ETV Bharat / state

ಸವಾಲ್ ಏಕೆ ಕುಸ್ತಿ ಆಡೋಕೆ ಬರಲಿ ನೋಡೋಣ: ರಾಮಚಂದ್ರಪ್ಪಗೆ ಸವಾಲ್ ಹಾಕಿದ ಶಾಮನೂರು ಶಿವಶಂಕರಪ್ಪ - Davanagere MP Ticket

ಜಾತಿಗಣತಿ ವರದಿ ಬಗ್ಗೆ ಎಲ್ಲರೂ ನಮ್ಮವರು ಸೇರಿಕೊಂಡು ವಿಚಾರ ಮಾಡುತ್ತೇವೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.

ಶಾಮನೂರು ಶಿವಶಂಕರಪ್ಪ
ಶಾಮನೂರು ಶಿವಶಂಕರಪ್ಪ
author img

By ETV Bharat Karnataka Team

Published : Mar 4, 2024, 10:45 PM IST

ಶಾಮನೂರು ಶಿವಶಂಕರಪ್ಪ

ದಾವಣಗೆರೆ : ಸವಾಲ್ ಏಕೆ ಕುಸ್ತಿ ಆಡೋಕೆ ಬರಲಿ ನೋಡೋಣ ಎಂದು ರಾಜ್ಯ ಅಹಿಂದ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಸವಾಲು ಹಾಕಿದ್ದಾರೆ. ದಾವಣಗೆರೆಯಲ್ಲಿ ಕರ್ನಾಟಕ‌ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪಗೆ, ಶಾಮನೂರು ಶಿವಶಂಕರಪ್ಪ ವಿರುದ್ಧ ಏಕವಚನದಲ್ಲಿ ಮಾತನಾಡಿದ ಕುರಿತು ಅವರು ಪ್ರತಿಕ್ರಿಯೆ ನೀಡಿದರು.

ನಾವು ಎಲ್ಲರೂ ಸೇರಿ ಅದರ ಬಗ್ಗೆ ಮಾತನಾಡಲಿದ್ದೇವೆ. ನಮ್ಮವರು ಯಾರು ಮಾತನಾಡಿಲ್ಲ. ನಾನು ಮಾತನಾಡುತ್ತೇನೆ. ಅಹಿಂದ ಇಲ್ಲ ಏನೂ ಇಲ್ಲ. ನನಗೆ ಜಾತಿ ಗಣತಿ ಬಗ್ಗೆ ಒಂದೇ ಗೊತ್ತು. ಆದರೆ ಅಹಿಂದ ತೆಗೆದುಕೊಂಡು ನಾನೇನು ಮಾಡಲಿ. ಜಾತಿಗಣತಿ ವರದಿ ಬಗ್ಗೆ ಮಾತನಾಡಲು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗುವುದಿಲ್ಲ. ಜಾತಿಗಣತಿ ವರದಿ ಬಗ್ಗೆ ಎಲ್ಲರೂ ನಮ್ಮವರು ಸೇರಿಕೊಂಡು ವಿಚಾರ ಮಾಡುತ್ತೇವೆ. ಬರೀ ಸವಾಲ್ ಏಕೆ ನೇರವಾಗಿ ಕುಸ್ತಿ ಆಡೋಕೆ ಬಾ ಎಂದು ಹೇಳು. ಅವರ ಸವಾಲ್ ತೆಗೆದುಕೊಂಡು ಏನ್ ಮಾಡ್ತಿರಾ? ಎಂದು ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪಗೆ ಸವಾಲ್ ಕೂಡಾ ಹಾಕಿದರು.

ದಾವಣಗೆರೆ ಎಂಪಿ ಟಿಕೆಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಂಪಿ ಟಿಕೆಟ್ ಬಗ್ಗೆ ಚರ್ಚೆಯಾಗಿಲ್ಲ. ನನಗೆ ಅದು ಗೊತ್ತಿಲ್ಲದ ವಿಚಾರ. ಅಹಿಂದಕ್ಕೆ ಟಿಕೆಟ್ ಕೊಡಿ ನೋಡೋಣ. ಇನ್ನು ಪ್ರಭಾ ಮಲ್ಲಿಕಾರ್ಜುನ್‌ ಅವರ ಪ್ರಚಾರ ವಾಹನದ ಸಿದ್ಧತೆ ಬಗ್ಗೆಯೂ ಗೊತ್ತಿಲ್ಲ ಎಂದು ತಿಳಿಸಿದರು.

ಶಾಮನೂರು ವಿರುದ್ಧ ಏಕವಚನ : ಬೆಂಗಳೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಶಾಮನೂರು ಶಿವಶಂಕರಪ್ಪ ಮಾತಾಡಿದ್ದು ನೋಡಿದ್ದೀರಾ, ಬನ್ನಿ ಬೀದಿಗಿಳಿದು ಹೋರಾಟ ಮಾಡೋಣ, ನಾವು ಸಂಘರ್ಷಕ್ಕೆ ರೆಡಿ ಇದ್ದೇವೆ. ನಾವಾ ನೀವಾ ನೋಡೇ ಬಿಡೋಣ ಎಂದು ನೇರ ಸವಾಲು ಎಸೆದಿದ್ದರು.‌

ಇದನ್ನೂ ಓದಿ : 10 ವರ್ಷದ ಹಿಂದೆ ಕಸದ ಬುಟ್ಟಿಯಲ್ಲಿ ಬಿದ್ದಿದ್ದ ವರದಿಯನ್ನು ಈಗ ಸರ್ಕಾರಕ್ಕೆ ಸಲ್ಲಿಸಿದ್ದಾರೆ: ಶಾಮನೂರು ಶಿವಶಂಕರಪ್ಪ

ಶಾಮನೂರು ಶಿವಶಂಕರಪ್ಪ

ದಾವಣಗೆರೆ : ಸವಾಲ್ ಏಕೆ ಕುಸ್ತಿ ಆಡೋಕೆ ಬರಲಿ ನೋಡೋಣ ಎಂದು ರಾಜ್ಯ ಅಹಿಂದ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಸವಾಲು ಹಾಕಿದ್ದಾರೆ. ದಾವಣಗೆರೆಯಲ್ಲಿ ಕರ್ನಾಟಕ‌ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪಗೆ, ಶಾಮನೂರು ಶಿವಶಂಕರಪ್ಪ ವಿರುದ್ಧ ಏಕವಚನದಲ್ಲಿ ಮಾತನಾಡಿದ ಕುರಿತು ಅವರು ಪ್ರತಿಕ್ರಿಯೆ ನೀಡಿದರು.

ನಾವು ಎಲ್ಲರೂ ಸೇರಿ ಅದರ ಬಗ್ಗೆ ಮಾತನಾಡಲಿದ್ದೇವೆ. ನಮ್ಮವರು ಯಾರು ಮಾತನಾಡಿಲ್ಲ. ನಾನು ಮಾತನಾಡುತ್ತೇನೆ. ಅಹಿಂದ ಇಲ್ಲ ಏನೂ ಇಲ್ಲ. ನನಗೆ ಜಾತಿ ಗಣತಿ ಬಗ್ಗೆ ಒಂದೇ ಗೊತ್ತು. ಆದರೆ ಅಹಿಂದ ತೆಗೆದುಕೊಂಡು ನಾನೇನು ಮಾಡಲಿ. ಜಾತಿಗಣತಿ ವರದಿ ಬಗ್ಗೆ ಮಾತನಾಡಲು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗುವುದಿಲ್ಲ. ಜಾತಿಗಣತಿ ವರದಿ ಬಗ್ಗೆ ಎಲ್ಲರೂ ನಮ್ಮವರು ಸೇರಿಕೊಂಡು ವಿಚಾರ ಮಾಡುತ್ತೇವೆ. ಬರೀ ಸವಾಲ್ ಏಕೆ ನೇರವಾಗಿ ಕುಸ್ತಿ ಆಡೋಕೆ ಬಾ ಎಂದು ಹೇಳು. ಅವರ ಸವಾಲ್ ತೆಗೆದುಕೊಂಡು ಏನ್ ಮಾಡ್ತಿರಾ? ಎಂದು ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪಗೆ ಸವಾಲ್ ಕೂಡಾ ಹಾಕಿದರು.

ದಾವಣಗೆರೆ ಎಂಪಿ ಟಿಕೆಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಂಪಿ ಟಿಕೆಟ್ ಬಗ್ಗೆ ಚರ್ಚೆಯಾಗಿಲ್ಲ. ನನಗೆ ಅದು ಗೊತ್ತಿಲ್ಲದ ವಿಚಾರ. ಅಹಿಂದಕ್ಕೆ ಟಿಕೆಟ್ ಕೊಡಿ ನೋಡೋಣ. ಇನ್ನು ಪ್ರಭಾ ಮಲ್ಲಿಕಾರ್ಜುನ್‌ ಅವರ ಪ್ರಚಾರ ವಾಹನದ ಸಿದ್ಧತೆ ಬಗ್ಗೆಯೂ ಗೊತ್ತಿಲ್ಲ ಎಂದು ತಿಳಿಸಿದರು.

ಶಾಮನೂರು ವಿರುದ್ಧ ಏಕವಚನ : ಬೆಂಗಳೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಶಾಮನೂರು ಶಿವಶಂಕರಪ್ಪ ಮಾತಾಡಿದ್ದು ನೋಡಿದ್ದೀರಾ, ಬನ್ನಿ ಬೀದಿಗಿಳಿದು ಹೋರಾಟ ಮಾಡೋಣ, ನಾವು ಸಂಘರ್ಷಕ್ಕೆ ರೆಡಿ ಇದ್ದೇವೆ. ನಾವಾ ನೀವಾ ನೋಡೇ ಬಿಡೋಣ ಎಂದು ನೇರ ಸವಾಲು ಎಸೆದಿದ್ದರು.‌

ಇದನ್ನೂ ಓದಿ : 10 ವರ್ಷದ ಹಿಂದೆ ಕಸದ ಬುಟ್ಟಿಯಲ್ಲಿ ಬಿದ್ದಿದ್ದ ವರದಿಯನ್ನು ಈಗ ಸರ್ಕಾರಕ್ಕೆ ಸಲ್ಲಿಸಿದ್ದಾರೆ: ಶಾಮನೂರು ಶಿವಶಂಕರಪ್ಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.