ETV Bharat / state

ವಾಲ್ಮೀಕಿ ನಿಗಮ ಹಗರಣ: ಇಡಿ, ಸಿಬಿಐಗೆ ರಾಜ್ಯ ಸರ್ಕಾರವೇ ಟಾರ್ಗೆಟ್‌- ಸರ್ಕಾರದ ವಾದ - Valmiki Corporation Scam

author img

By ETV Bharat Karnataka Team

Published : Jul 24, 2024, 9:39 AM IST

ವಾಲ್ಮೀಕಿ ನಿಗಮ ಹಗರಣದಲ್ಲಿ ರಾಜ್ಯ ಸರ್ಕಾರವನ್ನೇ ಇಡಿ, ಸಿಬಿಐ ಅಧಿಕಾರಿಗಳು ಗುರಿಪಡಿಸಿದ್ದಾರೆ ಎಂದು ಅಡ್ವೋಕೇಟ್​ ಜನರಲ್​ ಶಶಿಕಿರಣ್​ ಶೆಟ್ಟಿ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದರು.

ED  CBI  Valmiki Corporation Scam  state government
ಹೈಕೋರ್ಟ್​ (ETV Bharat)

ಬೆಂಗಳೂರು: ''ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ನಿಗಮದ ಹಗರಣದಲ್ಲಿ ಮುಖ್ಯಮಂತ್ರಿಗಳ ಹೆಸರು ಸಿಲುಕಿಸಲು ಕೇಂದ್ರ ತನಿಖಾ ಸಂಸ್ಥೆಗಳು, ಕೆಲವರನ್ನು ಬಂಧಿಸುವುದಕ್ಕೆ ಪಿತೂರಿ ಮಾಡುತ್ತಿದ್ದು, ಇಡೀ ಸರ್ಕಾರವನ್ನೇ ಗುರಿಪಡಿಸುತ್ತಿವೆ'' ಎಂದು ರಾಜ್ಯ ಸರ್ಕಾರ ಮಂಗಳವಾರ ಹೈಕೋರ್ಟ್​ನಲ್ಲಿ ದೂರಿತು.

ಹಗರಣದಲ್ಲಿ ಮುಖ್ಯಮಂತ್ರಿಗಳ ಹೆಸರು ಹೇಳುವಂತೆ ನಿಗಮದ ಅಧಿಕಾರಿಗಳಿಗೆ ಒತ್ತಡ ಹೇರಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧದ ಪ್ರಕರಣದ ವಿಚಾರಣೆ ವೇಳೆ, ಅಡ್ವೋಕೇಟ್​ ಜನರಲ್​ ಶಶಿಕಿರಣ್​ ಶೆಟ್ಟಿ ನ್ಯಾಯಪೀಠಕ್ಕೆ ಈ ವಿಚಾರವನ್ನು ವಿವರಿಸಿದರು.

ಹಗರಣ ಸಂಬಂಧ ರಾಜ್ಯ ಸರ್ಕಾರ ಈಗಾಗಲೇ ಪ್ರಕರಣ ದಾಖಲಿಸಿ ಬಹುತೇಕ ತನಿಖೆ ಪೂರ್ಣಗೊಳಿಸಿದೆ. ಈ ನಡುವೆ ಸಿಬಿಐ ಪ್ರಕರಣ ದಾಖಲಿಸಿದ್ದು, ಈವರೆಗೂ ವಿಚಾರಣೆ ಪ್ರಾರಂಭಿಸಿಲ್ಲ. ಏತನ್ಮಧ್ಯೆ ಇಡಿ ಅಧಿಕಾರಿಗಳು ಇಸಿಐಆರ್​ ಪ್ರಕರಣ ದಾಖಲಿಸಿದ್ದಾರೆ. ಮಾಜಿ ಸಚಿವರೊಬ್ಬರನ್ನು ಬಂಧಿಸಿದ್ದು, ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ತನಿಖೆಗೆ ಕರೆದಿದ್ದ ನಿಗಮದ ಹೆಚ್ಚುವರಿ ನಿರ್ದೇಶಕರಿಗೆ ಮುಖ್ಯಮಂತ್ರಿ ಹೆಸರನ್ನು ಹೇಳುವಂತೆ ಒತ್ತಡ ಹಾಕಿದ್ದಾರೆ. ಮುಖ್ಯಮಂತ್ರಿ ಹೆಸರು ಹೇಳದಿದ್ದರೆ ಕಚೇರಿಯಿಂದ ಹೊರಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಈ ಘಟನೆಯ ಹಿಂದೆ ದೊಡ್ಡ ಸಂದೇಶವಿದೆ.
ಅಲ್ಲದೆ, ಪ್ರಕರಣದಲ್ಲಿ ಆರೋಪಿಗಳಾಗಿರುವ ಇಡಿ ಅಧಿಕಾರಿಗಳು ಪ್ರಾಮಾಣಿಕರಲ್ಲ. ಒಬ್ಬ ಅಧಿಕಾರಿಯ ವಿರುದ್ಧ ತನ್ನ ಕರ್ತವ್ಯ ನಿರ್ವಹಣೆ ಮಾಡಲು 5 ಲಕ್ಷ ಲಂಚ ಕೇಳಿರುವ ಆರೋಪದಲ್ಲಿ ಸಿಬಿಐ ತನಿಖೆ ನಡೆಸುತ್ತಿದೆ. ಹೀಗಾಗಿ ಅವರ ವಿರುದ್ಧ ತನಿಖೆಗೆ ತಡೆ ನೀಡಬಾರದು. ತನಿಖೆ ಮುಂದುವರೆದಲ್ಲಿ ಮಾತ್ರ ಸತ್ಯಾಂಶ ಹೊರ ಬರಲಿದೆ ಎಂದು ಮನವಿ ಮಾಡಿದರು..

ಈ ವೇಳೆ ನ್ಯಾಯಪೀಠ, ತನಿಖಾಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದಲ್ಲಿ ತನಿಖೆ ಹೇಗೆ ಮುಂದುವರೆಸಲು ಸಾಧ್ಯ ಎಂದು ಪ್ರಶ್ನಿಸಿತು. ಅಲ್ಲದೆ, ತನಿಖಾಧಿಕಾರಿಗಳ ವಿರುದ್ಧ ದೂರು ದಾಖಲಿಸುತ್ತಿದ್ದರೆ ಯಾವುದೇ ಅಧಿಕಾರಿ ತನ್ನ ಕರ್ತವ್ಯವನ್ನು ನಿರ್ವಹಣೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂದಿತು.

ಇದಕ್ಕೆ ಅಡ್ವೋಕೇಟ್​ ಜನರಲ್​, ಈ ರೀತಿಯ ತರ್ಕ ಪ್ರಸ್ತುತದ ಪ್ರಕರಣದಲ್ಲಿ ಅನುಸರಿಸಲಾಗುವುದಿಲ್ಲ. ಈಗಾಗಲೇ ಮಾಜಿ ಸಚಿವರೊಬ್ಬರನ್ನು ಬಂಧಿಸಲಾಗಿದೆ. ತನಿಖಾಧಿಕಾರಿಗಳ ವಿರುದ್ಧ ಆರೋಪವಿಲ್ಲ ಎಂದಾದರೆರೆ, ದೂರುದಾರ ಕಲ್ಲೇಶ್​ ಅವರನ್ನು ವಿಚಾರಣೆ ನಡೆಸಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಹಾಜರುಪಡಿಸಬೇಕು ಎಂದು ಕೋರಿದರು. ಯಾವ ಕೊಠಡಿಯಲ್ಲಿ ವಿಚಾರಣೆ ನಡೆಸಲಾಗಿದೆ ಎಂಬ ಅಂಶ ತಿಳಿಯಬೇಕಾಗಿದೆ. ಹೀಗಾಗಿ ತನಿಖೆ ಸ್ಥಗಿತಗೊಳಿಸುವುದಕ್ಕೆ ಅವಕಾಶ ನೀಡಬಾರದು ಎಂದು ಕೋರಿದರು. ಅಲ್ಲದೆ, ಪೊಲೀಸ್ ಅಧಿಕಾರಿ ತನಿಖೆ ಸಂದರ್ಭದಲ್ಲಿ ಏನು ಬೇಕಾದರೂ ಮಾಡಬಹುದು ಅಂತಿದೆಯೇ ಎಂದು ಪ್ರಶ್ನಿಸಿದರು.

ನ್ಯಾಯಪೀಠ ಪ್ರತಿಕ್ರಿಯಿಸಿ, ಈ ಪ್ರಕರಣದಲ್ಲಿ ದೂರುದಾರ ಕಲ್ಲೇಶ್​ ಇಡಿ ಕಚೇರಿಗೆ ಹೋಗಿ ಬಂದಿದ್ದಾರೆ. ಬಳಿಕ ಆರೋಪ ಮಾಡಿದ್ದಾರೆ, ಈ ರೀತಿಯಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿರಬಹುದಲ್ಲ ಎಂದು ಪ್ರಶ್ನಿಸಿತು. ಅಲ್ಲದೆ, ತನಿಖೆಗೆ ಕರೆದಿದ್ದವರೂ ಸರ್ಕಾರದ ಅಧಿಕಾರಿಯಾಗಿದ್ದಾರೆ. ಅವರನ್ನು ಕಾಫಿ ಕುಡಿಯಲು ಕರೆದಿಲ್ಲ. ಮಾಲ್​ಗೆ ಕರೆದಿಲ್ಲ ಎಂದು ತಿಳಿಸಿತು.

ಅರ್ಜಿದಾರರಾಗಿರುವ ಇಡಿ ಅಧಿಕಾರಿಗಳ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ತಿಳಿದುಕೊಳ್ಳಿ. ಅವರನ್ನು ಪೊಲೀಸರು (ತನಿಖಾಧಿಕಾರಿಗಳು) ಬೆದರಿಕೆ ಹಾಕುತ್ತಿದ್ದಾರೆ ಎಂದಾದರೆ ಏನು ಮಾಡಲಾಗುತ್ತದೆ. ಈ ರೀತಿಯ ಚಲನಚಿತ್ರಗಳ ಮಾದರಿಯಲ್ಲಿರುವ ನವೀನ ಕಲ್ಪನೆಗಳನ್ನು ನ್ಯಾಯಾಲಯದಲ್ಲಿ ಅನುಮತಿಸಲಾಗುವುದಿಲ್ಲ. ಸರ್ಕಾರದ ವಾದವನ್ನು ಪರಿಗಣಿಸಿದಲ್ಲಿ ಯಾವುದೇ ತನಿಖಾಧಿಕಾರಿಗೆ ರಕ್ಷಣೆ ಸಿಗುವುದಿಲ್ಲ ಎಂದು ಪೀಠ ಹೇಳಿತು.

ಅಲ್ಲದೆ, ವಿಚಾರಣೆ ವೇಳೆ ಅಧಿಕಾರಿಗಳು ಸಾಕ್ಷಿಗಳ ಸಂಗ್ರಹ ಸಂಬಂಧ ಬೆದರಿಕೆ ಹಾಕುತ್ತಾರೆ ಎಂದು ಆರೋಪಗಳನ್ನು ಮಾಡುವುದು ಸಾಮಾನ್ಯವಾಗಿದೆ. ಈ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು, ಇದೇ ರೀತಿಯ ಆರೋಪಗಳು ಎದುರಾದರೆ ಎಲ್ಲ ತನಿಖಾ ಸಂಸ್ಥೆಗಳನ್ನು ಮುಚ್ಚಬೇಕಾಗುತ್ತದೆ ಎಂದರು.

ನೋಟಿಸ್​ ಜಾರಿ, ವಿಚಾರಣೆ ಮುಂದೂಡಿಕೆ: ಅದಕ್ಕೆ ಅಡ್ವೋಕೇಟ್​ ಜನರಲ್​, ಇಡಿ ಅಧಿಕಾರಿಗಳು ಕಲ್ಲೇಶ್​ ಅವರನ್ನು ಯಾವ ಕೊಠಡಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಅವರು ಎಷ್ಟು ಸಮಯಕ್ಕೆ ಒಳ ಪ್ರವೇಶಿಸಿದ್ದಾರೆ, ಯಾವಾಗ ವಾಪಸ್​ ಕಳಿಸಿದ್ದಾರೆ ಎಂಬ ಅಂಶಗಳುಳ್ಳ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಸಲ್ಲಿಸಲು ನಿರ್ದೇಶನ ನೀಡಲು ಕೋರಿದರು.

ಅಲ್ಲದೆ, ಇಡಿ, ಸಿಬಿಐ ಮತ್ತು ರಾಜ್ಯದ ಅಧಿಕಾರಿಗಳ ಕಾನೂನು ದುರ್ಬಳಕೆ ಮಾಡಿಕೊಂಡಲ್ಲಿ ಅವರನ್ನು ಶಿಕ್ಷೆಗೆ ಗುರಿಪಡಿಸಬೇಕಾಗುತ್ತದೆ. ಯಾವುದೇ ರಕ್ಷಣೆ ನೀಡಲಾಗುವುದಿಲ್ಲ. ಹಾಗಂತ ರಾಜ್ಯದ ಅಧಿಕಾರಿಗಳಿಗೆ ಬೇಕಾಬಿಟ್ಟಿ ಕ್ರಮ ಕೈಗೊಳ್ಳಬಹುದು ಎಂದು ಸಲಹೆ ನೀಡಲು ಸಾಧ್ಯವೇ? ಎಂದರು. ಇದಕ್ಕೆ ಪೀಠ, ಅಡ್ವೋಕೇಟ್​ ಜನರಲ್​ ಹೇಳುವ ಮಾತೇ ಇದು ಎಂದು ಅಚ್ಚರಿ ವ್ಯಕ್ತಪಡಿಸಿತು. ಅಂತಿಮವಾಗಿ ಸರ್ಕಾರಕ್ಕೆ ನೋಟಿಸ್​ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿತು.

ಇದನ್ನೂ ಓದಿ: ಬಜೆಟ್‌ನಲ್ಲಿ ಕರ್ನಾಟಕದ ನಿರ್ಲಕ್ಷ್ಯ: ನೀತಿ ಆಯೋಗದ ಸಭೆ ಬಹಿಷ್ಕರಿಸಲು ನಿರ್ಧರಿಸಿದ ಸಿಎಂ ಸಿದ್ದರಾಮಯ್ಯ - NITI Aayog Meeting

ಬೆಂಗಳೂರು: ''ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ನಿಗಮದ ಹಗರಣದಲ್ಲಿ ಮುಖ್ಯಮಂತ್ರಿಗಳ ಹೆಸರು ಸಿಲುಕಿಸಲು ಕೇಂದ್ರ ತನಿಖಾ ಸಂಸ್ಥೆಗಳು, ಕೆಲವರನ್ನು ಬಂಧಿಸುವುದಕ್ಕೆ ಪಿತೂರಿ ಮಾಡುತ್ತಿದ್ದು, ಇಡೀ ಸರ್ಕಾರವನ್ನೇ ಗುರಿಪಡಿಸುತ್ತಿವೆ'' ಎಂದು ರಾಜ್ಯ ಸರ್ಕಾರ ಮಂಗಳವಾರ ಹೈಕೋರ್ಟ್​ನಲ್ಲಿ ದೂರಿತು.

ಹಗರಣದಲ್ಲಿ ಮುಖ್ಯಮಂತ್ರಿಗಳ ಹೆಸರು ಹೇಳುವಂತೆ ನಿಗಮದ ಅಧಿಕಾರಿಗಳಿಗೆ ಒತ್ತಡ ಹೇರಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧದ ಪ್ರಕರಣದ ವಿಚಾರಣೆ ವೇಳೆ, ಅಡ್ವೋಕೇಟ್​ ಜನರಲ್​ ಶಶಿಕಿರಣ್​ ಶೆಟ್ಟಿ ನ್ಯಾಯಪೀಠಕ್ಕೆ ಈ ವಿಚಾರವನ್ನು ವಿವರಿಸಿದರು.

ಹಗರಣ ಸಂಬಂಧ ರಾಜ್ಯ ಸರ್ಕಾರ ಈಗಾಗಲೇ ಪ್ರಕರಣ ದಾಖಲಿಸಿ ಬಹುತೇಕ ತನಿಖೆ ಪೂರ್ಣಗೊಳಿಸಿದೆ. ಈ ನಡುವೆ ಸಿಬಿಐ ಪ್ರಕರಣ ದಾಖಲಿಸಿದ್ದು, ಈವರೆಗೂ ವಿಚಾರಣೆ ಪ್ರಾರಂಭಿಸಿಲ್ಲ. ಏತನ್ಮಧ್ಯೆ ಇಡಿ ಅಧಿಕಾರಿಗಳು ಇಸಿಐಆರ್​ ಪ್ರಕರಣ ದಾಖಲಿಸಿದ್ದಾರೆ. ಮಾಜಿ ಸಚಿವರೊಬ್ಬರನ್ನು ಬಂಧಿಸಿದ್ದು, ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ತನಿಖೆಗೆ ಕರೆದಿದ್ದ ನಿಗಮದ ಹೆಚ್ಚುವರಿ ನಿರ್ದೇಶಕರಿಗೆ ಮುಖ್ಯಮಂತ್ರಿ ಹೆಸರನ್ನು ಹೇಳುವಂತೆ ಒತ್ತಡ ಹಾಕಿದ್ದಾರೆ. ಮುಖ್ಯಮಂತ್ರಿ ಹೆಸರು ಹೇಳದಿದ್ದರೆ ಕಚೇರಿಯಿಂದ ಹೊರಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಈ ಘಟನೆಯ ಹಿಂದೆ ದೊಡ್ಡ ಸಂದೇಶವಿದೆ.
ಅಲ್ಲದೆ, ಪ್ರಕರಣದಲ್ಲಿ ಆರೋಪಿಗಳಾಗಿರುವ ಇಡಿ ಅಧಿಕಾರಿಗಳು ಪ್ರಾಮಾಣಿಕರಲ್ಲ. ಒಬ್ಬ ಅಧಿಕಾರಿಯ ವಿರುದ್ಧ ತನ್ನ ಕರ್ತವ್ಯ ನಿರ್ವಹಣೆ ಮಾಡಲು 5 ಲಕ್ಷ ಲಂಚ ಕೇಳಿರುವ ಆರೋಪದಲ್ಲಿ ಸಿಬಿಐ ತನಿಖೆ ನಡೆಸುತ್ತಿದೆ. ಹೀಗಾಗಿ ಅವರ ವಿರುದ್ಧ ತನಿಖೆಗೆ ತಡೆ ನೀಡಬಾರದು. ತನಿಖೆ ಮುಂದುವರೆದಲ್ಲಿ ಮಾತ್ರ ಸತ್ಯಾಂಶ ಹೊರ ಬರಲಿದೆ ಎಂದು ಮನವಿ ಮಾಡಿದರು..

ಈ ವೇಳೆ ನ್ಯಾಯಪೀಠ, ತನಿಖಾಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದಲ್ಲಿ ತನಿಖೆ ಹೇಗೆ ಮುಂದುವರೆಸಲು ಸಾಧ್ಯ ಎಂದು ಪ್ರಶ್ನಿಸಿತು. ಅಲ್ಲದೆ, ತನಿಖಾಧಿಕಾರಿಗಳ ವಿರುದ್ಧ ದೂರು ದಾಖಲಿಸುತ್ತಿದ್ದರೆ ಯಾವುದೇ ಅಧಿಕಾರಿ ತನ್ನ ಕರ್ತವ್ಯವನ್ನು ನಿರ್ವಹಣೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂದಿತು.

ಇದಕ್ಕೆ ಅಡ್ವೋಕೇಟ್​ ಜನರಲ್​, ಈ ರೀತಿಯ ತರ್ಕ ಪ್ರಸ್ತುತದ ಪ್ರಕರಣದಲ್ಲಿ ಅನುಸರಿಸಲಾಗುವುದಿಲ್ಲ. ಈಗಾಗಲೇ ಮಾಜಿ ಸಚಿವರೊಬ್ಬರನ್ನು ಬಂಧಿಸಲಾಗಿದೆ. ತನಿಖಾಧಿಕಾರಿಗಳ ವಿರುದ್ಧ ಆರೋಪವಿಲ್ಲ ಎಂದಾದರೆರೆ, ದೂರುದಾರ ಕಲ್ಲೇಶ್​ ಅವರನ್ನು ವಿಚಾರಣೆ ನಡೆಸಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಹಾಜರುಪಡಿಸಬೇಕು ಎಂದು ಕೋರಿದರು. ಯಾವ ಕೊಠಡಿಯಲ್ಲಿ ವಿಚಾರಣೆ ನಡೆಸಲಾಗಿದೆ ಎಂಬ ಅಂಶ ತಿಳಿಯಬೇಕಾಗಿದೆ. ಹೀಗಾಗಿ ತನಿಖೆ ಸ್ಥಗಿತಗೊಳಿಸುವುದಕ್ಕೆ ಅವಕಾಶ ನೀಡಬಾರದು ಎಂದು ಕೋರಿದರು. ಅಲ್ಲದೆ, ಪೊಲೀಸ್ ಅಧಿಕಾರಿ ತನಿಖೆ ಸಂದರ್ಭದಲ್ಲಿ ಏನು ಬೇಕಾದರೂ ಮಾಡಬಹುದು ಅಂತಿದೆಯೇ ಎಂದು ಪ್ರಶ್ನಿಸಿದರು.

ನ್ಯಾಯಪೀಠ ಪ್ರತಿಕ್ರಿಯಿಸಿ, ಈ ಪ್ರಕರಣದಲ್ಲಿ ದೂರುದಾರ ಕಲ್ಲೇಶ್​ ಇಡಿ ಕಚೇರಿಗೆ ಹೋಗಿ ಬಂದಿದ್ದಾರೆ. ಬಳಿಕ ಆರೋಪ ಮಾಡಿದ್ದಾರೆ, ಈ ರೀತಿಯಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಿರಬಹುದಲ್ಲ ಎಂದು ಪ್ರಶ್ನಿಸಿತು. ಅಲ್ಲದೆ, ತನಿಖೆಗೆ ಕರೆದಿದ್ದವರೂ ಸರ್ಕಾರದ ಅಧಿಕಾರಿಯಾಗಿದ್ದಾರೆ. ಅವರನ್ನು ಕಾಫಿ ಕುಡಿಯಲು ಕರೆದಿಲ್ಲ. ಮಾಲ್​ಗೆ ಕರೆದಿಲ್ಲ ಎಂದು ತಿಳಿಸಿತು.

ಅರ್ಜಿದಾರರಾಗಿರುವ ಇಡಿ ಅಧಿಕಾರಿಗಳ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ತಿಳಿದುಕೊಳ್ಳಿ. ಅವರನ್ನು ಪೊಲೀಸರು (ತನಿಖಾಧಿಕಾರಿಗಳು) ಬೆದರಿಕೆ ಹಾಕುತ್ತಿದ್ದಾರೆ ಎಂದಾದರೆ ಏನು ಮಾಡಲಾಗುತ್ತದೆ. ಈ ರೀತಿಯ ಚಲನಚಿತ್ರಗಳ ಮಾದರಿಯಲ್ಲಿರುವ ನವೀನ ಕಲ್ಪನೆಗಳನ್ನು ನ್ಯಾಯಾಲಯದಲ್ಲಿ ಅನುಮತಿಸಲಾಗುವುದಿಲ್ಲ. ಸರ್ಕಾರದ ವಾದವನ್ನು ಪರಿಗಣಿಸಿದಲ್ಲಿ ಯಾವುದೇ ತನಿಖಾಧಿಕಾರಿಗೆ ರಕ್ಷಣೆ ಸಿಗುವುದಿಲ್ಲ ಎಂದು ಪೀಠ ಹೇಳಿತು.

ಅಲ್ಲದೆ, ವಿಚಾರಣೆ ವೇಳೆ ಅಧಿಕಾರಿಗಳು ಸಾಕ್ಷಿಗಳ ಸಂಗ್ರಹ ಸಂಬಂಧ ಬೆದರಿಕೆ ಹಾಕುತ್ತಾರೆ ಎಂದು ಆರೋಪಗಳನ್ನು ಮಾಡುವುದು ಸಾಮಾನ್ಯವಾಗಿದೆ. ಈ ವೇಳೆ ಕೇಂದ್ರ ಸರ್ಕಾರದ ಪರ ವಕೀಲರು, ಇದೇ ರೀತಿಯ ಆರೋಪಗಳು ಎದುರಾದರೆ ಎಲ್ಲ ತನಿಖಾ ಸಂಸ್ಥೆಗಳನ್ನು ಮುಚ್ಚಬೇಕಾಗುತ್ತದೆ ಎಂದರು.

ನೋಟಿಸ್​ ಜಾರಿ, ವಿಚಾರಣೆ ಮುಂದೂಡಿಕೆ: ಅದಕ್ಕೆ ಅಡ್ವೋಕೇಟ್​ ಜನರಲ್​, ಇಡಿ ಅಧಿಕಾರಿಗಳು ಕಲ್ಲೇಶ್​ ಅವರನ್ನು ಯಾವ ಕೊಠಡಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಅವರು ಎಷ್ಟು ಸಮಯಕ್ಕೆ ಒಳ ಪ್ರವೇಶಿಸಿದ್ದಾರೆ, ಯಾವಾಗ ವಾಪಸ್​ ಕಳಿಸಿದ್ದಾರೆ ಎಂಬ ಅಂಶಗಳುಳ್ಳ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಸಲ್ಲಿಸಲು ನಿರ್ದೇಶನ ನೀಡಲು ಕೋರಿದರು.

ಅಲ್ಲದೆ, ಇಡಿ, ಸಿಬಿಐ ಮತ್ತು ರಾಜ್ಯದ ಅಧಿಕಾರಿಗಳ ಕಾನೂನು ದುರ್ಬಳಕೆ ಮಾಡಿಕೊಂಡಲ್ಲಿ ಅವರನ್ನು ಶಿಕ್ಷೆಗೆ ಗುರಿಪಡಿಸಬೇಕಾಗುತ್ತದೆ. ಯಾವುದೇ ರಕ್ಷಣೆ ನೀಡಲಾಗುವುದಿಲ್ಲ. ಹಾಗಂತ ರಾಜ್ಯದ ಅಧಿಕಾರಿಗಳಿಗೆ ಬೇಕಾಬಿಟ್ಟಿ ಕ್ರಮ ಕೈಗೊಳ್ಳಬಹುದು ಎಂದು ಸಲಹೆ ನೀಡಲು ಸಾಧ್ಯವೇ? ಎಂದರು. ಇದಕ್ಕೆ ಪೀಠ, ಅಡ್ವೋಕೇಟ್​ ಜನರಲ್​ ಹೇಳುವ ಮಾತೇ ಇದು ಎಂದು ಅಚ್ಚರಿ ವ್ಯಕ್ತಪಡಿಸಿತು. ಅಂತಿಮವಾಗಿ ಸರ್ಕಾರಕ್ಕೆ ನೋಟಿಸ್​ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿತು.

ಇದನ್ನೂ ಓದಿ: ಬಜೆಟ್‌ನಲ್ಲಿ ಕರ್ನಾಟಕದ ನಿರ್ಲಕ್ಷ್ಯ: ನೀತಿ ಆಯೋಗದ ಸಭೆ ಬಹಿಷ್ಕರಿಸಲು ನಿರ್ಧರಿಸಿದ ಸಿಎಂ ಸಿದ್ದರಾಮಯ್ಯ - NITI Aayog Meeting

ETV Bharat Logo

Copyright © 2024 Ushodaya Enterprises Pvt. Ltd., All Rights Reserved.