ಗಾಂಧಿನಗರ (ಗುಜರಾತ್): ಒಂದೆಡೆ ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಹಲವು ಗ್ರಾಮಗಳ ಜನಜೀವನ ಅಸ್ತವ್ಯಸ್ತವಾಗಿದ್ದರೆ, ಮತ್ತೊಂದೆಡೆ ರಾಜ್ಯದಲ್ಲಿ ಚಂಡೀಪುರ ವೈರಸ್ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿವೆ. ಇದುವರೆಗೆ ರಾಜ್ಯದಲ್ಲಿ ಸುಮಾರು 124 ಶಂಕಿತ ಚಂಡಿಪುರ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 37 ಪ್ರಕರಣಗಳು ದೃಢಪಟ್ಟಿವೆ. ಇದುವರೆಗೆ ಸೋಂಕಿನಿಂದ 44 ಜನರು ಸಾವನ್ನಪ್ಪಿದ್ದಾರೆ.
ವೈರಲ್ ಎನ್ಸೆಫಾಲಿಟಿಸ್ ಸಿಂಡ್ರೋಮ್ನೊಂದಿಗೆ ಆಸ್ಪತ್ರೆಗಳಿಗೆ ದಾಖಲಾದ 54 ರೋಗಿಗಳಲ್ಲಿ 26 ರೋಗಿಗಳನ್ನು ತೃಪ್ತಿದಾಯಕ ಚೇತರಿಕೆಯ ನಂತರ ಬಿಡುಗಡೆ ಮಾಡಲಾಗಿದೆ. ಪಂಚಮಹಲ್ ಜಿಲ್ಲೆ ಹಾಗೂ ಸಬರ್ಕಾಂತ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಪಂಚಮಹಲ್ ಜಿಲ್ಲೆಯಲ್ಲಿ 15 ಶಂಕಿತ ಪ್ರಕರಣಗಳು ದಾಖಲಾಗಿದ್ದು, ಸಬರ್ಕಾಂತ ಮತ್ತು ಅಹಮದಾಬಾದ್ ಕಾರ್ಪೋರೇಷನ್ಗಳಲ್ಲಿ ತಲಾ 12 ಪ್ರಕರಣಗಳು ಪತ್ತೆಯಾಗಿವೆ. ಅರಾವಳಿಯಲ್ಲಿ 9, ಮಹಿಸಾಗರ್ 2, ಖೇಡಾ 6, ಮೆಹ್ಸಾನಾ 7, ರಾಜ್ಕೋಟ್ 5, ಸುರೇಂದ್ರನಗರ 4, ಗಾಂಧಿನಗರ 6, ಜಾಮ್ನಗರ 6, ಮೊರ್ಬಿ 5, ಗಾಂಧಿನಗರ ಕಾರ್ಪೋರೇಷನ್ 3, ಛೋಟೌಡೆಪುರ 2, ದಾಹೋದ್ 2, ವಡೋದರಾ 6, ನರ್ಮದಾ 2, ಬನಸ್ಕಾಂತ 5, ವಡೋದರಾ ಕಾರ್ಪೋರೇಷನ್ 2, ಭಾವನಗರ 1, ದೇವಭೂಮಿ ದ್ವಾರಕಾ 1, ರಾಜ್ಕೋಟ್ ಕಾರ್ಪೋರೇಷನ್ 4, ಕಚ್ 3, ಸೂರತ್ ಕಾರ್ಪೋರೇಷನ್ 2, ಭರೂಚ್ 3, ಅಹಮದಾಬಾದ್ 1 ಮತ್ತು ಜಾಮ್ನಗರ ಕಾರ್ಪೋರೇಷನ್ 1 ಪ್ರಕರಣಗಳು ದಾಖಲಾಗಿವೆ.
ಪ್ರಕರಣ ದೃಢಪಟ್ಟ ಜಿಲ್ಲೆಗಳು: ಇಲ್ಲಿಯವರೆಗೆ ಇಲ್ಲಿ 37 ದೃಢಪಟ್ಟ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಸಬರ್ಕಾಂತ ಮತ್ತು ಪಂಚಮಹಲ್ನಲ್ಲಿ ತಲಾ 6, ಮೆಹ್ಸಾನಾದಲ್ಲಿ ನಾಲ್ಕು ಮತ್ತು ಅರಾವಳಿ, ಖೇಡಾ ಮತ್ತು ಅಹಮದಾಬಾದ್ ಕಾರ್ಪೊರೇಷನ್ನಲ್ಲಿ ತಲಾ ಮೂರು ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಮಹಿಸಾಗರ್, ರಾಜ್ಕೋಟ್, ಸುರೇಂದ್ರನಗರ, ಗಾಂಧಿನಗರ, ಜಾಮ್ನಗರ, ಮೊರ್ಬಿ, ದಾಹೋದ್, ವಡೋದರಾ, ಬನಸ್ಕಾಂತ, ದೇವಭೂಮಿ ದ್ವಾರಕಾ ಮತ್ತು ರಾಜ್ಕೋಟ್ ಕಾರ್ಪೊರೇಷನ್ನಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ.
ಸಾವನ್ನಪ್ಪಿದವರ ಸಂಖ್ಯೆ: ಇದುವರೆಗೆ ಚಂಡೀಪುರ ವೈರಸ್ನಿಂದ ಸಾವನ್ನಪ್ಪಿದವರ ಸಂಖ್ಯೆ 44ಕ್ಕೆ ಏರಿದೆ. ಅದರಲ್ಲಿ ಸಬರ್ಕಾಂತದಿಂದ ಇಬ್ಬರು, ಅರಾವಳಿಯಿಂದ ಮೂರು, ಮಹಿಸಾಗರದಿಂದ ಎರಡು, ಖೇಡಾದಿಂದ ಎರಡು, ಮೆಹ್ಸಾನಾದಿಂದ ಎರಡು, ರಾಜ್ಕೋಟ್ನಿಂದ ಮೂರು, ಸುರೇಂದ್ರನಗರದಿಂದ ಒಂದು, ಅಹಮದಾಬಾದ್ ಕಾರ್ಪೊರೇಷನ್ನಿಂದ ನಾಲ್ಕು, ಗಾಂಧಿನಗರದಿಂದ ಎರಡು, ಪಂಚಮಹಲ್ನಿಂದ ಐದು, ಜಾಮ್ನಗರದಿಂದ ಇಬ್ಬರು ಸಾವನ್ನಪ್ಪಿದ್ದಾರೆ. ಮೋರ್ಬಿಯಿಂದ ಮೂರು, ಗಾಂಧಿನಗರ ಕಾರ್ಪೊರೇಷನ್ನಿಂದ ಇಬ್ಬರು, ದಾಹೋದ್ನಿಂದ ಇಬ್ಬರು, ವಡೋದರಾದಿಂದ ಒಬ್ಬರು, ನರ್ಮದಾದಿಂದ ಒಬ್ಬರು, ಬನಸ್ಕಾಂತದಿಂದ ಮೂರು, ವಡೋದರಾ ಕಾರ್ಪೊರೇಷನ್ನಿಂದ ಒಬ್ಬರು, ದೇವಭೂಮಿ ದ್ವಾರಕಾದಿಂದ ಒಬ್ಬರು, ಸೂರತ್ ಕಾರ್ಪೊರೇಷನ್ನಿಂದ ಒಬ್ಬರು ಮತ್ತು ಜಾಮ್ನಗರ ಪಾಲಿಕೆಯಿಂದ ಒಬ್ಬರು ಸಾವನ್ನಪ್ಪಿದ್ದಾರೆ.