ತಿರುಪತ್ತೂರು(ತಮಿಳುನಾಡು):ಚೀನಾ, ಥೈಲ್ಯಾಂಡ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಹಾವು, ಚೇಳು, ಜಿರಳೆಗಳು ಆಹಾರ ಖಾದ್ಯದ ಭಾಗವಾಗಿವೆ. ನಮ್ಮಲ್ಲಿ ನಾಗಪ್ಪ ಎಂದು ದೇವರಂತೆ ಭಾವಿಸಿ ಪೂಜಿಸುತ್ತೇವೆ. ಇಂತಿಪ್ಪ, ತಮಿಳುನಾಡಿನ ವ್ಯಕ್ತಿಯೊಬ್ಬ ವಿಷಪೂರಿತ ಹಾವನ್ನು ಸಾಯಿಸಿ, ಅದನ್ನು ಕರಿದು ತಿಂದಿದ್ದಾನೆ. ಇದೀಗ ಆತನನ್ನು, ವನ್ಯಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಹಾಕಲಾಗಿದೆ.
ತಿರುಪತ್ತೂರು ಜಿಲ್ಲೆಯ ಪೆರುಮಾಪಟ್ಟು ಪ್ರದೇಶದ ರಾಜೇಶ್ ಕುಮಾರ್ (30) ವಿಕೃತಿ ಮೆರೆದ ವ್ಯಕ್ತಿ. ಈತ ಜೂನ್ 11ರಂದು ಹಾವನ್ನು ಸಾಯಿಸಿ, ಅದರ ಚರ್ಮ ಸುಲಿದು ಬಳಿಕ ಕತ್ತರಿಸಿ ಖಾದ್ಯವನ್ನಾಗಿ ಮಾಡಿಕೊಂಡು ತಿಂದಿದ್ದಾನೆ. ಹಾವಿನ ಚರ್ಮವನ್ನು ಸುಲಿದು ತೊಳೆಯುತ್ತಿರುವ ದೃಶ್ಯವನ್ನು ಆತನೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ.