ಹಾವೇರಿ: ನೆಚ್ಚಿನ ಶಿಕ್ಷಕಿಯ ವರ್ಗಾವಣೆಗೆ ಬೇಸರ; ಬೀಳ್ಕೊಡುಗೆ ವೇಳೆ ಬಿಕ್ಕಿ ಬಿಕ್ಕಿ ಅತ್ತ ಮುದ್ದು ಮಕ್ಕಳು - Teacher Transfer

By ETV Bharat Karnataka Team

Published : Aug 31, 2024, 7:46 PM IST

thumbnail
ಶಿಕ್ಷಕಿಯ ವರ್ಗಾವಣೆಗೆ ಮುದ್ದು ಮಕ್ಕಳ ಕಣ್ಣೀರಿನ ಬೀಳ್ಕೊಡುಗೆ (ETV Bharat)

ಹಾವೇರಿ: ನೆಚ್ಚಿನ ಶಿಕ್ಷಕಿಯೊಬ್ಬರು ಶಾಲೆಯಿಂದ ವರ್ಗಾವಣೆ ಆಗಿದ್ದಕ್ಕೆ ಆ ಶಾಲೆ ವಿದ್ಯಾರ್ಥಿಗಳು ಕಂಬನಿ ಇಟ್ಟ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ವಳಗೇರಿಯಲ್ಲಿ ನಡೆದಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಗಂಗಾ ರಜಪೂತ ಅವರಿಗೆ ಸವಣೂರು ತಾಲೂಕಿಗೆ ಸಿಆರ್​ಪಿಯಾಗಿ ಪ್ರಮೋಷನ್ ಆಗಿದೆ. 

ಈ ಹಿನ್ನೆಲೆಯಲ್ಲಿ ಗಂಗಾ ರಜಪೂತ ಅವರಿಗೆ ಇಂದು ಶಾಲೆಯಲ್ಲಿ ಬೀಳ್ಕೋಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಬೀಳ್ಕೊಡುಗೆ ಸಮಾರಂಭದ ಬಳಿಕ ಶಾಲೆಯಿಂದ ಹೊರಟ ಶಿಕ್ಷಕಿಯನ್ನ ವಿದ್ಯಾರ್ಥಿಗಳು ತಬ್ಬಿಕೊಂಡು, ಬಿಕ್ಕಿಬಿಕ್ಕಿ ಅತ್ತ ಘಟನೆ ನಡೆಯಿತು. 

ಗಂಗಾ ಕಳೆದ ಎಂಟು ವರ್ಷಗಳಿಂದ ಶಾಲೆಯಲ್ಲಿ ಇಂಗ್ಲಿಷ್​ ಮತ್ತು ವಿಜ್ಞಾನ ಪಾಠ ಬೋಧನೆ ಮಾಡುತ್ತಿದ್ದರು. ಶಾಲೆಯಲ್ಲಿನ ಮಕ್ಕಳಿಗೆ ಅತ್ಯಂತ ಪ್ರೀತಿಯ ನೆಚ್ಚಿನ ಶಿಕ್ಷಕಿಯಾಗಿದ್ದರು. ಆದರೆ, ಈಗ ಈ ಶಾಲೆಯಿಂದ ಅವರ ವರ್ಗಾವಣೆ ಆಗಿದ್ದಕ್ಕೆ ಮಕ್ಕಳು ತಮ್ಮ ಶಿಕ್ಷಕಿಯನ್ನು ಬಿಟ್ಟುಕೊಡದೆ ಕಣ್ಣೀರು ಹಾಕಿದರು. ಮಕ್ಕಳ ಕಣ್ಣೀರು ಕಂಡು ಶಿಕ್ಷಕಿ ಸಹ ದುಃಖ ತಡೆಯಲಾಗದೆ ಭಾವುಕರಾದ ದೃಶ್ಯ ಕಂಡುಬಂತು. ವಿದ್ಯಾರ್ಥಿ ಮತ್ತು ಶಿಕ್ಷಕಿಯರ ಈ ಅವಿಸ್ಮರಣೀಯ ಘಟನೆ ಕಂಡು ಗ್ರಾಮಸ್ಥರು ಶಿಕ್ಷಕಿಯ ಸೇವೆಯನ್ನು ನೆನೆದರು. 

ಇದನ್ನೂ ಓದಿ: ಯಾದಗಿರಿ: ನೆಚ್ಚಿನ ಶಿಕ್ಷಕಿ ವರ್ಗಾವಣೆ.. ತಮ್ಮನ್ನು ಬಿಟ್ಟೋಗದಂತೆ ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.