ಲಿ ಕೆಲವು ಐಕಾನಿಕ್​ ಕಟ್ಟಡ ನಿರ್ಮಾಣ ಕುರಿತು ಉನ್ನತ ಮಟ್ಟದ ಚರ್ಚೆಗಳು ಕೂಡ ಸಾಗಿದೆ.

ಆರು ವರ್ಷಗಳಿಂದ ಹಿಂದೆ ಸಿದ್ಧವಾಗಿದ್ದ ರೂಪುರೇಷೆ: ಆರು ವರ್ಷದ ಹಿಂದೆ ರೂಪಿಸಲಾಗಿದ್ದ ಯೋಜನೆಯನ್ನೇ ಅಳವಡಿಸುವುದಾ ಅಥವಾ ಅದರಲ್ಲಿ ಯಾವುದಾದರೂ ಕೆಲವು ಬದಲಾವಣೆ ನಡೆಸುವುದಾ ಎಂಬ ನಿಟ್ಟಿನಲ್ಲಿ ಕುರಿತು ಚರ್ಚೆ ನಡೆಸಲಾಗಿದೆ. ಈ ವೇಳೆ ಹೊರಗಿನ ಆಕಾರದಲ್ಲಿ ಯಾವುದೇ ಬದಲಾವಣೆ ಮಾಡುವುದು ಬೇಡ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಆದರೆ, ಒಳಗೆ ಅಗತ್ಯವಿದ್ದಲ್ಲಿ ಕೆಲವು ಬದಲಾವಣೆ ಮಾಡಲು ನಿರ್ಧರಿಸಲಾಗಿದೆ.

ಅಮರಾವತಿ ನಗರ ನಿರ್ಮಾಣ (ಈಟಿವಿ ಭಾರತ್​)

ಹೊರಗಿನ ವಿನ್ಯಾಸದಲ್ಲಿ ಬದಲಾವಣೆ ಮಾಡಿದಲ್ಲಿ, ಮತ್ತೆ ಒಂದು ವರ್ಷ ನಷ್ಟವಾಗಲಿದೆ ಎಂದು ಸರ್ಕಾರ ಚಿಂತಿಸಿದೆ. ಇದಕ್ಕಿಂತ ಹೆಚ್ಚಾಗಿ, ಹೈಕೋರ್ಟ್​ ಮತ್ತು ಸೆಕ್ರೆಟಿರಿಯೇಟ್​ ಟವರ್​ಗಳ ಅಡಿಪಾಯದ ನಿರ್ಮಾಣ ಈಗಾಗಲೇ ಮುಗಿದಿದೆ. ಇದೀಗ ಇದರ ಬದಲಾವಣೆ ಮಾಡಿದಲ್ಲಿ ಅದರ ಆಕಾರ ಸರಿಯಾಗುವುದಿಲ್ಲ ಎಂಬ ಮಾತು ಕೇಳಿ ಬಂದಿದೆ.

ಹೈಕೋರ್ಟ್​ ಕಟ್ಟಡದ ಬಗ್ಗೆ ಚರ್ಚಿಸಲು ನ್ಯಾಯಮೂರ್ತಿಗಳ ಭೇಟಿ:ಸಿಆರ್​ಡಿಎ ಅಧಿಕಾರಿಗಳು ಇತ್ತೀಚಿಗೆ ಹೈಕೋರ್ಟ್​ ಕಟ್ಟಡದ ನಿರ್ಮಾಣ ಸಂಬಂಧ ನ್ಯಾಯಮೂರ್ತಿಗಳನ್ನು ಭೇಟಿಯಾಗಿದ್ದು, ಅವರ ದೃಷ್ಟಿಕೋನದ ಕುರಿತು ಮಾಹಿತಿ ಪಡೆದಿದ್ದಾರೆ. ಮತ್ತೊಂದೆಡೆ ಸಿಆರ್​ಡಿಎ ಉಳಿದ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಸಂಬಂಧ ಟೆಂಡರ್​ ಕರೆಯಲಾಗಿದೆ.

ಲಂಡನ್​ ಘಟಕದ ನಾರ್ಮನ್​ ಪೋಸ್ಟರ್​​ ಪ್ರತಿನಿಧಿಗಳು ಕೂಡ ಈ ಬಿಡ್​ನಲ್ಲಿ ಭಾಗಿಯಾಗಲಿದ್ದಾರೆ. ಸಿಆರ್​ಡಿಎ ಅಧಿಕಾರಿಗಳು ಕೂಡ ಈ ಬಿಡ್​ನಲ್ಲಿ ಭಾಗಿಯಾಗಲಿದ್ದಾರೆ. ಈ ಬಿಡ್​​ ತೆರೆಯಲಿದ್ದು, ಮುಂದಿನ ಮೂರರಿಂದ ನಾಲ್ಕು ದಿನದಲ್ಲಿ ಇದರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಸಿಆರ್​ಡಿಎ ಹೈಕೋರ್ಟ್​​ ಮತ್ತು ಸೆಕ್ರೆಟಿರಿಯೇಟ್​ ಕಟ್ಟಡ ನಿರ್ಮಾಣ ಮಾಡಲು ಟೆಂಡರ್​​ಗೆ ಚೆನ್ನೈ ಐಐಟಿ ಪ್ರಮಾಣಿತ ತಜ್ಫರಿಗೆ ಕರೆ ನೀಡಲಾಗಿದೆ.

ಹಿಂದಿನ ಕಿರುಕುಳ ಮರೆತು ನಗರ ನಿರ್ಮಾಣಕ್ಕೆ ಮುಂದಾದ ನಾರ್ಮನ್​ ಪೋಸ್ಟರ್​:ಈ ಮೊದಲು ಯಾವುದೇ ಪ್ರತಿಷ್ಟಿತ ಕಂಪನಿಗಳು ಅಮರಾವತಿ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿರಲಿಲ್ಲ. ಇದೀಗ ನಾರ್ಮನ್​ ಫೋಸ್ಟರ್​​ ಮತ್ತು ಸಹಭಾಗಿಗಳು ಮತ್ತೆ ಅಮರಾವತಿ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಲು ಆಸಕ್ತಿ ತೋರಿದ್ದಾರೆ. ಜಗನ್​ ಸರ್ಕಾರದಲ್ಲಿ ವಿದೇಶಿ ಕಂಪನಿಗಳು ಕೊಂಚ ಕಹಿ ಘಟನೆಯ್ನು ಅನುಭವಿಸಿದವು. ಜಗನ್​ ಸರ್ಕಾರದಲ್ಲಿ ನಾರ್ಮನ್​ ಫೋಸ್ಟರ್​ ಕಂಪನಿ ಕಿರುಕುಳ ಅನುಭವಿಸಿದರೂ ಇದೀಗ ಮತ್ತೆ ನಗರ ನಿರ್ಮಾಣಕ್ಕೆ ಸಕಾರಾತ್ಮಕ ಧೋರಣೆಯಿಂದ ಆಗಮಿಸಿದೆ. ಇತ್ತೀಚಿಗೆ ನಡೆದ ಪೂರ್ವ ಬಿಡ್​​ ಸಭೆಯಲ್ಲಿ ಇದು ಬಹಿರಂಗವಾಗಿತ್ತು. ಸಿಆರ್​ಡಿಎ ಅಧಿಕಾರಿಗಳ ಪ್ರಕಾರ, ಕಂಪನಿ ಬಿಡ್​​ ಮಾಡಿ ಟೆಂಡರ್​ ಅಂತಿಮವಾಗಲು ಸ್ವಲ್ಪ ಸಮಯಬೇಕಾಗಿದೆ.

ಇದನ್ನೂ ಓದಿ: ಪರವಾನಗಿ ಇಲ್ಲದ ಶ್ವಾನಗಳೊಂದಿಗೆ ವಾಕಿಂಗ್ ಮಾಡುವ ಅಭ್ಯಾಸ ನಿಮ್ಮಲ್ಲಿದ್ದರೆ ಈಗಿನಿಂದಲೇ ಬದಲಾಯಿಸಿಕೊಳ್ಳಿ: ಇಲ್ಲದಿದ್ದರೆ ದಂಡ ಕಟ್ಟಿಟ್ಟ ಬುತ್ತಿ

ABOUT THE AUTHOR

...view details