ETV Bharat / state

ಅರಣ್ಯ ಭೂಮಿ ಖಾಸಗಿ ವ್ಯಕ್ತಿಗಳಿಗೆ ಪಟ್ಟ: ತಹಶೀಲ್ದಾರ್, ಎಸ್​ಡಿಎ ಅಮಾನತು - Tahashildar SDA Suspend

author img

By ETV Bharat Karnataka Team

Published : Jul 28, 2024, 10:41 AM IST

ಅರಣ್ಯ ಭೂಮಿ ಖಾಸಗಿ ವ್ಯಕ್ತಿಗಳಿಗೆ ಪಟ್ಟ ಮಾಡಿದ ಆರೋಪದ ಮೇಲೆ ತಹಶೀಲ್ದಾರ್ ಮತ್ತು ಎಸ್​ಡಿಎ ಅಮಾನತಾಗಿದ್ದಾರೆ.

ತಹಶೀಲ್ದರ್, ಎಸ್​ಡಿಎ ಅಮಾನತುಗೊಳಿಸಿ ಸಹಾಯಕ ಆಯುಕ್ತರ ಆದೇಶ
ಸಾಂದರ್ಭಿಕ ಚಿತ್ರ (ETV Bharat)

ರಾಯಚೂರು: ಅರಣ್ಯ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಪಟ್ಟ ಮಾಡಿದ ಆರೋಪದಡಿ ತಹಶೀಲ್ದಾರ್ ಹಾಗೂ ದ್ವಿತೀಯ ದರ್ಜೆ ಸಹಾಯಕನನ್ನು ಲಿಂಗಸೂಗೂರು ಸಹಾಯಕ ಆಯುಕ್ತ ಅಮಾನತುಗೊಳಿಸಿ ಆದೇಶಿಸಿದ್ದಾರೆ. ತಹಶೀಲ್ದಾರ್ ಅರಮನೆ ಸುಧಾ ಹಾಗೂ ದ್ವಿತೀಯ ದರ್ಜೆ ಸಹಾಯಕ ಅರುಣಕುಮಾರ ಅಮಾನತಾದವರು.

ಮಸ್ಕಿ ತಾಲೂಕಿನ ಬಗ್ಗಲಗುಡ್ಡದ ಗ್ರಾಮದ ಅರಣ್ಯ ಇಲಾಖೆಗೆ ಸೇರಿದ 16 ಎಕರೆ ಭೂಮಿಯನ್ನು 8 ಜನ ಖಾಸಗಿಯವರಿಗೆ ಪಟ್ಟ ಮಾಡಿದ ಆರೋಪದ ಮೇಲೆ ಸಹಾಯ ಆಯುಕ್ತ ಅವಿನಾಶ ಶಿಂಧೆ ಶನಿವಾರ ಕ್ರಮ ಜರುಗಿಸಿದ್ದಾರೆ.

ಬಗ್ಗಲಗುಡ್ಡದ ಗ್ರಾಮದ ಅರಣ್ಯ ಇಲಾಖೆಯ ಸರ್ವೇ ನಂಬರ್ 28ರ 16 ಎಕರೆ ಭೂಮಿಯನ್ನು ಖಾಸಗಿಯವರಿಗೆ ಪಟ್ಟ ಮಾಡಿರುವ ಕುರಿತು ಲಿಂಗಸೂಗೂರು ವಲಯ ಅರಣ್ಯಾಧಿಕಾರಿ ವಿದ್ಯಾಶ್ರೀ ದೊಡ್ಡಮನಿ ಅವರು ಲಿಂಗಸೂಗೂರಿನ ಸಹಾಯಕ ಆಯುಕ್ತರ ಕಚೇರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ: ಬೆಳಗಾವಿ: ನೀರು ನುಗ್ಗಿದ್ದರಿಂದ ಮನೆ ಖಾಲಿ ಮಾಡಿದ ಜನ: ವಿಷಯ ಕೇಳಿ ಹೃದಯಾಘಾತದಿಂದ ವ್ಯಕ್ತಿ ಸಾವು - water enters houses due to rain

ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಸಹಾಯಕ ಆಯುಕ್ತ ಅವಿನಾಶ ಶಿಂಧೆ, ತಹಸೀಲ್ದಾರ್ ಹಾಗೂ ದ್ವಿತೀಯ ದರ್ಜೆ ಸಹಾಯಕ ಕರ್ತವ್ಯ ಲೋಪವೆಸಗಿಸುವ ಮೂಲಕ ಅರಣ್ಯ ಸಂರಕ್ಷಿತ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಪಟ್ಟಮಾಡಿರುವುದನ್ನು ಪತ್ತೆ ಹಚ್ಚಿದ್ದರು.

ಇದನ್ನೂ ಓದಿ: ರಾಮನಗರ: ಹಲ್ಲೆ ನಡೆಸಿ ಪರಾರಿ ಯತ್ನ; ರೌಡಿಶೀಟರ್​​ಗಳಿಗೆ ಪೊಲೀಸ್‌ ಗುಂಡೇಟು - Police Firing

ರಾಯಚೂರು: ಅರಣ್ಯ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಪಟ್ಟ ಮಾಡಿದ ಆರೋಪದಡಿ ತಹಶೀಲ್ದಾರ್ ಹಾಗೂ ದ್ವಿತೀಯ ದರ್ಜೆ ಸಹಾಯಕನನ್ನು ಲಿಂಗಸೂಗೂರು ಸಹಾಯಕ ಆಯುಕ್ತ ಅಮಾನತುಗೊಳಿಸಿ ಆದೇಶಿಸಿದ್ದಾರೆ. ತಹಶೀಲ್ದಾರ್ ಅರಮನೆ ಸುಧಾ ಹಾಗೂ ದ್ವಿತೀಯ ದರ್ಜೆ ಸಹಾಯಕ ಅರುಣಕುಮಾರ ಅಮಾನತಾದವರು.

ಮಸ್ಕಿ ತಾಲೂಕಿನ ಬಗ್ಗಲಗುಡ್ಡದ ಗ್ರಾಮದ ಅರಣ್ಯ ಇಲಾಖೆಗೆ ಸೇರಿದ 16 ಎಕರೆ ಭೂಮಿಯನ್ನು 8 ಜನ ಖಾಸಗಿಯವರಿಗೆ ಪಟ್ಟ ಮಾಡಿದ ಆರೋಪದ ಮೇಲೆ ಸಹಾಯ ಆಯುಕ್ತ ಅವಿನಾಶ ಶಿಂಧೆ ಶನಿವಾರ ಕ್ರಮ ಜರುಗಿಸಿದ್ದಾರೆ.

ಬಗ್ಗಲಗುಡ್ಡದ ಗ್ರಾಮದ ಅರಣ್ಯ ಇಲಾಖೆಯ ಸರ್ವೇ ನಂಬರ್ 28ರ 16 ಎಕರೆ ಭೂಮಿಯನ್ನು ಖಾಸಗಿಯವರಿಗೆ ಪಟ್ಟ ಮಾಡಿರುವ ಕುರಿತು ಲಿಂಗಸೂಗೂರು ವಲಯ ಅರಣ್ಯಾಧಿಕಾರಿ ವಿದ್ಯಾಶ್ರೀ ದೊಡ್ಡಮನಿ ಅವರು ಲಿಂಗಸೂಗೂರಿನ ಸಹಾಯಕ ಆಯುಕ್ತರ ಕಚೇರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ: ಬೆಳಗಾವಿ: ನೀರು ನುಗ್ಗಿದ್ದರಿಂದ ಮನೆ ಖಾಲಿ ಮಾಡಿದ ಜನ: ವಿಷಯ ಕೇಳಿ ಹೃದಯಾಘಾತದಿಂದ ವ್ಯಕ್ತಿ ಸಾವು - water enters houses due to rain

ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಸಹಾಯಕ ಆಯುಕ್ತ ಅವಿನಾಶ ಶಿಂಧೆ, ತಹಸೀಲ್ದಾರ್ ಹಾಗೂ ದ್ವಿತೀಯ ದರ್ಜೆ ಸಹಾಯಕ ಕರ್ತವ್ಯ ಲೋಪವೆಸಗಿಸುವ ಮೂಲಕ ಅರಣ್ಯ ಸಂರಕ್ಷಿತ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಪಟ್ಟಮಾಡಿರುವುದನ್ನು ಪತ್ತೆ ಹಚ್ಚಿದ್ದರು.

ಇದನ್ನೂ ಓದಿ: ರಾಮನಗರ: ಹಲ್ಲೆ ನಡೆಸಿ ಪರಾರಿ ಯತ್ನ; ರೌಡಿಶೀಟರ್​​ಗಳಿಗೆ ಪೊಲೀಸ್‌ ಗುಂಡೇಟು - Police Firing

ETV Bharat Logo

Copyright © 2024 Ushodaya Enterprises Pvt. Ltd., All Rights Reserved.