ಲಿಂಗಸುಗೂರು (ರಾಯಚೂರು): ಲಿಂಗಸುಗೂರು ತಾಲ್ಲೂಕು ದೇವನಹಳ್ಳ ಬಳಿ ಸಂಭವಿಸಿದ ಬೈಕ್ ಮತ್ತು ಓಮಿನಿ ಕಾರಿನ ನಡುವೆ ಅಪಘಾತದ ಸಂಭವಿಸಿದೆ. ಪರಿಣಾಮ, ಇಬ್ಬರು ಮೃತಪಟ್ಟಿದ್ದು ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಬೈಕ್, ಓಮಿನಿ ಕಾರು ಪರಸ್ಪರ ಡಿಕ್ಕಿ, ಇಬ್ಬರ ಸಾವು ಸೋಮವಾರ ಸಂಜೆ ಲಿಂಗಸುಗೂರು ಕಡೆಯಿಂದ ಹೊನ್ನಾಳಿ ಕಡೆಗೆ ಹೊರಟಿದ್ದ ಓಮಿನಿ ಕಾರು ಹೊನ್ನಾಳಿ ಕಡೆಯಿಂದ ಬರುತ್ತಿದ್ದ ಎರಡು ಬೈಕ್ಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಒಬ್ಬರು ಮೃತಪಟ್ಟಿದ್ದು, ಇನ್ನೋರ್ವ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.
ಮೃತರನ್ನು ಲಿಂಗಸುಗೂರು ನಿವಾಸಿಗಳಾದ ಮೊಹ್ಮದ್ ಖಾಸಿಂ (19), ಬಾಬು ಗೌಳಿ (25) ಎಂದು ಗುರುತಿಸಲಾಗಿದೆ. ಸುಭಾಸ ಗುತ್ತೆದಾರ ಎಂಬುವವರನ್ನು ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟ ಆಸ್ಪತ್ರೆಗೆ ಕಳುಹಿಸಲಾಗಿದೆ. ವೆಂಕಟೇಶ, ರಾಘು, ಮಹಿಬೂಬ ಎಂಬುವವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ:
ಅಪಘಾತ ಸಂಭವಿಸಿದ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಪೊಲೀಸ್ ಅಧಿಕಾರಗಳ ತಂಡ ಸಾವು ನೋವಿನ ಮಧ್ಯೆ ನರಳಾಡುತ್ತಿದ್ದ ಗಾಯಾಳುಗಳನ್ನು ತಮ್ಮ ವಾಹನದಲ್ಲಿಯೇ ಕರೆತಂದು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿತ್ತು. ಹಾಗಾಗಿ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.