ETV Bharat / state

ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಪರ ಮತಯಾಚಿಸಿದ ಶಾಸಕ ಎಸ್​.ಆರ್​ ವಿಶ್ವನಾಥ್, ನಟಿ ತಾರ - Lokshaba election

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರ ಪರವಾಗಿ ಯಲಹಂಕ ಶಾಸಕ ಎಸ್​.ಆರ್​ ವಿಶ್ವನಾಥ್ ಮತ್ತು ನಟಿ ತಾರಾ ಮತಯಾಚನೆ ಮಾಡಿದರು.

author img

By ETV Bharat Karnataka Team

Published : Apr 4, 2024, 4:04 PM IST

Updated : Apr 4, 2024, 4:27 PM IST

ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್
ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್
ಮುನಿಸು ಮರೆತು ಸುಧಾಕರ್​ಗೆ ಸಾಥ್​ ನೀಡಿದ ಶಾಸಕ ಎಸ್​.ಆರ್​ ವಿಶ್ವನಾಥ್

ಚಿಕ್ಕಬಳ್ಳಾಪುರ: ಇಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರು ನಾಮಪತ್ರ ಸಲ್ಲಿಸಿದರು. ಈ ವೇಳೆ ಸುಧಾಕರ್​ ಅವರಿಗೆ ಯಲಹಂಕ ಶಾಸಕ ಎಸ್​.ಆರ್​ ವಿಶ್ವನಾಥ್ ಸಾಥ್ ನೀಡಿದ್ದು, ಮತಯಾಚನೆ ನಡೆಸಲು ಸಕಲ ಸಿದ್ಧತೆಯನ್ನು ನಡೆಸಿಕೊಂಡು ಬಂದಿದ್ದರು. ಅಲ್ಲದೆ, ಸ್ಟಾರ್ ಪ್ರಚಾರಕಿ ನಟಿ ತಾರಾ ಕೂಡ ಜೊತೆಗಿದ್ದರು.

ಇದಕ್ಕೂ ಮುನ್ನ ಎಸ್​.ಆರ್​ ವಿಶ್ವನಾಥ್​ ತನ್ನ ಮಗನಿಗೆ ಟಿಕೆಟ್ ಸಿಗಲಿಲ್ಲವೆಂದು ಸಾಕಷ್ಟು ಬೇಸರವನ್ನು ವ್ಯಕ್ತಪಡಿಸಿ ಸುಧಾಕರ್ ಪರ ಮತಯಾಚನೆ ನಡೆಸುವುದಿಲ್ಲ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದರು. ಆದರೆ ಕಳೆದ ಎರಡು ದಿನಗಳ ಹಿಂದೆ ಕೇಂದ್ರ ಸಚಿವ ಅಮಿತ್​ ಶಾ ಮತ್ತು ರಾಜ್ಯ ಬಿಜೆಪಿ ನಾಯಕರು ನಡೆಸಿದ ಸಂಧಾನ ಯಶಸ್ವಿಯಾಗಿದ್ದು, ಇದರ ಫಲವಾಗಿ ಇಂದು ತಮ್ಮ ಬೆಂಬಲವನ್ನು ಸುಧಾಕರ್ ಅವರಿಗೆ ವಿಶ್ವನಾಥ್​ ಸೂಚಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಎಸ್​.ಆರ್​ ವಿಶ್ವನಾಥ್, ಲೋಕಸಭೆ ಚುನಾವಣೆ ವೇಳೆ ನರೇಂದ್ರ ಮೋದಿ ಪರವಾಗಿ ನಡೆಯುತ್ತಿದೆ. ಮೋದಿ ಹೆಸರು ಇಲ್ಲ ಎಂದರೆ ಯಾರು ಮತವನ್ನು ಕೊಡುವುದಿಲ್ಲ. ನಮ್ಮ ಹೆಸರು ಹೇಳಿದರೆ ಯಾವುದೋ ಒಂದು ಲೋಪವಿರುತ್ತದೆ. ಆದ್ದರಿಂದ ಮೋದಿ ಹೆಸರಿನಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ನಮ್ಮ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಕೊಡಿಸುವುದಾಗಿ ಮಾಹಿತಿ ನೀಡಿದ್ದೇನೆ. ಅದರಂತೆ ಕ್ಷೇತ್ರದಲ್ಲಿ ಲೀಡ್ ಕೊಡಿಸಲಿದ್ದೇನೆ. ಅಭ್ಯರ್ಥಿಯ ಗೆಲುವಿಗೆ ಶ್ರಮವಹಿಸಲಿದ್ದೇನೆ ಎಂದರು.

ಸ್ಟಾರ್ ಪ್ರಚಾರಕಿ ನಟಿ ತಾರಾ ಅನುರಾಧ ಮಾತನಾಡಿ, ಮೊದಲ ಬಾರಿಗೆ ಸುಧಾಕರ್ ಪರವಾಗಿ ಮತಯಾಚನೆಗೆ ಬಂದಿದ್ದೇನೆ. ಹೈಕಮಾಂಡ್​ ಸೂಚಿಸಿದ ಕಡೆ ಮತಯಾಚನೆ ನಡೆಸಲಿದ್ದೇನೆ. ಸುಧಾಕರ್ ಪರ ಮತಯಾಚಿಸಲು ಸಾಕಷ್ಟು ಸಂತೋಷವಾಗುತ್ತಿದೆ. ಮುಂದೆ ಹೈಕಮಾಂಡ್​ ಸೂಚಿಸಿದರೆ ಇಲ್ಲೇ ಮತಯಾಚನೆ ನಡೆಸಲು ಸಿದ್ಧಳಾಗಿದ್ದಾನೆ ಎಂದು ತಿಳಿಸಿದರು.

ನಾಮಪತ್ರ ಸಲ್ಲಿಕೆಗೂ ಮೊದಲು ಟೆಂಪಲ್ ರನ್ ಶುರು ಮಾಡಿದ ಡಾ. ಕೆ ಸುಧಾಕರ್ ಆಟೋ ಚಾಲಕರ ಜೊತೆ ಮಾತುಕತೆ ನಡೆಸಿ ಆಟೋ ಓಡಿಸುವುದರ ಮೂಲಕ ಎಲ್ಲರ ಗಮನ ಸೆಳೆದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ನಾವೆಲ್ಲಾ ಮೋದಿ ಅವರ ಹ್ಯಾಟ್ರಿಕ್ ಗೆಲುವಿಗಾಗಿ ಶ್ರಮವಹಿಸುತ್ತಿದ್ದೇವೆ. ನಾನು ಅಭ್ಯರ್ಥಿ ಆಗಿರಬಹುದು, ಆದರೆ ಮೋದಿ ಅವರ ಪರವಾಗಿ ಯಲಹಂಕ ಶಾಸಕರ‌ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇನೆ. ನನಗೆ ಮೋದಿ ಅವರ ಅಭಿಮಾನಿಗಳ ಶ್ರೀರಕ್ಷೆಯಿಂದ ಗೆಲುವು ಸಿಗಲಿದೆ. ಇಂದು ನಡೆಯುವ ರೋಡ್ ಶೋ ಗೆ ಮಾಜಿ ಸಿಎಂಗಳಾದ ಬಿ.ಎಸ್​ ಯಡಿಯೂರಪ್ಪ ಹಾಗೂ ಹೆಚ್​.ಡಿ ಕುಮಾರಸ್ವಾಮಿ ಬರಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : ತುಮಕೂರು ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ನಾಮಪತ್ರ ಸಲ್ಲಿಕೆ - Lok Sabha Election 2024

ಮುನಿಸು ಮರೆತು ಸುಧಾಕರ್​ಗೆ ಸಾಥ್​ ನೀಡಿದ ಶಾಸಕ ಎಸ್​.ಆರ್​ ವಿಶ್ವನಾಥ್

ಚಿಕ್ಕಬಳ್ಳಾಪುರ: ಇಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರು ನಾಮಪತ್ರ ಸಲ್ಲಿಸಿದರು. ಈ ವೇಳೆ ಸುಧಾಕರ್​ ಅವರಿಗೆ ಯಲಹಂಕ ಶಾಸಕ ಎಸ್​.ಆರ್​ ವಿಶ್ವನಾಥ್ ಸಾಥ್ ನೀಡಿದ್ದು, ಮತಯಾಚನೆ ನಡೆಸಲು ಸಕಲ ಸಿದ್ಧತೆಯನ್ನು ನಡೆಸಿಕೊಂಡು ಬಂದಿದ್ದರು. ಅಲ್ಲದೆ, ಸ್ಟಾರ್ ಪ್ರಚಾರಕಿ ನಟಿ ತಾರಾ ಕೂಡ ಜೊತೆಗಿದ್ದರು.

ಇದಕ್ಕೂ ಮುನ್ನ ಎಸ್​.ಆರ್​ ವಿಶ್ವನಾಥ್​ ತನ್ನ ಮಗನಿಗೆ ಟಿಕೆಟ್ ಸಿಗಲಿಲ್ಲವೆಂದು ಸಾಕಷ್ಟು ಬೇಸರವನ್ನು ವ್ಯಕ್ತಪಡಿಸಿ ಸುಧಾಕರ್ ಪರ ಮತಯಾಚನೆ ನಡೆಸುವುದಿಲ್ಲ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದರು. ಆದರೆ ಕಳೆದ ಎರಡು ದಿನಗಳ ಹಿಂದೆ ಕೇಂದ್ರ ಸಚಿವ ಅಮಿತ್​ ಶಾ ಮತ್ತು ರಾಜ್ಯ ಬಿಜೆಪಿ ನಾಯಕರು ನಡೆಸಿದ ಸಂಧಾನ ಯಶಸ್ವಿಯಾಗಿದ್ದು, ಇದರ ಫಲವಾಗಿ ಇಂದು ತಮ್ಮ ಬೆಂಬಲವನ್ನು ಸುಧಾಕರ್ ಅವರಿಗೆ ವಿಶ್ವನಾಥ್​ ಸೂಚಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಎಸ್​.ಆರ್​ ವಿಶ್ವನಾಥ್, ಲೋಕಸಭೆ ಚುನಾವಣೆ ವೇಳೆ ನರೇಂದ್ರ ಮೋದಿ ಪರವಾಗಿ ನಡೆಯುತ್ತಿದೆ. ಮೋದಿ ಹೆಸರು ಇಲ್ಲ ಎಂದರೆ ಯಾರು ಮತವನ್ನು ಕೊಡುವುದಿಲ್ಲ. ನಮ್ಮ ಹೆಸರು ಹೇಳಿದರೆ ಯಾವುದೋ ಒಂದು ಲೋಪವಿರುತ್ತದೆ. ಆದ್ದರಿಂದ ಮೋದಿ ಹೆಸರಿನಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ನಮ್ಮ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಕೊಡಿಸುವುದಾಗಿ ಮಾಹಿತಿ ನೀಡಿದ್ದೇನೆ. ಅದರಂತೆ ಕ್ಷೇತ್ರದಲ್ಲಿ ಲೀಡ್ ಕೊಡಿಸಲಿದ್ದೇನೆ. ಅಭ್ಯರ್ಥಿಯ ಗೆಲುವಿಗೆ ಶ್ರಮವಹಿಸಲಿದ್ದೇನೆ ಎಂದರು.

ಸ್ಟಾರ್ ಪ್ರಚಾರಕಿ ನಟಿ ತಾರಾ ಅನುರಾಧ ಮಾತನಾಡಿ, ಮೊದಲ ಬಾರಿಗೆ ಸುಧಾಕರ್ ಪರವಾಗಿ ಮತಯಾಚನೆಗೆ ಬಂದಿದ್ದೇನೆ. ಹೈಕಮಾಂಡ್​ ಸೂಚಿಸಿದ ಕಡೆ ಮತಯಾಚನೆ ನಡೆಸಲಿದ್ದೇನೆ. ಸುಧಾಕರ್ ಪರ ಮತಯಾಚಿಸಲು ಸಾಕಷ್ಟು ಸಂತೋಷವಾಗುತ್ತಿದೆ. ಮುಂದೆ ಹೈಕಮಾಂಡ್​ ಸೂಚಿಸಿದರೆ ಇಲ್ಲೇ ಮತಯಾಚನೆ ನಡೆಸಲು ಸಿದ್ಧಳಾಗಿದ್ದಾನೆ ಎಂದು ತಿಳಿಸಿದರು.

ನಾಮಪತ್ರ ಸಲ್ಲಿಕೆಗೂ ಮೊದಲು ಟೆಂಪಲ್ ರನ್ ಶುರು ಮಾಡಿದ ಡಾ. ಕೆ ಸುಧಾಕರ್ ಆಟೋ ಚಾಲಕರ ಜೊತೆ ಮಾತುಕತೆ ನಡೆಸಿ ಆಟೋ ಓಡಿಸುವುದರ ಮೂಲಕ ಎಲ್ಲರ ಗಮನ ಸೆಳೆದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ನಾವೆಲ್ಲಾ ಮೋದಿ ಅವರ ಹ್ಯಾಟ್ರಿಕ್ ಗೆಲುವಿಗಾಗಿ ಶ್ರಮವಹಿಸುತ್ತಿದ್ದೇವೆ. ನಾನು ಅಭ್ಯರ್ಥಿ ಆಗಿರಬಹುದು, ಆದರೆ ಮೋದಿ ಅವರ ಪರವಾಗಿ ಯಲಹಂಕ ಶಾಸಕರ‌ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇನೆ. ನನಗೆ ಮೋದಿ ಅವರ ಅಭಿಮಾನಿಗಳ ಶ್ರೀರಕ್ಷೆಯಿಂದ ಗೆಲುವು ಸಿಗಲಿದೆ. ಇಂದು ನಡೆಯುವ ರೋಡ್ ಶೋ ಗೆ ಮಾಜಿ ಸಿಎಂಗಳಾದ ಬಿ.ಎಸ್​ ಯಡಿಯೂರಪ್ಪ ಹಾಗೂ ಹೆಚ್​.ಡಿ ಕುಮಾರಸ್ವಾಮಿ ಬರಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : ತುಮಕೂರು ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ನಾಮಪತ್ರ ಸಲ್ಲಿಕೆ - Lok Sabha Election 2024

Last Updated : Apr 4, 2024, 4:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.