ಕರ್ನಾಟಕ

karnataka

ಅಯೋಧ್ಯೆಗೆ ತೆರಳಲಿದ್ದ 100ಕ್ಕೂ ಹೆಚ್ಚು ತಮಿಳುನಾಡು ಪ್ರವಾಸಿಗರಿಗೆ ನಕಲಿ ಏರ್ ​​ಟಿಕೆಟ್ ನೀಡಿ ವಂಚನೆ - Fraudsters scam 100 pilgrims

By ETV Bharat Karnataka Team

Published : Jul 12, 2024, 9:09 PM IST

ಅಯೋಧ್ಯೆಗೆ ತೆರಳಲು ಮಧುರೈ ವಿಮಾನ ನಿಲ್ದಾಣಕ್ಕೆ ನಕಲಿ ಟಿಕೆಟ್​ನೊಂದಿಗೆ ಯಾತ್ರಾರ್ಥಿಗಳು ಆಗಮಿಸಿದ್ದರಿಂದ ಅಲ್ಲಿ ಗಲಾಟೆ ನಡೆದಿದೆ.

Madurai Airport
ಮಧುರೈ ವಿಮಾನ ನಿಲ್ದಾಣ (ETV Bharat)

ಮಧುರೈ (ತಮಿಳುನಾಡು) : ನೂರಕ್ಕೂ ಹೆಚ್ಚು ಯಾತ್ರಾರ್ಥಿಗಳು ಅಯೋಧ್ಯೆಗೆ ತೆರಳಲು ನಕಲಿ ವಿಮಾನ ಟಿಕೆಟ್​ನೊಂದಿಗೆ ಆಗಮಿಸಿದ್ದರಿಂದ ಮಧುರೈ ವಿಮಾನ ನಿಲ್ದಾಣದಲ್ಲಿ ಗಲಾಟೆ ನಡೆದಿದೆ.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರವನ್ನು ನಿರ್ಮಿಸಿ, ಕಳೆದ ವರ್ಷ ಉದ್ಘಾಟನೆ ಮಾಡಲಾಗಿದೆ. ಇಲ್ಲಿಗೆ ತಮಿಳುನಾಡಿನ ಯಾತ್ರಾರ್ಥಿಗಳು ದರ್ಶನ ಪಡೆಯಲು ಚೆನ್ನೈ, ಸೇಲಂ, ಮಧುರೈ ಸೇರಿದಂತೆ ವಿವಿಧ ನಗರಗಳಿಂದ ಅಯೋಧ್ಯೆಗೆ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಅಲ್ಲದೇ, ಚೆನ್ನೈನಿಂದ ಅಯೋಧ್ಯೆಗೆ ನೇರ ವಿಮಾನ ಸೇವೆಯೂ ಲಭ್ಯವಿದೆ.

ಈ ವೇಳೆ ದಿಂಡಿಗಲ್ ಜಿಲ್ಲೆಯ ಪಳನಿಯಿಂದ ನಿರ್ದಿಷ್ಟ ಸಮುದಾಯಕ್ಕೆ ಸೇರಿದ 15ಕ್ಕೂ ಹೆಚ್ಚು ಜನ ಹಾಗೂ ಸೇಲಂ ಜಿಲ್ಲೆಯ 81 ಮಂದಿ ಸೇರಿ 106 ಮಂದಿಗೆ ಸೇಲಂನ ರಾಜಾ ಎಂಬುವವರ ಮೂಲಕ ಕಾಶಿ ಹಾಗೂ ಅಯೋಧ್ಯೆಗೆ ತೆರಳಲು ಐದು ದಿನಗಳ ಪ್ರವಾಸಕ್ಕಾಗಿ ಏರ್​ ಟಿಕೆಟ್​​ ಕಾಯ್ದಿರಿಸಿದ್ದರು. ರಾಜಾ ಎಂಬುವವರು ಅದೇ ಪಟ್ಟಣದ ಶಿವಾನಂದಂ ಎಂಬ ಬುಕಿಂಗ್ ಏಜೆಂಟ್ ಮೂಲಕ ಒಂದು ಊಟ ಮತ್ತು ಪ್ರತಿ ವ್ಯಕ್ತಿಗೆ 29,000 ನಂತೆ ಸುಮಾರು 30.74 ಲಕ್ಷಗಳನ್ನು ಪಾವತಿಸಿ ವಿಮಾನ ವಸತಿಗಾಗಿ ಟಿಕೆಟ್ ಕಳುಹಿಸಿದ್ದಾರೆ.

ಅದನ್ನೇ ನೆಚ್ಚಿಕೊಂಡು ಇಂದು ಬೆಳಗ್ಗೆ ಇಂಡಿಗೋ ವಿಮಾನದಲ್ಲಿ ಮಧುರೈನಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಅಯೋಧ್ಯೆಗೆ ತೆರಳಲು 100ಕ್ಕೂ ಹೆಚ್ಚು ಮಂದಿ ಮಧುರೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ವಿಮಾನ ಟಿಕೆಟ್ ಶುಲ್ಕವಾಗಿ ಸಂಗ್ರಹಿಸಿದ ಹಣದಿಂದ ಇಂಡಿಗೋ ಟಿಕೆಟ್‌ಗಳನ್ನು ಅವರಿಗೆ ನೀಡಲಾಗಿತ್ತು ಆವಿಮಾನ ಟಿಕೆಟ್‌ ಇಟ್ಟುಕೊಂಡು ಇವರೆಲ್ಲ ಮಧುರೈ ವಿಮಾನ ನಿಲ್ದಾಣಕ್ಕೆ ಬಂದಿದ್ದರು.

ಟಿಕೆಟ್ ಪರಿಶೀಲನೆ ವೇಳೆ ಅವರ ಎಲ್ಲಾ ಟಿಕೆಟ್‌ಗಳು ನಕಲಿ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಗಾಬರಿಗೊಂಡ ಪ್ರಯಾಣಿಕರು ರಾಜಾ ಅವರನ್ನು ಕೇಳಿದ್ದಾರೆ ಮತ್ತು ಅವರು ಏಜೆಂಟ್ ಜೊತೆ ಮಾತನಾಡಿದ್ದಾರೆ. ಟಿಕೆಟ್ ಕಾಯ್ದಿರಿಸಿದ ಕಿಂಗ್ ಏಜೆಂಟ್ ಶಿವಾನಂದಂ, ಏನೋ ಅನಾಹುತ ಸಂಭವಿಸಿದ್ದು, ಇದೇ 18 ರಂದು ಎಲ್ಲರಿಗೂ ಟಿಕೆಟ್ ರೀ ಬುಕ್ ಮಾಡುವುದಾಗಿ ಹೇಳಿದ್ದ ಎಂಬುದು ತಿಳಿದುಬಂದಿದೆ.

ಆಧ್ಯಾತ್ಮಿಕ ಪ್ರವಾಸಕ್ಕಾಗಿ ಸೇಲಂ ಮತ್ತು ದಿಂಡಿಗಲ್ ಜಿಲ್ಲೆಗಳಿಂದ ಮಧುರೈಗೆ ಬಂದಿದ್ದ 100 ಕ್ಕೂ ಹೆಚ್ಚು ಯಾತ್ರಾರ್ಥಿಗಳು ನಕಲಿ ವಿಮಾನ ಟಿಕೆಟ್‌ಗಳಿಂದಾಗಿ ತಾವು ಮೋಸ ಹೋಗಿರುವುದು ಗೊತ್ತಾಗಿ ನಿರಾಸೆಯಿಂದ ಮನೆಗೆ ಮರಳಿದರು. ಅಲ್ಲದೇ 106 ಮಂದಿಗೆ ನಕಲಿ ವಿಮಾನ ಟಿಕೆಟ್ ನೀಡಿ ಹಣ ಸಂಗ್ರಹಿಸಿ ವಂಚನೆಯಲ್ಲಿ ತೊಡಗಿರುವುದನ್ನು ಕಂಡು ಇಂಡಿಗೋ ಆಡಳಿತ ಮಂಡಳಿ ಸಹ ಬೆಚ್ಚಿಬಿದ್ದಿದೆ.

ಇದನ್ನೂ ಓದಿ :ರೆಸ್ಟೋರೆಂಟ್​ಗೆ 5 ಸ್ಟಾರ್ ರಿವ್ಯೂ ನೀಡುವ ಪಾರ್ಟ್ ಟೈಂ ಜಾಬ್ ಆಮಿಷ: ಲಕ್ಷಾಂತರ ವಂಚನೆ - Online Fraud Case

ABOUT THE AUTHOR

...view details