ಕರ್ನಾಟಕ

karnataka

ETV Bharat / bharat

ಭಿಕ್ಷುಕರ ಗ್ಯಾಂಗ್​​​​​ನಿಂದ​ ಶೋಷಣೆಗೆ ಬಲಿಯಾಗುತ್ತಿವೆ ಅನಾಥ ಕಂದಮ್ಮಗಳು; 10 ಸಾವಿರ ಮಕ್ಕಳಿಂದ ಭಿಕ್ಷಾಟನೆ - Alarming Rise in Child Exploitation - ALARMING RISE IN CHILD EXPLOITATION

ನವಜಾತ ಶಿಶುಗಳಿಂದ 12 ವರ್ಷದೊಳಗಿನ ಮಕ್ಕಳನ್ನು ಈ ರೀತಿಯ ಭಿಕ್ಷಾಟನೆಗೆ ಬಳಕೆ ಮಾಡಲಾಗುತ್ತಿದೆ. ಈ ಮಕ್ಕಳು ಎಲ್ಲಿಂದ ಬಂದವು ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.

alarming-rise-in-child-exploitation-over-10000-orphans-in-hyderabad-fall-prey-to-begging-gangs
ಮಕ್ಕಳರ ಮೇಲೆ ಶೋಷಣೆ (ಸಾಂದರ್ಭಿಕ ಚಿತ್ರ)

By ETV Bharat Karnataka Team

Published : Jun 7, 2024, 2:12 PM IST

ಹೈದರಾಬಾದ್​: ಅನಾಥ ಮಕ್ಕಳನ್ನು ಭಿಕ್ಷಾಟನೆಗೆ ದೂಡಿ ಅದರಿಂದ ಹಣ ಸಂಪಾದನೆ ಮಾಡುತ್ತಿರುವ ಅಮಾನವೀಯ ಘಟನೆ ನಗರದಲ್ಲಿ ನಡೆದಿದೆ. ಅಪರಾಧಿ ಹಿನ್ನಲೆವುಳ್ಳ ಗ್ಯಾಂಗ್​ಗಳು 10 ಸಾವಿರ ಮಕ್ಕಳ ಮೇಲೆ ಭಿಕ್ಷಾಟನೆಯಂತಹ ದೌರ್ಜನ್ಯಕ್ಕೆ ಒಳಕೆ ಮಾಡುತ್ತಿದೆ. ಅಂತಾರಾಜ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಈ ಗ್ಯಾಂಗ್‌ಗಳು ನಗರದ ವಿವಿಧ ಭಾಗಗಳಲ್ಲಿ ಮಕ್ಕಳನ್ನು ಭಿಕ್ಷಾಟನೆಗೆ ಬಳಕೆ ಮಾಡಿಕೊಂಡು, ಅಕ್ರಮ ಮಾರಾಟ ಮತ್ತು ಶೋಷಣೆಯಲ್ಲಿ ತೊಡಗಿವೆ.

ಖೈರತಾಬಾದ್​​ ಇಂಟರ್​ಸೆಕ್ಷನ್​ ಈ ಗಂಭೀರ ಪ್ರಕರಣಗಳನ್ನು ಬೆಳಕಿಗೆ ತಂದಿದ್ದಾರೆ. ಮಹಿಳೆಯೊಬ್ಬಳು ಮಗುವಿಗೆ ಕೈಕೊಳ ತೊಡಿಸಿ ಭಿಕ್ಷಾಟನೆ ಮಾಡಿಸುತ್ತಿರುವುದನ್ನು ಟ್ರಾಫಿಕ್​ ಕಾನ್ಸ್​ಟೇಬಲ್​ ಗಮನಿಸಿದ್ದಾರೆ. ಈ ವೇಳೆ ಕಾನ್ಸ್​​ಟೇಬಲ್​ ಮಹಿಳೆ ಬಳಿ ಹೋಗಲು ಮುಂದಾದಾಗ ಆಕೆ ಮಗುವಿನೊಂದಿಗೆ ಕಣ್ಮರೆಯಾಗಿದ್ದಾಳೆ. ಮತ್ತೊಂದು ಘಟನೆಯಲ್ಲಿ ವರ್ಷದ ಮಗುವನ್ನು ಮಸಬ್​ ಟ್ಯಾಂಕ್​ ಓವರ್ಪಾಸ್​ ಬಳಿ ಅನಾಥವಾಗಿ ಅಳಲು ಬಿಟ್ಟು, ಅದರಿಂದ ಲಾಭ ಪಡೆಯಲು ಇಬ್ಬರು ಮಹಿಳೆಯರು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಮೋಟರ್​ ಬೈಕ್​ ಚಾಲಕ ಮಧ್ಯಪ್ರವೇಶಕ್ಕೆ ಮುಂದಾದಾಗ, ಮತ್ತೊಬ್ಬ ವ್ಯಕ್ತಿ ಆತನಿಗೆ ಬೆದರಿಕೆ ಹಾಕಿದ್ದು, ಮಹಿಳೆ ತಕ್ಷಣಕ್ಕೆ ಪರಾರಿಯಾಗಿದ್ದಾಳೆ

ಇಂತಹ ಘಟನೆಗಳು ಅಸಮಾನ್ಯವಾಗಿಲ್ಲ. ಅದರಲ್ಲೂ ಟ್ರಾಫಿಕ್​ ಜಂಕ್ಷನ್​, ಪ್ರವಾಸಿ ತಾಣ ಮತ್ತು ದೇಗುಲಗಳ ಬಳಿ ಹೆಚ್ಚು ಕಂಡು ಬರುತ್ತಿದೆ. ನವಜಾತ ಶಿಶುಗಳಿಂದ 12 ವರ್ಷದೊಳಗಿನ ಮಕ್ಕಳನ್ನು ಈ ರೀತಿಯ ಭಿಕ್ಷಾಟನೆಗೆ ಬಳಕೆ ಮಾಡಲಾಗುತ್ತಿದೆ. ಈ ಮಕ್ಕಳು ಎಲ್ಲಿಂದ ಬಂದವು ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಈ ಮಕ್ಕಳನ್ನು ಅಪಹರಿಸಲಾಗಿದ್ಯಾಯಾ ಅಥವಾ ಕುಟುಂಬಗಳಿಂದ ಮಾರಾಟ ಮಾಡಲಾಗಿದೆಯಾ ಎಂಬುದು ತಿಳಿಯದು. ಈ ನಡುವೆ ಮಕ್ಕಳ ಮೇಲೆ ನಡೆಯುತ್ತಿರುವ ಈ ಶೋಷಣೆ ತಡೆಯುವಲ್ಲಿ ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿಫಲವಾಗಿದೆ.

ಸ್ವಯಂ ಸಂಘಟನಾ ಸಂಸ್ಥೆಗಳು ಅಪರೂಪದ ಪ್ರಕರಣದಲ್ಲಿ ಈ ರೀತಿ ಮಕ್ಕಳನ್ನು ರಕ್ಷಣೆ ಮಾಡಿ, ಅವರನ್ನು ಆರೈಕೆ ಕೇಂದ್ರಕ್ಕೆ ಮತ್ತು ಅವರ ಕುಟುಂಬದೊಂದಿಗೆ ಸೇರಿಸುವ ಕೆಲಸ ಮಾಡುತ್ತಿದೆ. ಇಂತಹ ಒಂದು ಸಂಘಟನೆ ನಡೆಸಿದ ಸಮೀಕ್ಷೆಯಲ್ಲಿ, ನಗರದಲ್ಲಿ ಅಂದಾಜು 10 ಸಾವಿರ ಬಾಲ ಕಾರ್ಮಿಕರಿದ್ದಾರೆ ಎಂದು ತಿಳಿಸಿದೆ.

ಉತ್ತರ ಪ್ರದೇಶ, ಚತ್ತೀಸ್​ಗಢ, ಒಡಿಶಾ, ಮಹಾರಾಷ್ಟ್ರ, ತೆಲುಗು ರಾಜ್ಯಗಳಲ್ಲಿ ಈ ರೀತಿಯ ಗ್ಯಾಂಗ್​ಗಳು ಕಾರ್ಯಾಚರಣೆ ನಡೆಸುತ್ತಿವೆ. ಇಂತಹ ಗ್ಯಾಂಗ್​ಗಳು ಸ್ಲಂ, ಉಪನಗರ, ಗ್ರಾಮೀಣ ಪ್ರದೇಶದಲ್ಲಿ 10 ರಿಂದ 15 ವರ್ಷದ ಮಕ್ಕಳನ್ನು ಕರೆತಂದು ಗ್ಲಾಸ್​ ಉದ್ಯಮ, ಇಟ್ಟಿಗೆ ನಿರ್ಮಾಣ, ಭಿಕ್ಷಾಟನೆಯಂತಹ ಅನೇಕ ರೀತಿಯ ಕಾರ್ಯದಲ್ಲಿ ಬಾಲಾ ಕಾರ್ಮಿಕರನ್ನಾಗಿಸುತ್ತದೆ. ಇಂತಹ ಮಕ್ಕಳ ಕುಟುಂಬಕ್ಕೆ ಗ್ಯಾಂಗ್​ಗಳು ಮಕ್ಕಳಿಂದ ವಾರ್ಷಿಕವಾಗಿ 30 ಸಾವಿರದಿಂದ 90 ಸಾವಿರದವರೆಗೆ ದುಡಿಯುವ ಭರವಸೆಯನ್ನು ನೀಡಲಾಗುತ್ತಿದ್ದು, ಅಲ್ಲದೇ ಅವರಿಗೆ ಮುಂಗಡ ಹಣಕೊಟ್ಟು ಕರೆತರುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಮಕ್ಕಳನ್ನು ಮಹಾರಾಷ್ಟ್ರ, ಛತ್ತೀಸ್‌ಗಢ ಮತ್ತು ಆಂಧ್ರಪ್ರದೇಶದಿಂದ ತಂದು ತೆಲಂಗಾಣದ ಏಜೆಂಟರಿಗೆ ಹಸ್ತಾಂತರಿಸಿ ಕಳ್ಳ ಸಾಗಣೆ ಮಾಡಲಾಗುತ್ತಿದೆ. ತೆಲಂಗಾಣದಿಂದ ಖರೀದಿಸಿದವರನ್ನು ಮುಂಬೈ, ಬೆಂಗಳೂರು ಮತ್ತು ತಮಿಳುನಾಡಿನಂತಹ ನಗರಗಳಿಗೆ ಸ್ಥಳಾಂತರಿಸುತ್ತಿದ್ದಾರೆ.

ಇಂತಹ ಮಕ್ಕಳಿಗೆ ಹರಿದ ಬಟ್ಟೆ, ಗಾಯಗಳು, ಥಳಿಸಿ ಅವರನ್ನು ನೋಡಿದವರಿಗೆ ಕರುಣೆ ಬರುವಂತೆ ಮಾರಣಾಂತಿಕವಾಗಿ ಹೊಡೆದು ಬಡಿದು ಭಿಕ್ಷಾಟನೆಗೆ ಕಳುಹಿಸಲಾಗುತ್ತಿದೆ ಎಂದು ನಗರದ ಚಾರಿಟಿ ಸಂಸ್ಥೆಯ ಪ್ರತಿನಿಧಿ ತಿಳಿಸಿದ್ದಾರೆ. ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದಂತೆ, ಇಂತಹ ಭಿಕ್ಷಾಟನೆಯಲ್ಲಿ ಕೆಲವು ರೌಡಿ ಶೀಟರ್​ಗಳು ಕಮಿಷನ್‌ಗಳಿಗೆ ಬದಲಾಗಿ ಭಿಕ್ಷಾಟನೆ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕಾಗಿ ಮಕ್ಕಳು ಮತ್ತು ವೃದ್ಧರನ್ನು ಬಳಸಿಕೊಳ್ಳುತ್ತಾರೆ. ಈ ಗ್ಯಾಂಗ್‌ಗಳು ತಮ್ಮ ಬಂಧಿತರನ್ನು ಸಿಕಂದರಾಬಾದ್ ರೈಲು ನಿಲ್ದಾಣ, ಗಚಿಬೌಲಿ, ಜೆಬಿಎಸ್ ಮತ್ತು ದೇವಾಲಯಗಳಂತಹ ಜನನಿಬಿಡ ಸ್ಥಳಗಳಲ್ಲಿ ಬೆಳಂ ಬೆಳಗ್ಗೆ ಬಿಟ್ಟು, ದಿನವೀಡಿ ಭಿಕ್ಷಾಟನೆ ಮಾಡಿಸಲಾಗುತ್ತಿದೆ.

ಇಂತಹ ಅಮಾನವೀಯ ಘಟನೆಗಳ ವಿರುದ್ಧ ತಕ್ಷಣಕ್ಕೆ ಸಂಬಂಧಿಸಿದ ಅಧಿಕಾರಿಗಳು ಕಾನೂನು ಜಾರಿ ಮಾಡಬೇಕಿದೆ.

ಇದನ್ನೂ ಓದಿ: Cisf ಮಹಿಳಾ ಕಾನ್ಸ್‌ಟೇಬಲ್‌ನಿಂದ ಕಪಾಳಮೋಕ್ಷ: ನೂತನ ಬಿಜೆಪಿ ಸಂಸದೆ ಕಂಗನಾ ರನೌತ್​ ಆರೋಪ

ABOUT THE AUTHOR

...view details