ETV Bharat / state

ಮದುವೆಯಾಗಿ ಏಳೇ ತಿಂಗಳಿಗೆ ತವರು ಮನೆಗೆ ಬಂದು ಆತ್ಮಹತ್ಯೆಗೆ ಶರಣಾದ ಗೃಹಿಣಿ - Woman Commits Suicide

author img

By ETV Bharat Karnataka Team

Published : Sep 16, 2024, 11:22 AM IST

Updated : Sep 16, 2024, 11:53 AM IST

ಮದುವೆಯಾಗಿ ಏಳು ತಿಂಗಳೊಳಗೆ ಗೃಹಿಣಿ ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಮನೆಯವರ ವರದಕ್ಷಿಣೆ ಕಿರುಕುಳವೇ ಘಟನೆಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.

ಮದುವೆಯಾದ 7 ತಿಂಗಳಿಗೆ ವಿವಾಹಿತೆ ಆತ್ಮಹತ್ಯೆ
ಚಿಕ್ಕಬಳ್ಳಾಪುರ ಪೊಲೀಸರು (ETV Bharat)

ಚಿಕ್ಕಬಳ್ಳಾಪುರ: ಮದುವೆಯಾಗಿ ವರ್ಷ ತುಂಬುವುದರೊಳಗೇ ನವ ವಿವಾಹಿತೆ ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂತಾಮಣಿ ನಗರದಲ್ಲಿ ಶನಿವಾರ ನಡೆದಿದೆ. ಅತ್ತೆ-ಮಾವ, ಗಂಡ, ಮೈದುನ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು ಎಂದು ಆರೋಪಿಸಿ ಮೃತಪಟ್ಟ ಯುವತಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಬಿಂದುಶ್ರೀ (22) ಆತ್ಮಹತ್ಯೆ ಮಾಡಿಕೊಂಡವರು. ಗಾಂಧಿನಗರದ ನಿವಾಸಿ ಟೈಲರ್ ವೃತ್ತಿಯ ಕೆ.ಬಿ.ದೇವರಾಜು ಅವರಿಗೆ ಬಿಂದುಶ್ರೀ ಏಕೈಕ ಪುತ್ರಿ. ಇವರನ್ನು ಆವಲಹಳ್ಳಿ ಸಮೀಪದ ಹಿರಂಡಹಳ್ಳಿ ಗ್ರಾಮದ ಮುನಿರಾಜು ಎಂಬವರ ಮಗ ಎಚ್.ಎಂ.ರಾಘವೇಂದ್ರ ಅವರಿಗೆ ಕೊಟ್ಟು 2024ರ ಫೆಬ್ರವರಿ 21ರಂದು ಕೈವಾರದಲ್ಲಿ ಮದುವೆ ಮಾಡಲಾಗಿತ್ತು.

ಬಿಂದುಶ್ರೀ ಪೋಷಕರು ನಗರ ಪೊಲೀಸ್​ ಠಾಣೆಗೆ ನೀಡಿದ ದೂರಿನಲ್ಲಿ, "ಮದುವೆ ವೇಳೆ ಚಿನ್ನದೊಡವೆಗಳನ್ನು ನೀಡಲಾಗಿತ್ತು. ಮದುವೆ ದಿನವೇ ಮಗನಿಗೆ 100 ಗ್ರಾಂ ಒಡವೆ ವರದಕ್ಷಿಣೆಯಾಗಿ ನೀಡಬೇಕೆಂದು ರಾಘವೇಂದ್ರನ ತಾಯಿ ಲತಾ ಗಲಾಟೆ ಮಾಡಿದ್ದರು. ಕೊನೆಗೆ 60 ಗ್ರಾಂ ತೂಕದ ಬ್ರಾಸ್ ಲೈಟ್, ಚೈನು ಹಾಗೂ ಒಂದು ಉಂಗುರ ನೀಡಿದ್ದೆವು. ಮಾವನ ಮನೆಯಲ್ಲಿ ಎರಡು ತಿಂಗಳು ಚೆನ್ನಾಗಿ ನೋಡಿಕೊಂಡಿದ್ದರು. ನಂತರ ನನ್ನ ಮಗಳು ಬಿ.ಕಾಂ. ಅಂತಿಮ ಸೆಮಿಸ್ಟರ್​ ಪರೀಕ್ಷೆ ಬರೆಯಲು ನಮ್ಮ ಮನೆಗೆ ಬಂದಳು. ಪರೀಕ್ಷೆ ಮುಗುಸಿ ವಾಪಸ್ ಬರುವಾಗ 20 ಲಕ್ಷ ರೂ. ಹಣ ಹಾಗೂ ಒಂದು ಕಾರನ್ನು ವರದಕ್ಷಿಣೆಯನ್ನಾಗಿ ತೆಗೆದುಕೊಂಡು ಬಾ ಎಂದು ಗಂಡ, ಅತ್ತೆ, ಮಾವ ಎಲ್ಲರೂ ಸೇರಿ ಹೇಳಿ ಕಳುಹಿಸಿದ್ದರು. ಮಗಳು ಗಂಡನ ಮನೆಗೆ ವಾಪಸ್ ಹೋದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಏಕೆ ಹಣ ತೆಗೆದುಕೊಂಡು ಬಂದಿಲ್ಲ. ನೀನು ಒಬ್ಬಳೇ ಮಗಳು. ಆಸ್ತಿ ಮಾರಿ ತೆಗೆದುಕೊಂಡು ಬರಬೇಕಾಗಿತ್ತು. ವರದಕ್ಷಿಣೆ ತರದಿದ್ದರೆ ನೀನು ನಮ್ಮ ಮನೆಗೆ ಬರಬೇಡ. ಬಂದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು."

"ಕಾಲೇಜಿನ ತರಗತಿ ಮುಕ್ತಾಯವಾದ ನಂತರ ಆಗಸ್ಟ್ 7ರಂದು ನನ್ನ ಹೆಂಡತಿ ಮಗಳನ್ನು ಕರೆದುಕೊಂಡು ಹೋಗಿ ಗಂಡನ ಮನೆಗೆ ಬಿಟ್ಟುಬಂದರು. ಆಗಲೂ ಗಂಡ, ಅತ್ತೆ, ಮಾವ, ಮೈದುನ ಎಲ್ಲರೂ ಸೇರಿ ಕಿರುಕುಳ ನೀಡಿದ್ದಾರೆ. ಹಣ ತರುವವರೆಗೂ ನಮ್ಮ ಮನೆಯಲ್ಲಿ ಇರುವುದು ಬೇಡ ಎಂದು ಆಗಸ್ಟ್ 10ರಂದು ಲಗೇಜ್ ಸಮೇತ ಮನೆಗೆ ವಾಪಸ್‌ ಕಳುಹಿಸಿದ್ದರು. ಸೆಪ್ಟೆಂಬರ್​ 11ರಂದು ನಾನು, ನನ್ನ ಹೆಂಡತಿ ಮಗಳನ್ನು ಮತ್ತೆ ಕರೆದುಕೊಂಡು ಹೋದರೂ ಅವರು ನಮ್ಮನ್ನು ಮನೆಗೆ ಸೇರಿಸಲಿಲ್ಲ. ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದ್ದರು."

"ಸೆಪ್ಟೆಂಬರ್ 12ರಂದು ಆವಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದೆವು. ಪೊಲೀಸರು ಅಳಿಯ, ಮಾವ, ಅತ್ತೆಯನ್ನು ಕರೆಸಿ ವಿಚಾರಣೆ ಮಾಡಿದರು. ನಾವೇ ಸಮಸ್ಯೆಯನ್ನು ಬಗೆಹರಿಸಿಕೊಂಡು ನಾಳೆ ಬರುವುದಾಗಿ ಪೊಲೀಸರಿಗೆ ತಿಳಿಸಿದರು. ಹೊರಗಡೆ ಬಂದು ಮತ್ತೆ ನಮ್ಮ ಮೇಲೆ ಧಮ್ಕಿ ಹಾಕಿ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಗಲಾಟೆ ಮಾಡಿದರು. ನಾವು ಚಿಂತಾಮಣಿಗೆ ವಾಪಸ್ ಬಂದೆವು."

"ಈ ಎಲ್ಲ ಘಟನೆಗಳಿಂದ ಮನನೊಂದು ನನ್ನ ಮಗಳು ಶನಿವಾರ ಸಂಜೆ ನಮ್ಮನ್ನು ದೇವಸ್ಥಾನಕ್ಕೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾವು ವಾಪಸ್​ ಬಂದು ನೋಡಿ ಗಾಬರಿಯಿಂದ ಕೂಗಿಕೊಂಡೆವು. ಸುತ್ತಮುತ್ತಲಿನವರು ಬಂದು ಮಗಳನ್ನು ಕೆಳಕ್ಕಿಳಿಸಿ ಕೂಡಲೇ ಆಂಬ್ಯುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಪರೀಕ್ಷೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು. ಮಗಳ ಸಾವಿಗೆ ಗಂಡ ರಾಘವೇಂದ್ರ, ಮಾವ ಮುನಿರಾಜು, ಅತ್ತೆ ಲತಾ, ಮೈದುನ ನರಸಿಂಹಯ್ಯ ಅವರ ವರದಕ್ಷಿಣೆ ಕಿರುಕುಳವೇ ಕಾರಣ. ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು" ಎಂದು ಉಲ್ಲೇಖಿಸಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಅಮ್ಮ ಬೈಕ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಮಗ ಆತ್ಮಹತ್ಯೆ

'ಆತ್ಮಹತ್ಯೆಗೂ ಮೊದಲು ಕಾಣಿಸಿಕೊಳ್ಳುವ ಲಕ್ಷಣಗಳಿವು, ಜೀವ ಉಳಿಸಲು ಹೀಗೆ ಮಾಡಿ': ತಜ್ಞರು ಏನು ಹೇಳುತ್ತಾರೆ ನೋಡಿ - Warning Signs of Suicide

ಚಿಕ್ಕಬಳ್ಳಾಪುರ: ಮದುವೆಯಾಗಿ ವರ್ಷ ತುಂಬುವುದರೊಳಗೇ ನವ ವಿವಾಹಿತೆ ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂತಾಮಣಿ ನಗರದಲ್ಲಿ ಶನಿವಾರ ನಡೆದಿದೆ. ಅತ್ತೆ-ಮಾವ, ಗಂಡ, ಮೈದುನ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು ಎಂದು ಆರೋಪಿಸಿ ಮೃತಪಟ್ಟ ಯುವತಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಬಿಂದುಶ್ರೀ (22) ಆತ್ಮಹತ್ಯೆ ಮಾಡಿಕೊಂಡವರು. ಗಾಂಧಿನಗರದ ನಿವಾಸಿ ಟೈಲರ್ ವೃತ್ತಿಯ ಕೆ.ಬಿ.ದೇವರಾಜು ಅವರಿಗೆ ಬಿಂದುಶ್ರೀ ಏಕೈಕ ಪುತ್ರಿ. ಇವರನ್ನು ಆವಲಹಳ್ಳಿ ಸಮೀಪದ ಹಿರಂಡಹಳ್ಳಿ ಗ್ರಾಮದ ಮುನಿರಾಜು ಎಂಬವರ ಮಗ ಎಚ್.ಎಂ.ರಾಘವೇಂದ್ರ ಅವರಿಗೆ ಕೊಟ್ಟು 2024ರ ಫೆಬ್ರವರಿ 21ರಂದು ಕೈವಾರದಲ್ಲಿ ಮದುವೆ ಮಾಡಲಾಗಿತ್ತು.

ಬಿಂದುಶ್ರೀ ಪೋಷಕರು ನಗರ ಪೊಲೀಸ್​ ಠಾಣೆಗೆ ನೀಡಿದ ದೂರಿನಲ್ಲಿ, "ಮದುವೆ ವೇಳೆ ಚಿನ್ನದೊಡವೆಗಳನ್ನು ನೀಡಲಾಗಿತ್ತು. ಮದುವೆ ದಿನವೇ ಮಗನಿಗೆ 100 ಗ್ರಾಂ ಒಡವೆ ವರದಕ್ಷಿಣೆಯಾಗಿ ನೀಡಬೇಕೆಂದು ರಾಘವೇಂದ್ರನ ತಾಯಿ ಲತಾ ಗಲಾಟೆ ಮಾಡಿದ್ದರು. ಕೊನೆಗೆ 60 ಗ್ರಾಂ ತೂಕದ ಬ್ರಾಸ್ ಲೈಟ್, ಚೈನು ಹಾಗೂ ಒಂದು ಉಂಗುರ ನೀಡಿದ್ದೆವು. ಮಾವನ ಮನೆಯಲ್ಲಿ ಎರಡು ತಿಂಗಳು ಚೆನ್ನಾಗಿ ನೋಡಿಕೊಂಡಿದ್ದರು. ನಂತರ ನನ್ನ ಮಗಳು ಬಿ.ಕಾಂ. ಅಂತಿಮ ಸೆಮಿಸ್ಟರ್​ ಪರೀಕ್ಷೆ ಬರೆಯಲು ನಮ್ಮ ಮನೆಗೆ ಬಂದಳು. ಪರೀಕ್ಷೆ ಮುಗುಸಿ ವಾಪಸ್ ಬರುವಾಗ 20 ಲಕ್ಷ ರೂ. ಹಣ ಹಾಗೂ ಒಂದು ಕಾರನ್ನು ವರದಕ್ಷಿಣೆಯನ್ನಾಗಿ ತೆಗೆದುಕೊಂಡು ಬಾ ಎಂದು ಗಂಡ, ಅತ್ತೆ, ಮಾವ ಎಲ್ಲರೂ ಸೇರಿ ಹೇಳಿ ಕಳುಹಿಸಿದ್ದರು. ಮಗಳು ಗಂಡನ ಮನೆಗೆ ವಾಪಸ್ ಹೋದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಏಕೆ ಹಣ ತೆಗೆದುಕೊಂಡು ಬಂದಿಲ್ಲ. ನೀನು ಒಬ್ಬಳೇ ಮಗಳು. ಆಸ್ತಿ ಮಾರಿ ತೆಗೆದುಕೊಂಡು ಬರಬೇಕಾಗಿತ್ತು. ವರದಕ್ಷಿಣೆ ತರದಿದ್ದರೆ ನೀನು ನಮ್ಮ ಮನೆಗೆ ಬರಬೇಡ. ಬಂದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು."

"ಕಾಲೇಜಿನ ತರಗತಿ ಮುಕ್ತಾಯವಾದ ನಂತರ ಆಗಸ್ಟ್ 7ರಂದು ನನ್ನ ಹೆಂಡತಿ ಮಗಳನ್ನು ಕರೆದುಕೊಂಡು ಹೋಗಿ ಗಂಡನ ಮನೆಗೆ ಬಿಟ್ಟುಬಂದರು. ಆಗಲೂ ಗಂಡ, ಅತ್ತೆ, ಮಾವ, ಮೈದುನ ಎಲ್ಲರೂ ಸೇರಿ ಕಿರುಕುಳ ನೀಡಿದ್ದಾರೆ. ಹಣ ತರುವವರೆಗೂ ನಮ್ಮ ಮನೆಯಲ್ಲಿ ಇರುವುದು ಬೇಡ ಎಂದು ಆಗಸ್ಟ್ 10ರಂದು ಲಗೇಜ್ ಸಮೇತ ಮನೆಗೆ ವಾಪಸ್‌ ಕಳುಹಿಸಿದ್ದರು. ಸೆಪ್ಟೆಂಬರ್​ 11ರಂದು ನಾನು, ನನ್ನ ಹೆಂಡತಿ ಮಗಳನ್ನು ಮತ್ತೆ ಕರೆದುಕೊಂಡು ಹೋದರೂ ಅವರು ನಮ್ಮನ್ನು ಮನೆಗೆ ಸೇರಿಸಲಿಲ್ಲ. ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದ್ದರು."

"ಸೆಪ್ಟೆಂಬರ್ 12ರಂದು ಆವಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದೆವು. ಪೊಲೀಸರು ಅಳಿಯ, ಮಾವ, ಅತ್ತೆಯನ್ನು ಕರೆಸಿ ವಿಚಾರಣೆ ಮಾಡಿದರು. ನಾವೇ ಸಮಸ್ಯೆಯನ್ನು ಬಗೆಹರಿಸಿಕೊಂಡು ನಾಳೆ ಬರುವುದಾಗಿ ಪೊಲೀಸರಿಗೆ ತಿಳಿಸಿದರು. ಹೊರಗಡೆ ಬಂದು ಮತ್ತೆ ನಮ್ಮ ಮೇಲೆ ಧಮ್ಕಿ ಹಾಕಿ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಗಲಾಟೆ ಮಾಡಿದರು. ನಾವು ಚಿಂತಾಮಣಿಗೆ ವಾಪಸ್ ಬಂದೆವು."

"ಈ ಎಲ್ಲ ಘಟನೆಗಳಿಂದ ಮನನೊಂದು ನನ್ನ ಮಗಳು ಶನಿವಾರ ಸಂಜೆ ನಮ್ಮನ್ನು ದೇವಸ್ಥಾನಕ್ಕೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾವು ವಾಪಸ್​ ಬಂದು ನೋಡಿ ಗಾಬರಿಯಿಂದ ಕೂಗಿಕೊಂಡೆವು. ಸುತ್ತಮುತ್ತಲಿನವರು ಬಂದು ಮಗಳನ್ನು ಕೆಳಕ್ಕಿಳಿಸಿ ಕೂಡಲೇ ಆಂಬ್ಯುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಪರೀಕ್ಷೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು. ಮಗಳ ಸಾವಿಗೆ ಗಂಡ ರಾಘವೇಂದ್ರ, ಮಾವ ಮುನಿರಾಜು, ಅತ್ತೆ ಲತಾ, ಮೈದುನ ನರಸಿಂಹಯ್ಯ ಅವರ ವರದಕ್ಷಿಣೆ ಕಿರುಕುಳವೇ ಕಾರಣ. ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು" ಎಂದು ಉಲ್ಲೇಖಿಸಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಅಮ್ಮ ಬೈಕ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಮಗ ಆತ್ಮಹತ್ಯೆ

'ಆತ್ಮಹತ್ಯೆಗೂ ಮೊದಲು ಕಾಣಿಸಿಕೊಳ್ಳುವ ಲಕ್ಷಣಗಳಿವು, ಜೀವ ಉಳಿಸಲು ಹೀಗೆ ಮಾಡಿ': ತಜ್ಞರು ಏನು ಹೇಳುತ್ತಾರೆ ನೋಡಿ - Warning Signs of Suicide

Last Updated : Sep 16, 2024, 11:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.