ETV Bharat / bharat

ಭಾರತದ ಪ್ರಜಾಪ್ರಭುತ್ವಕ್ಕೆ ರಾಹುಲ್​ ಗಾಂಧಿ ಕಪ್ಪು ಚುಕ್ಕೆ: ಬಿಜೆಪಿ ಆರೋಪ - BJP slams Rahul Gandhi

author img

By PTI

Published : Sep 9, 2024, 5:54 PM IST

ರಾಹುಲ್​ ಗಾಂಧಿ ಪ್ರಬುದ್ಧತೆ ಇಲ್ಲ. ಅವರೊಬ್ಬ ಅರೆಕಾಲಿಕ ನಾಯಕ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಬಿಜೆಪಿ ಆರೋಪಿಸಿದೆ.

rahul-gandhi-black-spot-in-indian-democracy-bjp
ರಾಹುಲ್​ ಗಾಂಧಿ (ಎಎನ್​ಐ)

BJP attack on Rahul Gandhi - ನವದೆಹಲಿ: ಭಾರತದ ಪ್ರಜಾಪ್ರಭುತ್ವದಲ್ಲಿ ರಾಹುಲ್​ ಗಾಂಧಿ ಒಬ್ಬರು ಕಪ್ಪು ಚುಕ್ಕೆ ಎಂದು ಬಿಜೆಪಿ ಟೀಕಿಸಿದೆ. ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ರಾಹುಲ್​ ಗಾಂಧಿ ಭಾರತದ ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಯತ್ನ ನಡೆಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್​ ಭಾಟಿಯಾ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್​ ಗಾಂಧಿ ಪ್ರಬುದ್ಧತೆ ಇಲ್ಲ. ಅವರೊಬ್ಬ ಅರೆಕಾಲಿಕ ನಾಯಕ ಎಂಬುದು ಎಲ್ಲರಿಗೂ ತಿಳಿದಿದೆ. ಆದರೂ, ಜನರು ಅವರಿಗೆ ವಿಪಕ್ಷ ಸ್ಥಾನದಂತಹ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಭಾರತದ ಪ್ರಜಾಪ್ರಭುತ್ವದಲ್ಲಿ ರಾಹುಲ್​ ಗಾಂಧಿ ಕಪ್ಪು ಚುಕ್ಕೆ ಎಂದು ಹೇಳಲು ಬೇಸರವಾಗುತ್ತದೆ. ವಿದೇಶಕ್ಕೆ ಭೇಟಿ ನೀಡಿದಾಗ ಅವರಿಗೆ ಹೇಗೆ ಮಾತನಾಡಬೇಕು ಎಂಬುದು ಸಹ ತಿಳಿದಿಲ್ಲ ಎಂದು ಟೀಕಿಸಿದರು.

ರಾಹುಲ್​ ಗಾಂಧಿ, ತಮ್ಮ ಭಾಷಣದಲ್ಲಿ ಚೀನಾದ ಬಗ್ಗೆ ಒಂದೇ ಒಂದು ಶಬ್ಧವನ್ನೂ ಅವರು ಮಾತನಾಡಲಿಲ್ಲ. ಭಾರತವನ್ನು ಅವರು ದುರ್ಬಲಗೊಳಿಸಿ, ಚೀನಾದ ಪರವಾಗಿದ್ದಾರೆ ಎಂದು ಟೀಕಿಸಿದ ಅವರು, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಚೀನಾದ ಜೊತೆಗೆ ಅವರ ಪಕ್ಷದ ಒಪ್ಪಂದ ಕುರಿತು ಮಾತನಾಡಿದರು.

ಆ ಒಪ್ಪಂದದ ಪರಿಣಾಮವಾಗಿ ಅವರು ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಯತ್ನ ಮಾಡಿದ್ದಾರೆ. ಚೀನಾದೊಂದಿಗೆ ಮಾಡಿಕೊಂಡಿರುವ ಆ ಒಪ್ಪಂದವನ್ನು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮತ್ತು ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಸಾರ್ವಜನಿಕಗೊಳಿಸುವಂತೆ ಸವಾಲು ಹಾಕುತ್ತೇನೆ ಎಂದು ಭಾಟಿಯಾ ಹೇಳಿದ್ದಾರೆ.

ರಾಜೀವ್ ಗಾಂಧಿ ಸುಪ್ರೀಂಕೋರ್ಟ್​ ತೀರ್ಪನ್ನೇ ವಜಾ ಮಾಡಿದ್ದನ್ನು ನೆನಪಿಸಿಕೊಳ್ಳಲಿ: ಬಿಜೆಪಿ ಮತ್ತು ಆರ್​ಎಸ್​ಎಸ್​ ಮಹಿಳೆಯರನ್ನು ಮನೆಯಲ್ಲಿಯೇ ನಿರ್ಬಂಧಿಸುವ, ಅಡುಗೆ ಮನೆಗೆ ಸೀಮಿತಗೊಳಿಸುವ ಉದ್ದೇಶ ಹೊಂದಿದೆ ಎಂಬ ಹೇಳಿಕೆ ಟೀಕಿಸಿದ ಕೇಂದ್ರ ಜವಳಿ ಸಚಿವ ಗಿರಿರಾಜ್​ ಸಿಂಗ್​, ಶಾ ಬಾನು ಪ್ರಕರಣದಲ್ಲಿ ಹೇಗೆ ಸುಪ್ರೀಂ ಕೋರ್ಟ್​ ವರದಿಯನ್ನು ಮಾಜಿ ಪ್ರಧಾನಿ ರಾಹುಲ್​ ಗಾಂಧಿ ವಜಾ ಮಾಡಿದರು ಎಂಬುದನ್ನು ನೆನಪಿಸಿಕೊಳ್ಳುವಂತೆ ತಿಳಿಸಿದರು.

ಆರ್​ಎಸ್​ಎಸ್​ ಪಾತ್ರ ತಿಳಿಯಬೇಕಾದರೆ, ಇತಿಹಾಸದ ಪುಟ ತಿರುವಿ ಹಾಕಬೇಕು. ರಾಹುಲ್​ ಗಾಂಧಿಗೆ ಇದಕ್ಕೆ ಜೀವನದಲ್ಲಿ ಹಲವು ವರ್ಷಗಳೇ ಬೇಕಾಗಬಹುದು. ರಾಹುಲ್​ ಗಾಂಧಿ ಭಾರತವನ್ನು ಅವಮಾನ ಮಾಡಲು ವಿದೇಶಕ್ಕೆ ಪ್ರಯಾಣಿಸಿದಂತೆ ಕಾಣುತ್ತದೆ ಎಂದು ಟೀಕಿಸಿದರು.

ಟೆಕ್ಸಾಸ್​ನಲ್ಲಿ ಭಾರತೀಯ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ರಾಹುಲ್​ ಗಾಂಧಿ, ಭಾರತ ರಾಜಕೀಯದಲ್ಲಿ ಪ್ರೀತಿ, ಗೌರವ, ನಮ್ರತೆ ಕಣ್ಮರೆಯಾಗಿದೆ ಎಂದು ಟೀಕಿಸಿದ್ದರು. ಅಷ್ಟೇ ಅಲ್ಲ ನಿರುದ್ಯೋಗ ಸೇರಿದಂತೆ ಹಲವು ವಿಚಾರಗಳ ಕುರಿತು ರಾಹುಲ್​ ಗಾಂಧಿ ಮಾತನಾಡಿ, ಭಾರತ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. (ಪಿಟಿಐ/ ಐಎಎನ್​ಎಸ್​)

ಇದನ್ನೂ ಓದಿ: 'ಭಾರತದ ರಾಜಕೀಯದಲ್ಲಿ ಪ್ರೀತಿ, ಗೌರವ ಕಣ್ಮರೆ': ಅಮೆರಿಕದಲ್ಲಿ ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ರಾಹುಲ್​ ಗಾಂಧಿ ವಾಗ್ದಾಳಿ

BJP attack on Rahul Gandhi - ನವದೆಹಲಿ: ಭಾರತದ ಪ್ರಜಾಪ್ರಭುತ್ವದಲ್ಲಿ ರಾಹುಲ್​ ಗಾಂಧಿ ಒಬ್ಬರು ಕಪ್ಪು ಚುಕ್ಕೆ ಎಂದು ಬಿಜೆಪಿ ಟೀಕಿಸಿದೆ. ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ರಾಹುಲ್​ ಗಾಂಧಿ ಭಾರತದ ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಯತ್ನ ನಡೆಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್​ ಭಾಟಿಯಾ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್​ ಗಾಂಧಿ ಪ್ರಬುದ್ಧತೆ ಇಲ್ಲ. ಅವರೊಬ್ಬ ಅರೆಕಾಲಿಕ ನಾಯಕ ಎಂಬುದು ಎಲ್ಲರಿಗೂ ತಿಳಿದಿದೆ. ಆದರೂ, ಜನರು ಅವರಿಗೆ ವಿಪಕ್ಷ ಸ್ಥಾನದಂತಹ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಭಾರತದ ಪ್ರಜಾಪ್ರಭುತ್ವದಲ್ಲಿ ರಾಹುಲ್​ ಗಾಂಧಿ ಕಪ್ಪು ಚುಕ್ಕೆ ಎಂದು ಹೇಳಲು ಬೇಸರವಾಗುತ್ತದೆ. ವಿದೇಶಕ್ಕೆ ಭೇಟಿ ನೀಡಿದಾಗ ಅವರಿಗೆ ಹೇಗೆ ಮಾತನಾಡಬೇಕು ಎಂಬುದು ಸಹ ತಿಳಿದಿಲ್ಲ ಎಂದು ಟೀಕಿಸಿದರು.

ರಾಹುಲ್​ ಗಾಂಧಿ, ತಮ್ಮ ಭಾಷಣದಲ್ಲಿ ಚೀನಾದ ಬಗ್ಗೆ ಒಂದೇ ಒಂದು ಶಬ್ಧವನ್ನೂ ಅವರು ಮಾತನಾಡಲಿಲ್ಲ. ಭಾರತವನ್ನು ಅವರು ದುರ್ಬಲಗೊಳಿಸಿ, ಚೀನಾದ ಪರವಾಗಿದ್ದಾರೆ ಎಂದು ಟೀಕಿಸಿದ ಅವರು, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಚೀನಾದ ಜೊತೆಗೆ ಅವರ ಪಕ್ಷದ ಒಪ್ಪಂದ ಕುರಿತು ಮಾತನಾಡಿದರು.

ಆ ಒಪ್ಪಂದದ ಪರಿಣಾಮವಾಗಿ ಅವರು ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಯತ್ನ ಮಾಡಿದ್ದಾರೆ. ಚೀನಾದೊಂದಿಗೆ ಮಾಡಿಕೊಂಡಿರುವ ಆ ಒಪ್ಪಂದವನ್ನು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮತ್ತು ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಸಾರ್ವಜನಿಕಗೊಳಿಸುವಂತೆ ಸವಾಲು ಹಾಕುತ್ತೇನೆ ಎಂದು ಭಾಟಿಯಾ ಹೇಳಿದ್ದಾರೆ.

ರಾಜೀವ್ ಗಾಂಧಿ ಸುಪ್ರೀಂಕೋರ್ಟ್​ ತೀರ್ಪನ್ನೇ ವಜಾ ಮಾಡಿದ್ದನ್ನು ನೆನಪಿಸಿಕೊಳ್ಳಲಿ: ಬಿಜೆಪಿ ಮತ್ತು ಆರ್​ಎಸ್​ಎಸ್​ ಮಹಿಳೆಯರನ್ನು ಮನೆಯಲ್ಲಿಯೇ ನಿರ್ಬಂಧಿಸುವ, ಅಡುಗೆ ಮನೆಗೆ ಸೀಮಿತಗೊಳಿಸುವ ಉದ್ದೇಶ ಹೊಂದಿದೆ ಎಂಬ ಹೇಳಿಕೆ ಟೀಕಿಸಿದ ಕೇಂದ್ರ ಜವಳಿ ಸಚಿವ ಗಿರಿರಾಜ್​ ಸಿಂಗ್​, ಶಾ ಬಾನು ಪ್ರಕರಣದಲ್ಲಿ ಹೇಗೆ ಸುಪ್ರೀಂ ಕೋರ್ಟ್​ ವರದಿಯನ್ನು ಮಾಜಿ ಪ್ರಧಾನಿ ರಾಹುಲ್​ ಗಾಂಧಿ ವಜಾ ಮಾಡಿದರು ಎಂಬುದನ್ನು ನೆನಪಿಸಿಕೊಳ್ಳುವಂತೆ ತಿಳಿಸಿದರು.

ಆರ್​ಎಸ್​ಎಸ್​ ಪಾತ್ರ ತಿಳಿಯಬೇಕಾದರೆ, ಇತಿಹಾಸದ ಪುಟ ತಿರುವಿ ಹಾಕಬೇಕು. ರಾಹುಲ್​ ಗಾಂಧಿಗೆ ಇದಕ್ಕೆ ಜೀವನದಲ್ಲಿ ಹಲವು ವರ್ಷಗಳೇ ಬೇಕಾಗಬಹುದು. ರಾಹುಲ್​ ಗಾಂಧಿ ಭಾರತವನ್ನು ಅವಮಾನ ಮಾಡಲು ವಿದೇಶಕ್ಕೆ ಪ್ರಯಾಣಿಸಿದಂತೆ ಕಾಣುತ್ತದೆ ಎಂದು ಟೀಕಿಸಿದರು.

ಟೆಕ್ಸಾಸ್​ನಲ್ಲಿ ಭಾರತೀಯ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ರಾಹುಲ್​ ಗಾಂಧಿ, ಭಾರತ ರಾಜಕೀಯದಲ್ಲಿ ಪ್ರೀತಿ, ಗೌರವ, ನಮ್ರತೆ ಕಣ್ಮರೆಯಾಗಿದೆ ಎಂದು ಟೀಕಿಸಿದ್ದರು. ಅಷ್ಟೇ ಅಲ್ಲ ನಿರುದ್ಯೋಗ ಸೇರಿದಂತೆ ಹಲವು ವಿಚಾರಗಳ ಕುರಿತು ರಾಹುಲ್​ ಗಾಂಧಿ ಮಾತನಾಡಿ, ಭಾರತ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. (ಪಿಟಿಐ/ ಐಎಎನ್​ಎಸ್​)

ಇದನ್ನೂ ಓದಿ: 'ಭಾರತದ ರಾಜಕೀಯದಲ್ಲಿ ಪ್ರೀತಿ, ಗೌರವ ಕಣ್ಮರೆ': ಅಮೆರಿಕದಲ್ಲಿ ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ರಾಹುಲ್​ ಗಾಂಧಿ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.