ಕರ್ನಾಟಕ

karnataka

ETV Bharat / bharat

ಒಂದೇ ದಿನದ ಅಂತರದಲ್ಲಿ ಸೇನಾ ದಂಪತಿ ಆತ್ಮಹತ್ಯೆ: ಒಟ್ಟಿಗೆ ಅಂತ್ಯಸಂಸ್ಕಾರ ಮಾಡುವಂತೆ 'ಡೆತ್​​ನೋಟ್​​'

ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ ದಂಪತಿ ಒಂದೇ ದಿನದ ಅಂತರದಲ್ಲಿ ಪ್ರತ್ಯೇಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಅಚ್ಚರಿಯ ಜೊತೆಗೆ ಆಘಾತ ತಂದಿದೆ. ಈ ಬಗ್ಗೆ ಸೇನೆ ತನಿಖೆ ನಡೆಸುತ್ತಿದೆ.

By ETV Bharat Karnataka Team

Published : 5 hours ago

ಒಂದೇ ದಿನದ ಅಂತರದಲ್ಲಿ ಸೇನಾ ದಂಪತಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ (ETV Bharat)

ನವದೆಹಲಿ:ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇಬ್ಬರು ಅಧಿಕಾರಿ ದಂಪತಿ ಒಂದೇ ದಿನದ ಅಂತರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾವುದೋ ಕಾರಣಕ್ಕಾಗಿ ವಾಯುಪಡೆಯ ಫ್ಲೈಟ್​ ಲೆಫ್ಟಿನೆಂಟ್​ ಆಗಿದ್ದ ಪತಿ ಸಾವಿನ ಸುದ್ದಿ ಕೇಳಿ, ಮರುದಿನವೇ ಸೇನಾ ಕ್ಯಾಪ್ಟನ್ ಆಗಿದ್ದ ಪತ್ನಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಾಯುಪಡೆಯಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿದ್ದ ದೀನದಯಾಳ್ ದೀಪ್ ಅವರು ಅಕ್ಟೋಬರ್ 14ರ ರಾತ್ರಿ ಆಗ್ರಾ ಏರ್ ಫೋರ್ಸ್ ಸ್ಟೇಷನ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಅವರ ಪತ್ನಿ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿರುವ ರೇಣು ತನ್ವರ್ ಅವರಿಗೆ ಮಾಹಿತಿ ನೀಡಲಾಗಿತ್ತು. ಇದರಿಂದ ಆಘಾತಗೊಂಡ ಅವರು ಮರುದಿನ ಅಂದರೆ, ಅಕ್ಟೋಬರ್​ 15ರಂದು ರಾತ್ರಿ ದೆಹಲಿಯ ನಿವಾಸದಲ್ಲಿ ತಮ್ಮ ಜೀವನವನ್ನು ಅಂತ್ಯಗೊಳಿಸಿದ್ದಾರೆ.

ಏನಾಯ್ತು?:ಆಗ್ರಾ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿರುವ ದೀನದಯಾಳ್ ದೀಪ್(32) ಅವರು ರಾಜಸ್ಥಾನದ ಮೂಲದ ರೇಣು ತನ್ವರ್ ಅವರನ್ನು 2022ರಲ್ಲಿ ವಿವಾಹವಾಗಿದ್ದರು. ರೇಣು ಅವರು ಆಗ್ರಾದಲ್ಲಿ ಮಿಲಿಟರಿ ನರ್ಸಿಂಗ್ ಸರ್ವಿಸ್​ (MNS)ನಲ್ಲಿ ಕ್ಯಾಪ್ಟನ್ ಆಗಿದ್ದಾರೆ. ಸೇನಾ ದಂಪತಿ ಇಲ್ಲಿನ ವಾಯುಪಡೆಯ ಕ್ಯಾಂಪಸ್‌ನಲ್ಲಿ ವಾಸವಾಗಿದ್ದರು.

ಅಕ್ಟೋಬರ್​ 14 (ಸೋಮವಾರ) ರಂದು ದೀನ್​ದಯಾಳ್​ ಅವರು ರಾತ್ರಿ ಊಟ ಮಾಡಿಕೊಂಡು ಮಲಗಲು ತೆರಳಿದ್ದರು. ಈ ವೇಳೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ ಸಿಬ್ಬಂದಿ ಬಾಗಿಲು ತಟ್ಟಿದ್ದಾರೆ. ಪ್ರತಿಕ್ರಿಯಿಸದಿದ್ದಾಗ, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಾಗಿಲು ಮುರಿದು ನೋಡಿದಾಗ ದೀಪ್ ಅವರ ಮೃತದೇಹ ಪತ್ತೆಯಾಗಿತ್ತು. ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ.

ಇದೇ ವೇಳೆ, ಕ್ಯಾಪ್ಟನ್​ ರೇಣು ಅವರು ಅನಾರೋಗ್ಯಪೀಡಿತ ತಾಯಿಗೆ ಚಿಕಿತ್ಸೆ ಕೊಡಿಸಲು ದೆಹಲಿಗೆ ತೆರಳಿದ್ದರು. ಏಮ್ಸ್​ ಆಸ್ಪತ್ರೆಯಲ್ಲಿದ್ದಾಗ ಅಧಿಕಾರಿಗಳು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರಿಂದ ರೇಣು ಅವರು ಆಘಾತಗೊಂಡಿದ್ದರು. ಅದೇ ದಿನ ರಾತ್ರಿ ಉಳಿದುಕೊಂಡಿದ್ದ ದೆಹಲಿಯ ಕಂಟೋನ್ಮೆಂಟ್​ನ ಅತಿಥಿ ಗೃಹದಲ್ಲಿ ಅವರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ಬೆಳಗ್ಗೆ ಕೆಯ ಶವ ಪತ್ತೆಯಾಗಿದೆ.

ಗಂಡನ ಕೈ ಮೇಲೆ ನನ್ನ ಕೈ ಇಟ್ಟು ಅಂತ್ಯಕ್ರಿಯೆ ಮಾಡಿ:ಒಂದೇ ದಿನದ ಅಂತರದಲ್ಲಿ ಇಬ್ಬರು ಸೇನಾಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು ಸೇನೆ ಮತ್ತು ಕುಟುಂಬಸ್ಥರಲ್ಲಿ ತೀವ್ರ ದುಃಖ ಉಂಟು ಮಾಡಿದೆ. ರೇಣು ಅವರ ಕೋಣೆಯಲ್ಲಿ ಡೆತ್​​ನೋಟ್​​​ ಸಿಕ್ಕಿದೆ. ಅದರಲ್ಲಿ 'ತನ್ನ ಪತಿಯ ಜೊತೆಗೆ ನನ್ನನ್ನೂ ಅಂತ್ಯಸಂಸ್ಕಾರ ಮಾಡಿ. ಪತಿಯ ಕೈ ಮೇಲೆ ನನ್ನ ಕೈ ಇಡಿ' ಎಂದು ಬರೆಯಲಾಗಿದೆ.

ಕ್ಯಾಪ್ಟನ್​​ ರೇಣು ಅವರ ಪಾರ್ಥಿವ ಶರೀರವನ್ನೂ ಆಗ್ರಾಕ್ಕೆ ತರಲಾಗಿದೆ. ಫ್ಲೈಟ್ ಲೆಫ್ಟಿನೆಂಟ್ ಮತ್ತು ಅವರ ಪತ್ನಿಯ ಮೃತದೇಹಗಳನ್ನು ಆಗ್ರಾದ ವಾಯುಪಡೆಯ ಆವರಣದಲ್ಲಿ ಇರಿಸಿ ಸೇನಾ ಗೌರವ ಸಲ್ಲಿಸಲಾಗಿದೆ. ಅಂತ್ಯಕ್ರಿಯೆಗಾಗಿ ಕುಟುಂಬಸ್ಥರು ನಳಂದ ಜಿಲ್ಲೆಯ ಮೊರಾರಾ ಗ್ರಾಮಕ್ಕೆ ಕೊಂಡೊಯ್ದಿದ್ದಾರೆ. ಸೇನಾಧಿಕಾರಿಗಳು ದಂಪತಿಯ ಆತ್ಮಹತ್ಯೆ ಹಿಂದಿನ ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಜಾರ್ಖಂಡ್​, ಮಹಾರಾಷ್ಟ್ರ ಚುನಾವಣೆಗೆ ಆಪ್‌ ಸ್ಪರ್ಧೆ ಡೌಟ್‌: 'ಇಂಡಿಯಾ' ಬೆಂಬಲಿಸುವ ಸಾಧ್ಯತೆ

ABOUT THE AUTHOR

...view details