ಮೈಸೂರು ದಸರೆಗೆ ಮುನ್ನುಡಿ ಬರೆದ ಗಜ‍ಪಯಣ: ವಿಡಿಯೋ ನೋಡಿ - Mysuru Dasara Gajapayana

By ETV Bharat Karnataka Team

Published : Aug 21, 2024, 4:12 PM IST

thumbnail
ದಸರೆಗೆ ಮುನ್ನುಡಿ ಬರೆದ 'ಗಜ‍ಪಯಣ' (ETV Bharat)

ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿಂದು ದಸರಾ ಸಂಭ್ರಮದ ಪ್ರಮುಖ ಆಕರ್ಷಣೆಯಾದ ಗಜಪಯಣಕ್ಕೆ ಚಾಲನೆ ಸಿಕ್ಕಿತು. ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಹಾಗೂ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಗಜಪಯಣಕ್ಕೆ ಅಧಿಕೃತ ಚಾಲನೆ ನೀಡಿದರು.  

ಇದಕ್ಕೂ ಮುನ್ನ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು ಇನ್ನುಳಿದಂತೆ ಕಂಜನ್‌, ಏಕಲವ್ಯ, ಭೀಮಾ, ಧನಂಜಯ, ಗೋಪಿ, ರೋಹಿತ್‌ ಹಾಗೂ ಹೆಣ್ಣಾನೆಗಳಾದ ಲಕ್ಷ್ಮೀ , ವರಲಕ್ಷ್ಮೀ  ಸೇರಿ 9 ಆನೆಗಳಿಗೆ ವೀರನಹೊಸಹಳ್ಳಿಯ ಹೆಬ್ಬಾಗಿಲಿನಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಲಾಯಿತು. ವೀರಗಾಸೆ, ಮಂಗಳವಾದ್ಯ, ಕಂಸಾಳೆ, ಡೊಳ್ಳು ಕುಣಿತ ಮೇಳೈಸಿತು.

ಈ ಬಾರಿ ಒಟ್ಟು 14 ಆನೆಗಳು ನಾಡಹಬ್ಬದಲ್ಲಿ ಭಾಗವಹಿಸಲಿವೆ. ಈ ಪೈಕಿ ಮೊದಲ ಹಂತದಲ್ಲಿ 9 ಆನೆಗಳು ಇಂದು ಮೈಸೂರು ತಲುಪಲಿವೆ. ಎರಡನೇ ಹಂತದಲ್ಲಿ 5 ಆನೆಗಳು ಅರಮನೆಗೆ ಆಗಮಿಸಲಿವೆ.

ಇದನ್ನೂ ಓದಿ: ಅಭಿಮನ್ಯು ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕ ಪೂಜೆ: ಮೊದಲ ಹಂತದ ಗಜಪಯಣಕ್ಕೆ ಸಚಿವರಿಂದ ಚಾಲನೆ - Flagged off to Gajapayan

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.