ETV Bharat / state

ಪತಿ ಅಗಲಿಕೆಯ ನೋವು, ಆರ್ಥಿಕ ಸಂಕಷ್ಟ: ಖಿನ್ನತೆಗೊಳಗಾದ ತಾಯಿ, ಮಗ ಆತ್ಮಹತ್ಯೆ - mother and son commit suicide

author img

By ETV Bharat Karnataka Team

Published : Jul 13, 2024, 10:54 PM IST

Updated : Jul 13, 2024, 11:03 PM IST

ತಾಯಿ ಮತ್ತು ಮಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಯಲಹಂಕದ ಆರ್​ಎನ್​ಜೆಡ್ ಅಪಾರ್ಟ್​ಮೆಂಟ್​ನಲ್ಲಿ ನಡೆದಿದೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (ETV Bharat)
ಡಿಸಿಪಿ ವಿ.ಜೆ. ಸಜೀತ್ (ETV Bharat)

ಬೆಂಗಳೂರು: ಕಾನ್ಸರ್​ನಿಂದ ಸಾಫ್ಟ್​ವೇರ್ ಕೆಲಸದಲ್ಲಿದ್ದ ಗಂಡನ ಅಕಾಲಿಕ ನಿಧನದ ನೋವು ಮತ್ತು ಆರ್ಥಿಕ ಸಂಕಷ್ಟದಿಂದ ಮಾನಸಿಕ ಖಿನ್ನತೆಗೆ ಒಳಗಾದ ಹೆಂಡತಿ, ಮಗನ ಜೊತೆ ಆತ್ಮಹತ್ಯೆಗೆ ಶರಣಾದ ಘಟನೆ ಯಲಹಂಕದಲ್ಲಿ ನಡೆದಿದೆ. ಬೆಂಗಳೂರಿನ ಯಲಹಂಕದ ಆರ್​ಎನ್​ಜೆಡ್ ಅಪಾರ್ಟ್ಮೆಂಟ್​ನಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಾಯಿ ರಮ್ಯಾ(40) ಮತ್ತು ಅವರ 12 ವರ್ಷದ ಮಗ ಆತ್ಮಹತ್ಯೆಗೆ ಮಾಡಿಕೊಂಡವರು.

19 ವರ್ಷದ ಮಗಳು ಪಿಜಿಯಲ್ಲಿದ್ದರು, ಜುಲೈ 9 ರಂದು ಮಗಳ ಜೊತೆ ಫೋನ್​ನಲ್ಲಿ ಮಾತನಾಡಿದ ರಮ್ಯಾ ಅನಂತರ ಆತ್ಮಹತ್ಯೆ ಶರಣಾಗಿದ್ದಾರೆ. ನಿನ್ನೆ ಮಗಳು ಪಿಜಿಯಿಂದ ಮನೆಗೆ ಬಂದು ಬಾಗಿಲು ತಟ್ಟಿದ್ದಾರೆ. ಎಷ್ಟೊತ್ತಾದರೂ ಬಾಗಿಲು ತೆರೆಯಲಿಲ್ಲ, ಆಗ ಇನ್ನೊಂದು ಕೀಯಿಂದ ಮನೆಯ ಬಾಗಿಲು ತೆಗೆದಾಗ ಘಟನೆ ಬೆಳಕಿಗೆ ಎಂದು ಡಿಸಿಪಿ ವಿ.ಜೆ. ಸಜೀತ್ ತಿಳಿಸಿದ್ದಾರೆ.

ಮೊದಲಿಗೆ ಮಗ ಭಾರ್ಗವ್ ನೇಣಿ ಬೀಗಿದ ತಾಯಿ, ಅವನು ಸತ್ತ ನಂತರ ಬೆಡ್ ಮೇಲೆ ಶವವನ್ನ ಮಲಗಿಸಿದ್ದಾರೆ. ಆನಂತರ ಅದೇ ಹಗ್ಗಕ್ಕೆ ನೇಣು ಬಿಗಿದುಕೊಂಡು ತಾಯಿ ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಯಲಹಂಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಶವಗಳನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಮೃತ ರಮ್ಯಾ ಮತ್ತು ಆಕೆಯ ಗಂಡ ಶ್ರೀಧರ್ ಪುಲಿವರ್ತ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರ ಜಾತಿ ಬೇರೆಯಾಗಿದ್ದ ಕಾರಣಕ್ಕೆ ಕುಟುಂಬಸ್ಥರಿಂದ ದೂರವಾಗಿ ಬೆಂಗಳೂರಲ್ಲಿ ವಾಸವಾಗಿದ್ದರು. ಶ್ರೀಧರ್ ಪುಲಿವರ್ತ ಸಾಫ್ಟ್​ವೇರ್ ಉದ್ಯೋಗಿಯಾಗಿದ್ದರು. ಮೂರು ತಿಂಗಳ ಹಿಂದೆ ಕ್ಯಾನ್ಸರ್​ನಿಂದ ಅವರು ಸಾವನ್ನಪ್ಪಿದ್ದರು.

ಗಂಡನ ಸಾವಿನ ನಂತರ ಆರ್ಥಿಕವಾಗಿ ಕುಟುಂಬ ಕುಗ್ಗಿ ಹೋಗಿತ್ತು. ಫ್ಲ್ಯಾಟ್ ಬಾಡಿಗೆ 45 ಸಾವಿರ, ಶಾಲೆ ಫೀಸ್, ಮನೆ ನಿರ್ವಹಣೆ ಖರ್ಚುಗಾಗಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಹಣ ಬೇಕಿತ್ತು. ಹಣ ಹೊಂದಿಸೋದು ರಮ್ಯಾಳಿಗೆ ಆಗುತ್ತಿರಲಿಲ್ಲ. ಇದೇ ಕಾರಣಕ್ಕೆ ರಮ್ಯಾ ಖಿನ್ನತೆಗೊಳಗಾಗಿದ್ದರು. ಗಂಡನ ಸಾವಿನ ನಂತರ ರಮ್ಯಾ ಮತ್ತು ಭಾರ್ಗವ್ ಸಾಯುವುದಾಗಿ ಹೇಳಿಕೊಂಡಿದ್ದರಂತೆ, ಸಾಯುವ ಮುನ್ನ ಪೊಲೀಸರು, ಡಾಕ್ಟರ್ ಮತ್ತು ಮಗಳಿಗೆ ಪತ್ರ ಬರೆದು ನೇಣಿಗೆ ಶರಣಾಗಿದ್ದಾರೆ.

ಇದನ್ನೂ ಓದಿ: ಬೈಕ್​ ಕೊಡಿಸದ ಕಾರಣಕ್ಕೆ ಮಗ ಆತ್ಮಹತ್ಯೆ: ನೊಂದು ತಾಯಿಯೂ ಸಾವಿಗೆ ಶರಣು - Mother and Son suicide in haveri

ಡಿಸಿಪಿ ವಿ.ಜೆ. ಸಜೀತ್ (ETV Bharat)

ಬೆಂಗಳೂರು: ಕಾನ್ಸರ್​ನಿಂದ ಸಾಫ್ಟ್​ವೇರ್ ಕೆಲಸದಲ್ಲಿದ್ದ ಗಂಡನ ಅಕಾಲಿಕ ನಿಧನದ ನೋವು ಮತ್ತು ಆರ್ಥಿಕ ಸಂಕಷ್ಟದಿಂದ ಮಾನಸಿಕ ಖಿನ್ನತೆಗೆ ಒಳಗಾದ ಹೆಂಡತಿ, ಮಗನ ಜೊತೆ ಆತ್ಮಹತ್ಯೆಗೆ ಶರಣಾದ ಘಟನೆ ಯಲಹಂಕದಲ್ಲಿ ನಡೆದಿದೆ. ಬೆಂಗಳೂರಿನ ಯಲಹಂಕದ ಆರ್​ಎನ್​ಜೆಡ್ ಅಪಾರ್ಟ್ಮೆಂಟ್​ನಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಾಯಿ ರಮ್ಯಾ(40) ಮತ್ತು ಅವರ 12 ವರ್ಷದ ಮಗ ಆತ್ಮಹತ್ಯೆಗೆ ಮಾಡಿಕೊಂಡವರು.

19 ವರ್ಷದ ಮಗಳು ಪಿಜಿಯಲ್ಲಿದ್ದರು, ಜುಲೈ 9 ರಂದು ಮಗಳ ಜೊತೆ ಫೋನ್​ನಲ್ಲಿ ಮಾತನಾಡಿದ ರಮ್ಯಾ ಅನಂತರ ಆತ್ಮಹತ್ಯೆ ಶರಣಾಗಿದ್ದಾರೆ. ನಿನ್ನೆ ಮಗಳು ಪಿಜಿಯಿಂದ ಮನೆಗೆ ಬಂದು ಬಾಗಿಲು ತಟ್ಟಿದ್ದಾರೆ. ಎಷ್ಟೊತ್ತಾದರೂ ಬಾಗಿಲು ತೆರೆಯಲಿಲ್ಲ, ಆಗ ಇನ್ನೊಂದು ಕೀಯಿಂದ ಮನೆಯ ಬಾಗಿಲು ತೆಗೆದಾಗ ಘಟನೆ ಬೆಳಕಿಗೆ ಎಂದು ಡಿಸಿಪಿ ವಿ.ಜೆ. ಸಜೀತ್ ತಿಳಿಸಿದ್ದಾರೆ.

ಮೊದಲಿಗೆ ಮಗ ಭಾರ್ಗವ್ ನೇಣಿ ಬೀಗಿದ ತಾಯಿ, ಅವನು ಸತ್ತ ನಂತರ ಬೆಡ್ ಮೇಲೆ ಶವವನ್ನ ಮಲಗಿಸಿದ್ದಾರೆ. ಆನಂತರ ಅದೇ ಹಗ್ಗಕ್ಕೆ ನೇಣು ಬಿಗಿದುಕೊಂಡು ತಾಯಿ ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಯಲಹಂಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಶವಗಳನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಮೃತ ರಮ್ಯಾ ಮತ್ತು ಆಕೆಯ ಗಂಡ ಶ್ರೀಧರ್ ಪುಲಿವರ್ತ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರ ಜಾತಿ ಬೇರೆಯಾಗಿದ್ದ ಕಾರಣಕ್ಕೆ ಕುಟುಂಬಸ್ಥರಿಂದ ದೂರವಾಗಿ ಬೆಂಗಳೂರಲ್ಲಿ ವಾಸವಾಗಿದ್ದರು. ಶ್ರೀಧರ್ ಪುಲಿವರ್ತ ಸಾಫ್ಟ್​ವೇರ್ ಉದ್ಯೋಗಿಯಾಗಿದ್ದರು. ಮೂರು ತಿಂಗಳ ಹಿಂದೆ ಕ್ಯಾನ್ಸರ್​ನಿಂದ ಅವರು ಸಾವನ್ನಪ್ಪಿದ್ದರು.

ಗಂಡನ ಸಾವಿನ ನಂತರ ಆರ್ಥಿಕವಾಗಿ ಕುಟುಂಬ ಕುಗ್ಗಿ ಹೋಗಿತ್ತು. ಫ್ಲ್ಯಾಟ್ ಬಾಡಿಗೆ 45 ಸಾವಿರ, ಶಾಲೆ ಫೀಸ್, ಮನೆ ನಿರ್ವಹಣೆ ಖರ್ಚುಗಾಗಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಹಣ ಬೇಕಿತ್ತು. ಹಣ ಹೊಂದಿಸೋದು ರಮ್ಯಾಳಿಗೆ ಆಗುತ್ತಿರಲಿಲ್ಲ. ಇದೇ ಕಾರಣಕ್ಕೆ ರಮ್ಯಾ ಖಿನ್ನತೆಗೊಳಗಾಗಿದ್ದರು. ಗಂಡನ ಸಾವಿನ ನಂತರ ರಮ್ಯಾ ಮತ್ತು ಭಾರ್ಗವ್ ಸಾಯುವುದಾಗಿ ಹೇಳಿಕೊಂಡಿದ್ದರಂತೆ, ಸಾಯುವ ಮುನ್ನ ಪೊಲೀಸರು, ಡಾಕ್ಟರ್ ಮತ್ತು ಮಗಳಿಗೆ ಪತ್ರ ಬರೆದು ನೇಣಿಗೆ ಶರಣಾಗಿದ್ದಾರೆ.

ಇದನ್ನೂ ಓದಿ: ಬೈಕ್​ ಕೊಡಿಸದ ಕಾರಣಕ್ಕೆ ಮಗ ಆತ್ಮಹತ್ಯೆ: ನೊಂದು ತಾಯಿಯೂ ಸಾವಿಗೆ ಶರಣು - Mother and Son suicide in haveri

Last Updated : Jul 13, 2024, 11:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.