ETV Bharat / state

ನಾಗಮಂಗಲ ಗಲಭೆ ಪ್ರಕರಣ ತನಿಖೆಗೆ ವಿಶೇಷ ತಂಡ ರಚನೆ, ತಪ್ಪಿತಸ್ಥರಿಗೆ ಶಿಕ್ಷೆ : ಸಚಿವ ಚಲುವರಾಯಸ್ವಾಮಿ - Chaluvarayaswamy

author img

By ETV Bharat Karnataka Team

Published : Sep 14, 2024, 8:04 PM IST

ಬಿಜೆಪಿ - ಜೆಡಿಎಸ್​ನವರಿಗಿಂತ ನನಗೆ ನಾಗಮಂಗಲ ಬೇಕು. ರಾಜಕೀಯ ಜನ್ಮ ಕೊಟ್ಟಿರುವ ಕ್ಷೇತ್ರ ನಾಗಮಂಗಲ. 30 ವರ್ಷ ಕ್ಷೇತ್ರದ ಜನತೆ ಜೊತೆ ಬೆರೆತಿದ್ದೇನೆ. ಏನಾದರೂ ಅಭಿವೃದ್ದಿಯಾಗಿದ್ರೆ ಅದು ನನ್ನಿಂದ ಎಂದು ಸಚಿವ ಚಲುವರಾಯಸ್ವಾಮಿ ಮೈತ್ರಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.

Minister CHALUVARAYASWAMY
ಸಚಿವ ಚಲುವರಾಯಸ್ವಾಮಿ (ETV Bharat)

ಮಂಡ್ಯ: "ಗಲಭೆ ಮಾಡಿಸಿದ್ದು ಕುಮಾರಸ್ವಾಮಿ ಎಂಬ ಹೇಳಿಕೆಯನ್ನು ನಾನು ಕೊಟ್ಟಿಲ್ಲ. ಹಾಗೆ ಗಲಭೆಗೆ ಕಾಂಗ್ರೆಸ್​ ಸರ್ಕಾರವೇ ಕಾರಣ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿಯವರು ಕೂಡ ಅದನ್ನೇ ಹೇಳಿದ್ದಾರೆ. ಹೊರಗಡೆಯವರು ನೂರು ಮಾತನಾಡಲಿ, ನನಗೆ ನಾಗಮಂಗಲ ಜನ ಬೇಕು" ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ಸಚಿವ ಚಲುವರಾಯಸ್ವಾಮಿ (ETV Bharat)

ನಾಗಮಂಗಲದಲ್ಲಿ ಗಲಭೆ ಮಾಡಿಸಿದ್ದು ಕುಮಾರಸ್ವಾಮಿ ಎಂಬ ಕೈ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು. "ಯಾರು ಮೊದಲು ಬೆಂಕಿ ಹಾಕಿದ್ರು‌. ಯಾವ ಅಂಗಡಿಗೆ ಬೆಂಕಿ ಹಾಕಿದ್ರು, ಎಲ್ಲ ಮಾಹಿತಿಯೂ ಇದೆ. ಆದರೆ ನಾನು ಈ ಸಂದರ್ಭದಲ್ಲಿ ಪಕ್ಷ ಹಾಗೂ ಸಮುದಾಯದ ಬಗ್ಗೆ ಮಾತನಾಡಲ್ಲ. ಮೊದಲು ನನಗೆ ಕ್ಷೇತ್ರದ ಕಾನೂನು ಸುವ್ಯವಸ್ಥೆ ಸರಿಯಾಗಬೇಕು. ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇನ್ನೊಂದು ಉನ್ನತ ಮಟ್ಟದ ವಿಶೇಷ ತನಿಖೆಯನ್ನು ಬೇಕಿದ್ರೆ ಮಾಡೋಣ. ಅದಕ್ಕೂ ಮುನ್ನ ಮಾತನಾಡುವುದು ಸೂಕ್ತವಲ್ಲ" ಎಂದರು.

ಹೆಚ್​​​​ಡಿಕೆಗೆ ನಾನು ಉತ್ತರ ಕೊಡಬೇಕಾ?: ಚನ್ನಪಟ್ಟಣದ ಉಪ ಚುನಾವಣೆ​ಗಾಗಿ ಗಲಭೆ ಸೃಷ್ಟಿ ಎಂಬ ಹೆಚ್​ಡಿಕೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, "ನಾಗಮಂಗಲಕ್ಕೆ ಬಂದು ಚನ್ನಪಟ್ಟಣ ಉಪ ಚುನಾವಣೆ ಬಗ್ಗೆ ಮಾತನಾಡ್ತಾರೆ‌. ಕುಮಾರಸ್ವಾಮಿ ನನ್ನ ಹಾಗೆ ಸಾಮಾನ್ಯ ಮಂತ್ರಿನಾ? ಹೆಚ್​ಡಿಕೆ ಎರಡು ಬಾರಿ ಮುಖ್ಯಮಂತ್ರಿ ಆದವರು‌. ಅವರಿಗೆ ನಾನು ಉತ್ತರ ಕೊಡಬೇಕಾ? ನಾಗಮಂಗಲಕ್ಕೆ ಬಂದವರು ಜನರಿಗೆ ಏನು ಸಂದೇಶ ಕೊಡಬೇಕಿತ್ತು. ಆರ್.ಅಶೋಕ್ ಎಲ್ಲಿಂದ ಪರಿಹಾರ ಕೊಡ್ತೀರಾ ಎಂದು ಅಧಿಕಾರಿಗಳನ್ನು ಕೇಳಿದ್ದಾರೆ. ನಾನು ಈಗಾಗಲೇ ಸಿಎಂ ಬಳಿ ಆ ಕುರಿತು ಮಾತನಾಡಿದ್ದೇನೆ. ಕಾನೂನಿನಲ್ಲಿ ನಷ್ಟ ಪರಿಹಾರಕ್ಕೆ ಅವಕಾಶ ಇಲ್ಲ. ಆದರೂ ಪರಿಹಾರ ಕೊಡಿಸಲು ಸಿಎಂ ಅವರನ್ನು ಒಪ್ಪಿಸಿದ್ದೇನೆ. ರಿಪೋರ್ಟ್ ತಕೊಂಡು ಸರ್ಕಾರದಿಂದ ಪರಿಹಾರ ಕೊಡುತ್ತೇನೆ. ನಾನು ವೈಯಕ್ತಿಕವಾಗಿಯೂ ಪರಿಹಾರ ನೀಡುತ್ತೇನೆ. ನಿನ್ನೆ ಕುಮಾರಸ್ವಾಮಿ ಕೂಡ ಪರಿಹಾರ ಕೊಟ್ಟಿರೋದು ಸಂತೋಷ. ಪರಿಹಾರ ಕೊಟ್ಟಿದ್ದು ತಪ್ಪಲ್ಲ. ಆದರೆ ಸಿಎಂ ಅವರನ್ನು ಇಳಿಸಲು ಕುತಂತ್ರ ಅನ್ನೋದು ಸರಿಯಲ್ಲ‌. ಕುಮಾರಸ್ವಾಮಿ ಹೇಳಿಕೆಗೆ ರಿಯಾಕ್ಟ್ ಮಾಡದೇ ಇರುವುದು ಸೂಕ್ತವಲ್ಲ" ಎಂದು ಹೇಳಿದರು.

ವಿಜಯೇಂದ್ರ - ಅಶೋಕ್​ ವಿರುದ್ಧ ವಾಗ್ದಾಳಿ:ಸಿಎಂ ಇಳಿಸಲು ಕಾಂಗ್ರೆಸ್​ನ ಒಂದು ಟೀಂ ಆಕ್ಟೀವ್ ಎಂಬ ಹೆಚ್​ಡಿಕೆ ಆರೋಪ ಕುರಿತು ಮಾತನಾಡಿ, ವಿಜಯೇಂದ್ರ, ಅಶೋಕ್​ನ ಎಷ್ಟು ಜನ ಬಿಜೆಪಿಯವರು ಒಪ್ಪಿದ್ದಾರೆ? ಕುಮಾರಸ್ವಾಮಿನಾ ಎಷ್ಟು ಬಿಜೆಪಿ ನಾಯಕರು ಒಪ್ಪಿದ್ದಾರೆ? ಮೈತ್ರಿ ಪಾದಯಾತ್ರೆ ಏನಾಯ್ತು? ಒಂದು ಮನೆ, ಪಕ್ಷ ಅಂದ ಮೇಲೆ ನಾಲ್ಕೈದು ವ್ಯತ್ಯಾಸ ಇರುತ್ತವೆ. ಸಿಎಂ, ಡಿಸಿಎಂ ಒಟ್ಟಿಗೆ ಇರೋದನ್ನು ನೋಡಿಲ್ವ. ಕಳೆದ ಆರು‌ ವರ್ಷಗಳಿಂದ ಇಬ್ಬರ ನಡುವೆ ಒಂದು ವ್ಯತ್ಯಾಸ ಕಾಣ್ತಿದ್ಯಾ? ನಮ್ಮ ಪಕ್ಷದಲ್ಲಿ ಅಸಮಾಧಾನವಿಲ್ಲ. ಮುಖ್ಯಮಂತ್ರಿ ಸ್ಥಾನ ಖಾಲಿ ಇದ್ದರೆ ತಾನೇ ಫೈಟ್ ಮಾಡೋದು‌. ಆಸೆ ಇದ್ದವರು ಹೇಳಿಕೊಳ್ಳುತ್ತಾರೆ‌. ಬಿಜೆಪಿ-ಜೆಡಿಎಸ್​ನವರಿಗಿಂತ ನನಗೆ ನಾಗಮಂಗಲ ಬೇಕು. ರಾಜಕೀಯ ಜನ್ಮ ಕೊಟ್ಟಿರುವ ಕ್ಷೇತ್ರ ನಾಗಮಂಗಲ. 30 ವರ್ಷ ಕ್ಷೇತ್ರದ ಜನತೆ ಜೊತೆ ಬೆರೆತಿದ್ದೇನೆ. ಏನಾದ್ರು ಅಭಿವೃದ್ದಿಯಾಗಿದ್ರೆ ಅದು ನನ್ನಿಂದ." ಎಂದು ಮೈತ್ರಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.

ಗಲಭೆ ಪ್ರಕರಣದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಕೈಬಿಟ್ಟ ವಿಚಾರದ ಕುರಿತು ಪ್ರತಿಕ್ರಿಯಿಸಿ, "ಗಲಭೆಯಲ್ಲಿ ರಾಜೇಶ್ ಭಾಗವಹಿಸಿರಲಿಲ್ಲ. ಸಿಸಿ ಟಿವಿ ಆಧರಿಸಿ ಅರೆಸ್ಟ್ ಮಾಡಿದ್ರೆ 500 ಜನರು ಅರೆಸ್ಟ್​ ಆಗುತ್ತಾರೆ. ಗಣೇಶ ಮೆರವಣಿಗೆ ‌ಟೀಮ್‌ನಲ್ಲಿ ರಾಜೇಶ್ ಪುತ್ರ ಇದ್ದ ಕಾರಣಕ್ಕೆ ಆತನನ್ನು ಬಂಧಿಸಿದ್ದಾರೆ. ಯಾರನ್ನೂ‌ ರಕ್ಷಣೆ ಮಾಡುವ ಕೆಲಸ ಮಾಡಿಲ್ಲ" ಎಂದು ತಮ್ಮ ಆಪ್ತನನ್ನು ಸಮರ್ಥಿಸಿಕೊಂಡರು.

"ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಿರುವುದು‌ ನಿಜ. ಚಾರ್ಜ್​ಶೀಟ್​ನಲ್ಲಿ ‌ಅವರನ್ನು ಕೈಬಿಡಲು ಸೂಚನೆ ‌ನೀಡಿದ್ದೇನೆ. ಇಡೀ ಪ್ರಕರಣಕ್ಕೆ‌ ಕಾರಣಕರ್ತ ಯಾರೆಂದು ಪತ್ತೆ ಹಚ್ಚಿ ಬಂಧಿಸಲಾಗುವುದು" ಎಂದರು.

ಇದನ್ನೂ ಓದಿ: ಬಿಜೆಪಿ ಸತ್ಯಶೋಧನಾ ಸಮಿತಿ ವರದಿಯಲ್ಲಿ ಸತ್ಯ ಇದ್ದರೆ ಗಮನಿಸುತ್ತೇವೆ: ಗೃಹ ಸಚಿವ ಜಿ. ಪರಮೇಶ್ವರ್ - Dr G Parameshwar

ಮಂಡ್ಯ: "ಗಲಭೆ ಮಾಡಿಸಿದ್ದು ಕುಮಾರಸ್ವಾಮಿ ಎಂಬ ಹೇಳಿಕೆಯನ್ನು ನಾನು ಕೊಟ್ಟಿಲ್ಲ. ಹಾಗೆ ಗಲಭೆಗೆ ಕಾಂಗ್ರೆಸ್​ ಸರ್ಕಾರವೇ ಕಾರಣ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿಯವರು ಕೂಡ ಅದನ್ನೇ ಹೇಳಿದ್ದಾರೆ. ಹೊರಗಡೆಯವರು ನೂರು ಮಾತನಾಡಲಿ, ನನಗೆ ನಾಗಮಂಗಲ ಜನ ಬೇಕು" ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ಸಚಿವ ಚಲುವರಾಯಸ್ವಾಮಿ (ETV Bharat)

ನಾಗಮಂಗಲದಲ್ಲಿ ಗಲಭೆ ಮಾಡಿಸಿದ್ದು ಕುಮಾರಸ್ವಾಮಿ ಎಂಬ ಕೈ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು. "ಯಾರು ಮೊದಲು ಬೆಂಕಿ ಹಾಕಿದ್ರು‌. ಯಾವ ಅಂಗಡಿಗೆ ಬೆಂಕಿ ಹಾಕಿದ್ರು, ಎಲ್ಲ ಮಾಹಿತಿಯೂ ಇದೆ. ಆದರೆ ನಾನು ಈ ಸಂದರ್ಭದಲ್ಲಿ ಪಕ್ಷ ಹಾಗೂ ಸಮುದಾಯದ ಬಗ್ಗೆ ಮಾತನಾಡಲ್ಲ. ಮೊದಲು ನನಗೆ ಕ್ಷೇತ್ರದ ಕಾನೂನು ಸುವ್ಯವಸ್ಥೆ ಸರಿಯಾಗಬೇಕು. ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇನ್ನೊಂದು ಉನ್ನತ ಮಟ್ಟದ ವಿಶೇಷ ತನಿಖೆಯನ್ನು ಬೇಕಿದ್ರೆ ಮಾಡೋಣ. ಅದಕ್ಕೂ ಮುನ್ನ ಮಾತನಾಡುವುದು ಸೂಕ್ತವಲ್ಲ" ಎಂದರು.

ಹೆಚ್​​​​ಡಿಕೆಗೆ ನಾನು ಉತ್ತರ ಕೊಡಬೇಕಾ?: ಚನ್ನಪಟ್ಟಣದ ಉಪ ಚುನಾವಣೆ​ಗಾಗಿ ಗಲಭೆ ಸೃಷ್ಟಿ ಎಂಬ ಹೆಚ್​ಡಿಕೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, "ನಾಗಮಂಗಲಕ್ಕೆ ಬಂದು ಚನ್ನಪಟ್ಟಣ ಉಪ ಚುನಾವಣೆ ಬಗ್ಗೆ ಮಾತನಾಡ್ತಾರೆ‌. ಕುಮಾರಸ್ವಾಮಿ ನನ್ನ ಹಾಗೆ ಸಾಮಾನ್ಯ ಮಂತ್ರಿನಾ? ಹೆಚ್​ಡಿಕೆ ಎರಡು ಬಾರಿ ಮುಖ್ಯಮಂತ್ರಿ ಆದವರು‌. ಅವರಿಗೆ ನಾನು ಉತ್ತರ ಕೊಡಬೇಕಾ? ನಾಗಮಂಗಲಕ್ಕೆ ಬಂದವರು ಜನರಿಗೆ ಏನು ಸಂದೇಶ ಕೊಡಬೇಕಿತ್ತು. ಆರ್.ಅಶೋಕ್ ಎಲ್ಲಿಂದ ಪರಿಹಾರ ಕೊಡ್ತೀರಾ ಎಂದು ಅಧಿಕಾರಿಗಳನ್ನು ಕೇಳಿದ್ದಾರೆ. ನಾನು ಈಗಾಗಲೇ ಸಿಎಂ ಬಳಿ ಆ ಕುರಿತು ಮಾತನಾಡಿದ್ದೇನೆ. ಕಾನೂನಿನಲ್ಲಿ ನಷ್ಟ ಪರಿಹಾರಕ್ಕೆ ಅವಕಾಶ ಇಲ್ಲ. ಆದರೂ ಪರಿಹಾರ ಕೊಡಿಸಲು ಸಿಎಂ ಅವರನ್ನು ಒಪ್ಪಿಸಿದ್ದೇನೆ. ರಿಪೋರ್ಟ್ ತಕೊಂಡು ಸರ್ಕಾರದಿಂದ ಪರಿಹಾರ ಕೊಡುತ್ತೇನೆ. ನಾನು ವೈಯಕ್ತಿಕವಾಗಿಯೂ ಪರಿಹಾರ ನೀಡುತ್ತೇನೆ. ನಿನ್ನೆ ಕುಮಾರಸ್ವಾಮಿ ಕೂಡ ಪರಿಹಾರ ಕೊಟ್ಟಿರೋದು ಸಂತೋಷ. ಪರಿಹಾರ ಕೊಟ್ಟಿದ್ದು ತಪ್ಪಲ್ಲ. ಆದರೆ ಸಿಎಂ ಅವರನ್ನು ಇಳಿಸಲು ಕುತಂತ್ರ ಅನ್ನೋದು ಸರಿಯಲ್ಲ‌. ಕುಮಾರಸ್ವಾಮಿ ಹೇಳಿಕೆಗೆ ರಿಯಾಕ್ಟ್ ಮಾಡದೇ ಇರುವುದು ಸೂಕ್ತವಲ್ಲ" ಎಂದು ಹೇಳಿದರು.

ವಿಜಯೇಂದ್ರ - ಅಶೋಕ್​ ವಿರುದ್ಧ ವಾಗ್ದಾಳಿ:ಸಿಎಂ ಇಳಿಸಲು ಕಾಂಗ್ರೆಸ್​ನ ಒಂದು ಟೀಂ ಆಕ್ಟೀವ್ ಎಂಬ ಹೆಚ್​ಡಿಕೆ ಆರೋಪ ಕುರಿತು ಮಾತನಾಡಿ, ವಿಜಯೇಂದ್ರ, ಅಶೋಕ್​ನ ಎಷ್ಟು ಜನ ಬಿಜೆಪಿಯವರು ಒಪ್ಪಿದ್ದಾರೆ? ಕುಮಾರಸ್ವಾಮಿನಾ ಎಷ್ಟು ಬಿಜೆಪಿ ನಾಯಕರು ಒಪ್ಪಿದ್ದಾರೆ? ಮೈತ್ರಿ ಪಾದಯಾತ್ರೆ ಏನಾಯ್ತು? ಒಂದು ಮನೆ, ಪಕ್ಷ ಅಂದ ಮೇಲೆ ನಾಲ್ಕೈದು ವ್ಯತ್ಯಾಸ ಇರುತ್ತವೆ. ಸಿಎಂ, ಡಿಸಿಎಂ ಒಟ್ಟಿಗೆ ಇರೋದನ್ನು ನೋಡಿಲ್ವ. ಕಳೆದ ಆರು‌ ವರ್ಷಗಳಿಂದ ಇಬ್ಬರ ನಡುವೆ ಒಂದು ವ್ಯತ್ಯಾಸ ಕಾಣ್ತಿದ್ಯಾ? ನಮ್ಮ ಪಕ್ಷದಲ್ಲಿ ಅಸಮಾಧಾನವಿಲ್ಲ. ಮುಖ್ಯಮಂತ್ರಿ ಸ್ಥಾನ ಖಾಲಿ ಇದ್ದರೆ ತಾನೇ ಫೈಟ್ ಮಾಡೋದು‌. ಆಸೆ ಇದ್ದವರು ಹೇಳಿಕೊಳ್ಳುತ್ತಾರೆ‌. ಬಿಜೆಪಿ-ಜೆಡಿಎಸ್​ನವರಿಗಿಂತ ನನಗೆ ನಾಗಮಂಗಲ ಬೇಕು. ರಾಜಕೀಯ ಜನ್ಮ ಕೊಟ್ಟಿರುವ ಕ್ಷೇತ್ರ ನಾಗಮಂಗಲ. 30 ವರ್ಷ ಕ್ಷೇತ್ರದ ಜನತೆ ಜೊತೆ ಬೆರೆತಿದ್ದೇನೆ. ಏನಾದ್ರು ಅಭಿವೃದ್ದಿಯಾಗಿದ್ರೆ ಅದು ನನ್ನಿಂದ." ಎಂದು ಮೈತ್ರಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.

ಗಲಭೆ ಪ್ರಕರಣದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಕೈಬಿಟ್ಟ ವಿಚಾರದ ಕುರಿತು ಪ್ರತಿಕ್ರಿಯಿಸಿ, "ಗಲಭೆಯಲ್ಲಿ ರಾಜೇಶ್ ಭಾಗವಹಿಸಿರಲಿಲ್ಲ. ಸಿಸಿ ಟಿವಿ ಆಧರಿಸಿ ಅರೆಸ್ಟ್ ಮಾಡಿದ್ರೆ 500 ಜನರು ಅರೆಸ್ಟ್​ ಆಗುತ್ತಾರೆ. ಗಣೇಶ ಮೆರವಣಿಗೆ ‌ಟೀಮ್‌ನಲ್ಲಿ ರಾಜೇಶ್ ಪುತ್ರ ಇದ್ದ ಕಾರಣಕ್ಕೆ ಆತನನ್ನು ಬಂಧಿಸಿದ್ದಾರೆ. ಯಾರನ್ನೂ‌ ರಕ್ಷಣೆ ಮಾಡುವ ಕೆಲಸ ಮಾಡಿಲ್ಲ" ಎಂದು ತಮ್ಮ ಆಪ್ತನನ್ನು ಸಮರ್ಥಿಸಿಕೊಂಡರು.

"ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಿರುವುದು‌ ನಿಜ. ಚಾರ್ಜ್​ಶೀಟ್​ನಲ್ಲಿ ‌ಅವರನ್ನು ಕೈಬಿಡಲು ಸೂಚನೆ ‌ನೀಡಿದ್ದೇನೆ. ಇಡೀ ಪ್ರಕರಣಕ್ಕೆ‌ ಕಾರಣಕರ್ತ ಯಾರೆಂದು ಪತ್ತೆ ಹಚ್ಚಿ ಬಂಧಿಸಲಾಗುವುದು" ಎಂದರು.

ಇದನ್ನೂ ಓದಿ: ಬಿಜೆಪಿ ಸತ್ಯಶೋಧನಾ ಸಮಿತಿ ವರದಿಯಲ್ಲಿ ಸತ್ಯ ಇದ್ದರೆ ಗಮನಿಸುತ್ತೇವೆ: ಗೃಹ ಸಚಿವ ಜಿ. ಪರಮೇಶ್ವರ್ - Dr G Parameshwar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.