ಕರ್ನಾಟಕ

karnataka

ಕತ್ತು ಕೊಯ್ದ ಸ್ಥಿತಿಯಲ್ಲಿ ಕ್ಯಾಬ್​ ಡ್ರೈವರ್​ ಶವ ಪತ್ತೆ.. ಸಾವಿನ ಸುತ್ತ ಅನುಮಾನದ ಹುತ್ತ..

By

Published : Aug 20, 2019, 4:50 PM IST

ಬಿಡಿಎ ಲೇಔಟ್​ನ ಮಾರುತಿ ನಗರದ ಕಾರೊಂದರಲ್ಲಿ ಕತ್ತು ಕೊಯ್ದ ಸ್ಥಿತಿಯಲ್ಲಿ ಓಲಾ ಕ್ಯಾಬ್​ ಡ್ರೈವರ್​ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕ್ಯಾಬ್​ ಡ್ರೈವರ್​ ಶವ ಪತ್ತೆ

ಬೆಂಗಳೂರು: ಕತ್ತು ಕೊಯ್ದ ಸ್ಥಿತಿಯಲ್ಲಿ ಓಲಾ ಕ್ಯಾಬ್​ ಡ್ರೈವರ್​ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಬಿಡಿಎ ಲೇಔಟ್​ನ ಮಾರುತಿ ನಗರದ ಕಾರೊಂದರಲ್ಲಿ ಚಾಲಕನ ಮೃತದೇಹ ಸಿಕ್ಕಿದೆ. ನಾಗರಭಾವಿಯ ದೀಪಾ ಕಾಂಪ್ಲೆಕ್ಸ್ ಬಳಿ ಮಂಜುನಾಥ್ ಎಂಬ ಓಲಾ ಕ್ಯಾಬ್​ ಚಾಲಕ ವಾಸವಾಗಿದ್ದರು. ನಿನ್ನೆ ರಾತ್ರಿ‌ ಮನೆಯಿಂದ ಹೋದ ಮಂಜುನಾಥ್​, ಇಂದು ಕಾರಿನ ಒಳಗಡೆ ಶವವಾಗಿ ದೊರೆತಿದ್ದಾರೆ.

ಕ್ಯಾಬ್​ ಡ್ರೈವರ್​ ಶವ ಪತ್ತೆ..

ಸ್ಥಳಕ್ಕೆ ಜ್ಞಾನಭಾರತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕಾರಿನ ಕೀ ಒಳಗೆ ಇತ್ತು. ಮಂಜುನಾಥ್ ಸಾವಿನ ಸುತ್ತ ಹಲವಾರು ಅನುಮಾನಗಳು ಹುಟ್ಟಿಕೊಂಡಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details