ETV Bharat / state

ಪ್ರಯಾಣಿಕರೇ ಗಮನಿಸಿ: ಹಬ್ಬಗಳಿಗೆ ನೈಋತ್ಯ ರೈಲ್ವೆಯಿಂದ ವಿಶೇಷ ರೈಲುಗಳು; ಪಟ್ಟಿ ಇಲ್ಲಿದೆ - Special Train For Festivals

author img

By ETV Bharat Karnataka Team

Published : Sep 4, 2024, 6:16 PM IST

ಗಣೇಶ ಚತುರ್ಥಿ, ದೀಪಾವಳಿ ಮತ್ತು ದಸರಾ ಹಬ್ಬದ ಸಂದರ್ಭಗಳಲ್ಲಿ ನೈಋತ್ಯ ರೈಲ್ವೆಯಿಂದ ವಿಶೇಷ ರೈಲುಗಳ ಸಂಚಾರ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ರೈಲುಗಳು ಎಲ್ಲಿಂದ ಎಲ್ಲಿಗೆ ಸಂಚರಿಸಲಿವೆ, ಯಾವ ದಿನಾಂಕಗಳಂದು ಈ ವಿಶೇಷ ರೈಲು ಸೇವೆ ಇರಲಿದೆ ಎಂಬ ಮಾಹಿತಿ ಇಲ್ಲಿದೆ.

special train
ಸಂಗ್ರಹ ಚಿತ್ರ (ETV Bharat)

ಹುಬ್ಬಳ್ಳಿ: ಗಣೇಶ ಚತುರ್ಥಿ, ದೀಪಾವಳಿ ಮತ್ತು ದಸರಾ ಹಬ್ಬದ ಸಂದರ್ಭಗಳಲ್ಲಿ ಪ್ರಯಾಣಿಕರ ಅನುಕೂಲತೆಗಾಗಿ ನೈಋತ್ಯ ರೈಲ್ವೆಯು ವಿವಿಧ ಸ್ಥಳಗಳ ನಡುವೆ 22 ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಅವುಗಳ ಮಾಹಿತಿ ಈ ಕೆಳಗಿನಂತಿವೆ.

ಗಣೇಶ ಚತುರ್ಥಿಗೆ ರೈಲು: ರೈಲು ಸಂಖ್ಯೆ 06589 - ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್​ನಿಂದ ರಾತ್ರಿ 09:15 ಗಂಟೆಗೆ ನಿರ್ಗಮಿಸಿ, ಮರುದಿನ ಬೆಳಗ್ಗೆ 7.44 ಗಂಟೆಗೆ ಕಲಬುರಗಿಗೆ ತಲುಪಲಿದೆ. ಈ ಸೇವೆ ಸೆಪ್ಟೆಂಬರ್​​ 5ರಿಂದ 7ವರೆಗೆ ಇರಲಿದೆ. ರೈಲು 3 ಟ್ರಿಪ್ ಸಂಚಾರ ಮಾಡಲಿದೆ.

ರೈಲು ಸಂಖ್ಯೆ 06590 - ಕಲಬುರಗಿಯಿಂದ ಬೆಳಗ್ಗೆ 09:35 ಗಂಟೆಗೆ ಹೊರಟು, ಮರುದಿನ ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್​ಗೆ ಆಗಮಿಸಲಿದೆ.

special train
ವಿಶೇಷ ರೈಲುಗಳ ಮಾಹಿತಿ (south western railway)

ದೀಪಾವಳಿ ಹಬ್ಬ: ದೀಪಾವಳಿ ಹಿನ್ನೆಲೆಯಲ್ಲಿ ವಿಶೇಷ ರೈಲು ಸಂಚಾರ ಇರಲಿದೆ. ಪ್ರಮುಖವಾಗಿ ಮೈಸೂರು - ವಿಜಯಪುರ, ವಿಜಯಪುರ - ಮೈಸೂರು, ಯಶವಂತಪುರ - ಬೆಳಗಾವಿ, ಬೆಳಗಾವಿ - ಯಶವಂತಪುರ ರೈಲುಗಳು ನಿರಂತರವಾಗಿ ಸೆಪ್ಟೆಂಬರ್​​ 30ರಿಂದ ಅಕ್ಟೋಬರ್ 3ರವರೆಗೆ ಸಂಚರಿಸಲಿವೆ.

ದಸರಾ ಹಬ್ಬ: ದಸರಾ ನಿಮಿತ್ತ ಬೆಂಗಳೂರಿನಿಂದ ವಿಜಯಪುರ, ಬೆಳಗಾವಿ, ಮೈಸೂರು ಹಾಗೂ ಚಾಮರಾಜನಗರಗಳ ನಡುವೆ ಅಕ್ಟೋಬರ್ 9ರಿಂದ 13ರ ವರೆಗೆ ವಿಶೇಷ ರೈಲು ಸಂಚಾರ ಕಲ್ಪಿಸಲಾಗುತ್ತಿದೆ.‌

''ಈ ಬಗ್ಗೆ ಮುಂಗಡ ಬುಕಿಂಗ್, ನಿಲುಗಡೆ ಮತ್ತು ವೇಳಾಪಟ್ಟಿ ಸೇರಿದಂತೆ ಯಾವುದೇ ಹೆಚ್ಚಿನ ಮಾಹಿತಿಗಾಗಿ, ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಿ ಅಥವಾ www.enquiry.indianrail.gov.in ವೆಬ್​ಸೈಟ್​​​ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು'' ಎಂದು ನೈರುತ್ಯ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ: ಈ ಎಲ್ಲಾ ಷರತ್ತುಗಳು ಅನ್ವಯ - Ganesha enshrine in idgah Maidan

ಹುಬ್ಬಳ್ಳಿ: ಗಣೇಶ ಚತುರ್ಥಿ, ದೀಪಾವಳಿ ಮತ್ತು ದಸರಾ ಹಬ್ಬದ ಸಂದರ್ಭಗಳಲ್ಲಿ ಪ್ರಯಾಣಿಕರ ಅನುಕೂಲತೆಗಾಗಿ ನೈಋತ್ಯ ರೈಲ್ವೆಯು ವಿವಿಧ ಸ್ಥಳಗಳ ನಡುವೆ 22 ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಅವುಗಳ ಮಾಹಿತಿ ಈ ಕೆಳಗಿನಂತಿವೆ.

ಗಣೇಶ ಚತುರ್ಥಿಗೆ ರೈಲು: ರೈಲು ಸಂಖ್ಯೆ 06589 - ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್​ನಿಂದ ರಾತ್ರಿ 09:15 ಗಂಟೆಗೆ ನಿರ್ಗಮಿಸಿ, ಮರುದಿನ ಬೆಳಗ್ಗೆ 7.44 ಗಂಟೆಗೆ ಕಲಬುರಗಿಗೆ ತಲುಪಲಿದೆ. ಈ ಸೇವೆ ಸೆಪ್ಟೆಂಬರ್​​ 5ರಿಂದ 7ವರೆಗೆ ಇರಲಿದೆ. ರೈಲು 3 ಟ್ರಿಪ್ ಸಂಚಾರ ಮಾಡಲಿದೆ.

ರೈಲು ಸಂಖ್ಯೆ 06590 - ಕಲಬುರಗಿಯಿಂದ ಬೆಳಗ್ಗೆ 09:35 ಗಂಟೆಗೆ ಹೊರಟು, ಮರುದಿನ ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್​ಗೆ ಆಗಮಿಸಲಿದೆ.

special train
ವಿಶೇಷ ರೈಲುಗಳ ಮಾಹಿತಿ (south western railway)

ದೀಪಾವಳಿ ಹಬ್ಬ: ದೀಪಾವಳಿ ಹಿನ್ನೆಲೆಯಲ್ಲಿ ವಿಶೇಷ ರೈಲು ಸಂಚಾರ ಇರಲಿದೆ. ಪ್ರಮುಖವಾಗಿ ಮೈಸೂರು - ವಿಜಯಪುರ, ವಿಜಯಪುರ - ಮೈಸೂರು, ಯಶವಂತಪುರ - ಬೆಳಗಾವಿ, ಬೆಳಗಾವಿ - ಯಶವಂತಪುರ ರೈಲುಗಳು ನಿರಂತರವಾಗಿ ಸೆಪ್ಟೆಂಬರ್​​ 30ರಿಂದ ಅಕ್ಟೋಬರ್ 3ರವರೆಗೆ ಸಂಚರಿಸಲಿವೆ.

ದಸರಾ ಹಬ್ಬ: ದಸರಾ ನಿಮಿತ್ತ ಬೆಂಗಳೂರಿನಿಂದ ವಿಜಯಪುರ, ಬೆಳಗಾವಿ, ಮೈಸೂರು ಹಾಗೂ ಚಾಮರಾಜನಗರಗಳ ನಡುವೆ ಅಕ್ಟೋಬರ್ 9ರಿಂದ 13ರ ವರೆಗೆ ವಿಶೇಷ ರೈಲು ಸಂಚಾರ ಕಲ್ಪಿಸಲಾಗುತ್ತಿದೆ.‌

''ಈ ಬಗ್ಗೆ ಮುಂಗಡ ಬುಕಿಂಗ್, ನಿಲುಗಡೆ ಮತ್ತು ವೇಳಾಪಟ್ಟಿ ಸೇರಿದಂತೆ ಯಾವುದೇ ಹೆಚ್ಚಿನ ಮಾಹಿತಿಗಾಗಿ, ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಿ ಅಥವಾ www.enquiry.indianrail.gov.in ವೆಬ್​ಸೈಟ್​​​ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು'' ಎಂದು ನೈರುತ್ಯ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ: ಈ ಎಲ್ಲಾ ಷರತ್ತುಗಳು ಅನ್ವಯ - Ganesha enshrine in idgah Maidan

ETV Bharat Logo

Copyright © 2024 Ushodaya Enterprises Pvt. Ltd., All Rights Reserved.