ರಾಜ್ಯದ ಹಿರಿಯ ಕ್ರಿಕೆಟ್​ ಅಭಿಮಾನಿಗಳಿಂದ ಟೀಂ ಇಂಡಿಯಾಗೆ ಸಲಹೆ ಮತ್ತು ಶುಭ ಹಾರೈಕೆ - T20 WORLD CUP 2024

By ETV Bharat Karnataka Team

Published : Jun 29, 2024, 3:35 PM IST

Updated : Jun 29, 2024, 5:55 PM IST

thumbnail
ರಾಜ್ಯದ ಕ್ರಿಕೆಟ್​ ಅಭಿಮಾನಿಗಳಿಂದ ಟೀಂ ಇಂಡಿಯಾಗೆ ಶುಭ ಹಾರೈಕೆ (ETV Bharat)

ಬೆಂಗಳೂರು: ಟಿ-20 ವಿಶ್ವಕಪ್​ನಲ್ಲಿ ಅಜೇಯವಾಗಿ ಫೈನಲ್ ಹಂತಕ್ಕೆ ತಲುಪಿರುವ ಭಾರತಕ್ಕೆ ರಾಜ್ಯದ ಹಿರಿಯ ಕ್ರಿಕೆಟ್​ ಅಭಿಮಾನಿಗಳು ಗೆದ್ದು ಬಾ ಭಾರತ ಎಂದು ಶುಭ ಕೋರಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಭಾರತದ ಧ್ವಜ ಹಿಡಿದು ಟೀಂ ಇಂಡಿಯಾಗೆ ವಿಶ್ ಮಾಡಿದ್ದಾರೆ. 

ಮಂಗಳೂರಿನ ಹಿರಿಯ ಕ್ರಿಕೆಟ್​ ಅಭಿಮಾನಿ ಜೆರಾಲ್ಡ್​ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, ನನ್ನ ದೇಹದ ಪ್ರತಿ ನರದಲ್ಲೂ ಕ್ರಿಕೆಟ್​ ಬಗ್ಗೆ ಅಭಿಮಾನ ಇದೆ ಎಂದು ಹೇಳುತ್ತೇನೆ. ಮತ್ತೆ ನಮ್ಮ ದೇಶಕ್ಕೆ ಕೀರ್ತಿ ತರಲು ಟೀಂ ಇಂಡಿಯಾ ಅತ್ಯುತ್ತಮ ಪ್ರದರ್ಶನ ತೋರಿಸಲಿ ಎಂದು ಹಾರೈಸಿದ್ದಾರೆ.

ಮೈಸೂರಿನಿಂದ ಶುಭ ಕೋರಿರುವ ಕರ್ನಾಟಕ ಕ್ರಿಕೆಟ್​ ಸಂಸ್ಥೆಯ ಅಂಪೈರ್​ ಎಂ ಆರ್​ ಸುರೇಶ್, ಟೀಂ ಇಂಡಿಯಾ ಅತ್ಯುತ್ತಮ ಫಾರ್ಮನಲ್ಲಿದೆ. ಅದರಲ್ಲೂ ರೋಹಿತ್​ ಶರ್ಮಾ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ತೋರುತ್ತಿದ್ದಾರೆ. ಉಳಿದಂತೆ ಬೌಲಿಂಗ್​ ಮತ್ತು ಬ್ಯಾಟಿಂಗ್​ ವಿಭಾಗದಲ್ಲಿ ದಕ್ಷಿಣ ಆಫ್ರಿಕಾಗಿಂತಲು ಭಾರತ ಬಲಿಷ್ಠವಾಗಿದೆ. ಹಾಗಾಗಿ ಈ ಬಾರಿ ಭಾರತ ಕಪ್​ನೊಂದಿಗೆ ಮರಳಲಿ ಎಂದು ಹಾರೈಸಿದರು.

ಹುಬ್ಬಳ್ಳಿಯ ಕ್ರಿಕೆಟ್​ ಅಭಿಮಾನಿ ಸುರೇಶ್​ ಶೇಜವಾಡಕರ್​ ಮಾತನಾಡಿ, ಭಾರತವು ಗೆಲ್ಲುವ ಫೆವರೆಟ್​ ತಂಡವಾಗಿದೆ. ದಕ್ಷಿಣ ಆಫ್ರಿಕಾ ತಂಡ ಸಹ ಉತ್ತಮವಾಗಿದೆ. ಆದ್ರೆ ನಮ್ಮ ಭಾರತ ತಂಡ ಜಯ ಸಾಧಿಸಲಿ ಎಂದು ಹಾರೈಸುತ್ತೇವೆ ಎಂದರು. 

ಚಾಮರಾಜನಗರದ ಪ್ರಾಂಶುಪಾಲರಾದ ಮರಿಸ್ವಾಮಿ ಈಟಿವಿ ಭಾರತದೊಂದಿಗೆ ಮಾತನಾಡಿ, 10 ವರ್ಷಗಳ ಬಳಿಕ ಟೀಂ ಇಂಡಿಯಾ ಟಿ20 ಫೈನಲ್​ಗೆ ಪ್ರವೇಶ ಮಾಡಿದೆ. ಈ ಬಾರಿ ಭಾರತ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದ್ದು, ಕಪ್​ ಗೆಲ್ಲಲಿದೆ. ವಿಶ್ವಕಪ್​ ಗೆದ್ದು ಬಾ ಇಂಡಿಯಾ ಎಂದು ಶುಭ ಕೋರಿದರು.

ಇದನ್ನೂ ಓದಿ: ಟಿ-20 ವಿಶ್ವಕಪ್: ​’ಗೆದ್ದು ಬಾ ಭಾರತ‘ ಎಂದು ಟೀಂ ಇಂಡಿಯಾಕ್ಕೆ ರಾಜ್ಯದ ಯುವಕರ ಶುಭ ಹಾರೈಕೆ - state youths wishes to team india 

Last Updated : Jun 29, 2024, 5:55 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.