ಬೆಂಗಳೂರು: ರಾಷ್ಟ್ರೀಯ ಶಕ್ತಿ ಸಂರಕ್ಷಣಾ ಪ್ರಶಸ್ತಿ-2023 ರಾಜ್ಯ ನಿರ್ದೇಶಿಕ ಏಜೆನ್ಸಿ ವಲಯದಲ್ಲಿ ಕರ್ನಾಟಕಕ್ಕೆ ಪ್ರಥಮ ಪ್ರಶಸ್ತಿ ಲಭಿಸಿದೆ. ಕೇಂದ್ರ ಇಂಧನ ಸಚಿವಾಲಯ ಈ ಆಯ್ಕೆ ಮಾಡಿದೆ.
ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನದ ಭಾಗವಾಗಿ ಶಕ್ತಿ ಸಾಮರ್ಥ್ಯ ಬ್ಯೂರೋ ರಾಷ್ಟ್ರೀಯ ಶಕ್ತಿ ಸಂರಕ್ಷಣಾ ಪ್ರಶಸ್ತಿ -2023 ನೀಡುತ್ತದೆ. ಕರ್ನಾಟಕ ನವೀಕರಣ ಶಕ್ತಿ ಅಭಿವೃದ್ಧಿ ಲಿಮಿಟೆಡ್ನ (ಕೆಆರ್ಇಡಿಎಲ್) ಎಂಡಿ ಕೆ.ಪಿ.ರುದ್ರಪ್ಪಯ್ಯ ಈ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮ ಅವರಿಂದ ಸ್ವೀಕರಿಸಿದರು. ನವದೆಹಲಿಯ ವಿಜ್ಞಾನ್ ಭವನದನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಕ್ತಿ ಸಂರಕ್ಷಣೆಗೆ ರಾಜ್ಯ ನಡೆಸಿರುವ ಕಾರ್ಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಶಸ್ತಿ ಪಡೆದ ಕರ್ನಾಟಕ ನವೀಕರಣ ಶಕ್ತಿ ಅಭಿವೃದ್ಧಿ ಲಿಮಿಟೆಡ್ನ ಅಧಿಕಾರಿಗಳಿಗೆ, ಅವರ ಸಾಧನೆ ಮತ್ತು ಜಾಗತಿಕ ತಾಪಮಾನ ಹಾಗೂ ಹವಾಮಾನ ಬದಲಾವಣೆಯಿಂದ ಎದುರಾಗುತ್ತಿರುವ ನಿಟ್ಟಿನಲ್ಲಿ ಶಕ್ತಿ ಸಂರಕ್ಷಣೆ ಅಗತ್ಯವನ್ನು ಒತ್ತಿ ಹೇಳಿರುವ ಕ್ರಮವನ್ನು ಇಂಧನ ಸಚಿವ ಕೆ.ಜೆ.ಜಾರ್ಜ್ ಶ್ಲಾಘಿಸಿದ್ದಾರೆ. ಇಲಾಖೆಯು ಶುದ್ಧ ಮತ್ತು ಹಸಿರುವ ಶಕ್ತಿ ಉಪಕ್ರಮವನ್ನು ತನ್ನ ಪ್ರಾಥಮಿಕ ಗುರಿಯಾಗಿಸಿಕೊಂಡು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುತ್ತಿದೆ. ಈ ಮೂಲಕ ಶಕ್ತಿ ಸಂರಕ್ಷಣೆ ಮತ್ತು ಶಕ್ತಿ ಸಾಮರ್ಥ್ಯವನ್ನು ವೃದ್ಧಿಸಿದೆ ಎಂದಿದ್ದಾರೆ.