ETV Bharat / state

ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ, ಸಿದ್ದರಾಮಯ್ಯ ಸಂಪುಟಕ್ಕೆ ಕಪ್ಪು ಚುಕ್ಕೆ: ಸಾಹಿತಿ ಕುಂ.ವೀರಭದ್ರಪ್ಪ - Kum Veerbhadrappa

author img

By ETV Bharat Karnataka Team

Published : Jun 30, 2024, 2:10 PM IST

ಇಂಗ್ಲಿಷ್ ಮಾಧ್ಯಮದಲ್ಲಿ ಓದಿರುವ ಈಗಿನ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಎಂದು ಸಾಹಿತಿ ಕುಂ.ವೀರಭದ್ರಪ್ಪ ಅವರು ಪ್ರಾಥಮಿಕ, ಪೌಢ್ರ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

BAGALKOTE  KUM VEERBHADRAPPA
ಸಾಹಿತಿ ಕುಂ.ವೀರಭದ್ರಪ್ಪ (ETV Bharat)

ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿದರು. (ETV Bharat)

ಬಾಗಲಕೋಟೆ: ''ಈಗಿನ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ. ಅವರು ಓದಿರುವುದು ಇಂಗ್ಲಿಷ್ ಮಾಧ್ಯಮದಲ್ಲಿ. ಕುವೆಂಪು, ಬೇಂದ್ರೆ, ಬಸವಣ್ಣರಂಥವರು ಯಾರೆಂಬುದು ಅವರಿಗೆ ಗೊತ್ತಿಲ್ಲ. ಅಂಥವರು ಶಿಕ್ಷಣ ಸಚಿವರಾಗಿದ್ದಾರೆ'' ಎಂದು ಸಾಹಿತಿ ಕುಂ.ವೀರಭದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನವನಗರದ ಅಂಬೇಡ್ಕರ್ ಭವನದಲ್ಲಿ 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ''ಇಂತಹ ಸಚಿವರನ್ನು ಮುಖ್ಯಮಂತ್ರಿಗೆ ಹೇಳಿ ಬದಲಾವಣೆ ಮಾಡಿಸಿ'' ಎಂದು ವೇದಿಕೆಯ ಮೇಲೆ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವೈ.ಮೇಟಿ ಅವರಿಗೆ ಹೇಳುವ ಮೂಲಕ ಪ್ರಾಥಮಿಕ, ಪೌಢ್ರ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

''ಆತನನ್ನು ನೋಡಿದರೆ ಶಿಕ್ಷಣದ ಬಗ್ಗೆ ಭ್ರಮನಿರಸನ ಉಂಟಾಗುತ್ತದೆ. ಗಡ್ಡಕ್ಕೂ ತಲೆಕೂದಲಿಗೂ ಇರುವ ವ್ಯತ್ಯಾಸ ಗೊತ್ತಾಗದ, ಕಾಮನ ಸೆನ್ಸ್ ಇಲ್ಲದ ಸಚಿವ, ಸಿದ್ದರಾಮಯ್ಯನವರ ಸಂಪುಟದಲ್ಲಿರುವ ಕಪ್ಪು ಚುಕ್ಕೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

''ಬಸವಣ್ಣ ಜನಿಸಿದ ವಿಜಯಪುರ ಮತ್ತು ಐಕ್ಯಸ್ಥಳವಾದ ಬಾಗಲಕೋಟೆ ಈ ಎರಡು ಅವಳಿ ಜಿಲ್ಲೆಗಳು ಬಸವ ಜಿಲ್ಲೆಗಳಾಗಬೇಕು'' ಎಂದರು. 12ನೇ ಶತಮಾನದಲ್ಲಿ 1,272 ಹಿಂದುಳಿದ ಜಾತಿಗಳನ್ನು ಒಗ್ಗೂಡಿಸಿ ಪ್ರತಿಯೊಬ್ಬರಿಗೂ ವಚನ ರಚಿಸುವ ಅವಕಾಶ ನೀಡಿ, ಅಚ್ಚ ಕನ್ನಡದಲ್ಲಿ ವಚನ ರಚಿಸಿದ ಕೀರ್ತಿ ಬಸಣ್ಣನವರಿಗೆ ಸಲ್ಲುತ್ತದೆ. ಇಂತಹ ಅದ್ಭುತ ವಚನಗಳನ್ನು ನಾವಿಂದು ಹೇಳಬೇಕಾದರೆ ಪ.ಗು. ಹಳಕಟ್ಟಿ ಅವರನ್ನು ಸ್ಮರಿಸಬೇಕು. ಅವರು ಅಳಿದು ಹೋದ ವಚನಗಳನ್ನು ಹುಡುಕಿ ಪರಿಶೀಲಿಸಿ ಮರುಮುದ್ರಣ ಮಾಡಿ ನಮಗೆ ದೊರಕುವಂತೆ ಮಾಡಿದ್ದಾರೆ'' ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜ ಮಾತನಾಡಿ, ''ಕನ್ನಡದ ಸ್ಥಿತಿಗತಿಯ ಪರಿಶೀಲನೆಯ ಜೊತೆಗೆ ಪರಿಹಾರ ಹುಡುಕುವ ಕೆಲಸವಾಗಬೇಕಿದೆ. ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದೆ. ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೂ ಇಂಗ್ಲಿಷ್​ ಬರೋಲ್ಲ ಅಂದರೆ ಕೆಲಸ ದೊರೆಯುತ್ತಿಲ್ಲ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, "ಕನ್ನಡ ಸಾಹಿತ್ಯ ಪರಿಷತ್ತಿಗೆ ಪರಂಪರೆ ಇದೆ. ಹೋಬಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಾಹಿತ್ಯ ಪರಿಷತ್ ಮತ್ತು ಅಖಿಲ ಭಾರತ ಕನ್ನಡ ಪರಿಷತ್ ವಿಶೇಷವಾಗಿವೆ. ಎಲ್ಲರಿಗೂ ಮಾದರಿಯಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ'' ಎಂದರು.

ಈ ಸಂದರ್ಭದಲ್ಲಿ ರಜತಕೋಟೆ ಸ್ಮರಣ ಸಂಚಿಕೆಯನ್ನು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಬಿಡುಗಡೆಗೊಳಿಸಿದರು. ವಿವಿಧ ಲೇಖಕರ ಕೃತಿ ಹಾಗೂ ಪರಿಷತ್ತಿನ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಡಂಬಳ-ಗದಗ ತೋಂಟದಾರ್ಯ ಸಂಸ್ಥಾನಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ತಾತಾಸಾಹೇಬ ಬಾಂಗಿ, ಮಾಜಿ ಸಚಿವ ಎಸ್.ಜಿ.ನಂಜಯ್ಯನಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಸೇರಿದಂತೆ ಆಯಾ ತಾಲೂಕು ಘಟಕದ ಅಧ್ಯಕ್ಷರು ಉಪಸ್ಥಿತರಿದ್ದರು.

ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ: ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆ ನವನಗರದ ಕನ್ನಡ ಸಾಹಿತ್ಯ ಪರಿಷತ್​ನಿಂದ ಪ್ರಾರಂಭಗೊಂಡು ನಗರದ ನಾನಾ ಕಡೆ ಸಂಚರಿಸಿ ಕೊನೆಗೆ ಡಾ.ಬಿ.ಆರ್. ಅಂಬೇಡ್ಕರ್​ ಭವನದಲ್ಲಿ ಮುಕ್ತಾಯಗೊಂಡಿತು. ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು.

ಇದನ್ನೂ ಓದಿ: ಹಾವೇರಿ ಅಪಘಾತದಲ್ಲಿ ಮೃತಪಟ್ಟವರ ಮನೆಗಳಿಗೆ ಮಧು ಬಂಗಾರಪ್ಪ ಭೇಟಿ: ಗೀತಾ ಶಿವರಾಜ್​ಕುಮಾರ್ ದಂಪತಿಯಿಂದ ನೆರವು - Madhu Bangarappa

ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿದರು. (ETV Bharat)

ಬಾಗಲಕೋಟೆ: ''ಈಗಿನ ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ. ಅವರು ಓದಿರುವುದು ಇಂಗ್ಲಿಷ್ ಮಾಧ್ಯಮದಲ್ಲಿ. ಕುವೆಂಪು, ಬೇಂದ್ರೆ, ಬಸವಣ್ಣರಂಥವರು ಯಾರೆಂಬುದು ಅವರಿಗೆ ಗೊತ್ತಿಲ್ಲ. ಅಂಥವರು ಶಿಕ್ಷಣ ಸಚಿವರಾಗಿದ್ದಾರೆ'' ಎಂದು ಸಾಹಿತಿ ಕುಂ.ವೀರಭದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನವನಗರದ ಅಂಬೇಡ್ಕರ್ ಭವನದಲ್ಲಿ 11ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ''ಇಂತಹ ಸಚಿವರನ್ನು ಮುಖ್ಯಮಂತ್ರಿಗೆ ಹೇಳಿ ಬದಲಾವಣೆ ಮಾಡಿಸಿ'' ಎಂದು ವೇದಿಕೆಯ ಮೇಲೆ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವೈ.ಮೇಟಿ ಅವರಿಗೆ ಹೇಳುವ ಮೂಲಕ ಪ್ರಾಥಮಿಕ, ಪೌಢ್ರ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

''ಆತನನ್ನು ನೋಡಿದರೆ ಶಿಕ್ಷಣದ ಬಗ್ಗೆ ಭ್ರಮನಿರಸನ ಉಂಟಾಗುತ್ತದೆ. ಗಡ್ಡಕ್ಕೂ ತಲೆಕೂದಲಿಗೂ ಇರುವ ವ್ಯತ್ಯಾಸ ಗೊತ್ತಾಗದ, ಕಾಮನ ಸೆನ್ಸ್ ಇಲ್ಲದ ಸಚಿವ, ಸಿದ್ದರಾಮಯ್ಯನವರ ಸಂಪುಟದಲ್ಲಿರುವ ಕಪ್ಪು ಚುಕ್ಕೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

''ಬಸವಣ್ಣ ಜನಿಸಿದ ವಿಜಯಪುರ ಮತ್ತು ಐಕ್ಯಸ್ಥಳವಾದ ಬಾಗಲಕೋಟೆ ಈ ಎರಡು ಅವಳಿ ಜಿಲ್ಲೆಗಳು ಬಸವ ಜಿಲ್ಲೆಗಳಾಗಬೇಕು'' ಎಂದರು. 12ನೇ ಶತಮಾನದಲ್ಲಿ 1,272 ಹಿಂದುಳಿದ ಜಾತಿಗಳನ್ನು ಒಗ್ಗೂಡಿಸಿ ಪ್ರತಿಯೊಬ್ಬರಿಗೂ ವಚನ ರಚಿಸುವ ಅವಕಾಶ ನೀಡಿ, ಅಚ್ಚ ಕನ್ನಡದಲ್ಲಿ ವಚನ ರಚಿಸಿದ ಕೀರ್ತಿ ಬಸಣ್ಣನವರಿಗೆ ಸಲ್ಲುತ್ತದೆ. ಇಂತಹ ಅದ್ಭುತ ವಚನಗಳನ್ನು ನಾವಿಂದು ಹೇಳಬೇಕಾದರೆ ಪ.ಗು. ಹಳಕಟ್ಟಿ ಅವರನ್ನು ಸ್ಮರಿಸಬೇಕು. ಅವರು ಅಳಿದು ಹೋದ ವಚನಗಳನ್ನು ಹುಡುಕಿ ಪರಿಶೀಲಿಸಿ ಮರುಮುದ್ರಣ ಮಾಡಿ ನಮಗೆ ದೊರಕುವಂತೆ ಮಾಡಿದ್ದಾರೆ'' ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜ ಮಾತನಾಡಿ, ''ಕನ್ನಡದ ಸ್ಥಿತಿಗತಿಯ ಪರಿಶೀಲನೆಯ ಜೊತೆಗೆ ಪರಿಹಾರ ಹುಡುಕುವ ಕೆಲಸವಾಗಬೇಕಿದೆ. ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿದೆ. ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೂ ಇಂಗ್ಲಿಷ್​ ಬರೋಲ್ಲ ಅಂದರೆ ಕೆಲಸ ದೊರೆಯುತ್ತಿಲ್ಲ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, "ಕನ್ನಡ ಸಾಹಿತ್ಯ ಪರಿಷತ್ತಿಗೆ ಪರಂಪರೆ ಇದೆ. ಹೋಬಳಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಾಹಿತ್ಯ ಪರಿಷತ್ ಮತ್ತು ಅಖಿಲ ಭಾರತ ಕನ್ನಡ ಪರಿಷತ್ ವಿಶೇಷವಾಗಿವೆ. ಎಲ್ಲರಿಗೂ ಮಾದರಿಯಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ'' ಎಂದರು.

ಈ ಸಂದರ್ಭದಲ್ಲಿ ರಜತಕೋಟೆ ಸ್ಮರಣ ಸಂಚಿಕೆಯನ್ನು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಬಿಡುಗಡೆಗೊಳಿಸಿದರು. ವಿವಿಧ ಲೇಖಕರ ಕೃತಿ ಹಾಗೂ ಪರಿಷತ್ತಿನ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಡಂಬಳ-ಗದಗ ತೋಂಟದಾರ್ಯ ಸಂಸ್ಥಾನಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ತಾತಾಸಾಹೇಬ ಬಾಂಗಿ, ಮಾಜಿ ಸಚಿವ ಎಸ್.ಜಿ.ನಂಜಯ್ಯನಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಸೇರಿದಂತೆ ಆಯಾ ತಾಲೂಕು ಘಟಕದ ಅಧ್ಯಕ್ಷರು ಉಪಸ್ಥಿತರಿದ್ದರು.

ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆ: ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಸಮ್ಮೇಳನಾಧ್ಯಕ್ಷರ ಅದ್ಧೂರಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆ ನವನಗರದ ಕನ್ನಡ ಸಾಹಿತ್ಯ ಪರಿಷತ್​ನಿಂದ ಪ್ರಾರಂಭಗೊಂಡು ನಗರದ ನಾನಾ ಕಡೆ ಸಂಚರಿಸಿ ಕೊನೆಗೆ ಡಾ.ಬಿ.ಆರ್. ಅಂಬೇಡ್ಕರ್​ ಭವನದಲ್ಲಿ ಮುಕ್ತಾಯಗೊಂಡಿತು. ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು.

ಇದನ್ನೂ ಓದಿ: ಹಾವೇರಿ ಅಪಘಾತದಲ್ಲಿ ಮೃತಪಟ್ಟವರ ಮನೆಗಳಿಗೆ ಮಧು ಬಂಗಾರಪ್ಪ ಭೇಟಿ: ಗೀತಾ ಶಿವರಾಜ್​ಕುಮಾರ್ ದಂಪತಿಯಿಂದ ನೆರವು - Madhu Bangarappa

ETV Bharat Logo

Copyright © 2024 Ushodaya Enterprises Pvt. Ltd., All Rights Reserved.