ETV Bharat / bharat

ಬಿಜೆಪಿಯ ಅಕ್ರಮಗಳನ್ನು ಸೆರೆಹಿಡಿಯಲು ಜನರಿಗೆ ಸ್ಪೈ ಕ್ಯಾಮೆರಾ ವಿತರಿಸಿದ್ದೇವೆ: ಕೇಜ್ರಿವಾಲ್​ - AAP DISTRIBUTED SPY CAMERAS

ದೆಹಲಿ ವಿಧಾನಸಭೆ ಚುನಾವಣೆಗೆ ನಡೆಯಲಿರುವ ಮತದಾನದ ದಿನ ಬಿಜೆಪಿಯ ಅಕ್ರಮಗಳನ್ನು ಸೆರೆಹಿಡಿಯಲು ಕೊಳೆಗೇರಿಯ ಕೆಲವು ನಿವಾಸಿಗಳಿಗೆ ಸ್ಪೈ ಮತ್ತು ಹಿಡನ್​ ಕ್ಯಾಮೆರಾಗಳನ್ನು ನೀಡಿದ್ದೇವೆ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

AAP distributed spy and body cameras  to capture wrongdoings in Delhi Election
ಅರವಿಂದ್​ ಕೇಜ್ರಿವಾಲ್​ (ANI)
author img

By ETV Bharat Karnataka Team

Published : Feb 3, 2025, 4:40 PM IST

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯ ಮತದಾನ ದಿನ ಬಿಜೆಪಿ ಮತ್ತು ಅದರ ಗೂಂಡಾಗಳಿಂದ ನಡೆಯುವ ಅಕ್ರಮಗಳನ್ನು ಸೆರೆಹಿಡಿಯಲು ಸ್ಪೈ (ರಹಸ್ಯ ಕ್ಯಾಮೆರಾ) ಮತ್ತು ಬಾಡಿ ಕ್ಯಾಮೆರಾಗಳನ್ನು ವಿತರಿಸಿದ್ದೇವೆ ಎಂದು ಆಮ್ ಆದ್ಮಿ ಪಕ್ಷ(ಎಎಪಿ)ದ ಸಂಚಾಲಕ ಅರವಿಂದ್​ ಕೇಜ್ರಿವಾಲ್​ ಹೇಳಿದ್ದಾರೆ.

ಅಂತಿಮ ಮತಪ್ರಚಾರದ ದಿನವಾದ ಇಂದು ಮಾತನಾಡಿದ ಅವರು, ಎಎಪಿ ಐತಿಹಾಸಿಕ ಜಯದೆಡೆಗೆ ಮುನ್ನಡೆಯುತ್ತಿದೆ. ಬಿಜೆಪಿ ಕೆಟ್ಟ ಸೋಲು ಅನುಭವಿಸಲಿದೆ. ಈ ಕಾರಣಕ್ಕೆ ಅವರು ಅಕ್ರಮಗಳಿಗೆ ಮುಂದಾಗಬಹುದು ಎಂದು ಆರೋಪಿಸಿದ್ದಾರೆ.

ಬಿಜೆಪಿ ಗೂಂಡಾಗಳಿಂದ ನಡೆಯುವ ಅಕ್ರಮಗಳನ್ನು ಸೆರೆಹಿಡಿಯಲು ನಾವು ಕೊಳೆಗೇರಿ​ ನಿವಾಸಿಗಳಿಗೆ ರಹಸ್ಯ ಮತ್ತು ಬಾಡಿ ಕ್ಯಾಮೆರಾಗಳನ್ನು ನೀಡಿದ್ದೇವೆ. ತ್ವರಿತ ಪ್ರತಿಕ್ರಿಯಾ ತಂಡ (ಕ್ಯೂಆರ್‌ಟಿ)ಯನ್ನೂ ಕೂಡ ರಚಿಸಿದ್ದೇವೆ. ಈ ತಂಡ ಅಸಾಂವಿಧಾನಿಕ ಚಟುವಟಿಕೆಗಳನ್ನು 15 ನಿಮಿಷದಲ್ಲಿ ತಡೆಯಲಿದೆ. ಇಂಥ ದುಷ್ಕೃರ್ಮಿಗಳ ಬಂಧಿಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಚುನಾವಣೆ ಗೆಲ್ಲಲು ಗೂಂಡಾ ಮತ್ತು ದೆಹಲಿ ಪೊಲೀಸರನ್ನು ಹೆಚ್ಚು ಬಳಸಲಿದೆ. ಅವರು ವಿಶೇಷವಾಗಿ ಕೊಳೆಗೇರಿ​ ನಿವಾಸಿಗಳ ಮತವನ್ನು ಅಕ್ರಮವಾಗಿ ಪಡೆಯಬಹುದು ಎಂದಿದ್ದಾರೆ. ಕೇಜ್ರಿವಾಲ್​ ಅವರ ಈ ಆರೋಪಕ್ಕೆ ಬಿಜೆಪಿ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕೊಳೆಗೇರಿ ನಿವಾಸಿಗಳಿಗೆ ಬಿಜೆಪಿ ಕಾರ್ಯಕರ್ತರು 3ರಿಂದ 5 ಸಾವಿರ ರೂ.ವರೆಗೆ ಆಮಿಷ ನೀಡಿ, ಅವರ ಬೆರಳಿಗೆ ಶಾಯಿ ಹಾಕುವ ಮೂಲಕ ಮತದಾನದಿಂದ ದೂರವಿರುವಂತೆ ನೋಡಿಕೊಳ್ಳಲಿದ್ದಾರೆ ಎಂದು ಕೇಜ್ರಿವಾಲ್ ದೂರಿದ್ದಾರೆ.

ದೆಹಲಿ ವಿಧಾನಸಭೆಗೆ ಫೆ.5ರಂದು ಮತದಾನ ನಡೆಯಲಿದ್ದು, ಫೆ.8ರಂದು ಫಲಿತಾಂಶ ಹೊರಬೀಳಲಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಎಎಪಿ ಮಾಡೆಲ್​ ಫೇಲ್​; ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

ಇದನ್ನೂ ಓದಿ: AAPಗೆ ಬಿಗ್​​ ಬಿಗ್​ ಶಾಕ್: ರಾಜೀನಾಮೆಗೆ ಕಾರಣ ನೀಡಿದ 7 ಆಪ್​ ಶಾಸಕರು!.. ಕೇಜ್ರಿವಾಲ್​ಗೆ ಪತ್ರ!!

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯ ಮತದಾನ ದಿನ ಬಿಜೆಪಿ ಮತ್ತು ಅದರ ಗೂಂಡಾಗಳಿಂದ ನಡೆಯುವ ಅಕ್ರಮಗಳನ್ನು ಸೆರೆಹಿಡಿಯಲು ಸ್ಪೈ (ರಹಸ್ಯ ಕ್ಯಾಮೆರಾ) ಮತ್ತು ಬಾಡಿ ಕ್ಯಾಮೆರಾಗಳನ್ನು ವಿತರಿಸಿದ್ದೇವೆ ಎಂದು ಆಮ್ ಆದ್ಮಿ ಪಕ್ಷ(ಎಎಪಿ)ದ ಸಂಚಾಲಕ ಅರವಿಂದ್​ ಕೇಜ್ರಿವಾಲ್​ ಹೇಳಿದ್ದಾರೆ.

ಅಂತಿಮ ಮತಪ್ರಚಾರದ ದಿನವಾದ ಇಂದು ಮಾತನಾಡಿದ ಅವರು, ಎಎಪಿ ಐತಿಹಾಸಿಕ ಜಯದೆಡೆಗೆ ಮುನ್ನಡೆಯುತ್ತಿದೆ. ಬಿಜೆಪಿ ಕೆಟ್ಟ ಸೋಲು ಅನುಭವಿಸಲಿದೆ. ಈ ಕಾರಣಕ್ಕೆ ಅವರು ಅಕ್ರಮಗಳಿಗೆ ಮುಂದಾಗಬಹುದು ಎಂದು ಆರೋಪಿಸಿದ್ದಾರೆ.

ಬಿಜೆಪಿ ಗೂಂಡಾಗಳಿಂದ ನಡೆಯುವ ಅಕ್ರಮಗಳನ್ನು ಸೆರೆಹಿಡಿಯಲು ನಾವು ಕೊಳೆಗೇರಿ​ ನಿವಾಸಿಗಳಿಗೆ ರಹಸ್ಯ ಮತ್ತು ಬಾಡಿ ಕ್ಯಾಮೆರಾಗಳನ್ನು ನೀಡಿದ್ದೇವೆ. ತ್ವರಿತ ಪ್ರತಿಕ್ರಿಯಾ ತಂಡ (ಕ್ಯೂಆರ್‌ಟಿ)ಯನ್ನೂ ಕೂಡ ರಚಿಸಿದ್ದೇವೆ. ಈ ತಂಡ ಅಸಾಂವಿಧಾನಿಕ ಚಟುವಟಿಕೆಗಳನ್ನು 15 ನಿಮಿಷದಲ್ಲಿ ತಡೆಯಲಿದೆ. ಇಂಥ ದುಷ್ಕೃರ್ಮಿಗಳ ಬಂಧಿಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಚುನಾವಣೆ ಗೆಲ್ಲಲು ಗೂಂಡಾ ಮತ್ತು ದೆಹಲಿ ಪೊಲೀಸರನ್ನು ಹೆಚ್ಚು ಬಳಸಲಿದೆ. ಅವರು ವಿಶೇಷವಾಗಿ ಕೊಳೆಗೇರಿ​ ನಿವಾಸಿಗಳ ಮತವನ್ನು ಅಕ್ರಮವಾಗಿ ಪಡೆಯಬಹುದು ಎಂದಿದ್ದಾರೆ. ಕೇಜ್ರಿವಾಲ್​ ಅವರ ಈ ಆರೋಪಕ್ಕೆ ಬಿಜೆಪಿ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕೊಳೆಗೇರಿ ನಿವಾಸಿಗಳಿಗೆ ಬಿಜೆಪಿ ಕಾರ್ಯಕರ್ತರು 3ರಿಂದ 5 ಸಾವಿರ ರೂ.ವರೆಗೆ ಆಮಿಷ ನೀಡಿ, ಅವರ ಬೆರಳಿಗೆ ಶಾಯಿ ಹಾಕುವ ಮೂಲಕ ಮತದಾನದಿಂದ ದೂರವಿರುವಂತೆ ನೋಡಿಕೊಳ್ಳಲಿದ್ದಾರೆ ಎಂದು ಕೇಜ್ರಿವಾಲ್ ದೂರಿದ್ದಾರೆ.

ದೆಹಲಿ ವಿಧಾನಸಭೆಗೆ ಫೆ.5ರಂದು ಮತದಾನ ನಡೆಯಲಿದ್ದು, ಫೆ.8ರಂದು ಫಲಿತಾಂಶ ಹೊರಬೀಳಲಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಎಎಪಿ ಮಾಡೆಲ್​ ಫೇಲ್​; ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

ಇದನ್ನೂ ಓದಿ: AAPಗೆ ಬಿಗ್​​ ಬಿಗ್​ ಶಾಕ್: ರಾಜೀನಾಮೆಗೆ ಕಾರಣ ನೀಡಿದ 7 ಆಪ್​ ಶಾಸಕರು!.. ಕೇಜ್ರಿವಾಲ್​ಗೆ ಪತ್ರ!!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.