ಕರ್ನಾಟಕ

karnataka

ಅಯೋಧ್ಯಾ ವಾಟರ್​ ಮೆಟ್ರೋ: ಹೂಳೆತ್ತುವ ಮೂಲಕ ನೀರಿನ ಪ್ರಮಾಣ ಹೆಚ್ಚಿಸಲು ಕಸರತ್ತು - ayodhya water metro cruise run

ಸುಗುಮ ಸಂಚಾರಕ್ಕೆ ಅನುವು ಮಾಡಿ ಕೊಡುವ ಗುರಿ ಹೊಂದಿದ್ದು, ನದಿಯ ಹೂಳೆತ್ತುವ ಮೂಲಕ ನೀರಿನ ಪ್ರಮಾಣ ಹೆಚ್ಚಿಸಲು ಕ್ರಮ.

By ETV Bharat Karnataka Team

Published : 5 hours ago

Published : 5 hours ago

ayodhya-water-metro-cruise-run-increasing-saryu-nadi-river-water-flow-dredging-latest-hindi-update
ಜಲಮಾರ್ಗ ಪರಿಶೀಲಿಸಿದ ಅಧಿಕಾರಿಗಳು (ಈಟಿವಿ ಭಾರತ್​)

ಅಯೋಧ್ಯೆ: ರಾಮನೂರಿನಲ್ಲಿ ಪವಿತ್ರ ಸರಯೂ ನದಿಯಲ್ಲಿ ಮೆಟ್ರೋ ಸಂಚಾರ ಕಾರ್ಯ ತೀವ್ರಗೊಳಿಸಲಾಗಿದೆ. ಇದಕ್ಕಾಗಿ ನೀರಿನ ಪ್ರಮಾಣ ಹೆಚ್ಚಿಸಲು ಹೂಳೆತ್ತುವ ಕಾರ್ಯಕ್ಕೆ ಮುಂದಾಗಲಾಗಿದೆ. ಈ ಮೂಲಕ ಸುಗುಮ ಸಂಚಾರಕ್ಕೆ ಅನುವು ಮಾಡಿ ಕೊಡುವ ಗುರಿಯನ್ನು ಹೊಂದಿದ್ದು, ಈ ಕಾರಣದಿಂದ ಒಳನಾಡು ಜಲಮಾರ್ಗ ಪ್ರಾಧಿಕಾರದ ಅಧ್ಯಕ್ಷ ವಿಜಯ್​ ಕುಮಾರ್​, ಇಲ್ಲಿನ ಜಲಮಾರ್ಗ ಪರಿಶೀಲಿಸಿದರು. ಗುಪ್ತ ಘಾಟ್​​ನಿಂದ ಅಯೋಧ್ಯೆಯ ನಯಾ ಘಾಟ್​ವರೆಗಿನ ಮಾರ್ಗ ಪರಿಶೀಲನೆ ಮಾಡಲಾಗಿದೆ.

ಪ್ರಯಾಣಿಕರ ಜೊತೆಗೆ ಸರಕಿನ ಸಾಗಣೆ ಹೆಚ್ಚಿಸುವ ಉದ್ದೇಶ: ಈ ಜಲಮಾರ್ಗದ ಕುರಿತು ಮಾತನಾಡಿದ ವಿಜಯ್​ ಕುಮಾರ್​, ಇಲ್ಲಿ ಯಾವ ರೀತಿ ಜಲಮಾರ್ಗ ಇರಬೇಕು ಎಂಬ ಕುರಿತು ನಿರ್ಧರಿಸಲಾಗುತ್ತಿದ್ದು, ಭಾರತ ಸರ್ಕಾರವೂ ಜಲಮಾರ್ಗದ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದೆ. ಪ್ರಯಾಣಿಕರ ಜೊತೆಗೆ ಸರಕು ಸಾಗಣೆ ಸಂಚಾರವೂ ಹೆಚ್ಚಬೇಕಿದೆ. ಇದಕ್ಕಾಗಿ ಅಯೋಧ್ಯೆಗೆ ಭೇಟಿ ನೀಡಿದ ಕೂಡಲೇ ಜಲಮಾರ್ಗದ ವ್ಯವಸ್ಥೆಗಳನ್ನು ಪರಿಶೀಲಿಸಲಾಗುವುದು. ಸರಯೂ ಜಲಮಾರ್ಗ ಪರಿಶೀಲನೆಗೆ ಉತ್ತರ ಪ್ರದೇಶ ಸರ್ಕಾರ ಮತ್ತು ಅಯೋಧ್ಯೆ ಜಿಲ್ಲಾಡಳಿತ ಸಮೀಕ್ಷೆ ಸಹಕಾರ ನೀಡುತ್ತಿದೆ. ನದಿಯಲ್ಲಿ ಹೂಳೆತ್ತುವ ಮೂಲಕ ನೀರಿನ ಪ್ರಮಾಣ ಹೆಚ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಕ್ರೂಸ್​ ಸಂಚಾರ: ಸರಯೂ ನದಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಚಾರ ಆರಂಭಿಸಲು ಪ್ರಯತ್ನಿಸಲಾಗುವುದು. ಈ ವಾಹನಗಳ ಬಳಕೆಯಿಂದ ಯಾವುದೇ ಮಾಲಿನ್ಯ ಇರುವುದಿಲ್ಲ, ಇದಕ್ಕಾಗಿ ನಮ್ಮ ಸಂಸ್ಥೆ ಐಎಡಬ್ಲ್ಯೂಎ ಮತ್ತು ಉತ್ತರ ಪ್ರದೇಶದ ಪ್ರವಾಸೋದ್ಯಮ ಇಲಾಖೆ ನಡುವೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಅಡಿ ಕ್ರೂಸ್ ಕಾರ್ಯಾಚರಣೆ ನಡೆಸಲಿದೆ ಎಂದು ವಿಜಯ್​ ಕುಮಾರ್ ಹೇಳಿದರು.

ಶೀಘ್ರದಲ್ಲೇ ಟೆಂಡರ್​​: ಕ್ರೂಸ್​ ಕಾರ್ಯಾಚರಣೆಗಾಗಿ ಪ್ರವಾಸೋದ್ಯಮ ಇಲಾಖೆ ಟೆಂಡರ್ ಕರೆದಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ಇದರ ಪ್ರಕ್ರಿಯೆ ಆರಂಭವಾಗಲಿದೆ. ಅಯೋಧ್ಯೆ ಆರ್‌ಟಿಒ ರಿತು ಸಿಂಗ್‌ ಜಲಮಾರ್ಗಕ್ಕೆ ಸಂಬಂಧಿಸಿದ ಪ್ರಕ್ರಿಯೆ ಮುಂದಕ್ಕೆ ಕೊಂಡೊಯ್ಯುವ ಅಧಿಕಾರವನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ತಂದೆಯ ನಿವೃತ್ತಿ ಆದೇಶಕ್ಕೆ ಮಗನ ಸಹಿ: ಅಪ್ಪನಿಗಾಗಿ ಲಕ್ಷಗಳ ಕೆಲಸ ಬಿಟ್ಟಿದ್ದ ಪುತ್ರ

ABOUT THE AUTHOR

...view details