ಕರ್ನಾಟಕ

karnataka

ETV Bharat / bharat

ಬಿಹಾರದಲ್ಲಿ ಕಳ್ಳಭಟ್ಟಿ ಸೇವಿಸಿ 28 ಮಂದಿ ಸಾವು: ದೃಷ್ಟಿ ಕಳೆದುಕೊಂಡ ಹಲವರು: ಇಬ್ಬರ ಬಂಧನ, ತನಿಖೆಗೆ ಆದೇಶ

ಬಿಹಾರ ನಕಲಿ ಮದ್ಯ ಸೇವನೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 28ಕ್ಕೆ ಏರಿಕೆ ಆಗಿದೆ. ಹಲವರ ಸ್ಥಿತಿ ಚಿಂತಾಜನಕವಾಗಿದೆ. ಕೆಲವರು ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

By ETV Bharat Karnataka Team

Published : 4 hours ago

Bh_sw_01_22_death_due_to_liqure
ಬಿಹಾರದಲ್ಲಿ ನಕಲಿ ಮದ್ಯಸೇವಿಸಿ 27 ಮಂದಿ ಸಾವು: ಇಬ್ಬರ ಬಂಧನ, ತನಿಖೆಗೆ ಆದೇಶ (ETV Bharat)

ಸಿವಾನ್/ಛಾಪ್ರಾ, ಬಿಹಾರ: ಬಿಹಾರದಲ್ಲಿ ಕಳ್ಳಭಟ್ಟಿ ಸೇವಿಸಿ ಸಾವನ್ನಪ್ಪುತ್ತಿರುವವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಲೇ ಇದೆ. ಬುಧವಾರದಿಂದ ಇಲ್ಲಿಯವರೆಗೆ 28 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದಲ್ಲದೇ ಹತ್ತಾರು ಮಂದಿ ದೃಷ್ಟಿ ಕಳೆದುಕೊಂಡಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ಹಲವರನ್ನು ಪಾಟ್ನಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಜಿಲ್ಲಾಡಳಿತಗಳು ಮಾತ್ರ ಸಿವಾನ್‌ನಲ್ಲಿ ಕೇವಲ 4 ಮತ್ತು ಛಾಪ್ರಾದಲ್ಲಿ 2 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿವೆ.

ಸಿವಾನ್‌ನಲ್ಲಿ 24 ಜನರ ಸಾವು: ಸಿವಾನ್‌ನಲ್ಲಿ ಸಾವಿನ ಸಂಖ್ಯೆ 24 ಕ್ಕೆ ಏರಿದೆ. ಜಿಲ್ಲೆಯ ಭಗವಾನ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಘರ್ ಗ್ರಾಮದಲ್ಲಿ ಪಾಲಿಥಿನ್ ಮಿಶ್ರಿತ ಮದ್ಯ ಸೇವಿಸಿ ಜನರ ಆರೋಗ್ಯ ಹದಗೆಡಲಾರಂಭಿಸಿದೆ. ವಾಂತಿ, ಭೇದಿ ಮತ್ತು ದೃಷ್ಟಿ ನಷ್ಟದ ದೂರುಗಳ ನಂತರ ಅನೇಕ ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಪೈಕಿ 24 ಮಂದಿ ಸಾವನ್ನಪ್ಪಿದ್ದಾರೆ. 4 ಜನರನ್ನು ಪಿಎಂಸಿಎಚ್‌ಗೆ ಉಲ್ಲೇಖಿಸಲಾಗಿದೆ, ಅವರು ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಛಾಪ್ರಾದಲ್ಲಿ ನಾಲ್ವರ ಸಾವು: ಮತ್ತೊಂದೆಡೆ, ಸರನ್ ಜಿಲ್ಲೆಯ ಮಸ್ರಖ್ ಪೊಲೀಸ್ ಠಾಣೆ ವ್ಯಾಪ್ತಿಯ ಇಬ್ರಾಹಿಂಪುರ ಗ್ರಾಮದಲ್ಲಿ ವಿಷಕಾರಿ ಮದ್ಯ 4 ಜನರ ಜೀವವನ್ನು ಬಲಿ ಪಡೆದುಕೊಂಡಿದೆ. ಕುಟುಂಬಸ್ಥರ ಪ್ರಕಾರ ಮಂಗಳವಾರ ರಾತ್ರಿ ಎಲ್ಲರೂ ಮದ್ಯ ಸೇವಿಸಿದ್ದರು. ಮದ್ಯ ಸೇವಿಸಿದ ಕೆಲವೇ ಗಂಟೆಗಳಲ್ಲಿ ಅವರ ಆರೋಗ್ಯ ಹದಗೆಡತೊಡಗಿತು ಎಂದು ಹೇಳಿದ್ದಾರೆ.

49 ಮಂದಿಯ ಸ್ಥಿತಿ ಚಿಂತಾಜನಕ: ಆಸ್ಪತ್ರೆ ಆಡಳಿತದ ಪ್ರಕಾರ ಸಿವಾನ್‌ನಲ್ಲಿ 29 ಮತ್ತು ಸರನ್‌ನಲ್ಲಿ 10 ಜನರ ಸ್ಥಿತಿ ಗಂಭೀರವಾಗಿದೆ. ಅದೇ ಸಮಯದಲ್ಲಿ, ಸರನ್‌ನ ಒಬ್ಬ ವ್ಯಕ್ತಿ ಮತ್ತು ಸಿವಾನ್‌ನ ನಾಲ್ವರನ್ನು ಗಂಭೀರ ಸ್ಥಿತಿಯ ಹಿನ್ನೆಲೆಯಲ್ಲಿ ಪಾಟ್ನಾದ ಪಿಎಂಸಿಎಚ್‌ಗೆ ರೆಪರ್​ ಮಾಡಿ ಅಲ್ಲಿಗೆ ರವಾನಿಸಲಾಗಿದೆ. ಇವರೆಲ್ಲರೂ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ತನಿಖೆಗೆ ಎಸ್‌ಐಟಿ ರಚನೆ:ಪ್ರಕರಣದ ತನಿಖೆಗಾಗಿ ಸರನ್ ಆಡಳಿತವು ಎಸ್‌ಐಟಿ ರಚಿಸಿದೆ. ಮರಣೋತ್ತರ ಪರೀಕ್ಷೆ ಮತ್ತು ಒಳಾಂಗಗಳ ವರದಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಸರನ್ ಡಿಎಂ ಹೇಳಿದ್ದಾರೆ. ಸದ್ಯ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಇಬ್ಬರನ್ನು ಬಂಧಿಸಿದ್ದಾರೆ.

ಘಟನೆ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದಿಷ್ಟು: “ಮೃತರ ಗುರುತು ಪತ್ತೆ ಮಾಡಲಾಗುತ್ತಿದೆ ಮತ್ತು ಪ್ರಕರಣದ ತನಿಖೆ ನಡೆಯುತ್ತಿದೆ. ಈವರೆಗೆ 2 ಮಂದಿಯನ್ನು ಬಂಧಿಸಲಾಗಿದೆ. ಸಾವಿನ ತನಿಖೆಗೆ ಎಸ್‌ಐಟಿ ತಂಡ ರಚಿಸಲಾಗಿದ್ದು, ಘಟನೆಯ ತನಿಖೆ ನಡೆಸಲಿದೆ ಎಂದು ಸರಣ್​ನ ಡಿಸ್ಟ್ರಿಕ್ಸ್​ ಮ್ಯಾಜಿಸ್ಟ್ರೇಟ್​ ಅಮನ್ ಸಮೀರ್ ಹೇಳಿದ್ದಾರೆ.

ಪೊಲೀಸ್ ಠಾಣೆ ಮುಖ್ಯಸ್ಥ ಮತ್ತು ಇಬ್ಬರು ವಾಚ್‌ಮನ್‌ಗಳು ಅಮಾನತು: ಮತ್ತೊಂದೆಡೆ, ಸಿವಾನ್‌ನಲ್ಲಿ, ಎಸ್‌ಪಿ ಕ್ರಮ ಕೈಗೊಂಡು ಭಗವಾನ್‌ಪುರ ಹಾತ್ ಪೊಲೀಸ್ ಠಾಣೆಯ ಮುಖ್ಯಸ್ಥ ಮತ್ತು ಇಬ್ಬರು ವಾಚ್‌ಮನ್‌ಗಳನ್ನು ಅಮಾನತುಗೊಳಿಸಿದ್ದಾರೆ. ಈವರೆಗೆ 9 ಮಂದಿಯನ್ನು ಬಂಧಿಸಲಾಗಿದೆ. ಆಡಳಿತವು ಸಹಾಯವಾಣಿ ಸಂಖ್ಯೆ (06154-242008) ನೀಡಿದೆ. ಸದರ್ ಆಸ್ಪತ್ರೆ ಮತ್ತು ಬಸಂತ್‌ಪುರ ಆರೋಗ್ಯ ಕೇಂದ್ರಗಳನ್ನು ಸನ್ನದ್ಧವಾಗಿಡಲಾಗಿದೆ ಎಂದು ಡಿಎಂ ತಿಳಿಸಿದ್ದಾರೆ. ಹೆಚ್ಚುವರಿ ಆಂಬ್ಯುಲೆನ್ಸ್​ಗಳನ್ನು ಕೂಡಾ ನಿಯೋಜಿಸಲಾಗಿದೆ.

ರಹಸ್ಯವಾಗಿ ಹಲವರ ಅಂತ್ಯ ಸಂಸ್ಕಾರ?: ಒಂದೆಡೆ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದು, ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದರೆ, ಮತ್ತೊಂದೆಡೆ ಹಲವರ ಮೃತದೇಹಗಳನ್ನು ಕುಟುಂಬಸ್ಥರು ಸುಟ್ಟು ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆಡಳಿತ. ಪೊಲೀಸ್ ಮೂಲಗಳ ಪ್ರಕಾರ, ಸಿವಾನ್ ಜಿಲ್ಲೆಯ ಗಹರ್ ಕೌಡಿಯಾ ಗ್ರಾಮದಿಂದ ವಿಷಕಾರಿ ಮದ್ಯವನ್ನು ಸಂಗ್ರಹಿಸಲಾಗಿದೆ. ಈ ದುರ್ಘಟನೆ ನಡೆದ ಗ್ರಾಮವು ಸಿವಾನ್ ಮತ್ತು ಛಪ್ರಾ ಗಡಿಯಲ್ಲಿದೆ.

ಇವುಗಳನ್ನು ಓದಿ: VIPಗಳಿಗೆ ಇನ್ನು ಮುಂದೆ ಎನ್​ಎಸ್​ಜಿ ಬದಲು ಸಿಆರ್​ಪಿಎಫ್​ ಯೋಧರಿಂದ ಭದ್ರತೆ: ಕೇಂದ್ರದ ಆದೇಶ

8 ವರ್ಷದಿಂದ ಕೆಲಸಕ್ಕಿದ್ದ ಮಹಿಳೆಯಿಂದ ಮೂತ್ರ ಬಳಸಿ ಅಡುಗೆ ತಯಾರಿಸಿದ ಆರೋಪ; ದೂರು ದಾಖಲು

PUC ಆದವರಿಗೆ ರೈಲ್ವೆಯಲ್ಲಿ ಭರ್ಜರಿ ಉದ್ಯೋಗಾವಕಾಶ: ಮೊದಲ ತಿಂಗಳಿಂದಲೇ 40 ಸಾವಿರ ಸಂಬಳ, ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ಯಾವಾಗ?

15 ವರ್ಷ ಹಳೆಯದಾದ ನಿಮ್ಮ ಬೈಕ್ ಇನ್ನೂ 10 ವರ್ಷ ಓಡಬೇಕಾ?: ಹಾಗಾದರೆ ಇಂದೇ ​ರೆಟ್ರೋಫಿಟ್ ಮಾಡಿ!

ABOUT THE AUTHOR

...view details