ETV Bharat / state

ಫುಟ್‌ಬೋರ್ಡ್ ಮೇಲೆ ನಿಲ್ಲಬೇಡಿ ಎಂದಿದ್ದಕ್ಕೆ ಬಿಎಂಟಿಸಿ ನಿರ್ವಾಹಕನಿಗೆ ಚಾಕು ಇರಿತ: ಆರೋಪಿ ಬಂಧನ - Stabbing Accused Arrest

author img

By ETV Bharat Karnataka Team

Published : 2 hours ago

ಬಿಎಂಟಿಸಿ ನಿರ್ವಾಹಕನಿಗೆ ಚಾಕು ಇರಿದಿದ್ದ ಪ್ರಕರಣ ಸಂಬಂಧ ಬೆಂಗಳೂರು ಪೊಲೀಸರು ಆರೋಪಿಯನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.

BUS CONDUCTOR  STABBED CASE  ACCUSED ARRESTED  BENGALURU
ನಿರ್ವಾಹಕನಿಗೆ ಚಾಕು ಇರಿದಿದ್ದ ಆರೋಪಿಯ ಬಂಧನ (ETV Bharat)

ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ನಿರ್ವಾಹಕನಿಗೆ ಚಾಕು ಇರಿದ ಆರೋಪಿ ಯುವಕನನ್ನು ವೈಟ್​ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ ಮೂಲದ ಹರಿ ಸಿನ್ಹಾ ಬಂಧಿತ ಆರೋಪಿ.

ವೈಟ್ ಫೀಲ್ಡ್ ಘಟಕದ ಬಿಎಂಟಿಸಿ ವೋಲ್ವೋ ಬಸ್‌ನ ನಿರ್ವಾಹಕನಿಗೆ ಚಾಕು ಇರಿದಿರುವ ಘಟನೆ ಮಂಗಳವಾರ ಐಟಿಪಿಎಲ್ ಬಸ್ ನಿಲ್ದಾಣದ ಬಳಿ ನಡೆದಿತ್ತು. ಕೃತ್ಯದ ಬಳಿಕ ಬಸ್ ಗಾಜುಗಳನ್ನು ಪುಡಿಗೊಳಿಸಿ ಚಾಕು ಪ್ರದರ್ಶಿಸುತ್ತಿದ್ದ ಆರೋಪಿಯನ್ನು ಕಂಡು ಇತರೆ ಪ್ರಯಾಣಿಕರು ಭಯಭೀತರಾಗಿ ಬಸ್‌ನಿಂದ ಇಳಿದು ತೆರಳಿದ್ದರು.

ಬಿಕಾಂ ಪದವೀಧರನಾಗಿದ್ದ ಹರಿ ಸಿನ್ಹಾ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಇತ್ತೀಚೆಗೆ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಕೋಪಗೊಂಡಿದ್ದ ಆರೋಪಿ ಕೆಲಸದಿಂದ ತೆಗೆದಿದ್ದ ಮ್ಯಾನೇಜರ್​​ಗೆ ಬೆದರಿಸಲು ಚಾಕು ಇಟ್ಟುಕೊಂಡು ತೆರಳಿದ್ದ. ಆದರೆ ಕಂಪನಿಯ ಬಳಿ ಯಾರು ಸಿಗದಿದ್ದಾಗ ಮನೆಗೆ ತೆರಳಲು ಬಸ್ ಹತ್ತಿದ್ದ. ಬಸ್‌ನಲ್ಲಿ‌ ಫುಟ್ ಬೋರ್ಡ್ ಮೇಲೆ ನಿಂತಿದ್ದ ಆರೋಪಿಯನ್ನು ಬಸ್​ನೊಳಗೆ ಹೋಗುವಂತೆ ನಿರ್ವಾಹಕ ಯೋಗೇಶ್ ತಿಳಿಸಿದ್ದರು. ಕೋಪದಲ್ಲಿದ್ದ ಆರೋಪಿ ತನ್ನ ಬಳಿಯಿದ್ದ ಚಾಕುವಿನಿಂದ ನಿರ್ವಾಹಕನಿಗೆ ಇರಿದಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸ್​​ ಮೂಲಗಳು ತಿಳಿಸಿವೆ.

ಸದ್ಯ ಆರೋಪಿಯನ್ನ ಬಂಧಿಸಿರುವುದಾಗಿ ವೈಟ್​ಫೀಲ್ಡ್ ಪೊಲೀಸರು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಗಾಯಾಳು ನಿರ್ವಾಹಕನನ್ನು ವೈಟ್​ಫೀಲ್ಡ್​ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಓದಿ: ಸಿಂಧನೂರಲ್ಲಿ ಕಿಡ್ನಾಪ್​ ಆಗಿದ್ದ ನಾಲ್ವರು ಮಕ್ಕಳ ರಕ್ಷಣೆ: ಅಂತಾರಾಜ್ಯ ಅಪಹರಣಕಾರರ​ ಬಂಧನ - Children Kidnap Case

ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ನಿರ್ವಾಹಕನಿಗೆ ಚಾಕು ಇರಿದ ಆರೋಪಿ ಯುವಕನನ್ನು ವೈಟ್​ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಾರ್ಖಂಡ್ ಮೂಲದ ಹರಿ ಸಿನ್ಹಾ ಬಂಧಿತ ಆರೋಪಿ.

ವೈಟ್ ಫೀಲ್ಡ್ ಘಟಕದ ಬಿಎಂಟಿಸಿ ವೋಲ್ವೋ ಬಸ್‌ನ ನಿರ್ವಾಹಕನಿಗೆ ಚಾಕು ಇರಿದಿರುವ ಘಟನೆ ಮಂಗಳವಾರ ಐಟಿಪಿಎಲ್ ಬಸ್ ನಿಲ್ದಾಣದ ಬಳಿ ನಡೆದಿತ್ತು. ಕೃತ್ಯದ ಬಳಿಕ ಬಸ್ ಗಾಜುಗಳನ್ನು ಪುಡಿಗೊಳಿಸಿ ಚಾಕು ಪ್ರದರ್ಶಿಸುತ್ತಿದ್ದ ಆರೋಪಿಯನ್ನು ಕಂಡು ಇತರೆ ಪ್ರಯಾಣಿಕರು ಭಯಭೀತರಾಗಿ ಬಸ್‌ನಿಂದ ಇಳಿದು ತೆರಳಿದ್ದರು.

ಬಿಕಾಂ ಪದವೀಧರನಾಗಿದ್ದ ಹರಿ ಸಿನ್ಹಾ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಇತ್ತೀಚೆಗೆ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಕೋಪಗೊಂಡಿದ್ದ ಆರೋಪಿ ಕೆಲಸದಿಂದ ತೆಗೆದಿದ್ದ ಮ್ಯಾನೇಜರ್​​ಗೆ ಬೆದರಿಸಲು ಚಾಕು ಇಟ್ಟುಕೊಂಡು ತೆರಳಿದ್ದ. ಆದರೆ ಕಂಪನಿಯ ಬಳಿ ಯಾರು ಸಿಗದಿದ್ದಾಗ ಮನೆಗೆ ತೆರಳಲು ಬಸ್ ಹತ್ತಿದ್ದ. ಬಸ್‌ನಲ್ಲಿ‌ ಫುಟ್ ಬೋರ್ಡ್ ಮೇಲೆ ನಿಂತಿದ್ದ ಆರೋಪಿಯನ್ನು ಬಸ್​ನೊಳಗೆ ಹೋಗುವಂತೆ ನಿರ್ವಾಹಕ ಯೋಗೇಶ್ ತಿಳಿಸಿದ್ದರು. ಕೋಪದಲ್ಲಿದ್ದ ಆರೋಪಿ ತನ್ನ ಬಳಿಯಿದ್ದ ಚಾಕುವಿನಿಂದ ನಿರ್ವಾಹಕನಿಗೆ ಇರಿದಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸ್​​ ಮೂಲಗಳು ತಿಳಿಸಿವೆ.

ಸದ್ಯ ಆರೋಪಿಯನ್ನ ಬಂಧಿಸಿರುವುದಾಗಿ ವೈಟ್​ಫೀಲ್ಡ್ ಪೊಲೀಸರು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಗಾಯಾಳು ನಿರ್ವಾಹಕನನ್ನು ವೈಟ್​ಫೀಲ್ಡ್​ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಓದಿ: ಸಿಂಧನೂರಲ್ಲಿ ಕಿಡ್ನಾಪ್​ ಆಗಿದ್ದ ನಾಲ್ವರು ಮಕ್ಕಳ ರಕ್ಷಣೆ: ಅಂತಾರಾಜ್ಯ ಅಪಹರಣಕಾರರ​ ಬಂಧನ - Children Kidnap Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.