ETV Bharat / state

ಕೊಪ್ಪಳ: ನಾಪತ್ತೆಯಾಗಿದ್ದ ಬಾಲಕಿ ಚೀಲದಲ್ಲಿ ಶವವಾಗಿ ಪತ್ತೆ; ಘಟನೆ ಬಗ್ಗೆ ಎಸ್​​​​​​ಪಿ ಹೇಳಿದ್ದಿಷ್ಟು - Missing Girl Found Dead

author img

By ETV Bharat Karnataka Team

Published : Apr 22, 2024, 12:38 PM IST

ಕೊಪ್ಪಳ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.

KOPPAL  GIRL DEAD  GIRL DEAD BODY IN BAG  GIRL MISSING CASE
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಹೇಳಿಕೆ

ಕೊಪ್ಪಳ: ಎರಡು ದಿನದ ಹಿಂದೆ ಕಾಣೆಯಾಗಿದ್ದ ತಾಲೂಕಿನ‌ ಕಿನ್ನಾಳ ಗ್ರಾಮದ 7 ವರ್ಷದ ಬಾಲಕಿ ಚೀಲದಲ್ಲಿ ಶವವಾಗಿ ಪತ್ತೆಯಾಗಿದ್ದು, ಹೆತ್ತವರಿಗೆ ದಿಗಿಲು ಬಡಿದಂತಾಗಿದೆ. ಶುಕ್ರವಾರ ಮಧ್ಯಾಹ್ನ ಆಟವಾಡಲು ಮನೆಯಿಂದ ಹೊರ ಹೋಗಿದ್ದ ಬಾಲಕಿ ನಾಪತ್ತೆಯಾಗಿದ್ದಳು. ಕುಟುಂಬಸ್ಥರು, ಗ್ರಾಮಸ್ಥರು ಅಕ್ಕಪಕ್ಕದ ಗ್ರಾಮಗಳು ಸೇರಿ ಎಲ್ಲೆಡೆ ಹುಡುಕಾಟ ನಡೆಸಿ ಕೊನೆಗೆ ಸಿಗದೇ ಹೋದಾಗ ಶನಿವಾರ ಪೋಷಕರು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಭಾನುವಾರ ಸಂಜೆ ಬಾಲಕಿ ಮನೆ ಸಮೀಪದ ಖಾಲಿ ಜಾಗದಲ್ಲಿ‌‌‌ ಪ್ಲಾಸ್ಟಿಕ್ ಚೀಲವೊಂದು ಪತ್ತೆಯಾಗಿದೆ. ಆ ಚೀಲದಲ್ಲಿ ಬಾಲಕಿಯ ಶವ ಇರುವುದು ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಗ್ರಾಮದ ಮಧ್ಯದಲ್ಲೇ ಬಾಲಕಿ ಶವ ಸಿಕ್ಕಿರುವುದು ಗ್ರಾಮಸ್ಥರಲ್ಲಿ ತೀವ್ರ ಆತಂಕವನ್ನು ತಂದಿದೆ. ಕೂಡಲೇ ಗ್ರಾಮಸ್ಥರು ಈ ಸುದ್ದಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಘಟನೆ ಬಗ್ಗೆ ಎಸ್​​​ಪಿ ಹೇಳಿದ್ದಿಷ್ಟು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು. ಈ ಕುರಿತು ಮಾಹಿತಿ ನೀಡಿದ ಅವರು, ಬಾಲಕಿ ನಾಪತ್ತೆಯಾಗಿರುವ ಬಗ್ಗೆ ದೂರು ಬಂದಿತ್ತು. ಎರಡು ದಿನಗಳ ಕಾಲ ಗ್ರಾಮದ ಸುತ್ತ ಮುತ್ತ ಹುಡಕಲಾಯಿತು. ಆದರೆ, ಇಂದು ಅವರ ಮನೆಯ ಪಕ್ಕದಲ್ಲೇ ಬಾಲಕಿಯ ಶವ ಪತ್ತೆಯಾಗಿದೆ. ಬಳ್ಳಾರಿಯಿಂದ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಆಗಮಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. ಆದಷ್ಟು ಶೀರ್ಘವಾಗಿ ಈ ಕೃತ್ಯ ಮಾಡಿದವರನ್ನ ಬಂಧಿಸಲಾಗುವುದು ಎಂದರು.

ನಮಗೆ ಯಾರೂ ಶತ್ರುಗಳಿಲ್ಲ ಎಂದ ಬಾಲಕಿ ತಂದೆ: ನಾನು ಯಾರೊಂದಿಗೂ ವೈರತ್ವ ಬೆಳಸಿಕೊಂಡವನಲ್ಲ. ನಾನು ಬೆಳಗ್ಗೆ ಎದ್ದು ಕೊಪ್ಪಳಕ್ಕೆ ಕೆಲಸಕ್ಕೆ ಹೋದರೆ ಮತ್ತೆ ಬರುವುದು ಕತ್ತಲಾದ ಬಳಿಕವೇ. ನಮ್ಮ ಕುಟುಂಬಕ್ಕೆ ಯಾರು ವೈರಿಗಳಿಲ್ಲ. ಆದರೂ ನಮ್ಮ ಮಗಳು ಇಂದು ಹೆಣವಾಗಿದ್ದಾಳೆ. ಯಾವ ಕಾರಣಕ್ಕೆ ಎನ್ನುವುದು ನಮಗೆ ತಿಳಿಯದಂತಾಗಿದೆ ಎಂದು ಮಗುವಿನ ತಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಹುಣ್ಣಿಮೆ ಹತ್ತಿರ ಇದ್ದ ಕಾರಣ ವಾಮಾಚಾರಕ್ಕೆ ಬಾಲಕಿ ಬಲಿಯಾಗಿರುವ ಶಂಕೆಯನ್ನ ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಎಲ್ಲ ಅನುಮಾನಗಳಿಗೆ ತನಿಖೆ ಬಳಿಕವೇ ಉತ್ತರ ಸಿಗಬೇಕಿದೆ.

ಓದಿ: ನಗರಸಭೆ ಉಪಾಧ್ಯಕ್ಷೆಯ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ: ಹಂತಕರು ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ - KILLERS WAS CAUGHT ON CCTV

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಹೇಳಿಕೆ

ಕೊಪ್ಪಳ: ಎರಡು ದಿನದ ಹಿಂದೆ ಕಾಣೆಯಾಗಿದ್ದ ತಾಲೂಕಿನ‌ ಕಿನ್ನಾಳ ಗ್ರಾಮದ 7 ವರ್ಷದ ಬಾಲಕಿ ಚೀಲದಲ್ಲಿ ಶವವಾಗಿ ಪತ್ತೆಯಾಗಿದ್ದು, ಹೆತ್ತವರಿಗೆ ದಿಗಿಲು ಬಡಿದಂತಾಗಿದೆ. ಶುಕ್ರವಾರ ಮಧ್ಯಾಹ್ನ ಆಟವಾಡಲು ಮನೆಯಿಂದ ಹೊರ ಹೋಗಿದ್ದ ಬಾಲಕಿ ನಾಪತ್ತೆಯಾಗಿದ್ದಳು. ಕುಟುಂಬಸ್ಥರು, ಗ್ರಾಮಸ್ಥರು ಅಕ್ಕಪಕ್ಕದ ಗ್ರಾಮಗಳು ಸೇರಿ ಎಲ್ಲೆಡೆ ಹುಡುಕಾಟ ನಡೆಸಿ ಕೊನೆಗೆ ಸಿಗದೇ ಹೋದಾಗ ಶನಿವಾರ ಪೋಷಕರು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಭಾನುವಾರ ಸಂಜೆ ಬಾಲಕಿ ಮನೆ ಸಮೀಪದ ಖಾಲಿ ಜಾಗದಲ್ಲಿ‌‌‌ ಪ್ಲಾಸ್ಟಿಕ್ ಚೀಲವೊಂದು ಪತ್ತೆಯಾಗಿದೆ. ಆ ಚೀಲದಲ್ಲಿ ಬಾಲಕಿಯ ಶವ ಇರುವುದು ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಗ್ರಾಮದ ಮಧ್ಯದಲ್ಲೇ ಬಾಲಕಿ ಶವ ಸಿಕ್ಕಿರುವುದು ಗ್ರಾಮಸ್ಥರಲ್ಲಿ ತೀವ್ರ ಆತಂಕವನ್ನು ತಂದಿದೆ. ಕೂಡಲೇ ಗ್ರಾಮಸ್ಥರು ಈ ಸುದ್ದಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಘಟನೆ ಬಗ್ಗೆ ಎಸ್​​​ಪಿ ಹೇಳಿದ್ದಿಷ್ಟು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದರು. ಈ ಕುರಿತು ಮಾಹಿತಿ ನೀಡಿದ ಅವರು, ಬಾಲಕಿ ನಾಪತ್ತೆಯಾಗಿರುವ ಬಗ್ಗೆ ದೂರು ಬಂದಿತ್ತು. ಎರಡು ದಿನಗಳ ಕಾಲ ಗ್ರಾಮದ ಸುತ್ತ ಮುತ್ತ ಹುಡಕಲಾಯಿತು. ಆದರೆ, ಇಂದು ಅವರ ಮನೆಯ ಪಕ್ಕದಲ್ಲೇ ಬಾಲಕಿಯ ಶವ ಪತ್ತೆಯಾಗಿದೆ. ಬಳ್ಳಾರಿಯಿಂದ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಆಗಮಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. ಆದಷ್ಟು ಶೀರ್ಘವಾಗಿ ಈ ಕೃತ್ಯ ಮಾಡಿದವರನ್ನ ಬಂಧಿಸಲಾಗುವುದು ಎಂದರು.

ನಮಗೆ ಯಾರೂ ಶತ್ರುಗಳಿಲ್ಲ ಎಂದ ಬಾಲಕಿ ತಂದೆ: ನಾನು ಯಾರೊಂದಿಗೂ ವೈರತ್ವ ಬೆಳಸಿಕೊಂಡವನಲ್ಲ. ನಾನು ಬೆಳಗ್ಗೆ ಎದ್ದು ಕೊಪ್ಪಳಕ್ಕೆ ಕೆಲಸಕ್ಕೆ ಹೋದರೆ ಮತ್ತೆ ಬರುವುದು ಕತ್ತಲಾದ ಬಳಿಕವೇ. ನಮ್ಮ ಕುಟುಂಬಕ್ಕೆ ಯಾರು ವೈರಿಗಳಿಲ್ಲ. ಆದರೂ ನಮ್ಮ ಮಗಳು ಇಂದು ಹೆಣವಾಗಿದ್ದಾಳೆ. ಯಾವ ಕಾರಣಕ್ಕೆ ಎನ್ನುವುದು ನಮಗೆ ತಿಳಿಯದಂತಾಗಿದೆ ಎಂದು ಮಗುವಿನ ತಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಹುಣ್ಣಿಮೆ ಹತ್ತಿರ ಇದ್ದ ಕಾರಣ ವಾಮಾಚಾರಕ್ಕೆ ಬಾಲಕಿ ಬಲಿಯಾಗಿರುವ ಶಂಕೆಯನ್ನ ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಎಲ್ಲ ಅನುಮಾನಗಳಿಗೆ ತನಿಖೆ ಬಳಿಕವೇ ಉತ್ತರ ಸಿಗಬೇಕಿದೆ.

ಓದಿ: ನಗರಸಭೆ ಉಪಾಧ್ಯಕ್ಷೆಯ ಪುತ್ರ ಸೇರಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ: ಹಂತಕರು ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ - KILLERS WAS CAUGHT ON CCTV

ETV Bharat Logo

Copyright © 2024 Ushodaya Enterprises Pvt. Ltd., All Rights Reserved.