ಕರ್ನಾಟಕ

karnataka

By ETV Bharat Karnataka Team

Published : Mar 23, 2024, 9:25 AM IST

ETV Bharat / bharat

ಛತ್ತೀಸ್​ಗಡ್​​ದಲ್ಲಿ​ ಉದ್ಯಮಿ ಅಭಿಷೇಕ್ ಕೇಸರವಾಣಿ ಹತ್ಯೆ ಪ್ರಕರಣ: ಬೆಂಗಳೂರಲ್ಲಿ ಆರೋಪಿ ಬಂಧನ - Businessman murder case

ಸಾರಂಗಗಢದಲ್ಲಿ ಉದ್ಯಮಿ ಅಭಿಷೇಕ್ ಕೇಸರವಾಣಿ ಅವರ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಅಕ್ರಮ ಸಂಬಂಧದ ಶಂಕೆಯಲ್ಲಿ ಉದ್ಯಮಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬೆಂಗಳೂರಿನಿಂದ ಪೊಲೀಸರು ಬಂಧಿಸಿದ್ದಾರೆ.

Businessman Kesaravani murder case  he accused has been arrested
ಉದ್ಯಮಿ ಅಭಿಷೇಕ್ ಕೇಸರವಾಣಿ ಹತ್ಯೆ ಪ್ರಕರಣ: ಕರ್ನಾಟಕದ ಬೆಂಗಳೂರಿನಿಂದ ಆರೋಪಿ ಬಂಧನ

ಸಾರಂಗಢ (ಛತ್ತೀಸ್‌ಗಡ್):ಕೆಲ ದಿನಗಳ ಹಿಂದೆ ಕೊಸಬಾಡಿ ಪ್ರದೇಶದಲ್ಲಿ ಉದ್ಯಮಿಯೊಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು. ಈ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ಪೊಲೀಸರ ಪ್ರಕಾರ, ಉದ್ಯಮಿಯು ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಮಹಿಳೆಯ ಪುತ್ರ ತನ್ನ ತಾಯಿಗೆ ಉದ್ಯಮಿಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿದ್ದಾನೆ. ಮಹಿಳೆಯ ಪುತ್ರ ಉದ್ಯಮಿಯನ್ನು ಕೊಲೆ ಮಾಡಲು ಯೋಜನೆ ಸಿದ್ಧಪಡಿಸಿದ್ದ. ಉದ್ಯಮಿ ಕೊಸಬರಿಯಿಂದ ಹೊರಡಲು ಮುಂದಾಗಿರುವ ವಿಚಾರ ತಿಳಿದ ತಕ್ಷಣ ಆರೋಪಿ ಅಲ್ಲಿಗೆ ತೆರಳಿ ತಲೆಮರೆಸಿಕೊಂಡಿದ್ದರು. ಮಾ.15ರಂದು ಉದ್ಯಮಿ ಕೇಸರವಾಣಿ ಕೊಸಬರಿಗೆ ಆಗಮಿಸಿದ ತಕ್ಷಣ ಯುವಕ ಏನೋ ಕೇಳುವ ನೆಪದಲ್ಲಿ ಆತನನ್ನು ತಡೆದಿದ್ದಾನೆ. ಅಲ್ಲದೆ ತಕ್ಷಣ ಯುವಕ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ದಾಳಿಯಲ್ಲಿ ಉದ್ಯಮಿ ಕೇಸರವಾಣಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕನಿಗೆ ಅನುಮಾನ ಬಂದಿದ್ದು ಹೇಗೆ?:ಪೊಲೀಸರ ಪ್ರಕಾರ, ಹಂತಕನ ತಾಯಿ ಒಂದು ದಿನ ಸರಸಿನ್ವಾಗೆ ಹೋಗಿದ್ದರು. ಮಹಿಳೆಯ ಪುತ್ರ ಸಾರಸಿನ್ವಾದಲ್ಲಿ ಇದ್ದನು. ಸರಸಿನ್ವಾದಲ್ಲಿ ಮಹಿಳೆಯೊಂದಿಗೆ ಉದ್ಯಮಿಯನ್ನು ನೋಡಿದ ನಂತರ ಯುವಕ ಕೋಪಗೊಂಡಿದ್ದಾನೆ. ಆ ಉದ್ಯಮಿಯನ್ನು ಕೊಲ್ಲಲೇಬೇಕು ಎಂದು ಆ ಕ್ಷಣವೇ ನಿರ್ಧರಿಸಿದ್ದ. ಯುವಕನಿಗೆ ಕೋಸಬರಿಯಲ್ಲಿ ಅವಕಾಶ ಸಿಕ್ಕಿತು. ಮತ್ತು ಆತ ಉದ್ಯಮಿಯನ್ನು ಕೊಲೆ ಮಾಡಿದನು. ಕೊಲೆ ಮಾಡಿದ ನಂತರ, ಆರೋಪಿ ಬೈಕಿನಲ್ಲಿ ರಾಯಪುರಕ್ಕೆ ಪರಾರಿಯಾಗಿದ್ದನು. ರಾಯಪುರ ತಲುಪಿದ ನಂತರ ಅವನು ರೈಲಿನಲ್ಲಿ ಕರ್ನಾಟಕಕ್ಕೆ ಹೋಗಿದ್ದಾನೆ.

ಸೈಬರ್ ತಂಡದ ಸಹಾಯದಿಂದ ಯುವಕನ ಮಾಹಿತಿ ತಿಳಿದ ತಕ್ಷಣ ಪೊಲೀಸರು ತಂಡ ರಚಿಸಿ ಬೆಂಗಳೂರಿಗೆ ಬಂದಿದ್ದು, ಅಲ್ಲಿ ಆರೋಪಿ ಯುವಕನನ್ನು ಬಂಧಿಸಲಾಗಿದೆ ಎಂದು ಸಾರಂಗರ್ ಪೊಲೀಸ್ ವರಿಷ್ಠಾಧಿಕಾರಿ ಪುಷ್ಕರ್ ಶರ್ಮಾ ತಿಳಿಸಿದ್ದಾರೆ.

ಕೊಲೆ ಮಾಡಿದ ಆರೋಪಿ ಕರ್ನಾಟಕಕ್ಕೆ ಪರಾರಿ:ಕೊಲೆ ಘಟನೆ ಬಳಿಕ ಆರೋಪಿ ಬೈಕ್​ನಲ್ಲಿ ರಾಯಪುರ ತಲುಪಿ ಅಲ್ಲಿಂದ ಕರ್ನಾಟಕಕ್ಕೆ ಪರಾರಿಯಾಗಿದ್ದ. ಕೊತ್ವಾಲಿ ಪೊಲೀಸರಿಗೆ ಸುಳಿವು ಸಿಗುತ್ತಿದ್ದಂತೆ ಆರೋಪಿಯನ್ನು ಬಲೆಗೆ ಬೀಳಿಸಲು ಯತ್ನಿಸಿದ್ದರು. ಮಾರ್ಚ್ 21 ರಂದು ಕರ್ನಾಟಕದ ಬೆಂಗಳೂರಿನಿಂದ ಆರೋಪಿ ಯುವಕನನ್ನು ಬಂಧಿಸಿದ ಪೊಲೀಸ್ ತಂಡವು ಮಾರ್ಚ್ 22 ಶುಕ್ರವಾರದಂದು ಪತ್ರಿಕಾಗೋಷ್ಠಿ ನಡೆಸಿ ಸಂಪೂರ್ಣ ವಿಷಯವನ್ನು ಬಹಿರಂಗಪಡಿಸಿತು.

ಇದನ್ನೂ ಓದಿ:ಮಧ್ಯಪ್ರದೇಶ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ಕೋರ್ಟ್ ನಿರಾಕರಣೆ: ಭೋಜ್​ಶಾಲಾದಲ್ಲಿ ಎಎಸ್ಐ ಸಮೀಕ್ಷೆ ಶುರು - ASI to survey Bhojshala

ABOUT THE AUTHOR

...view details