ETV Bharat / snippets

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಸಾಮಾಜಿಕ ಜಾಲತಾಣಗಳ ದತ್ತಾಂಶ ಸಂಗ್ರಹ

Renukaswamy Social media data  Renukaswamy murder case  Bengaluru  Actor Darshan
ಕೊಲೆಗೀಡಾದ ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ (ETV Bharat)
author img

By ETV Bharat Karnataka Team

Published : Jul 19, 2024, 6:46 AM IST

ಬೆಂಗಳೂರು: ನಟ ದರ್ಶನ್ ಮತ್ತು ಸಹಚರರಿಂದ ರೇಣುಕಾಸ್ವಾಮಿ ಎಂಬಾತ ಹತ್ಯೆಯಾಗಿ ಒಂದು ತಿಂಗಳು ಕಳೆದಿದೆ. ಈ ಹತ್ಯೆಗೆ ಕಾರಣ ಎನ್ನಲಾದ ರೇಣುಕಾಸ್ವಾಮಿ ಕಳುಹಿಸಿದ್ದ ಅಶ್ಲೀಲ ಸಂದೇಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆತ ಕಳುಹಿಸಿದ್ದ ಈ ಸಂದೇಶಗಳು ಹಾಗು ಫೋಟೋಗಳನ್ನು ಒಳಗೊಂಡ ದತ್ತಾಂಶ ಕಲೆಹಾಕುವ ಜವಾಬ್ದಾರಿಯನ್ನು ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಅವರಿಗೆ ವಹಿಸಲಾಗಿದೆ.

ಕೊಲೆಯಾದ ವ್ಯಕ್ತಿ ಬಳಸುತ್ತಿದ್ದ ಎರಡು ಫೋನ್ ನಂಬರ್‌ಗಳ ಪೈಕಿ ಒಂದು ನಂಬರ್‌ ಅನ್ನು ಆತ ತನ್ನ ಪತ್ನಿಯ ಹೆಸರಿನಲ್ಲಿ‌ ಖರೀದಿಸಿದ್ದ. ಸರ್ವಿಸ್ ಪ್ರೊವೈಡಿಂಗ್ ಕಂಪನಿಗಳಿಂದ ಎರಡೂ ಫೋನ್ ನಂಬರ್‌ಗಳ ನಕಲಿ‌ ಸಿಮ್ ಕಾರ್ಡ್‌ಗಳನ್ನು ಪಡೆದಿರುವ‌‌ ಪೊಲೀಸರು, ಆತನ ಸಾಮಾಜಿಕ ಜಾಲತಾಣ ಖಾತೆಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸಿಇಎನ್ ಠಾಣೆಯ ತಜ್ಞರ ಸಹಾಯದಿಂದ ದತ್ತಾಂಶ ಕಲೆಹಾಕಲಾಗುತ್ತಿದೆ.

ಬೆಂಗಳೂರು: ನಟ ದರ್ಶನ್ ಮತ್ತು ಸಹಚರರಿಂದ ರೇಣುಕಾಸ್ವಾಮಿ ಎಂಬಾತ ಹತ್ಯೆಯಾಗಿ ಒಂದು ತಿಂಗಳು ಕಳೆದಿದೆ. ಈ ಹತ್ಯೆಗೆ ಕಾರಣ ಎನ್ನಲಾದ ರೇಣುಕಾಸ್ವಾಮಿ ಕಳುಹಿಸಿದ್ದ ಅಶ್ಲೀಲ ಸಂದೇಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆತ ಕಳುಹಿಸಿದ್ದ ಈ ಸಂದೇಶಗಳು ಹಾಗು ಫೋಟೋಗಳನ್ನು ಒಳಗೊಂಡ ದತ್ತಾಂಶ ಕಲೆಹಾಕುವ ಜವಾಬ್ದಾರಿಯನ್ನು ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಅವರಿಗೆ ವಹಿಸಲಾಗಿದೆ.

ಕೊಲೆಯಾದ ವ್ಯಕ್ತಿ ಬಳಸುತ್ತಿದ್ದ ಎರಡು ಫೋನ್ ನಂಬರ್‌ಗಳ ಪೈಕಿ ಒಂದು ನಂಬರ್‌ ಅನ್ನು ಆತ ತನ್ನ ಪತ್ನಿಯ ಹೆಸರಿನಲ್ಲಿ‌ ಖರೀದಿಸಿದ್ದ. ಸರ್ವಿಸ್ ಪ್ರೊವೈಡಿಂಗ್ ಕಂಪನಿಗಳಿಂದ ಎರಡೂ ಫೋನ್ ನಂಬರ್‌ಗಳ ನಕಲಿ‌ ಸಿಮ್ ಕಾರ್ಡ್‌ಗಳನ್ನು ಪಡೆದಿರುವ‌‌ ಪೊಲೀಸರು, ಆತನ ಸಾಮಾಜಿಕ ಜಾಲತಾಣ ಖಾತೆಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸಿಇಎನ್ ಠಾಣೆಯ ತಜ್ಞರ ಸಹಾಯದಿಂದ ದತ್ತಾಂಶ ಕಲೆಹಾಕಲಾಗುತ್ತಿದೆ.

ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರತಿಭಟನೆ - Valmiki Corporation scam

ETV Bharat Logo

Copyright © 2024 Ushodaya Enterprises Pvt. Ltd., All Rights Reserved.