ETV Bharat / state

ಚಿಕ್ಕಮಗಳೂರು: ಸ್ವಂತ ಸಹೋದರನನ್ನೇ ಕೊಲೆಗೈದ ಸಹೋದರಿಯರು! - Sisters Killed Brother

author img

By ETV Bharat Karnataka Team

Published : Aug 22, 2024, 5:47 PM IST

Updated : Aug 22, 2024, 7:02 PM IST

ಕಣ್ಣಿಗೆ ಖಾರದ ಪುಡಿ ಎರಚಿ ಸ್ವಂತ ಸಹೋದರನನ್ನೇ ಚಾಕುವಿನಿಂದ ಇರಿದು ಸಹೋದರಿಯರು ಕೊಲೆ ಮಾಡಿದ್ದಾರೆ.

CHIKKAMAGALURU MURDER CASE
ಪೊಲೀಸರಿಂದ ಕೊಲೆ ನಡೆದ ಸ್ಥಳ ಪರಿಶೀಲನೆ (ETV Bharat)
ಪೊಲೀಸರಿಂದ ಕೊಲೆ ನಡೆದ ಸ್ಥಳ ಪರಿಶೀಲನೆ (ETV Bharat)

ಚಿಕ್ಕಮಗಳೂರು: ಮೂವರು ಸಹೋದರಿಯರು ಸೇರಿಕೊಂಡು ಸ್ವಂತ ಸಹೋದರನನ್ನೇ ಕೊಲೆಗೈದ ಘಟನೆ ಜಿಲ್ಲೆಯ ತರೀಕೆರೆ ಪಟ್ಟಣದ ಚೌಡೇಶ್ವರಿ ಕಾಲೊನಿಯಲ್ಲಿ ನಡೆದಿದೆ. ರಾಘವೇಂದ್ರ (40) ಮೃತರು.

ರಾತ್ರಿ ಮಂಚದ ಮೇಲೆ ಮಲಗಿದ್ದ ರಾಘವೇಂದ್ರ ಇಂದು ಬೆಳಗ್ಗೆ ಏಳುತ್ತಿದ್ದಂತೆ ಆತನನ್ನು ಸುತ್ತುವರೆದ ಮೂವರು ಸಹೋದರಿಯರು, ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಸಿಕ್ಕ ಸಿಕ್ಕ ಕಡೆಗಳಿಗೆ ಇರಿದು ಕೊಲೆ ಮಾಡಿದ್ದಾರೆ. ಕಣ್ಣಿಗೆ ಖಾರದ ಪುಡಿ ಎರಚಿದ್ದರಿಂದ ಪ್ರಾಣ ಉಳಿಸಿಕೊಳ್ಳಲಾಗದೇ ರಾಘವೇಂದ್ರ ಚೀರಾಡುತ್ತಾ ಕ್ಷಣ ಮಾತ್ರದಲ್ಲಿಯೇ ಒದ್ದಾಡಿ ಮೃತಪಟ್ಟಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

CHIKKAMAGALURU MURDER CASE
ಮೃತ ರಾಘವೇಂದ್ರ (ETV Bharat)

ಎಸ್‌ಪಿ ವಿಕ್ರಂ ಅಮಟೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸಹೋದರಿಯರನ್ನು ಪೊಲೀಸರು ಬಂಧಿಸಿದ್ದಾರೆ.

ಆಸ್ತಿ ಆಸೆಗಾಗಿ ಬಾವನ ಜೊತೆಗೂಡಿ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ: ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ಗಲಾಟೆ: ಬೈಕ್ ಸವಾರ ಸಾವು - Bengaluru Road Rage

ಪೊಲೀಸರಿಂದ ಕೊಲೆ ನಡೆದ ಸ್ಥಳ ಪರಿಶೀಲನೆ (ETV Bharat)

ಚಿಕ್ಕಮಗಳೂರು: ಮೂವರು ಸಹೋದರಿಯರು ಸೇರಿಕೊಂಡು ಸ್ವಂತ ಸಹೋದರನನ್ನೇ ಕೊಲೆಗೈದ ಘಟನೆ ಜಿಲ್ಲೆಯ ತರೀಕೆರೆ ಪಟ್ಟಣದ ಚೌಡೇಶ್ವರಿ ಕಾಲೊನಿಯಲ್ಲಿ ನಡೆದಿದೆ. ರಾಘವೇಂದ್ರ (40) ಮೃತರು.

ರಾತ್ರಿ ಮಂಚದ ಮೇಲೆ ಮಲಗಿದ್ದ ರಾಘವೇಂದ್ರ ಇಂದು ಬೆಳಗ್ಗೆ ಏಳುತ್ತಿದ್ದಂತೆ ಆತನನ್ನು ಸುತ್ತುವರೆದ ಮೂವರು ಸಹೋದರಿಯರು, ಕಣ್ಣಿಗೆ ಖಾರದ ಪುಡಿ ಎರಚಿ ಚಾಕುವಿನಿಂದ ಸಿಕ್ಕ ಸಿಕ್ಕ ಕಡೆಗಳಿಗೆ ಇರಿದು ಕೊಲೆ ಮಾಡಿದ್ದಾರೆ. ಕಣ್ಣಿಗೆ ಖಾರದ ಪುಡಿ ಎರಚಿದ್ದರಿಂದ ಪ್ರಾಣ ಉಳಿಸಿಕೊಳ್ಳಲಾಗದೇ ರಾಘವೇಂದ್ರ ಚೀರಾಡುತ್ತಾ ಕ್ಷಣ ಮಾತ್ರದಲ್ಲಿಯೇ ಒದ್ದಾಡಿ ಮೃತಪಟ್ಟಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

CHIKKAMAGALURU MURDER CASE
ಮೃತ ರಾಘವೇಂದ್ರ (ETV Bharat)

ಎಸ್‌ಪಿ ವಿಕ್ರಂ ಅಮಟೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸಹೋದರಿಯರನ್ನು ಪೊಲೀಸರು ಬಂಧಿಸಿದ್ದಾರೆ.

ಆಸ್ತಿ ಆಸೆಗಾಗಿ ಬಾವನ ಜೊತೆಗೂಡಿ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ: ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ಗಲಾಟೆ: ಬೈಕ್ ಸವಾರ ಸಾವು - Bengaluru Road Rage

Last Updated : Aug 22, 2024, 7:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.