ETV Bharat / state

ರೇಣುಕಾಸ್ವಾಮಿ ಕೊಲೆ ಕೇಸ್:‌ 10ನೇ ಆರೋಪಿ ವಿನಯ್ ವಿಜಯಪುರ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ - vinay shifted to vijayapura jail

author img

By ETV Bharat Karnataka Team

Published : Aug 31, 2024, 6:50 PM IST

ರೇಣುಕಾಸ್ವಾಮಿ ಕೊಲೆ ಪ್ರಕರಣದ 10ನೇ ಆರೋಪಿ ವಿನಯ್​ನನ್ನು ವಿಜಯಪುರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಆರೋಪಿಗೆ 14,433 ಎಂಬ ನೂತನ‌ ಕೈದಿ ನಂಬರ್ ನೀಡಲಾಗಿದೆ.

ಆರೋಪಿ ವಿನಯ್ ವಿಜಯಪುರ ಜೈಲಿಗೆ  ಶಿಫ್ಟ್
ಆರೋಪಿ ವಿನಯ್ ವಿಜಯಪುರ ಜೈಲಿಗೆ ಶಿಫ್ಟ್ (ETV Bharat)

ವಿಜಯಪುರ: ರೇಣುಕಾಸ್ವಾಮಿ ಕೊಲೆ ಪ್ರಕರಣದ 10ನೇ ಆರೋಪಿ ವಿನಯ್​ನನ್ನು ಪರಪ್ಪನ ಅಗ್ರಹಾರದಿಂದ ವಿಜಯಪುರದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಕೆಎ 01 ಜಿ 6892 ನಂಬರಿನ ಪೊಲೀಸ್ ವಾಹನದಲ್ಲಿ ವಿನಯನನ್ನು ಕರೆತರಲಾಗಿದ್ದು, ಎರಡು ಬ್ಯಾಗ್​ಗಳೊಂದಿಗೆ ಆರೋಪಿ ಆಗಮಿಸಿದ್ದಾನೆ.

ಕಾರಾಗೃಹದ ಅಧಿಕಾರಿಗಳು ಮತ್ತು ಸಿಬ್ಬಂದಿ, ಆರೋಪಿ ವಿನಯ್ ಆರೋಗ್ಯ ತಪಾಸಣೆ ನಡೆಸಿ ಇತರೆ ಕಾನೂನು ಪ್ರಕ್ರಿಯೆ ಬಳಿಕ ಕೇಂದ್ರ ಕಾರಾಗೃಹದ ಒಳಗೆ ಕರೆದೊಯ್ದರು. ಕಾರಾಗೃಹದ ವಿಶೇಷ ಸೆಲ್​ಗಳ ಪೈಕಿ ಸೆಲ್ ನಂಬರ್ 1 ರಲ್ಲಿ ವಿನಯ್​ನನ್ನು ಇರಿಸಲಾಗಿದೆ. ಕಾರಾಗೃಹದ ಅಧಿಕಾರಿಗಳು ವಿನಯ್​ಗೆ 14,433 ನೂತನ‌ ಕೈದಿ ನಂಬರ್ ನೀಡಿದ್ದಾರೆ. ಈ ಸೆಲ್​ನಲ್ಲಿ ಅಟ್ಯಾಚ್ಡ್ ಬಾತ್ ರೂಂ ಹಾಗೂ ಫ್ಯಾನ್ ಸೌಲಭ್ಯವಿದೆ.

ವಾರದಲ್ಲಿ ಒಂದು ಬಾರಿ ಕುಟುಂಬಸ್ಥರಿಗೆ ಹಾಗೂ ಅವರ ಪರ ನ್ಯಾಯವಾದಿಗಳಿಗೆ ಮಾತ್ರ ಭೇಟಿಗೆ ಅವಕಾಶ ನೀಡಲಾಗಿದೆ ಎಂದು ಕಾರಾಗೃಹ ಅಧೀಕ್ಷಕ ಮ್ಯಾಗೇರಿ‌ ಮಾಹಿತಿ ನೀಡಿದ್ದಾರೆ.

ವಿನಯ್​ ಕುಟುಂಬಸ್ಥರಿಗೆ ಸೇರಿದ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಹತ್ಯೆ ನಡೆದಿತ್ತು.

ಇದನ್ನೂ ಓದಿ: ದರ್ಶನ್‌ ನೋಡಲು ವಕೀಲರ ತಂಡದೊಂದಿಗೆ ಬಳ್ಳಾರಿ ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮಿ - VIJAYALAKSHMI VISITS BELLARY JAIL

ವಿಜಯಪುರ: ರೇಣುಕಾಸ್ವಾಮಿ ಕೊಲೆ ಪ್ರಕರಣದ 10ನೇ ಆರೋಪಿ ವಿನಯ್​ನನ್ನು ಪರಪ್ಪನ ಅಗ್ರಹಾರದಿಂದ ವಿಜಯಪುರದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಕೆಎ 01 ಜಿ 6892 ನಂಬರಿನ ಪೊಲೀಸ್ ವಾಹನದಲ್ಲಿ ವಿನಯನನ್ನು ಕರೆತರಲಾಗಿದ್ದು, ಎರಡು ಬ್ಯಾಗ್​ಗಳೊಂದಿಗೆ ಆರೋಪಿ ಆಗಮಿಸಿದ್ದಾನೆ.

ಕಾರಾಗೃಹದ ಅಧಿಕಾರಿಗಳು ಮತ್ತು ಸಿಬ್ಬಂದಿ, ಆರೋಪಿ ವಿನಯ್ ಆರೋಗ್ಯ ತಪಾಸಣೆ ನಡೆಸಿ ಇತರೆ ಕಾನೂನು ಪ್ರಕ್ರಿಯೆ ಬಳಿಕ ಕೇಂದ್ರ ಕಾರಾಗೃಹದ ಒಳಗೆ ಕರೆದೊಯ್ದರು. ಕಾರಾಗೃಹದ ವಿಶೇಷ ಸೆಲ್​ಗಳ ಪೈಕಿ ಸೆಲ್ ನಂಬರ್ 1 ರಲ್ಲಿ ವಿನಯ್​ನನ್ನು ಇರಿಸಲಾಗಿದೆ. ಕಾರಾಗೃಹದ ಅಧಿಕಾರಿಗಳು ವಿನಯ್​ಗೆ 14,433 ನೂತನ‌ ಕೈದಿ ನಂಬರ್ ನೀಡಿದ್ದಾರೆ. ಈ ಸೆಲ್​ನಲ್ಲಿ ಅಟ್ಯಾಚ್ಡ್ ಬಾತ್ ರೂಂ ಹಾಗೂ ಫ್ಯಾನ್ ಸೌಲಭ್ಯವಿದೆ.

ವಾರದಲ್ಲಿ ಒಂದು ಬಾರಿ ಕುಟುಂಬಸ್ಥರಿಗೆ ಹಾಗೂ ಅವರ ಪರ ನ್ಯಾಯವಾದಿಗಳಿಗೆ ಮಾತ್ರ ಭೇಟಿಗೆ ಅವಕಾಶ ನೀಡಲಾಗಿದೆ ಎಂದು ಕಾರಾಗೃಹ ಅಧೀಕ್ಷಕ ಮ್ಯಾಗೇರಿ‌ ಮಾಹಿತಿ ನೀಡಿದ್ದಾರೆ.

ವಿನಯ್​ ಕುಟುಂಬಸ್ಥರಿಗೆ ಸೇರಿದ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಹತ್ಯೆ ನಡೆದಿತ್ತು.

ಇದನ್ನೂ ಓದಿ: ದರ್ಶನ್‌ ನೋಡಲು ವಕೀಲರ ತಂಡದೊಂದಿಗೆ ಬಳ್ಳಾರಿ ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮಿ - VIJAYALAKSHMI VISITS BELLARY JAIL

ETV Bharat Logo

Copyright © 2024 Ushodaya Enterprises Pvt. Ltd., All Rights Reserved.