ಕರ್ನಾಟಕ

karnataka

ETV Bharat / bharat

ರಾಜಸ್ಥಾನ ಉಪ ಚುನಾವಣೆಗೆ ಕೈ ಅಭ್ಯರ್ಥಿ ಪಟ್ಟಿ ಪ್ರಕಟ: ಉ.ಪ್ರದೇಶದಲ್ಲಿ ಸೈಕಲ್​ ಚಿಹ್ನೆಯಡಿ ಮೈತ್ರಿ ಅಭ್ಯರ್ಥಿಗಳು ಸ್ಪರ್ಧೆ

ಉತ್ತರ ಪ್ರದೇಶ, ಕೇರಳದಲ್ಲಿ ಮೈತ್ರಿ ಪಕ್ಷಗಳೊಂದಿಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್​ ರಾಜಸ್ಥಾನದಲ್ಲಿ ಯಾವುದೇ ಪ್ರಾದೇಶಿಕ ಪಕ್ಷಗಳೊಂದಿಗೆ ಉಪಚುನಾವಣೆ ಮೈತ್ರಿ ಮಾಡಿಕೊಂಡಿಲ್ಲ.

Congress Unveils Candidates For Rajasthan in UP INDIA bloc will contest in Cycle Symbol
ಕಾಂಗ್ರೆಸ್​ ಚಿಹ್ನೆ (ಸಂಗ್ರಹ ಚಿತ್ರ ETV Bharat)

By ETV Bharat Karnataka Team

Published : 4 hours ago

ಜೈಪುರ: ರಾಜಸ್ಥಾನದ ಏಳು ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಗಳಿಗೆ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬುಧವಾರ ತಡರಾತ್ರಿ ಎಐಸಿಸಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಹಾಲಿ ಸಂಸದ ಬ್ರಿಜೇಂದ್ರ ಓಲಾ ಪುತ್ರ ಅಮಿತ್ ಓಲಾ ಅವರು ಜುಂಜುನು ಮತ್ತು ಆರ್ಯನ್ ಖಾನ್ ಅವರಿಗೆ ಟಿಕೆಟ್​ ನೀಡಿದೆ.

ರಾಮಗಢ ಕ್ಷೇತ್ರದ ಅಭ್ಯರ್ಥಿ ಜುಬೇರ್​ ಖಾನ್​ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ಅವರ ಮಗನಿಗೆ ಟಿಕೆಟ್​ ನೀಡಲಾಗಿದೆ. ದೌಸಾದಿಂದ ದೀನದಯಾಳ್ ಬೈರ್ವಾ ಪಕ್ಷವನ್ನು ಪ್ರತಿನಿಧಿಸಿದರೆ, ಕಸ್ತೂರ್ ಚಂದ್ ಮೀನಾ, ರತನ್ ಚೌಧರಿ, ಮಹೇಶ್ ರೋಟ್ ಮತ್ತು ರೇಷ್ಮಾ ಮೀನಾ ಕ್ರಮವಾಗಿ ದಿಯೋಲಿ - ಉನಿಯಾರಾ, ಖಿನ್ವಸರ್, ಚೋರಾಸಿ ಮತ್ತು ಸಾಲುಂಬರ್‌ಗೆ ಟಿಕೆಟ್​ ನೀಡಲಾಗಿದೆ.

ಕಾಂಗ್ರೆಸ್​ ಏಕಾಂಗಿ ಸ್ಪರ್ಧೆ: ಉತ್ತರ ಪ್ರದೇಶ, ಕೇರಳದಲ್ಲಿ ಮೈತ್ರಿ ಪಕ್ಷಗಳೊಂದಿಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್​ ಇಲ್ಲಿ ಯಾವುದೇ ಪ್ರಾದೇಶಿಕ ಪಕ್ಷಗಳೊಂದಿಗೆ ಉಪ ಚುನಾವಣೆ ಮೈತ್ರಿ ಮಾಡಿಕೊಂಡಿಲ್ಲ. ಇನ್ನು ಏಳರಲ್ಲಿ 4 ಸ್ಥಾನಗಳು ಈ ಹಿಂದೆ ಕಾಂಗ್ರೆಸ್​ ವಶದಲ್ಲಿದ್ದರೆ, ಒಂದು ಕ್ಷೇತ್ರ ಭಾರತ್​ ಆದಿವಾಸಿ ಪಕ್ಷ (ಬಿಎಪಿ) ಮತ್ತೊಂದು ಬಿಜೆಪಿ ವಶದಲ್ಲಿದೆ.

ಇನ್ನು ಬಿಜೆಪಿ ಕೂಡ ಚರೋಸಿ ಹೊರತು ಪಡಿಸಿ ಇನ್ನುಳಿದ ಆರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ನವೆಂಬರ್​ 13ರಂದು ರಾಜಸ್ಥಾನದಲ್ಲಿ ನಡೆಯುತ್ತಿರುವ ಉಪಚುನಾವಣೆಗಳಿಗೆ ನಾಮಪತ್ರ ಸಲ್ಲಿಸಲು ಅಕ್ಟೋಬರ್​ 25 ಕಡೇ ದಿನವಾಗಿದೆ. ಈ ಚುನಾವಣೆ ಫಲಿತಾಂಶ ನವೆಂಬರ್​ 23ರಂದು ಹೊರ ಬೀಳಲಿದೆ

ನಿಧನದಿಂದ ತೆರವಾದ ಕ್ಷೇತ್ರಗಳು:ರಾಮಗಢದಲ್ಲಿ ಕಾಂಗ್ರೆಸ್‌ನ ಜುಬೇರ್ ಖಾನ್ ಮತ್ತು ಸಾಲುಂಬಾರ್‌ನಲ್ಲಿ ಬಿಜೆಪಿಯ ಅಮೃತಲಾಲ್ ಮೀನಾ ನಿಧನದಿಂದ ಈ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಇನ್ನು ಉಳಿದ ಐದು ಕ್ಷೇತ್ರದಲ್ಲಿ ಶಾಸಕರು ಸಂಸದರಾಗಿ ಆಯ್ಕೆಯಾದ ಹಿನ್ನೆಲೆ ಈ ಕ್ಷೇತ್ರದಲ್ಲಿ ಸ್ಥಾನ ತೆರವಾಗಿದ್ದು, ಚುನಾವಣೆ ಅನಿವಾರ್ಯವಾಗಿದೆ.

ಸೈಕಲ್​ ಚಿಹ್ನೆಯಡಿ ಇಂಡಿಯಾ ಒಕ್ಕೂಟ ಸ್ಪರ್ಧೆ:ಉತ್ತರ ಪ್ರದೇಶದ ಚುನಾವಣೆಯಲ್ಲಿ ಸಾಂಪ್ರದಾಯಿಕ ಸೀಟು ಹಂಚಿಕೆ ಬದಲಾಗಿ ಗೆಲುವು ಪ್ರಮುಖವಾಗಿದೆ. ಈ ಹಿನ್ನೆಲೆ ಉಪ ಚುನಾವಣೆಗೆ ಇಂಡಿಯಾ ಬ್ಲಾಕ್​ ಅಭ್ಯರ್ಥಿಗಳು ಸೈಕಲ್​ ಚಿಹ್ನೆಯಡಿ ಸ್ಪರ್ಧೆ ಮಾಡಲಿದ್ದಾರೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್​ ಯಾದವ್​ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್​​ ದೊಡ್ಡ ಜಯಕ್ಕಾಗಿ ಕಾಂಗ್ರೆಸ್​ ಮತ್ತು ಸಮಾಜವಾದಿ ಪಕ್ಷ ಒಗ್ಗಟ್ಟಾಗಿದ್ದು, ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ. ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಇಂಡಿಯಾ ಬ್ಲಾಕ್ ಹೊಸ ಗೆಲುವಿನ ಅಧ್ಯಾಯ ಬರೆಯಲಿದೆ. ಒಟ್ಟಾಗಿ ನಡೆಸುವ ಈ ಪ್ರಯತ್ನ ಮತ್ತು ಬೆಂಬಲದಿಂದ 9 ಕ್ಷೇತ್ರದಲ್ಲೂ ಗೆಲುವು ಸಾಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ​ಉತ್ತರ ಪ್ರದೇಶದಲ್ಲಿ 9 ಸ್ಥಾನಗಳಿಗೆ ಉಪ ಚುನಾವಣೆ ನಡೆಯುತ್ತಿದೆ.

ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣೆ: ಮಹಾ ವಿಕಾಸ್​ ಅಘಾಡಿ ಮಧ್ಯೆ 85-85-85 ಸೂತ್ರದ ಸೀಟು ಹಂಚಿಕೆ

ABOUT THE AUTHOR

...view details