ಸಾಹಿಬ್ ಗಂಜ್(ಜಾರ್ಖಂಡ್): ಗುಲಾಬ್ ಚಂಡಮಾರುತದಿಂದಾಗಿ ಅನೇಕ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಇದರ ಮಧ್ಯೆ ವ್ಯಕ್ತಿಯೋರ್ವ ಮಗುವಿಗೆ ಪೋಲಿಯೊ ಲಸಿಕೆ ಹಾಕಿಸಲು ಅಡುಗೆ ಪಾತ್ರೆಯಲ್ಲಿ ಹೊತ್ತು ತಂದಿರುವ ಘಟನೆ ನಡೆದಿದೆ.
ಜಾರ್ಖಂಡ್ನ ಸಾಹಿಬ್ಗಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸಿರ್ಸಾ ಗ್ರಾಮದ ವ್ಯಕ್ತಿ ಶಿಶುವಿಗೆ ಲಸಿಕೆ ಕೊಡಿಸುವ ಉದ್ದೇಶದಿಂದ ವಿಭಿನ್ನ ಹಾದಿ ಹಿಡಿದಿದ್ದರು. ತನ್ನ ಮಗುವನ್ನು ಆರೋಗ್ಯ ಕೇಂದ್ರಕ್ಕೆ ಸುರಕ್ಷಿತವಾಗಿ ತರುವ ಬಗ್ಗೆ ಸಾಕಷ್ಟು ಯೋಚಿಸಿ ಹೈರಾಣಾದ ವ್ಯಕ್ತಿ ಕೊನೆಗೆ ಪಾತ್ರೆಯ ಮೊರೆ ಹೋಗಿದ್ದ. ಅಂತಿಮವಾಗಿ, ಭೀಕರ ಪ್ರವಾಹದ ನಡುವೆಯೂ ಶಿಶುವನ್ನು ಪಾತ್ರೆಯಲ್ಲಿ ಕರೆತಂದು ಲಸಿಕೆ ಹಾಕಿಸಿದ್ದಾನೆ.