ETV Bharat / state

ಸರ್ಕಾರದಿಂದ ವಿರೋಧ ಪಕ್ಷ ಹತ್ತಿಕ್ಕುವ ಕೆಲಸ, ದೊಡ್ಡ ಮಟ್ಟದ ಹೋರಾಟಕ್ಕೆ ನಿರ್ಧಾರ: ಛಲವಾದಿ ನಾರಾಯಣಸ್ವಾಮಿ - Chalavadi Narayanaswamy

author img

By ETV Bharat Karnataka Team

Published : Jun 20, 2024, 1:20 PM IST

ಹೋರಾಟ ಮಾಡುವುದನ್ನು ಹತ್ತಿಕ್ಕುವ ಕೆಲಸ ಮಾಡಿದರೆ, ಕಾಂಗ್ರೆಸ್​ ವಿರುದ್ಧ ಇನ್ನೂ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲು ಸಜ್ಜಾಗುತ್ತೇವೆ ಎಂದು ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.

Chalavadi Narayanaswamy
ಛಲವಾದಿ ನಾರಾಯಣಸ್ವಾಮಿ (ETV Bharat)

ಬೆಂಗಳೂರು: "ರಾಜ್ಯದ ಕಾಂಗ್ರೆಸ್ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿದ್ದನ್ನು ಖಂಡಿಸಿ, ಬಿಜೆಪಿ ಆಯೋಜಿಸಿದ್ದ ಸೈಕಲ್ ಜಾಥಾಗೆ ಅವಕಾಶ ನೀಡದೇ ನಾವು ಇಲ್ಲದಲ್ಲಿಗೇ ಬಂದು ಬಂಧಿಸುವ ಮೂಲಕ ಹೋರಾಟ ಹತ್ತಿಕ್ಕಲು ಸರ್ಕಾರ ಮುಂದಾಗಿದೆ. ನಿಮ್ಮ ವಿರುದ್ಧ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟವನ್ನು ರೂಪಿಸಲು ಸಜ್ಜಾಗುತ್ತೇವೆ" ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ತೈಲ ಬೆಲೆ ಏರಿಕೆಯಿಂದ ದವಸಧಾನ್ಯಗಳ ಬೆಲೆ ಏರಿಕೆಯಾಗಿದೆ. ನೀರಿನ ದರ ಏರಿಕೆ ಕುರಿತು ಈಗ ಹೇಳಿಕೆ ಹೊರಬಿದ್ದಿದೆ. ಸ್ಟಾಂಪ್ ಪೇಪರ್ ಬೆಲೆ ಏರಿಕೆಯಿಂದ ಆಸ್ತಿ ನೋಂದಣಿಗೆ ಹೆಚ್ಚು ಹಣ ಕೊಡಬೇಕಾಗಿದೆ. ಇವರು ನುಡಿದಂತೆ ನಡೆದಿಲ್ಲ. ಸಿದ್ದರಾಮಯ್ಯ ಹೇಳೋದೊಂದು ಮಾಡೋದೊಂದು" ಎಂದು ಅವರು ಟೀಕಿಸಿದರು.

"ಇದನ್ನು ವಿರೋಧಿಸಿ ಇವತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಿ.ಟಿ.ರವಿ, ಡಾ.ಅಶ್ವತ್ಥನಾರಾಯಣ್ ಅವರ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾದೆವು. ಇದಕ್ಕಾಗಿ ಸೈಕಲ್ ಯಾತ್ರೆಗೆ ಮುಂದಾಗಿದ್ದೆವು. ನಿನ್ನೆಯಿಂದ ಇಂಥ ವಿರೋಧವನ್ನು ಹತ್ತಿಕ್ಕುವ ಕೆಲಸ ಪ್ರಾರಂಭಿಸಿದ್ದಾರೆ. ಗೃಹ ಸಚಿವರು ಆ ರೀತಿ ಮಾಡಿದ್ದೇ ಆದರೆ, ನಮ್ಮ ಲಾಠಿ ರುಚಿ ತೋರಿಸುವುದಾಗಿ ಹೇಳಿದ್ದಾರೆ. ಇದು ಉದ್ಧಟತನದ ಪರಮಾವಧಿ ಅಲ್ಲವೇ?" ಎಂದು ಪ್ರಶ್ನಿಸಿದರು.

"ಒಂದು ವಿರೋಧ ಪಕ್ಷವಾಗಿ, ನೀವು ಮಾಡಿದ ತಪ್ಪುಗಳನ್ನು ಎತ್ತಿ ಹಿಡಿಯುವ ಕೆಲಸ ಯಾವುದು? ವಿಪಕ್ಷಗಳು ಹೋರಾಟದ ಮೂಲಕ ಜನರ ಅನಿಸಿಕೆಗಳನ್ನು ನಿಮ್ಮ ಗಮನಕ್ಕೆ ತರುವುದು ನಮ್ಮ ಕರ್ತವ್ಯ. ಅಂಥ ಪ್ರಜಾಪ್ರಭುತ್ವ ವ್ಯವಸ್ಥೆಗೂ ಅವಕಾಶ ಕೊಡದಿದ್ದರೆ ನೀವೆಂಥ ಸರ್ಕಾರ ಮಾಡುತ್ತಿದ್ದೀರಿ? ಇದೇನು ಹಿಟ್ಲರ್ ಸರಕಾರವೇ? ಸಿಎಂ ಅಥವಾ ಗೃಹ ಸಚಿವರು ಹಿಟ್ಲರ್ ಆಗಿದ್ದಾರಾ? ಹೀಗೆ ಹತ್ತಿಕ್ಕುವ ಕಾರ್ಯವನ್ನು ನಮ್ಮ ಸರ್ಕಾರ ಯಾವತ್ತೂ ಮಾಡಿಲ್ಲ" ಎಂದು ಹೇಳಿದರು.

"ಇವರು ಬಂಧಿಸಲು ನಮ್ಮ ಕಚೇರಿಯ ಬಾಗಿಲಿಗೇ ಬರುತ್ತಾರೆ; ನಮ್ಮ ಅಧ್ಯಕ್ಷರು, ನಮ್ಮೆಲ್ಲರನ್ನು ಅರೆಸ್ಟ್ ಮಾಡಿದ್ದಾರೆ. ಈ ಹೋರಾಟ ನಿರಂತರವಾಗಿ ನಡೆಯಲಿದೆ. ಬಡವರಿಗೆ ಆಸೆ, ಆಮಿಷಗಳನ್ನು ತೋರಿಸಿ ರಾಜ್ಯದಲ್ಲಿ ಚುನಾವಣೆ ವೇಳೆ ಜನರನ್ನು ಸೆಳೆದು, ಅವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ, ಇವತ್ತು ನುಡಿದಂತೆ ನಡೆದಿದ್ದೇವೆ ಎನ್ನುತ್ತೀರಲ್ಲವೇ? ಇದು ಡೋಂಗಿ" ಎಂದು ಟೀಕಿಸಿದರು.

ಜನರ ಹುಣ್ಣಿನ ಮೇಲೆ ಬರೆ ಹಾಕುವ ಕೆಲಸ ಸರ್ಕಾರದಿಂದ ಆಗುತ್ತಿದೆ. ಇಂಥದ್ದನ್ನು ಸಹಿಸಿಕೊಂಡು ಕುಳಿತಿರಲು ಅಸಾಧ್ಯ. ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಸೇರಿ ಇಡೀ ರಾಜ್ಯಾದ್ಯಂತ ನಿಮ್ಮ ವಿರುದ್ಧ ಪ್ರತಿಭಟನೆ ಮಾಡಿ ಈ ಸರ್ಕಾರವನ್ನು ಆದಷ್ಟು ಬೇಗ ಮನೆಗೆ ಕಳುಹಿಸಲು ಸಜ್ಜಾಗಿದ್ದಾರೆ. ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಸಾರಿಗೆ ಸಂಘಟನೆಗಳು ಮೊದಲಾದವುಗಳನ್ನು ಒಗ್ಗೂಡಿಸಿ ನಿಮ್ಮ ವಿರುದ್ಧ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ರೂಪಿಸಲು ಸಜ್ಜಾಗುತ್ತೇವೆ" ಎಂದು ಎಚ್ಚರಿಸಿದರು.

ಇದನ್ನೂ ಓದಿ: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ: ವಿಧಾನಸೌಧ ಮುತ್ತಿಗೆಗೆ ಯತ್ನಿಸಿದ ಜೆಡಿಎಸ್ ಮುಖಂಡರು ವಶಕ್ಕೆ - JDS Leaders Protest

ಬೆಂಗಳೂರು: "ರಾಜ್ಯದ ಕಾಂಗ್ರೆಸ್ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿದ್ದನ್ನು ಖಂಡಿಸಿ, ಬಿಜೆಪಿ ಆಯೋಜಿಸಿದ್ದ ಸೈಕಲ್ ಜಾಥಾಗೆ ಅವಕಾಶ ನೀಡದೇ ನಾವು ಇಲ್ಲದಲ್ಲಿಗೇ ಬಂದು ಬಂಧಿಸುವ ಮೂಲಕ ಹೋರಾಟ ಹತ್ತಿಕ್ಕಲು ಸರ್ಕಾರ ಮುಂದಾಗಿದೆ. ನಿಮ್ಮ ವಿರುದ್ಧ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟವನ್ನು ರೂಪಿಸಲು ಸಜ್ಜಾಗುತ್ತೇವೆ" ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ತೈಲ ಬೆಲೆ ಏರಿಕೆಯಿಂದ ದವಸಧಾನ್ಯಗಳ ಬೆಲೆ ಏರಿಕೆಯಾಗಿದೆ. ನೀರಿನ ದರ ಏರಿಕೆ ಕುರಿತು ಈಗ ಹೇಳಿಕೆ ಹೊರಬಿದ್ದಿದೆ. ಸ್ಟಾಂಪ್ ಪೇಪರ್ ಬೆಲೆ ಏರಿಕೆಯಿಂದ ಆಸ್ತಿ ನೋಂದಣಿಗೆ ಹೆಚ್ಚು ಹಣ ಕೊಡಬೇಕಾಗಿದೆ. ಇವರು ನುಡಿದಂತೆ ನಡೆದಿಲ್ಲ. ಸಿದ್ದರಾಮಯ್ಯ ಹೇಳೋದೊಂದು ಮಾಡೋದೊಂದು" ಎಂದು ಅವರು ಟೀಕಿಸಿದರು.

"ಇದನ್ನು ವಿರೋಧಿಸಿ ಇವತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಿ.ಟಿ.ರವಿ, ಡಾ.ಅಶ್ವತ್ಥನಾರಾಯಣ್ ಅವರ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾದೆವು. ಇದಕ್ಕಾಗಿ ಸೈಕಲ್ ಯಾತ್ರೆಗೆ ಮುಂದಾಗಿದ್ದೆವು. ನಿನ್ನೆಯಿಂದ ಇಂಥ ವಿರೋಧವನ್ನು ಹತ್ತಿಕ್ಕುವ ಕೆಲಸ ಪ್ರಾರಂಭಿಸಿದ್ದಾರೆ. ಗೃಹ ಸಚಿವರು ಆ ರೀತಿ ಮಾಡಿದ್ದೇ ಆದರೆ, ನಮ್ಮ ಲಾಠಿ ರುಚಿ ತೋರಿಸುವುದಾಗಿ ಹೇಳಿದ್ದಾರೆ. ಇದು ಉದ್ಧಟತನದ ಪರಮಾವಧಿ ಅಲ್ಲವೇ?" ಎಂದು ಪ್ರಶ್ನಿಸಿದರು.

"ಒಂದು ವಿರೋಧ ಪಕ್ಷವಾಗಿ, ನೀವು ಮಾಡಿದ ತಪ್ಪುಗಳನ್ನು ಎತ್ತಿ ಹಿಡಿಯುವ ಕೆಲಸ ಯಾವುದು? ವಿಪಕ್ಷಗಳು ಹೋರಾಟದ ಮೂಲಕ ಜನರ ಅನಿಸಿಕೆಗಳನ್ನು ನಿಮ್ಮ ಗಮನಕ್ಕೆ ತರುವುದು ನಮ್ಮ ಕರ್ತವ್ಯ. ಅಂಥ ಪ್ರಜಾಪ್ರಭುತ್ವ ವ್ಯವಸ್ಥೆಗೂ ಅವಕಾಶ ಕೊಡದಿದ್ದರೆ ನೀವೆಂಥ ಸರ್ಕಾರ ಮಾಡುತ್ತಿದ್ದೀರಿ? ಇದೇನು ಹಿಟ್ಲರ್ ಸರಕಾರವೇ? ಸಿಎಂ ಅಥವಾ ಗೃಹ ಸಚಿವರು ಹಿಟ್ಲರ್ ಆಗಿದ್ದಾರಾ? ಹೀಗೆ ಹತ್ತಿಕ್ಕುವ ಕಾರ್ಯವನ್ನು ನಮ್ಮ ಸರ್ಕಾರ ಯಾವತ್ತೂ ಮಾಡಿಲ್ಲ" ಎಂದು ಹೇಳಿದರು.

"ಇವರು ಬಂಧಿಸಲು ನಮ್ಮ ಕಚೇರಿಯ ಬಾಗಿಲಿಗೇ ಬರುತ್ತಾರೆ; ನಮ್ಮ ಅಧ್ಯಕ್ಷರು, ನಮ್ಮೆಲ್ಲರನ್ನು ಅರೆಸ್ಟ್ ಮಾಡಿದ್ದಾರೆ. ಈ ಹೋರಾಟ ನಿರಂತರವಾಗಿ ನಡೆಯಲಿದೆ. ಬಡವರಿಗೆ ಆಸೆ, ಆಮಿಷಗಳನ್ನು ತೋರಿಸಿ ರಾಜ್ಯದಲ್ಲಿ ಚುನಾವಣೆ ವೇಳೆ ಜನರನ್ನು ಸೆಳೆದು, ಅವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ, ಇವತ್ತು ನುಡಿದಂತೆ ನಡೆದಿದ್ದೇವೆ ಎನ್ನುತ್ತೀರಲ್ಲವೇ? ಇದು ಡೋಂಗಿ" ಎಂದು ಟೀಕಿಸಿದರು.

ಜನರ ಹುಣ್ಣಿನ ಮೇಲೆ ಬರೆ ಹಾಕುವ ಕೆಲಸ ಸರ್ಕಾರದಿಂದ ಆಗುತ್ತಿದೆ. ಇಂಥದ್ದನ್ನು ಸಹಿಸಿಕೊಂಡು ಕುಳಿತಿರಲು ಅಸಾಧ್ಯ. ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಸೇರಿ ಇಡೀ ರಾಜ್ಯಾದ್ಯಂತ ನಿಮ್ಮ ವಿರುದ್ಧ ಪ್ರತಿಭಟನೆ ಮಾಡಿ ಈ ಸರ್ಕಾರವನ್ನು ಆದಷ್ಟು ಬೇಗ ಮನೆಗೆ ಕಳುಹಿಸಲು ಸಜ್ಜಾಗಿದ್ದಾರೆ. ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಸಾರಿಗೆ ಸಂಘಟನೆಗಳು ಮೊದಲಾದವುಗಳನ್ನು ಒಗ್ಗೂಡಿಸಿ ನಿಮ್ಮ ವಿರುದ್ಧ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ರೂಪಿಸಲು ಸಜ್ಜಾಗುತ್ತೇವೆ" ಎಂದು ಎಚ್ಚರಿಸಿದರು.

ಇದನ್ನೂ ಓದಿ: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ: ವಿಧಾನಸೌಧ ಮುತ್ತಿಗೆಗೆ ಯತ್ನಿಸಿದ ಜೆಡಿಎಸ್ ಮುಖಂಡರು ವಶಕ್ಕೆ - JDS Leaders Protest

ETV Bharat Logo

Copyright © 2024 Ushodaya Enterprises Pvt. Ltd., All Rights Reserved.